AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡು ಬಡತನ ತೊಡೆದು ಹಾಕಿದ ಭಾರತ: ಅಧಿಕೃತ ಅಂಕಿಅಂಶಗಳು ಹೇಳೋದೇನು ನೋಡಿ

ಕಡುಬಡತನ ತೊಡೆದು ಹಾಕುವಲ್ಲಿ ಭಾರತ ಬಹಳ ದೊಡ್ಡ ಸಾಧನೆ ಮಾಡಿರುವುದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ. ವಿಶ್ವಬ್ಯಾಂಕ್ ಶಿಫಾರಸು ಮಾಡಿರುವ ಅಂಕಿಅಂಶಗಳ ಮಾನದಂಡದ ಪ್ರಕಾರವೂ ಸಮೀಕ್ಷಾ ವರದಿ ಶುಭ ಸುದ್ದಿಯನ್ನೇ ನೀಡಿದೆ. 2011-12ನೇ ಸಾಲಿಗೆ ಹೋಲಿಸಿದರೆ ಇದೀಗ ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಉತ್ತಮ ಸಾಧನೆ ಮಾಡಲಾಗಿದೆ.

ಕಡು ಬಡತನ ತೊಡೆದು ಹಾಕಿದ ಭಾರತ: ಅಧಿಕೃತ ಅಂಕಿಅಂಶಗಳು ಹೇಳೋದೇನು ನೋಡಿ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Mar 02, 2024 | 10:03 AM

Share

ನವದೆಹಲಿ, ಮಾರ್ಚ್​ 2: ತೀವ್ರ ಅಥವಾ ಕಡು ಬಡತನವನ್ನು (Poverty) ತೊಡೆದು ಹಾಕುವ ನಿಟ್ಟಿನಲ್ಲಿ ಭಾರತ (India) ಅತ್ಯುತ್ತಮ ಸಾಧನೆ ಮಾಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. 2022 – 23ನೇ ಸಾಲಿನ ಅನುಭೋಗಿ / ಬಳಕೆಯ ವೆಚ್ಚ ದತ್ತಾಂಶವನ್ನು (Consumption Expenditure Data) ಬಿಡುಗಡೆ ಮಾಡಲಾಗಿದ್ದು, ಇದು 10 ವರ್ಷ ಅವಧಿಯ ಬಡತನ ಸಂಬಂಧಿತ ಸಮೀಕ್ಷೆ ಆಧಾರಿತ ಮಾಹಿತಿಯನ್ನು ಒದಗಿಸಿದೆ. ಈ ಹಿಂದಿನ ಅಧಿಕೃತ ಸಮೀಕ್ಷೆಯನ್ನು 2011 12ನೇ ಸಾಲಿನಲ್ಲಿ ನಡೆಸಲಾಗಿತ್ತು. ಭಾರತವು ಅನುಭೋಗಿ ಅಥವಾ ಬಳಕೆಯ ವೆಚ್ಚಗಳನ್ನು ಅಂದಾಜು ಮಾಡಲು ಎರಡು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಿದೆ. ಅವುಗಳು ಯೂನಿಫಾರ್ಮ್ ರಿಕಾಲ್ ಪಿರಿಯಡ್ (URP) ಮತ್ತು ಅಕ್ಯುರೇಟ್ ಮಾಡಿಫೈಡ್ ಮಿಕ್ಸೆಡ್ ರಿಕಾಲ್ ಪಿರಿಯಡ್ (MMRP) ಆಗಿವೆ.

30 ದಿನಗಳ ಅವಧಿಗೆ ಕುಟುಂಬಗಳು ಮಾಡಿದ ವೆಚ್ಚದ ಕುರಿತು ಕೇಳಿದ ಪ್ರಶ್ನೆಗಳಿಗೆ ದೊರೆತ ಉತ್ತರದ ಆಧಾರದಲ್ಲಿ ಯುಆರ್​ಪಿ ವಿಧಾನ ವರದಿ ಸಿದ್ಧಪಡಿಸಲಾಗಿದೆ. ಬೇಗನೆ ಹಾಳಾಗುವ ಸರಕುಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ದೊರೆತ ಉತ್ತರಗಳನ್ನು ಬಳಸಿಕೊಂಡು ಎಂಎಂಆರ್​ಪಿ ವಿಧಾನದ ವರದಿ ಸಿದ್ಧಪಡಿಸಲಾಗಿದೆ. ಹಿಂದೆಲ್ಲ ಈ ಎರಡೂ ವಿಧಾನಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದ ಭಾರತ ಈ ಬಾರಿ ಇತರ ದೇಶಗಳ ಗುಣಮಟ್ಟ ಮಾನದಂಡ ಆಧಾರಿತ ಎಂಎಂಆರ್​ಪಿ ವಿಧಾನವನ್ನೇ ಆಯ್ಕೆ ಮಾಡಿಕೊಂಡಿತ್ತು ಎಂದು ‘ಬ್ರೂಕಿಂಗ್ಸ್ ಡಾಟ್ ಎಜು’ ವರದಿ ಮಾಡಿದೆ.

ಯುಆರ್​ಪಿ ವಿಧಾನದಲ್ಲಿ ಸಮೀಕ್ಷೆ ಮಾಡಿದ್ದ 1977-78ನೇ ಸಾಲಿನ ಬಡತನ ವರದಿ ಮತ್ತು 2011-12ನೇ ಸಾಲಿನ ವರದಿಯನ್ನು ತುಲನೆ ಮಾಡಿಕೊಂಡು 2022-23ನೇ ಸಾಲಿನ ವರದಿಯನ್ನು ಎಂಎಂಆರ್​​ಪಿ ವಿಧಾನದಲ್ಲಿ ಸಿದ್ಧಪಡಿಸಲಾಗಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ವಿಶ್ವಬ್ಯಾಂಕ್ ನಿಗದಿಪಡಿಸಿದ ಮಾನದಂಡದ ಪ್ರಕಾರ ಬಡತನದ ಅಂದಾಜು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ದತ್ತಾಂಶಗಳು ಹೇಳುವುದೇನು?

ರಿಲಯಲ್ ಪರ್ ಕ್ಯಾಪಿಟಾ ಕನ್ಸಂಪ್ಷನ್ ಗ್ರೋತ್ (ನೈಜ ಸಮಯದ ತಲಾ ಆದಾಯ ವೆಚ್ಚದ ಬೆಳವಣಿಗೆ) 2011-12ರಿಂದ ವಾರ್ಷಿಕ ಶೇ 2.9ರ ಬೆಳವಣಿಗೆ ದಾಖಲಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಇದು ಶೇ 3.1ರ ಬೆಳವಣಿಗೆ ದಾಖಲಿಸಿದೆ. ಒಟ್ಟಾರೆಯಾಗಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ವೆಚ್ಚದ ಸಾಮರ್ಥ್ಯದ ಪ್ರಮಾಣ ಹೆಚ್ಚಾಗಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ.

 ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಗಳಿಗೆ ಡಬಲ್ ಭಾಗ್ಯ; ಜೂನ್​ನಲ್ಲಿ ಸಂಬಳ ಹೆಚ್ಚಳ; ವಾರಕ್ಕೆ ಐದು ದಿನ ಕೆಲಸ

ವಿಶ್ವಬ್ಯಾಂಕ್ ಅಂದಾಜಿಸಿರುವ ಅಂಕಿಅಂಶಗಳ ಮಾನದಂಡದ ಪ್ರಕಾರ, ಸಮೀಕ್ಷೆಯಲ್ಲಿ ಭಾರತದ ಬಡವರ ಸಂಖ್ಯೆಯು ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದನ್ನು ದತ್ತಾಂಶಗಳು ತೋರಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ