AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays October 2025: ಹಬ್ಬಗಳ ಮಾಸ ಅಕ್ಟೋಬರ್​ನಲ್ಲಿ 21 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

October holidays: 2025ರ ಅಕ್ಟೋಬರ್ ತಿಂಗಳಲ್ಲಿ ದೇಶದ ವಿವಿಧೆಡೆ ಒಟ್ಟು 21 ದಿನ ಬ್ಯಾಂಕುಗಳಿಗೆ ರಜೆ ಇದೆ. ಆರ್​ಬಿಐ ವೇಳಾಪಟ್ಟಿಯಲ್ಲಿ ಈ ರಜಾಪಟ್ಟಿ ಇದ್ದು, ವಿವಿಧ ಪ್ರದೇಶಗಳಿಗೆ ಸೀಮಿತವಾದ ರಜಾದಿನಗಳೂ ಒಳಗೊಂಡಿವೆ. ಕರ್ನಾಟಕದಲ್ಲಿ ಒಟ್ಟು 11 ದಿನ ಬ್ಯಾಂಕುಗಳಿಗೆ ರಜೆ ಇದೆ. ಇದರಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳೂ ಸೇರಿವೆ.

Bank Holidays October 2025: ಹಬ್ಬಗಳ ಮಾಸ ಅಕ್ಟೋಬರ್​ನಲ್ಲಿ 21 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜಾದಿನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2025 | 2:38 PM

Share

ಬೆಂಗಳೂರು, ಸೆಪ್ಟೆಂಬರ್ 26: ಹಬ್ಬದ ಸೀಸನ್​ನಲ್ಲಿರುವ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ದಿನಗಳು ರಜೆಯೇ ಇವೆ. ಶನಿವಾರ ಮತ್ತು ಭಾನುವಾರದ ರಜೆಗಳೂ ಸೇರಿ ಮುಂದಿನ ತಿಂಗಳು ಬರೋಬ್ಬರಿ 21 ದಿನಗಳು ಬ್ಯಾಂಕ್ ಬಾಗಿಲು (Bank holidays) ಮುಚ್ಚಿರುತ್ತವೆ. ಇದರಲ್ಲಿ ಪ್ರಾದೇಶಿಕ ರಜೆಗಳೂ ಒಳಗೊಂಡಿವೆ. ಕೆಲ ರಜೆಗಳು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ಕರ್ನಾಟಕದಲ್ಲಿ 11 ದಿನ ರಜೆ ಇದೆ.

ಅಕ್ಟೋಬರ್​ನಲ್ಲಿ ದಸರಾ, ದೀಪಾವಳಿ, ವಾಲ್ಮೀಕಿ ಜಯಂತಿ, ದುರ್ಗಾ ಪೂಜೆ, ಕರ್ವಾ ಚೌತ್, ಗಾಂಧಿ ಜಯಂತಿ ಇತ್ಯಾದಿ ವಿಶೇಷ ದಿನಗಳಿದ್ದು, ರಜೆಗಳೇ ತುಂಬಿ ಹೋಗಿವೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಹೊಸ ನಿಯಮಗಳು; ಯುಪಿಐ, ಎಲ್​ಪಿಜಿ, ಬಡ್ಡಿಯಲ್ಲಿ ಬದಲಾವಣೆ?

ಅಕ್ಟೋಬರ್ 2025ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ

  • ಅಕ್ಟೋಬರ್ 1, ಬುಧವಾರ: ಮಹಾನವಮಿ (ಹೆಚ್ಚಿನ ಕಡೆ ರಜೆ)
  • ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ, ವಿಜಯದಶಮಿ (ಸಾರ್ವತ್ರಿಕ ರಜೆ)
  • ಅಕ್ಟೋಬರ್ 3, ಶುಕ್ರವಾರ: ದುರ್ಗಾ ಪೂಜೆ (ಸಿಕ್ಕಿಂನಲ್ಲಿ ರಜೆ)
  • ಅಕ್ಟೋಬರ್ 4, ಶನಿವಾರ: ದುರ್ಗಾ ಪೂಜೆ (ಸಿಕ್ಕಿಂನಲ್ಲಿ ರಜೆ)
  • ಅಕ್ಟೋಬರ್ 5: ಭಾನುವಾರದ ರಜೆ
  • ಅಕ್ಟೋಬರ್ 6, ಸೋಮವಾರ: ಲಕ್ಷ್ಮೀ ಪೂಜೆ (ತ್ರಿಪುರ, ಬಂಗಾಳದಲ್ಲಿ ರಜೆ)
  • ಅಕ್ಟೋಬರ್ 7, ಮಂಗಳವಾರ: ವಾಲ್ಮೀಕಿ ಜಯಂತಿ (ಕೆಲ ರಾಜ್ಯಗಳಲ್ಲಿ ರಜೆ)
  • ಅಕ್ಟೋಬರ್ 10, ಶುಕ್ರವಾರ: ಕರ್ವಾ ಚೌತ್ (ಹಿಮಾಚಲ ಪ್ರದೇಶದಲ್ಲಿ ರಜೆ)
  • ಅಕ್ಟೋಬರ್ 11: ಎರಡನೇ ಶನಿವಾರದ ರಜೆ
  • ಅಕ್ಟೋಬರ್ 12: ಭಾನುವಾರದ ರಜೆ
  • ಅಕ್ಟೋಬರ್ 18, ಶನಿವಾರ: ಕಟಿ ಬಿಹು (ಅಸ್ಸಾಮ್​ನಲ್ಲಿ ರಜೆ)
  • ಅಕ್ಟೋಬರ್ 19: ಭಾನುವಾರದ ರಜೆ
  • ಅಕ್ಟೋಬರ್ 20, ಸೋಮವಾರ: ದೀಪಾವಳಿ, ಕಾಳಿ ಪೂಜೆ (ಹೆಚ್ಚಿನ ಕಡೆ ರಜೆ)
  • ಅಕ್ಟೋಬರ್ 21, ಮಂಗಳವಾರ: ದೀಪಾವಳಿ ಅಮಾವಾಸ್ಯ, ಗೋವರ್ಧನ ಪೂಜೆ (ಮಹಾರಾಷ್ಟ್ರ, ಒಡಿಶಾ ಮೊದಲಾದ ಕೆಲವೆಡೆ ರಜೆ)
  • ಅಕ್ಟೋಬರ್ 22, ಬುಧವಾರ: ದೀಪಾವಳಿ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ (ಹಲವು ರಾಜ್ಯಗಳಲ್ಲಿ ರಜೆ)
  • ಅಕ್ಟೋಬರ್ 23, ಗುರುವಾರ: ಭಾಯಿ ದೂಜ್, ಲಕ್ಷ್ಮೀ ಪೂಜೆ, ಚಿತ್ರಗುಪ್ತ ಪೂಜೆ (ಕೆಲವು ರಾಜ್ಯಗಳಲ್ಲಿ ರಜೆ)
  • ಅಕ್ಟೋಬರ್ 25: ನಾಲ್ಕನೇ ಶನಿವಾರದ ರಜೆ
  • ಅಕ್ಟೋಬರ್ 26: ಭಾನುವಾರದ ರಜೆ
  • ಅಕ್ಟೋಬರ್ 27, ಸೋಮವಾರ: ಛಾತ್ ಪೂಜೆ (ಬಂಗಾಳ, ಬಿಹಾರ, ಜಾರ್ಖಂಡ್​ನಲ್ಲಿ ರಜೆ)
  • ಅಕ್ಟೋಬರ್ 28, ಮಂಗಳವಾರ: ಛಾತ್ ಪೂಜೆ (ಬಂಗಾಳ, ಬಿಹಾರ, ಜಾರ್ಖಂಡ್​ನಲ್ಲಿ ರಜೆ)
  • ಅಕ್ಟೋಬರ್ 31, ಶುಕ್ರವಾರ: ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ (ಗುಜರಾತ್​ನಲ್ಲಿ ರಜೆ)

ಇದನ್ನೂ ಓದಿ: ಬ್ಯಾಂಕ್​ನಲ್ಲಿವೆ RTGS, NEFT, IMPS, ECS ACH ಪೇಮೆಂಟ್ ಸಿಸ್ಟಂಗಳು; ಯಾವುದಕ್ಕೆ ಎಷ್ಟಿದೆ ಶುಲ್ಕ? ಇಲ್ಲಿದೆ ಮಾಹಿತಿ

ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳ ಬ್ಯಾಂಕ್ ರಜೆಗಳು

  • ಅಕ್ಟೋಬರ್ 1, ಬುಧವಾರ: ಮಹಾನವಮಿ
  • ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ, ವಿಜಯದಶಮಿ
  • ಅಕ್ಟೋಬರ್ 5: ಭಾನುವಾರದ ರಜೆ
  • ಅಕ್ಟೋಬರ್ 7, ಮಂಗಳವಾರ: ವಾಲ್ಮೀಕಿ ಜಯಂತಿ
  • ಅಕ್ಟೋಬರ್ 11: ಎರಡನೇ ಶನಿವಾರದ ರಜೆ
  • ಅಕ್ಟೋಬರ್ 12: ಭಾನುವಾರದ ರಜೆ
  • ಅಕ್ಟೋಬರ್ 19: ಭಾನುವಾರದ ರಜೆ
  • ಅಕ್ಟೋಬರ್ 20, ಸೋಮವಾರ: ದೀಪಾವಳಿ
  • ಅಕ್ಟೋಬರ್ 22, ಬುಧವಾರ: ದೀಪಾವಳಿ ಬಲಿಪಾಡ್ಯಮಿ
  • ಅಕ್ಟೋಬರ್ 25: ನಾಲ್ಕನೇ ಶನಿವಾರದ ರಜೆ
  • ಅಕ್ಟೋಬರ್ 26: ಭಾನುವಾರದ ರಜೆ

ಬ್ಯಾಂಕುಗಳ ಕಚೇರಿಗಳು ಬಂದ್ ಆದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಆನ್​ಲೈನಲ್ಲಿ ಲಭ್ಯ ಇರುತ್ತವೆ. ಕ್ಯಾಷ್ ಅಗತ್ಯ ಇದ್ದವರಿಗೆ 24 ಗಂಟೆ ಎಟಿಎಂಗಳು ತೆರೆದಿರುತ್ತವೆ. ಹಣ ಪಾವತಿಗೆ ನೆಟ್​ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಮತ್ತು ಯುಪಿಐ ಇದ್ದೇ ಇರುತ್ತದೆ. ಚೆಕ್ ಸಲ್ಲಿಸಲು, ಆರ್​ಟಿಜಿಎಸ್ ಇತ್ಯಾದಿ ಕಾರ್ಯಗಳಿಗೆ ಬ್ಯಾಂಕ್ ಕಚೇರಿಗೆ ಹೋಗಬೇಕೆನ್ನುವವರು ರಜಾ ದಿನಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ಸಜ್ಜುಗೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ