ಗೋಫಸ್ಟ್ ಗಾಯದ ಮೇಲೆ ಬರೆ; ಎಲ್ಲಾ 54 ವಿಮಾನಗಳನ್ನು ಮರಳಿಸಲು ದೆಹಲಿ ಹೈಕೋರ್ಟ್ ಆದೇಶ

Go First Airlines: ಗೋಫಸ್ಟ್ ಏರ್ಲೈನ್ಸ್​ಗೆ ಗುತ್ತಿಗೆಗೆ ನೀಡಲಾಗಿದ್ದ 54 ವಿಮಾನಗಳನ್ನು ಐದು ಕಾರ್ಯದಿನದೊಳಗೆ ಡೀರಿಜಿಸ್ಟರ್ ಮಾಡಬೇಕೆಂದು ದೆಹಲಿ ಹೈಕೋರ್ಟ್ ಆದೇಶಿಸಿದೆ. ಬಳಿಕ ಈ ವಿಮಾನಗಳನ್ನು ಗುತ್ತಿಗೆದಾರ ಸಂಸ್ಥೆಗಳಿಗೆ ಮರಳಿಸುವ ಜವಾಬ್ದಾರಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರವಾದ ಎಎಐ ಮತ್ತು ಡಿಜಿಸಿಎಗೆ ಕೋರ್ಟ್ ವಹಿಸಿದೆ. ಆರ್ಥಿಕ ದಿವಾಳಿ ಸ್ಥಿತಿಯಿಂದ ಚೇತರಿಸಿಕೊಳ್ಳಲು ಹೆಣಗುತ್ತಿರುವ ಗೋಫಸ್ಟ್ ಏರ್ಲೈನ್ಸ್​ಗೆ ಇದು ಹಿನ್ನಡೆಯಾಗಿದೆ.

ಗೋಫಸ್ಟ್ ಗಾಯದ ಮೇಲೆ ಬರೆ; ಎಲ್ಲಾ 54 ವಿಮಾನಗಳನ್ನು ಮರಳಿಸಲು ದೆಹಲಿ ಹೈಕೋರ್ಟ್ ಆದೇಶ
ಗೋಫಸ್ಟ್ ಏರ್ಲೈನ್ಸ್
Follow us
|

Updated on: Apr 26, 2024 | 7:10 PM

ನವದೆಹಲಿ, ಏಪ್ರಿಲ್ 26: ಗೋ ಫಸ್ಟ್ ಏರ್​ಲೈನ್ ಸಂಸ್ಥೆಗೆ ತಾವು ನೀಡಿದ್ದ 54 ವಿಮಾನಗಳ ನೊಂದಣಿ ರದ್ದು ಮಾಡುವಂತೆ ವಿಮಾನ ಗುತ್ತಿಗೆದಾರರು (aircraft lessors) ಮಾಡಿದ ಮನವಿಯನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸಿದೆ. ಐದು ಕಾರ್ಯದಿನದಲ್ಲಿ (working days) 54 ವಿಮಾನಗಳನ್ನು ಡೀರಿಜಿಸ್ಟರ್ ಮಾಡುವಂತೆ ಕೋರ್ಟ್ ಆದೇಶಿಸಿದೆ. ಈ ವಿಮಾನಗಳು ಸುಸ್ಥಿತಿಯಲ್ಲಿವೆಯಾ ಎಂದು ಪರಿಶೀಲಿಸಿ ಭಾರತದಿಂದ ಹೊರಕ್ಕೆ ಸಾಗಿಸಲು ಗುತ್ತಿಗೆದಾರ ಸಂಸ್ಥೆಗಳಿಗೆ ಸಹಾಯವಾಗಬೇಕೆಂದು ಡಿಜಿಸಿಎ ಮತ್ತು ಏರ್​ಪೋರ್ಟ್ ಪ್ರಾಧಿಕಾರಕ್ಕೆ (ಎಎಐ) ನಿರ್ದೇಶನ ಕೂಡ ನೀಡಿದೆ. ಇದರೊಂದಿಗೆ ದಿವಾಳಿ ಸ್ಥಿತಿಯಲ್ಲಿರುವ ಗೋಫಸ್ಟ್ ಏರ್ಲೈನ್ಸ್​ನ ಪುನಶ್ಚೇತನದ ಹಾದಿ ಮತ್ತೆ ಮಸುಕಾಗಿದೆ.

ಈ ಆದೇಶಕ್ಕೆ ತಡೆಯಾಜ್ಞೆ ತರಲು ಗೋಫಸ್ಟ್ ಪ್ರಯತ್ನಿಸಬಹುದು. ಅದು ಸಾಧ್ಯವಾಗದೇ ಹೋದರೆ ಎಲ್ಲಾ 54 ವಿಮಾನಗಳನ್ನು ಅದು ಕಳೆದುಕೊಳ್ಳಬೇಕಾಗುತ್ತದೆ. ಮತ್ತೆ ಹೊಸದಾಗಿ ವಿಮಾನಗಳ ಗುತ್ತಿಗೆ ಪಡೆಯಬೇಕಾಗುತ್ತದೆ. ಹಣಕಾಸು ಸಂಕಷ್ಟದಲ್ಲಿರುವ ಏರ್ಲೈನ್ ಸಂಸ್ಥೆಗೆ ಒಂದು ರೀತಿಯಲ್ಲಿ ಇದು ಇನ್ನಷ್ಟು ಹತಾಶೆಯ ಕೂಪಕ್ಕೆ ದೂಡಿದಂತಾಗುತ್ತದೆ.

ಪೆಂಬ್ರೋಕ್ ಏವಿಯೇಶನ್, ಆಕ್ಸಿಪಿಟರ್ ಇನ್ವೆಸ್ಟ್ಮೆಂಟ್ ಏರ್​ಕ್ರಾಫ್ಟ್ 2, ಇಒಎಸ್ ಏವಿಯೇಶನ್, ಎಸ್​ಎಂಬಿಸಿ ಏವಿಯೇಶನ್ ಮೊದಲಾದ ಕಂಪನಿಗಳು ಗುತ್ತಿಗೆಯ ಮೇಲೆ ವಿಮಾನಗಳನ್ನು ಗೋಫಸ್ಟ್​ಗೆ ನೀಡಿದ್ದವು. ಆದರೆ, ಹಣಕಾಸು ಸಂಕಷ್ಟಕ್ಕೆ ಸಿಲುಕಿ ವಿಮಾನ ಹಾರಾಟವನ್ನು ಗೋಫಸ್ಟ್ ನಿಲ್ಲಿಸಿತ್ತು. ಗೋಫಸ್ಟ್​ಗೆ ನೀಡಿದ್ದ ತಮ್ಮ ವಿಮಾನಗಳನ್ನು ಡೀರಿಜಿಸ್ಟರ್ ಮಾಡುವಂತೆ ಗುತ್ತಿಗೆದಾರ ಸಂಸ್ಥೆಗಳು ಮನವಿ ಮಾಡಿದ್ದವು. ಆದರೆ, ಅಷ್ಟರಲ್ಲಿ ಗೋಫಸ್ಟ್ ಸಂಸ್ಥೆ ಮೊರಾಟೋರಿಯಂ ಅರ್ಜಿ ಹಾಕಿತ್ತು. ಹೀಗಾಗಿ, ಡಿಜಿಸಿಎ ಗೋಫಸ್ಟ್ ವಿಮಾನಗಳನ್ನು ಡೀರಿಜಿಸ್ಟರ್ ಮಾಡಲು ನಿರಾಕರಿಸಿತ್ತು. ಇದು ಆಗಿದ್ದು 2023ರ ಮೇ ತಿಂಗಳಲ್ಲಿ.

ಇದನ್ನೂ ಓದಿ: ಕೇರಳದ ವಿಳಿಂಜಮ್ ಪೋರ್ಟ್; ಭಾರತದ ಮೊದಲ ಟ್ರಾನ್ಸ್​ಶಿಪ್ಮೆಂಟ್ ಬಂದರು ಕಾರ್ಯಾಚರಣೆಗೆ ಒಪ್ಪಿಗೆ ಪಡೆದ ಅದಾನಿ ಗ್ರೂಪ್

ಇದೀಗ ದೆಹಲಿ ಹೈಕೋರ್ಟ್ ವಿಮಾನ ಗುತ್ತಿಗೆದಾರ ಕಂಪನಿಗಳ ಪರವಾಗಿ ತೀರ್ಪು ನೀಡಿದೆ. ಗೋಫಸ್ಟ್​ನ ವ್ಯಾಜ್ಯ ಪರಿಹಾರಕ್ಕೆ ನಿಯೋಜನೆಯಾಗಿರುವ ರೆಸಲ್ಯೂಶನ್ ಪ್ರೊಫೆಷನಲ್ ಅಥವಾ ಆರ್​ಪಿ ಅವರು ಈಗ 54 ವಿಮಾನಗಳ ಮೈಂಟೆನೆನ್ಸ್ ವಿವರಗಳನ್ನು ಗುತ್ತಿಗೆದಾರರಿಗೆ ಕೊಡುವಂತೆ ಕೋರ್ಟ್ ಆದೇಶ ಪಡೆದಿದ್ದಾರೆ. ವಿಮಾನ ಹಾರಾಟಕ್ಕೆ ಅರ್ಹವಾಗಿದೆಯಾ ಎಂಬುದನ್ನು ಪರಿಶೀಲಿಸಲು ಏರ್ಪೋರ್ಟ್ ಅಥಾರಿಟಿಗೆ ಜವಾಬ್ದಾರಿ ಕೊಡಲಾಗಿದೆ.

ಗೋಫಸ್ಟ್ ಖರೀದಿಗೆ ಎರಡು ಸಂಸ್ಥೆಗಳ ಬಿಡ್ಡಿಂಗ್

ಗೋಫಸ್ಟ್ ಏರ್ಲೈನ್ಸ್ ಸಂಸ್ಥೆಯನ್ನು ಮಾರಾಟಕ್ಕೆ ಇಡಲಾಗಿದೆ. ಸದ್ಯ ಎರಡು ಬಿಡ್ ಸಲ್ಲಿಕೆ ಆಗಿವೆ. ಸ್ಪೈಸ್​ಜೆಟ್ ಏರ್ಲೈನ್ಸ್​ನ ಮುಖ್ಯಸ್ಥ ಅಜಯ್ ಸಿಂಗ್ ಅವರು ಬ್ಯುಸಿ ಬೀ ಏರ್ವೇಸ್ ಸಂಸ್ಥೆ ಜೊತೆ ಸೇರಿ ಬಿಡ್ ಸಲ್ಲಿಕೆ ಮಾಡಿದ್ದಾರೆ. ಇಲ್ಲಿ ಅಜಯ್ ಸಿಂಗ್ ವೈಯಕ್ತಿಕವಾಗಿ ಸೇರಿ ಬ್ಯುಸಿ ಬೀ ಏರ್ವೇಸ್ ಜೊತೆ ಉದ್ದಿಮೆ ರಚಿಸಿದ್ದಾರೆ. ಅದರಡಿಯಲ್ಲಿ ಗೋಫಸ್ಟ್ ಖರೀದಿಗೆ ಬಿಡ್ಡಿಂಗ್ ಮಾಡಲಾಗಿದೆ. ವರದಿ ಪ್ರಕಾರ 1,600 ಕೋಟಿ ರೂ ಅನ್ನು ಇದು ಆಫರ್ ಮಾಡಿದೆ.

ಇದನ್ನೂ ಓದಿ: ಚೀನಾ ಅವಲಂಬನೆ ತಪ್ಪಿಸಲು ಟಾಟಾದಿಂದ ಮಹತ್ವದ ಹೆಜ್ಜೆ; ಭಾರತದಲ್ಲೇ ಹೈಟೆಕ್ ಮೆಷಿನ್ ತಯಾರಿಕೆ

ಮತ್ತೊಂದು ಬಿಡ್ಡಿಂಗ್ ಸಲ್ಲಿಕೆಯಾಗಿರುವುದು ಶಾರ್ಜಾ ಮೂಲದ ಸ್ಕೈ ಒನ್ ಸಂಸ್ಥೆಯಿಂದ. ಇದು ಎಷ್ಟು ಹಣದ ಆಫರ್ ಮಾಡಿದೆ ಎಂಬುದು ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು