ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ!
ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್ ನ್ಯೂಸ್ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಲ್ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು. ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು
Delhi Excise Policy: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಿಆರ್ಎಸ್ ಶಾಸಕಿ ಕವಿತಾಗೆ ಇ.ಡಿ. ಬುಲಾವ್, ನಾಳೆ ಶುಕ್ರವಾರ ಹಾಜರ್
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ವೈಎಸ್ಆರ್ಸಿಪಿ ಸಂಸದ ಮಾಗುಂಟ ಶ್ರೀನಿವಾಸ್ ರೆಡ್ಡಿ ಮತ್ತು ಅವರ ಪುತ್ರ ರಾಘವ ರೆಡ್ಡಿ ಅನುಮೋದಕರಾಗಿದ್ದಾರೆ (approver). ಹಾಗಾಗಿ ಕವಿತಾಗೆ ಬುಲಾವ್ ನೀಡಲಾಗಿದೆ ಎನ್ನಲಾಗಿದೆ.
- sadhu srinath
- Updated on: Sep 14, 2023
- 3:58 pm
ಜೈಲಿನಲ್ಲಿ ಚಂದ್ರಬಾಬು ನಾಯ್ಡು ಭೇಟಿಯಾದ ಪವನ್ ಕಲ್ಯಾಣ್: ಟಿಡಿಪಿ-ಜನಸೇನೆ ಒಟ್ಟಾಗಿ ಆಂದ್ರ ಅಸೆಂಬ್ಲಿ ಚುನಾವಣೆ ಎದುರಿಸಲಿದೆ ಎಂದು ಘೋಷಣೆ
ಕೇಂದ್ರ ಕಾರಾಗೃಹದಲ್ಲಿ ಸುಮಾರು 40 ನಿಮಿಷಗಳ ಕಾಲ ಚಂದ್ರಬಾಬು ನಾಯ್ಡು-ಪವನ್ ಕಲ್ಯಾಣ್ ಭೇಟಿ ಏರ್ಪಟ್ಟಿದ್ದು, ಬಳಿಕ ನಟ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಮಾಧ್ಯಮದವರೊಂದಿಗೆ ಮಾತನಾಡಿದರು. ಆ ವೇಳೆ ಟಿಡಿಪಿ-ಜನಸೇನೆ ಒಟ್ಟಾಗಿ ಚುನಾವಣೆ ಎದುರಿಸಲಿದೆ ಎಂದು ಘೋಷಣೆ ಮಾಡಿದರು.
- sadhu srinath
- Updated on: Sep 14, 2023
- 3:27 pm
ಮನೆಗೆಲಸ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು! ಹೇಗೆ ಎಂದು ತಿಳಿದುಕೊಳ್ಳಿ
ದೇಹದ ತೂಕ ಇಳಿಸಲು ಒಂದಷ್ಟು ಸಲಹೆಗಳು: ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತಮ್ಮ ದೇಹದ ಆಕಾರವನ್ನು ಕಾಪಾಡಿಕೊಳ್ಳಲು ಮತ್ತು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಜಿಮ್ಗೆ ಹೋಗುತ್ತಾರೆ. ಆದರೆ ಮನೆಗೆಲಸವನ್ನು ಮಾಡುವುದರಿಂದ ಕ್ಯಾಲೊರಿಗಳನ್ನು ದಹಿಸಬಹುದು ಮತ್ತು ಜಿಮ್ಗಿಂತ ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ.
- sadhu srinath
- Updated on: Sep 14, 2023
- 1:35 pm
Chandra Babu Naidu: ಎ1 ಆಗಿ ಚಂದ್ರಬಾಬು ನಾಯ್ಡುಗೆ ಕಾಡುತ್ತಿರುವ ಮತ್ತೊಂದು ಪ್ರಕರಣ! ಅದರ ವಿವರ ಇಲ್ಲಿದೆ
ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ (ಎಪಿಎಸ್ಎಸ್ಡಿಸಿ) ಪ್ರಕರಣದಲ್ಲಿ ಚಂದ್ರಬಾಬು ನಾಯ್ಡುಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಇನ್ನು, ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣದಲ್ಲಿಯೂ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ವಿಜಯನಗರದ ರಾಮತೀರ್ಥಂ ದೇವಸ್ಥಾನದಲ್ಲಿ ವೈಎಸ್ಆರ್ಸಿಪಿ ನಾಯಕರ ಮೇಲಿನ ದಾಳಿ ಮತ್ತು ಕೊಲೆ ಯತ್ನ ಪ್ರಕರಣಗಳು ಸೇರಿವೆ. ಅನ್ನಮಯ್ಯ ಜಿಲ್ಲೆಯ ಅಂಗಲ್ಲು ಗ್ರಾಮದಲ್ಲಿ ಘರ್ಷಣೆ ಪ್ರಕರಣದಲ್ಲಿ ಕ್ರಿಮಿನಲ್ ಸಂಚು ಆರೋಪವೂ ಕೇಳಿಬಂದಿದೆ.
- sadhu srinath
- Updated on: Sep 14, 2023
- 1:02 pm
ಲಂಚ ಪ್ರಕರಣ: ಸಹಾಯಕ ಆಯುಕ್ತೆ ತಬಸ್ಸುಮ್ ಜಹೇರಾ, ಉಪ ತಹಶೀಲ್ದಾರ್ ಶಬ್ಬೀರ್ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಲೋಕಾಯುಕ್ತ ನ್ಯಾಯಾಲಯ
ಲಂಚ ಪ್ರಕರಣದಲ್ಲಿ ಅಂದಿನ ಸಹಾಯಕ ಆಯುಕ್ತೆ ತಬಸ್ಸುಮ್ ಜಹೇರಾ, ಉಪ ತಹಶೀಲ್ದಾರ್ ಶಬ್ಬೀರ್ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಲೋಕಾಯುಕ್ತ ನ್ಯಾಯಾಲಯ ಆದೇಶ ಹೊರಡಿಸಿದೆ. ತಬಸ್ಸುಮ್ ಜಹೇರಾ ಪ್ರಸ್ತುತ ಕೆಐಎಡಿಬಿ ಇಲಾಖೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಹ್ಮದ್ ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಉಪ ತಹಶೀಲ್ದಾರ್ ಆಗಿದ್ದಾರೆ.
- sadhu srinath
- Updated on: Sep 14, 2023
- 7:07 am
ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಸೈಬರಾಬಾದ್ ವಿಪ್ರೋ ವೃತ್ತದಲ್ಲಿ ಟೆಕ್ಕಿಗಳ ಪ್ರತಿಭಟನೆ
Chandrababu Naidu: ಪ್ರಜಾಪ್ರಭುತ್ವವನ್ನು ಉಳಿಸಲು ಈ ಬಿಕ್ಕಟ್ಟಿನ ಸಮಯದಲ್ಲಿ ನಾವು ಒಗ್ಗಟ್ಟಾಗಿದ್ದೇವೆ ಎಂದು ವಿಪ್ರೋ ವೃತ್ತದಲ್ಲಿ ಪ್ರತಿಭಟನಾನಿರತ ಟೆಕ್ಕಿಗಳು ಹೇಳಿದರು
- sadhu srinath
- Updated on: Sep 13, 2023
- 8:43 pm
ಪುತ್ರಶೋಕಂ ನಿರಂತರಂ: ಸತ್ತ ಮಗನಿಗೆ ಮನೆಯಲ್ಲಿ ದೇವಸ್ಥಾನ ಕಟ್ಟಿದ ಪಾಲಕರು: ದಿನಾ ಪೂಜೆ ಸಲ್ಲಿಸಿ ಅದರಲ್ಲಿಯೇ ಮಗನ ಕಾಣುತ್ತಾರೆ
ಆದಿನಾರಾಯಣ ಮತ್ತು ನಾಗಲಕ್ಷ್ಮಿ ಪಾಮಿಡಿ ಪಟ್ಟಣದವರು. ಇವರ ಒಬ್ಬನೇ ಮಗ ಗಂಗಾಧರ. ತಂದೆ ಆದಿನಾರಾಯಣ ರೈಲ್ವೇಯಲ್ಲಿ ಗೇಟ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಸ್ವಯಂ ನಿವೃತ್ತಿ ಪಡೆದು ಮಗ ಗಂಗಾಧರನಿಗೆ ಕೆಲಸ ಕೊಟ್ಟರು. ಆದರೆ ಕೆಲವು ವರ್ಷಗಳ ಹಿಂದೆ ಗಂಗಾಧರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರಿಂದ ಮಗನ ಸಾವನ್ನು ಅರಗಿಸಿಕೊಳ್ಳಲಾಗದೆ ಆದಿನಾರಾಯಣ ಮತ್ತು ನಾಗಲಕ್ಷ್ಮಿ ತಮ್ಮ ಮಗ ಸತ್ತರೂ ಜೊತೆಯಲ್ಲಿಯೇ ಇರಲು ನಿರ್ಧರಿಸಿದರು.
- sadhu srinath
- Updated on: Sep 13, 2023
- 1:51 pm
Electric bike scooters problems: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ದೊಡ್ಡದಾಗಿಯೇ ಇವೆ, ಅದರ ವಿವರ ಇಲ್ಲಿದೆ
ಭಾರತದಾದ್ಯಂತ ಎಲೆಕ್ಟ್ರಿಕ್ ಸ್ಕೂಟರುಗಳ ಖರೀದಿಸಿದ ಗ್ರಾಹಕರು ಅಷ್ಟೇ ವೇಗವಾಗಿ ರಿವರ್ಸ್ ಗೇರ್ನಲ್ಲಿ ಈ ಷೋರೂಮ್ಗಳಿಗೆ ವಾಪಸಾಗುತ್ತಿದ್ದಾರೆ. ನಮ್ಮ ಈ ಸ್ಕೂಟರಿನಲ್ಲಿ ಏನೋ ಪ್ರಾಬ್ಲಂ ಇದೆ ನೋಡಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ದೊಡ್ಡದಾಗಿಯೇ ಇವೆ, ಅವುಗಳ ಕಿರು ಪರಿಚಯ ಇಲ್ಲಿದೆ ನೋಡಿ.
- sadhu srinath
- Updated on: Sep 13, 2023
- 1:07 pm
ಮದುವೆ ಮಂಟಪದಲ್ಲಿ ವರ ಮಾಡಿದ ಆ ಕೆಲಸಕ್ಕೆ ಬೇಸತ್ತು, ವಧು ಕೆನ್ನೆಗೆ ಬಾರಿಸಿದಳು -ವಿಡಿಯೋ ನೋಡಿ!
ಕೋಪಗೊಂಡ ವಧು ಎಲ್ಲರ ಮುಂದೆ ವರನ ಕೆನ್ನೆಗೆ ಬಾರಿಸಲು ಮುಂದಾಗಿದ್ದಾಳೆ. ವಧು-ವರರ ಮುಂದೆ ಕುಳಿತ ವ್ಯಕ್ತಿ ವಧುವಿಗೆ ಏನನ್ನೋ ಹೇಳುತ್ತಿದ್ದಾನೆ. ಅಷ್ಟೇ... ವರನ ಕಡೆಗೆ ವಧು ತಿರುಗಿ ನೋಡಿದಳು.. ತನ್ನ ಭಾವೀ ಗಂಡ ಗುಟ್ಕಾ ತಿನ್ನುತ್ತಿರುವುದು ಕಂಡುಬಂದಿದೆ. ಅಷ್ಟೇ ಮುಂದೆ ಅಲ್ಲಿ ನಡೆದಿದ್ದೆಲ್ಲಾ ವೈರಲ್ ಆಗುತ್ತಿದೆ.
- sadhu srinath
- Updated on: Sep 12, 2023
- 4:06 pm
Dead Body: ಸಿದ್ದರಾಮಯ್ಯ ಬೇಗ ಸಾಯಬಾರದು ಎಂದು ಬಯಸಿದ ಕೆ.ಎಸ್. ಈಶ್ವರಪ್ಪ, ಸಿದ್ದು ಇತಿಹಾಸ ಬಿಚ್ಚಿಟ್ಟಿದ್ದು ಹೀಗೆ!
Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಹೆಣ ಕೂಡ ಕೋಮುವಾದಿ ಬಿಜೆಪಿಗೆ ಹೋಗೋಲ್ಲ ಎಂದು ಹೇಳಿದ್ದೇ ತಡ ನಾನಾ ರಾಜಕೀಯ ಧುರೀಣರು ನಾನಾ ವ್ಯಾಖ್ಯಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಜೀವಂತವಾಗಿ ಬಂದರೂ ಬಿಜೆಪಿಗೆ ಸೇರಿಸಿಕೊಳ್ಳಲ್ಲವೆಂದು ಬಿಜೆಪಿ ಶಾಸಕ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಸಿದ್ದರಾಮಯ್ಯ ಸಾಯೋದು ಬೇಡ ಎಂದು ಬಯಸಿದ ಕೆ.ಎಸ್. ಈಶ್ವರಪ್ಪ ಅವರು ಸಿದ್ದರಾಮಯ್ಯ ಇತಿಹಾಸವೊಂದನ್ನು ಬಿಚ್ಚಿಟ್ಟಿದ್ದಾರೆ.
- sadhu srinath
- Updated on: Sep 12, 2023
- 3:20 pm
Video: ಚಾಲಾಕಿ ಕಳ್ಳ, ಪ್ರಯಾಣಿಕರನ್ನು ತುಂಬಿಕೊಂಡೇ ಆರ್ಟಿಸಿ ಬಸ್ ಕದ್ದೊಯ್ದ! ಮಾರ್ಗ ಮಧ್ಯೆ ಡೀಸೆಲ್ ಖಾಲಿಯಾದಾಗ ಏನು ಮಾಡಿದ?
ಚಾಲಾಕಿ ಕಳ್ಳ, ಪ್ರಯಾಣಿಕರನ್ನು ತುಂಬಿಕೊಂಡೇ ಆರ್ಟಿಸಿ ಬಸ್ ಕದ್ದೊಯ್ದ! ಕೆಲ ಪ್ರಯಾಣಿಕರು ಟಿಕೆಟ್ ಕೊಡುವಂತೆ ಬಸ್ ಚಾಲಕನನ್ನು ಕೇಳಿದಾಗ. ಕಳ್ಳ ರೂಪದ ಆ ಡ್ರೈವರ್ ಮಹಾಶಯ, ಕಂಡಕ್ಟರ್ ಮಾರ್ಗ ಮಧ್ಯೆ ಹತ್ತಿಕೊಳ್ಳುತ್ತಾನೆ, ಆಗ ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಾನೆ. ತಂಗಲ್ಲಪಲ್ಲಿ ಮಂಡಲದ ಸಾರಂಪೆಲ್ಲಿ ನೇರೆಲ್ಲ ಗ್ರಾಮದ ಉಪನಗರದಲ್ಲಿ ಬಸ್ ನಲ್ಲಿ ಡೀಸೆಲ್ ಖಾಲಿಯಾದ ಕಾರಣ ಬಸ್ ಹಾಗೂ ಪ್ರಯಾಣಿಕರನ್ನು ನಡುರಸ್ತೆಯಲ್ಲೇ ಬಿಟ್ಟು ಓಡಿ ಹೋಗಿದ್ದಾನೆ!
- sadhu srinath
- Updated on: Sep 12, 2023
- 2:38 pm
ಕಾರ್ಟೂನ್ ಚಟಕ್ಕೆ ಬಿದ್ದಿದ್ದ ಬಾಲಕ ಅನುಮಾನಾಸ್ಪದ ಸಾವು
ಡಿಂಪಲ್ ಸೂರ್ಯ ಕಾರ್ಟೂನ್ಗಳನ್ನು ಇಷ್ಟಪಡುತ್ತಿದ್ದ. ಆತ ಹೆಚ್ಚಾಗಿ ಟಿವಿ ಮತ್ತು ಸೆಲ್ ಫೋನ್ನಲ್ಲಿ ಕಾರ್ಟೂನ್ ನೋಡುತ್ತಿದ್ದ. ಈಗಲೂ ಅಷ್ಟೇ ಆಟವಾಡುತ್ತಲೇ ಪ್ರಾಣ ಕಳೆದುಕೊಂಡಿದ್ದಾನೆ ಎನ್ನುತ್ತಾರೆ ಕುಟುಂಬಸ್ಥರು. ಕಾರ್ಟೂನ್ ಹೆಚ್ಚಾಗಿ ನೋಡುತ್ತಿದ್ದ ಸೂರ್ಯ, ಹಿಂದೆ ಒಮ್ಮೆ ಮಂಚಕ್ಕೆ ಹಗ್ಗ ಸುತ್ತಿ ಕೊರಳಿಗೆ ಕಟ್ಟಿಕೊಳ್ಳಲು ಯತ್ನಿಸಿದ್ದ ಎನ್ನುತ್ತಾರೆ ತಂದೆ ಶ್ರೀನಿವಾಸ ರಾವ್.
- sadhu srinath
- Updated on: Sep 12, 2023
- 1:45 pm