AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ; ಇಗೋ ಇಲ್ಲಿವೆ ಕಾರಣಗಳು

Reasons why gold and silver prices crashed: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಣನೀಯವಾಗಿ ಕುಸಿದಿವೆ. ಗ್ರಾಮ್​ಗೆ 425 ರೂವರೆಗೂ ಹೋಗಿದ್ದ ಬೆಳ್ಳಿ ಬೆಲೆ ಇದೀಗ 280 ರೂಗೆ ಕುಸಿದಿದೆ. ಅದೂ ಕೆಲವೇ ದಿನಗಳ ಅಂತರದಲ್ಲಿ. ಫೆಡರಲ್ ರಿಸರ್ವ್​ಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು ಒಟ್ಟಾರೆ ಚಿನಿವಾರ ಮಾರುಕಟ್ಟೆಯಲ್ಲಿ ಚೈನ್ ರಿಯಾಕ್ಷನ್ ರೀತಿ ಪರಿಣಾಮ ಬೀರಿದೆ.

ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ; ಇಗೋ ಇಲ್ಲಿವೆ ಕಾರಣಗಳು
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 03, 2026 | 3:06 PM

Share

ಕಳೆದ ಒಂದು ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver prices) ಸಿಕ್ಕಾಪಟ್ಟೆ ಏರಿದಷ್ಟು ವೇಗದಲ್ಲಿ ಕೆಲ ದಿನಗಳಿಂದ ಕುಸಿತ ಕಾಣುತ್ತಿವೆ. ಈ ಅಮೂಲ್ಯ ಲೋಹಗಳ ಬೆಲೆಯನ್ನು ಕಟ್ಟಿಹಾಕುವುದು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಿರುವ ಹೊತ್ತಲ್ಲೇ ಭರ್ಜರಿ ಕುಸಿತ ಆಗಿದೆ. ಹೂಡಿಕೆದಾರರು ಲಾಭಕ್ಕೆ ಮಾರಿಕೊಳ್ಳುತ್ತಿರಬಹುದು ಎಂದು ಮೇಲ್ನೋಟಕ್ಕೆ ತೋರುತ್ತದೆ. ಆದರೆ, ಕಾಮೆಕ್ಸ್ ಮಾರುಕಟ್ಟೆಯಲ್ಲಿ ಪ್ಯಾನಿಕ್ ಸೆಲ್ಲಾಫ್ (Panic Sell-off) ಆಗಿರುವುದು ಕಂಡು ಬಂದಿದೆ. ಪ್ಯಾನಿಕ್ ಸೆಲ್ಲಾಫ್ ಎಂದರೆ ಹೂಡಿಕೆದಾರರು ಯಾವುದೋ ಆತಂಕದಿಂದ ತಮ್ಮ ಹೂಡಿಕೆಯನ್ನು ಹಿಂಪಡೆಯುತ್ತಿರುವುದಾಗಿದೆ.

ಗೋಲ್ಡ್, ಸಿಲ್ವರ್ ಫ್ಯೂಚರ್ಸ್​ನಲ್ಲಿ ಶುರುವಾದ ನಡುಕ

ಕಮಾಡಿಟಿ ಎಕ್ಸ್​ಚೇಂಜ್​ ಅಥವಾ ಕಾಮೆಕ್ಸ್​ನಲ್ಲಿ ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಸಖತ್ ಕುಸಿತ ಕಂಡಿವೆ. ಸೋಮವಾರ ಒಂದೇ ದಿನ ಈ ಡಿರೈವೇಟಿವ್ಸ್ ಟ್ರೇಡಿಂಗ್​ನಲ್ಲಿ ಬೆಲೆ ಶೇ. 2ರಿಂದ 5ರಷ್ಟು ಇಳಿಕೆ ಆಗಿದೆ.

ಇಲ್ಲಿಂದ ಶುರುವಾದ ನಡುಕವು ಇಟಿಎಫ್ ಹೂಡಿಕೆದಾರರಿಗೆ ಭಯಭೀತಗೊಳಿಸಿದೆ. ಸಿಲ್ವರ್ ಇಟಿಎಫ್ ಮತ್ತು ಗೋಲ್ಡ್ ಇಟಿಎಫ್​ಗಳಿಂದ ಲೆಕ್ಕವಿಲ್ಲದಷ್ಟು ಹೂಡಿಕೆಗಳು ಹೊರ ಹೋಗಿವೆ. ಹೀಗಾಗಿ, ಈ ಎರಡು ಲೋಹಗಳ ಬೆಲೆ ಗಣನೀಯವಾಗಿ ಇಳಿಕೆ ಆಗಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಭಾರತದ ಕೃಷಿ ಮಾರುಕಟ್ಟೆ ರಕ್ಷಣೆಯಲ್ಲಿ ರಾಜಿ ಇರೋದಿಲ್ಲವಾ?

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಏರಲು ಕಾರಣವಾಗಿದ್ದೇ ಈ ಇಟಿಎಫ್​ಗಳು. ಈಗ ಇದೇ ಇಟಿಎಫ್​ಗಳು ಇವೆರೆಡು ಲೋಹಗಳ ಬೆಲೆ ಕುಸಿತಕ್ಕೆ ಎಡೆ ಮಾಡಿಕೊಟ್ಟಿವೆ.

ಗೋಲ್ಡ್ ಫ್ಯೂಚರ್ಸ್, ಸಿಲ್ವರ್ ಫ್ಯೂಚರ್ಸ್ ಕುಸಿತಕ್ಕೆ ಏನು ಕಾರಣ?

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್​ನ ಛೇರ್ಮನ್ ಸ್ಥಾನ ಬದಲಾವಣೆ ಆಗಿದ್ದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಟ್ರಂಪ್ ಮಾತು ಕೇಳುವ ಕೆವಿನ್ ವಾರ್ಷ್ ಎಂಬುವವರು ಹೊಸ ಛೇರ್ಮನ್ ಆಗಲಿದ್ದಾರೆ ಎನ್ನುವ ಸುದ್ದಿ ಬಂದ ಬೆನ್ನಲ್ಲೇ ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಬೆಲೆ ವ್ಯತ್ಯಯಕ್ಕೆ ಕಾರಣವಾಯಿತು.

ಇದನ್ನೂ ಓದಿ: ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…

ಸಿಎಂಇ ಗ್ರೂಪ್ ಮಾರ್ಜಿನ್ ದರ ಏರಿಕೆಯಾಗಿದ್ದೇ ಪ್ಯಾನಿಕ್ ಸೆಲ್ಲಾಫ್​ಗೆ ಕಾರಣ?

ವಿಶ್ವದ ಕೆಲ ಪ್ರಮುಖ ಡಿರೈವೇಟಿವ್ ಮಾರುಕಟ್ಟೆಗಳನ್ನು ನಿರ್ವಹಿಸುವ ಸಿಎಂಇ ಗ್ರೂಪ್ ಮೂರು ದಿನದಲ್ಲಿ ಎರಡು ಬಾರಿ ಮೈಂಟೆನೆನ್ಸ್ ಮಾರ್ಜಿನ್ ಅನ್ನು ಹೆಚ್ಚಿಸಿತು. ಟ್ರೇಡರ್​​ಗಳು ಎಫ್ ಅಂಡ್ ಓ ಟ್ರೇಡಿಂಗ್ ಮಾಡಲು ಪಾವತಿಸಬೇಕಾದ ಠೇವಣಿ ಹಣ ಹೆಚ್ಚಳಗೊಂಡಿತು. ಇದರಿಂದ ಟ್ರೇಡರ್​ಗಳು ಫ್ಯೂಚರ್ಸ್​ನಿಂದ ನಿರ್ಗಮಿಸತೊಡಗಿದರು. ಇದು ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಕುಸಿತಕ್ಕೆ ಕಾರಣವಾಯಿತು. ತತ್​ಪರಿಣಾಮವಾಗಿ ಇಟಿಎಫ್​ಗಳಲ್ಲೂ ಪ್ಯಾನಿಕ್ ಸೆಲ್ಲಾಫ್ ನಡೆಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ