AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shopping Behaviour: ಆನ್​ಲೈನ್ ಶಾಪಿಂಗ್: ಜಗತ್ತಿನಲ್ಲಿ ಭಾರತೀಯರೇ ಅತಿಹೆಚ್ಚು ಆತುರಗಾರರಂತೆ; ಜನರ ಮಿಡಿತ ಅರಿತು ಜಾಣರಾದ ಕಂಪನಿಗಳು

Indians Most Impatient Online Shoppers: ಜಗತ್ತಿನ ಆನ್​ಲೈನ್ ಶಾಪರ್​ಗಳ ಪೈಕಿ ತಾಳ್ಮೆ ಇಲ್ಲದವರು ಹೆಚ್ಚು ಯಾರಾದರೂ ಇದ್ದಾರಂದರೆ ಅದು ಭಾರತೀಯರಂತೆ ಎಂದು ವಂಡರ್​ಮ್ಯಾನ್ ಥಾಂಪ್ಸನ್ ಎಂಬ ಕಂಪನಿ ಇತ್ತೀಚೆಗೆ ಪ್ರಕಟಿಸಿದ ವರದಿಯೊಂದರಲ್ಲಿ ತಿಳಿಸಿದೆ.

Shopping Behaviour: ಆನ್​ಲೈನ್ ಶಾಪಿಂಗ್: ಜಗತ್ತಿನಲ್ಲಿ ಭಾರತೀಯರೇ ಅತಿಹೆಚ್ಚು ಆತುರಗಾರರಂತೆ; ಜನರ ಮಿಡಿತ ಅರಿತು ಜಾಣರಾದ ಕಂಪನಿಗಳು
ಆನ್ಲೈನ್ ಶಾಪಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 26, 2023 | 5:38 PM

Share

ನವದೆಹಲಿ, ಜುಲೈ 26: ಸ್ಮಾರ್ಟ್​ಫೋನ್ ಬಂದ ಮೇಲೆ ಜನರ ವರ್ತನೆ ಬದಲಾಗಿದೆ. ಇಕಾಮರ್ಸ್ ಬೆಳೆದಂತೆ ಜನರ ಆನ್​ಲೈನ್ ಶಾಪಿಂಗ್ ವರ್ತನೆ ಬದಲಾಗುತ್ತಾ ಹೋಗಿದೆ. ಭಾರತದಲ್ಲಿ ಶೇ. 45ರಷ್ಟು ಡಿಜಿಟಲ್ ಉತ್ಪನ್ನಗಳು ಆನ್​ಲೈನ್​ನಲ್ಲೇ ಮಾರಾಟವಾಗುತ್ತವೆ. ಭಾರತದ ರೀಟೇಲ್ ಮಾರುಕಟ್ಟೆಯಲ್ಲಿ ಶೇ. 6.5ರಷ್ಟು ಪಾಲು ಆನ್​ಲೈನ್ ಮಾರಾಟದಿಂದಲೇ ಇದೆ. ಸಾಕಷ್ಟು ಜನರು ಬಟ್ಟೆ ಬರೆ, ಗ್ಯಾಜೆಟ್ ಇತ್ಯಾದಿಯನ್ನು ಆನ್​ಲೈನ್​ನಲ್ಲೇ ಖರೀದಿಸುತ್ತಾರೆ. ಈ ಮಧ್ಯೆ ಜಾಗತಿಕ ವರದಿಯೊಂದು ವಿಶ್ವಾದ್ಯಂತ ಜನರ ಶಾಪಿಂಗ್ ವರ್ತನೆ (Shopping Behaviour) ಬಗ್ಗೆ ಬೆಳಕು ಚೆಲ್ಲಿದೆ. ಕುತೂಹಲದ ಸಂಗತಿ ಇರುವುದು ಭಾರತೀಯರ ಶಾಪಿಂಗ್ ವರ್ತನೆಯದ್ದು. ಆನ್​ಲೈನ್ ಶಾಪಿಂಗ್ ವಿಚಾರಕ್ಕೆ ಬಂದರೆ ಭಾರತೀಯರು ವಿಶ್ವದಲ್ಲೇ ಅತ್ಯಂತ ಅಸಹನಶೀಲರಂತೆ. ಅಂದರೆ ತಾಳ್ಮೆ ಇಲ್ಲದ ಆನ್​ಲೈನ್ ಶಾಪರ್​ಗಳು ಭಾರತೀಯರು ಎಂದು ವಂಡರ್​ಮ್ಯಾನ್ ಥಾಂಪ್ಸನ್ (Wunderman Thompson) ಎಂಬ ರಿಸರ್ಚ್ ಕಂಪನಿ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.

ಭಾರತೀಯರು ಯಾಕೆ ಆತುರಗಾರರು?

ಭಾರತದಲ್ಲಿ ಆನ್​ಲೈನ್ ಶಾಪಿಂಗ್ ಮಾಡುವವರಲ್ಲಿ ಶೇ. 38ರಷ್ಟು ಮಂದಿಗೆ ತಾವು ಆರ್ಡರ್ ಮಾಡಿದ ವಸ್ತುಗಳು 2 ಗಂಟೆಯೊಳಗೆ ಬರಬೇಕೆಂದು ಅಪೇಕ್ಷಿಸುತ್ತಾರಂತೆ. ಕ್ವಿಕ್ ಡೆಲಿವರಿ ನಿರೀಕ್ಷೆಯಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಭಾರತದವರೇ ಮುಂದಿದ್ದಾರೆ.

ಇದನ್ನೂ ಓದಿ: Economy: ಜಗತ್ತು ಅಲುಗಾಡಿದರೂ ಭಾರತ ನಿಶ್ಚಲ; 2023ರಲ್ಲಿ ಭಾರತದಿಂದ ನಿರೀಕ್ಷೆಮೀರಿದ ಆರ್ಥಿಕವೃದ್ಧಿ: ಐಎಂಎಫ್ ಅಂದಾಜು

ಹಾಗೆಯೇ, ಆರ್ಡರ್ ಮಾಡಿದ ಉತ್ಪನ್ನಗಳನ್ನು ರಿಟರ್ನ್ ಮಾಡುವುದರಲ್ಲೂ ಭಾರತೀಯರು ಮುಂದಿದ್ದಾರೆ. ಈ ರಿಪೋರ್ಟ್ ಪ್ರಕಾರ, ಆನ್​ಲೈನ್ ಶಾಪಿಂಗ್ ಮಾಡುವ ಭಾರತೀಯರು ಶೇ. 37ರಷ್ಟು ಉತ್ಪನ್ನಗಳನ್ನು ಮರಳಿಸುತ್ತಾರಂತೆ. ಈ ವಿಚಾರದಲ್ಲಿ ಭಾರತ ಯುಎಇ ನಂತರದ ಸ್ಥಾನದಲ್ಲಿದೆ. ಉತ್ಪನ್ನದ ಗುಣಮಟ್ಟದ ಬಗ್ಗೆ ತಕರಾರು ಇದ್ದು ಮರಳಿಸುವವರೇ ಹೆಚ್ಚು.

ಆನ್​ಲೈನ್ ಶಾಪರ್​ಗಳ ನಾಡಿಮಿಡಿತ ಅರಿತ ಕಂಪನಿಗಳೇ ಜಾಣ

ಭಾರತದ ಆನ್​ಲೈನ್ ಶಾಪರ್​ರಗಳ ಮಂತ್ರ ಎಂದರೆ ಅದು ಕ್ವಿಕ್ ಡೆಲಿವರಿ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನ. ಇವೆರಡನ್ನು ಒದಗಿಸುವ ಕಂಪನಿಗಳಿಗೆ ಭಾರತದಲ್ಲಿ ಭವಿಷ್ಯ ಇದೆ. ಭಾರತೀಯ ಶಾಪರ್​ಗಳ ಕ್ವಿಕ್ ಡೆಲಿವರಿ ಬಯಕೆಯನ್ನು ಅರಿತ ಸ್ವಿಗ್ಗಿ, ಜೆಪ್ಟೋ, ಬಿಗ್ ಬ್ಯಾಸ್ಕೆಟ್, ಸ್ವಿಗ್ಗಿ ಇನ್ಸ್​ಟಾಮಾರ್ಟ್, ಬ್ಲಿಂಕಿಟ್, ಡುಂಜೋ ಮೊದಲಾದ ಕಂಪನಿಗಳು ಒಳ್ಳೆಯ ಬ್ಯುಸಿನೆಸ್ ಕಾಣುತ್ತಿವೆ.

ಇದನ್ನೂ ಓದಿ: Alcohol King: ಶೇ. 66ರಷ್ಟು ಮಾರುಕಟ್ಟೆ ಪ್ರಾಬಲ್ಯ; ಇದೇ ಭಾರತದಲ್ಲಿ ಸ್ಪಿರಿಟ್​​ಗಳ ರಾಜ

ಆದರೆ, ಕ್ವಿಕ್ ಡೆಲಿವರಿ ಸರ್ವಿಸ್ ಒದಗಿಸುವುದು ಅಷ್ಟು ಸುಲಭದ ಕೆಲಸವಲ್ಲ. ಸಾಕಷ್ಟು ಡೆಲಿವರಿ ಹುಡುಗರು ಸೇರಿದಂತೆ ಸಮರ್ಪಕ ಇನ್​ಫ್ರಾಸ್ಟ್ರಕ್ಚರ್ ಮತ್ತು ಇಕೋಸಿಸ್ಟಂ ಅನ್ನು ಕಂಪನಿಗಳು ಹೊಂದಿರಬೇಕು. ಅದು ಸವಾಲಿನ ಕೆಲಸ. ಆದರೆ, ಸ್ಪರ್ಧಾತ್ಮಕ ಮಾರುಕಟ್ಟೆಯ ಬೇಡಿಕೆಗಳಿಗೆ ತಕ್ಕಂತೆ ಕಂಪನಿಗಳು ಅಣಿಗೊಳ್ಳುವುದು ಅನಿವಾರ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?