AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2022: ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಜಾಗತಿಕ ಹೂಡಿಕೆದಾರರಿಗೆ ಬಜೆಟ್​ನಲ್ಲಿ ತೆರಿಗೆ ಅನುಕೂಲ ಸಾಧ್ಯತೆ

ಬಾಂಡ್​ ಮೇಲೆ ಹೂಡಿಕೆ ಮಾಡುವುದರಿಂದ ಬರುವ ಲಾಭದ ಮೇಲೆ ತೆರಿಗೆಯಾದ ಕ್ಯಾಪಿಟಲ್ ಗೇಯ್ನ್ಸ್ ತೆಗೆಯುವ ಬಗ್ಗೆ ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2022ರಲ್ಲಿ ಪ್ರಸ್ತಾವ ಮಾಡು ಸಾಧ್ಯತೆ ಇದೆ.

Budget 2022: ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಜಾಗತಿಕ ಹೂಡಿಕೆದಾರರಿಗೆ ಬಜೆಟ್​ನಲ್ಲಿ ತೆರಿಗೆ ಅನುಕೂಲ ಸಾಧ್ಯತೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jan 24, 2022 | 1:27 PM

Share

ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ವಿದೇಶೀ ಹೂಡಿಕೆದಾರರಿಗೆ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆಯಿಂದ ಮನ್ನಾ ಮಾಡುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ (Union Budget 2022- 23) ಆಲೋಚಿಸುವ ಸಾಧ್ಯತೆ ಇದೆ. ಈ ನಡೆಯಿಂದ ಬ್ಲೂಮ್​ಬರ್ಗ್- ಬಾರ್​ಕ್ಲೇಸ್ ಮತ್ತು ಜೆಪಿ ಮೋರ್ಗನ್ ಜಾಗತಿಕ ಬಾಂಡ್ ಸೂಚ್ಯಂಕ ಟ್ರ್ಯಾಕ್​ಗೆ ಒಳಗೊಳ್ಳುವುದಕ್ಕೆ ವೇದಿಕೆ ಸಿದ್ಧ ಮಾಡಲು ನೆರವು ನೀಡಲಿದೆ, ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಮನ್ನಾ ಹಾಗೂ ಭಾರತೀಯ ಸಾಲಪತ್ರ ಇನ್​ಸ್ಟ್ರುಮೆಂಟ್​ಗಳನ್ನು ಜಾಗತಿಕ ಬಾಂಡ್ ಸೂಚ್ಯಂಕದಲ್ಲಿ ಸೇರ್ಪಡೆ ಮಾಡುವುದರಿಂದ ಸ್ಥಳೀಯ ಸಾಲಪತ್ರಗಳಿಗೆ ಮಹತ್ತರವಾದ ಬಂಡವಾಳ ಹರಿವಾಗುತ್ತದೆ. ಇದರ ಜತೆಗೆ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತದಿಂದ ಉತ್ತಮ ಯೀಲ್ಡ್​​ ದೊರೆಯುವಂತಾಗುತ್ತದೆ.

ಜಾಗತಿಕ ಬಾಂಡ್​ ಸೂಚ್ಯಂಕದಲ್ಲಿ ಸೇರ್ಪಡೆ ಮಾಡಿದ ನಂತರ ವಿದೇಶೀ ಹೂಡಿಕೆದಾರರು ಸವರನ್ ಸೆಕ್ಯೂರಿಟಿಗಳಲ್ಲಿ ವಹಿವಾಟು ಮಾಡುವುದನ್ನು ನಿರೀಕ್ಷಿಸಲಾಗುತ್ತದೆ. ಇದರಿಂದಾಗಿ ಮುಂದಿನ ದಶಕದಲ್ಲಿ 25 ಸಾವಿರ ಕೋಟಿ ಅಮೆರಿಕನ್ ಡಾಲರ್​ ಒಳಹರಿವು ತರಲಿದೆ ಮತ್ತು ಭಾರತದ ಸಾಲ ಪಡೆಯುವ ವೆಚ್ಚವನ್ನು 50 ಬೇಸಿಸ್ ಪಾಯಿಂಟ್ಸ್ ತನಕ ಕಡಿಮೆ ಮಾಡುತ್ತದೆ ಎಂದು ಮೋರ್ಗನ್ ಸ್ಟ್ಯಾನ್ಲಿ ಅಂದಾಜು ತೋರಿಸಿದೆ.

ಲಿಕ್ವಿಡಿಟಿಗೆ ಪೆಟ್ಟು ನೀಡಲಿದೆ ತೆರಿಗೆ ಒಂದು ವೇಳೆ ಪ್ರತಿ ಬಾಂಡ್ ವಹಿವಾಟಿನ ಮೇಲೆ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಹಾಕಿದಲ್ಲಿ ಲಿಕ್ವಿಡಿಟಿ ಬಹಳ ಮುಖ್ಯವಾಗಿ ಹೊಡೆತ ನೀಡುತ್ತದೆ. ಇದು ಜಾಗತಿಕ ಸೂಚ್ಯಂಕದ ವಿರುದ್ಧ ಹೋಗುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಇದರ್ಥ ಏನೆಂದರೆ ನಮ್ಮ ಬೇಸಿಕ್ ಮಾಡೆಲ್​ನಿಂದ ಬದಲಾಗಬೇಕು ಮತ್ತು ಓಮ್ನಿಬಸ್ ಮಾದರಿಯನ್ನು ಪ್ರತ್ಯೇಕಗೊಳಿಸಿದ ವಿಧಾನಕ್ಕೆ ಬೇರೆಗೊಳಿಸಬೇಕು ಎಂದಿದ್ದಾರೆ. ವಿದೇಶೀ ಹೂಡಿಕೆದಾರರು ಲಿಸ್ಟೆಡ್​ ಬಾಂಡ್​ಗಳನ್ನು 12 ತಿಂಗಳೊಳಗೆ ಮಾರಾಟ ಮಾಡಿದರೆ ಅಲ್ಪಾವಧಿ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಪಾವತಿಸಬೇಕಾಗುತ್ತದೆ. ಹೂಡಿಕೆದಾರ ಯಾರು ಎಂಬುದರ ಮೇಲೆ ಶೇ 30ರಿಂದ 40ರಷ್ಟು ತೆರಿಗೆ ಬೀಳುತ್ತದೆ.

ಕ್ಯಾಪಿಟಲ್ ಗೇಯ್ನ್ ಜವಾಬ್ದಾರಿ ತೆಗೆಯುವುದರಿಂದ ಭಾರತೀಯ ಸಾಲಪತ್ರವನ್ನು ಯುರೋಕ್ಲಿಯರ್​ನಲ್ಲಿ ಲಿಸ್ಟ್​ ಆಗುವುದಕ್ಕೆ ದಾರಿ ಸುಲಭ ಆಗುತ್ತದೆ ಎಂದು ಕಳೆದ ವರ್ಷದ ಜುಲೈನಲ್ಲಿ ಮಾಜಿ ಮುಖ್ಯ ಆರ್ಥಿಕ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಆರ್ಥಿಕ ಸಚಿವಾಲಯಕ್ಕೆ ಹೇಳಿದ್ದರು. ಆದರೆ ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಹಣಕಾಸು ಸಚಿವಾಲಯ ತಕ್ಷಣಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಸವರನ್ ಸಂಸ್ಥೆಗಳು ತಮ್ಮ ಸಾಲಪತ್ರಗಳನ್ನು ಜಾಗತಿಕ ಸೂಚ್ಯಂಕಗಳಲ್ಲಿ ಲಿಸ್ಟ್ ಮಾಡುವುದು ಲಿಕ್ವಿಡಿಟಿ ವಿಸ್ತರಣೆ ಮತ್ತು ಸಾಲ ಪಡೆಯುವ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ.

ಯುರೋಕ್ಲಿಯರ್ 49 ಬೇರೆ ಬೇರೆ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಇವುಗಳಲ್ಲಿ ಎಲ್ಲೂ ಬಾಂಡ್ ವಹಿವಾಟಿನ ಮೇಲೆ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಇಲ್ಲ. ಬಾಂಡ್​ಗಳ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು (FPIs) ಫುಲಿ ಆಕ್ಸೆಸಬಲ್ ರೂಟ್ (FAR) ಅಡಿಯಲ್ಲಿ ಖರೀದಿಸಬಹುದಾದದ್ದು 16.98 ಲಕ್ಷ ಕೋಟಿ 17 ವಿವಿಧ ಅವಧಿಗಳಿಗೆ ಇದೆ ಎಂದು ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ದತ್ತಾಂಶ ತೋರಿಸುತ್ತದೆ, ಈ ಸಾಲಪತ್ರಗಳು 2024ರಿಂದ 2051ರ ಮಧ್ಯೆ ಮೆಚ್ಯೂರಿಟಿ ಇದೆ. ​

ಇದನ್ನೂ ಓದಿ: Union Budget 2022: ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ ಶೇ. 20ರಷ್ಟು ಅನುದಾನ ಹೆಚ್ಚಳ ಸಾಧ್ಯತೆ

Published On - 6:27 pm, Wed, 19 January 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ