AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mudra Loan: ಪಿಎಂ ಮುದ್ರಾ ಸ್ಕೀಮ್; 10 ಲಕ್ಷ ರೂವರೆಗೂ ಸಾಲ; ಎಲ್ಲಿ ಸಿಗುತ್ತೆ? ಯಾರಿಗೆ ಸಿಗುತ್ತೆ ಮುದ್ರಾ ಲೋನ್?

PMMY Loan Details: 2015ರಲ್ಲಿ ಆರಂಭವಾದ ಪಿಎಂ ಮುದ್ರಾ ಯೋಜನೆಯಲ್ಲಿ ಎಂಎಸ್​ಎಂಇ ವಲಯದ ಉದ್ದಿಮೆಗಳಿಗೆ ಉತ್ತೇಜನ ನೀಡಲು ಸರ್ಕಾರ 10 ಲಕ್ಷ ರೂವರೆಗೂ ಸಾಲ ವಿತರಿಸುತ್ತದೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

Mudra Loan: ಪಿಎಂ ಮುದ್ರಾ ಸ್ಕೀಮ್; 10 ಲಕ್ಷ ರೂವರೆಗೂ ಸಾಲ; ಎಲ್ಲಿ ಸಿಗುತ್ತೆ? ಯಾರಿಗೆ ಸಿಗುತ್ತೆ ಮುದ್ರಾ ಲೋನ್?
ಪಿಎಂಎಂವೈ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 02, 2023 | 1:08 PM

ಎಂಎಸ್​ಎಂಇ ಅಥವಾ ಸಣ್ಣ ಉದ್ದಿಮೆಗಳನ್ನು (MSME) ಬೆಳೆಸಲು ಮತ್ತು ಉತ್ತೇಜಿಸಲು ಸರ್ಕಾರ ಹಲವು ಯೋಜನೆಗಳನ್ನು ನಡೆಸುತ್ತಿದೆ. ವಿವಿಧ ಸ್ತರಗಳಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಅದರಲ್ಲಿ ಮುದ್ರಾ ಸ್ಕೀಮ್ ಕೂಡ ಒಂದು. ಇದು ಸಣ್ಣ ಉದ್ದಿಮೆಗಳಿಗೆ ಸಾಲ ನೀಡಲೆಂದೇ ಆರಂಬಿಸಲಾಗಿರುವ ಯೋಜನೆ. ಕಾರ್ಪೊರೇಟ್ ಮತ್ತು ಕೃಷಿಯೇತರ ವಲಯದ ಉದ್ದಿಮೆಗಳಿಗೆ (Non-Corporate and Non-Agriculture Sector Entities) ಮುದ್ರಾ ಯೋಜನೆ ಅಡಿ ಸಾಲ ನೀಡಲಾಗುತ್ತದೆ. ಇದರಲ್ಲಿ ಸಾಲದ ಪ್ರಮಾಣ 50,000ದಿಂದ ಆರಂಭವಾಗಿ 10,00,000 (10 ಲಕ್ಷ) ರೂ ವರೆಗೂ ಇರುತ್ತದೆ. 2015 ಏಪ್ರಿಲ್ 8ರಂದು ಆರಂಭವಾದ ಪಿಎಂ ಮುದ್ರಾ ಸ್ಕೀಮ್ (PMMY- Pradhan Mantri Mudra Yojana) ಈವರೆಗೆ ಲಕ್ಷಾಂತರ ಕೋಟಿಯಷ್ಟು ಸಾಲಗಳನ್ನು ಲಕ್ಷಾಂತರ ಮಂದಿಗೆ ವಿತರಿಸಿದೆ. ಈ ಮುದ್ರಾ ಸ್ಕೀಮ್​ಗೆ ಯಾರು ಅರ್ಹರು, ಅರ್ಜಿ ಸಲ್ಲಿಸುವುದು ಹೇಗೆ, ದಾಖಲೆಗಳೇನು ಬೇಕು ಇತ್ಯಾದಿ ವಿವರ ಇಲ್ಲಿದೆ

ಮುದ್ರಾ ಸ್ಕೀಮ್​ನಲ್ಲಿ ವೈಯಕ್ತಿಕ ಖರ್ಚಿಗೆ ಸಾಲ ಸಿಗಲ್ಲ

ಪಿಎಂಎಂವೈ ಅಥವಾ ಮುದ್ರಾ ಯೋಜನೆ ಕಟ್ಟುನಿಟ್ಟಾಗಿ ಎಂಎಸ್​ಎಂಇ ಉದ್ದಿಮೆಗಳ ಬೆಳವಣಿಗೆಗೆಂದೇ ಇದೆ. ಇಲ್ಲಿ ಪಡೆಯುವ ಸಾಲ ಉದ್ದಿಮೆಗಳ ಬಲವರ್ಧನೆಗೆ ಅಥವಾ ಹೊಸ ಉದ್ದಿಮೆ ಸ್ಥಾಪನೆಗೆ ಮಾತ್ರ ಬಳಸಬೇಕು. ವೈಯಕ್ತಿಕ ಉದ್ದೇಶಕ್ಕೆ ಮುದ್ರಾ ಸಾಲ ಪಡೆಯಲು ಸಾಧ್ಯವಿಲ್ಲ. ನಿಮ್ಮ ಉದ್ದಿಮೆಯ ಪ್ರಾಜೆಕ್ಟ್ ರಿಪೋರ್ಟ್ ತೋರಿಸಿದರೆ ಮಾತ್ರ ಮುದ್ರಾ ಸಾಲ ಸಿಗುತ್ತದೆ.

ಮುದ್ರಾ ಸ್ಕೀಮ್​ನಲ್ಲಿ 3 ರೀತಿಯ ಸಾಲಗಳಿರುತ್ತವೆ. ಶಿಶು ಸ್ಕೀಮ್, ಕಿಶೋರ್ ಸ್ಕೀಮ್ ಮತ್ತು ತರುಣ್ ಸ್ಕೀಮ್​ನಲ್ಲಿ ಸಾಲ ಕೊಡಲಾಗುತ್ತದೆ. ಪ್ರಾಜೆಕ್ಟ್ ವೆಚ್ಚದ ಅಂದಾಜು ಪ್ರಕಾರ ಸಾಲದ ವರ್ಗೀಕರಣ ಮಾಡಲಾಗುತ್ತದೆ. ಶಿಶು ಲೋನ್​ನಲ್ಲಿ 50,000 ರೂವರೆಗೂ ಸಾಲ ಸಿಗುತ್ತದೆ. ಕಿಶೋರ್ ವಿಭಾಗದಲ್ಲಿ 50,000 ರೂನಿಂದ 5,00,000 ರೂವರೆಗೂ ಸಾಲ ಕೊಡಲಾಗುತ್ತದೆ. ತರುಣ್ ಸ್ಕೀಮ್​ನಲ್ಲಿ 5 ಲಕ್ಷದಿಂದ 10 ಲಕ್ಷ ರೂವರೆಗೆ ಸಾಲ ನೀಡಲಾಗುತ್ತದೆ.

ಇದನ್ನೂ ಓದಿKarnataka Economy: ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಪಾಲೇನು? ರಾಜ್ಯದ ಯಾವ ಜಿಲ್ಲೆಗಳು ಹೆಚ್ಚು ಮುಂದುವರಿದಿವೆ?

ಆನ್​ಲೈನ್​ನಲ್ಲಿ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಮುದ್ರಾ ಸ್ಕೀಮ್ ಅಡಿಯಲ್ಲಿ ಸರ್ಕಾರ ನೇರವಾಗಿ ಸಾಲ ವಿತರಿಸುವುದಿಲ್ಲ. ಮುದ್ರಾ ಯೋಜನೆಗೆ ಸರ್ಕಾರ ಬಹುತೇಕ ಕಮರ್ಷಿಯಲ್ ಬ್ಯಾಂಕು, ಸಹಕಾರಿ ಬ್ಯಾಂಕು, ಸ್ಮಾಲ್ ಫೈನಾನ್ಸ್ ಬ್ಯಾಂಕು ಮತ್ತು ಎನ್​ಬಿಎಫ್​ಸಿ ಸಂಸ್ಥೆಗಳನ್ನು ನಿಯೋಜಿಸಿದೆ. ಈ ಹಣಕಾಸು ಸಂಸ್ಥೆಗಳ ಅಧಿಕೃತ ವೆಬ್​ಸೈಟ್​ಗೆ ಹೋದರೆ ಪಿಎಂಎಂವೈ ಮುದ್ರಾ ಸಾಲಕ್ಕೆ ಅರ್ಜಿ ಪಡೆಯಬಹುದು.

ಅರ್ಜಿಯನ್ನು ಡೌನ್​ಲೋಡ್ ಮಾಡಿ ಅಗತ್ಯ ವಿವರಗಳೆಲ್ಲವನ್ನೂ ತುಂಬಿ ಸಲ್ಲಿಸಬೇಕು. ಅದರಲ್ಲಿ ಕೇಳಲಾಗುವ ದಾಖಲೆಗಳನ್ನು ಲಗತ್ತಿಸಲು ಮರೆಯದಿರಿ. ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ಬಳಿಕ ಸೂಕ್ತವೆನಿಸಿದರೆ ಅನುಮೋದನೆ ಸಿಗುತ್ತದೆ. ಲೋನ್ ಮೊತ್ತವು ನಿಮ್ಮ ಬ್ಯಾಂಕ್ ಖಾತೆಗೆ ವರ್ಗವಾಗುತ್ತದೆ.

ಬ್ಯಾಂಕಿಗೆ ನೇರವಾಗಿ ಹೋಗಿ ಮುದ್ರಾ ಲೋನ್ ಪಡೆಯುವ ವಿಧಾನ

ಪಿಎಂಎಂವೈಗೆ ಜೋಡಿತವಾಗಿರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಕಚೇರಿಗೆ ಹೋಗಿ. ಅದಕ್ಕೆ ಮುನ್ನ ನಿಮ್ಮ ಬ್ಯುಸಿನೆಸ್ ಪ್ಲಾನ್​ನ ಎಲ್ಲಾ ದಾಖಲೆಯನ್ನು ಮಾಡಿಟ್ಟುಕೊಂಡಿರಬೇಕು. ಬ್ಯಾಂಕಿನಲ್ಲಿ ಮುದ್ರಾ ಸಾಲಕ್ಕೆ ಸಿಗುವ ಅರ್ಜಿಯನ್ನು ಭರ್ತಿ ಮಾಡಬೇಕು. ಇತರ ದಾಖಲೆ ಹಾಗೂ ಫೋಟೋಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ನಿಮ್ಮ ಅರ್ಜಿ ವೆರಿಫೈ ಆದ ಬಳಿಕ ಸಾಲದ ಮೊತ್ತವು ಬ್ಯಾಂಕ್ ಖಾತೆಗೆ ತಲುಪುತ್ತದೆ.

ಇದನ್ನೂ ಓದಿInspiring: ಅಪ್ಪನ ಆಸ್ತಿ ಇಲ್ಲ; ಓದೋದು ಬಿಟ್ಟು ಕೇವಲ 23ರ ವಯಸ್ಸಿಗೆ 100 ಕೋಟಿ ಒಡೆಯನಾದ ಸಂಕರ್ಷ್

ಮುದ್ರಾ ಸಾಲಕ್ಕೆ ದಾಖಲೆಗಳು ಏನು ಬೇಕು?

ಮುದ್ರಾ ಸಾಲ ಪಡೆಯಲು ಅರ್ಜಿ ಜೊತೆಗೆ ಇತರ ಕೆಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇವುಗಳು ಈ ಕೆಳಕಂಡಂತಿವೆ:

  • ಪಾಸ್​ಪೋರ್ಟ್ ಗಾತ್ರದ ಫೋಟೋ
  • ಪಾಸ್​ಪೋರ್ಟ್, ವೋಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಯುಟಿಲಿಟಿ ಬಿಲ್ (ಎಲೆಕ್ಟ್ರಿಸಿಟಿ ಅಥವಾ ವಾಟರ್ ಬಿಲ್)
  • ಜನರಲ್ ಕೆಟಗರಿ ಅಲ್ಲವಾಗಿದ್ದರೆ ಜಾತಿ ಪ್ರಮಾಣಪತ್ರ ಬೇಕು.
  • ನಿಮ್ಮ ವ್ಯವಹಾರ ಆದಾಯದ ಪ್ರಮಾಣಪತ್ರ
  • ವ್ಯವಹಾರ ಸ್ಥಳದ ವಿಳಾಸಕ್ಕೆ ಪ್ರೂಫ್
  • ನಿಮ್ಮ ವ್ಯವಹಾರ ಅಸ್ತಿತ್ವದ ಬಗ್ಗೆ ಪ್ರೂಫ್
  • 12 ತಿಂಗಳಿಗೂ ಹೆಚ್ಚು ಅವಧಿಯ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
  • ಐಟಿ ಪಾವತಿಸುವವರಾಗಿದ್ದರೆ 2 ವರ್ಷಗಳ ಐಟಿಆರ್

ಇದರ ಜೊತೆಗೆ ಬ್ಯಾಂಕ್​ನವರು ಬೇರೆ ಯಾವುದಾದರೂ ದಾಖಲೆ ಕೇಳಬಹುದು. ಈ ದಾಖಲೆಗಳನ್ನು ಸಲ್ಲಿಸಿದ ಬಳಿಕ ಅಧಿಕಾರಿಗಳು ಅರ್ಜಿ ಪರಿಶೀಲನೆ ನಡೆಸುತ್ತಾರೆ. ಅಗತ್ಯಬಿದ್ದರೆ ನಿಮ್ಮ ಉದ್ದಿಮೆಯ ಸ್ಥಳಕ್ಕೆ ಹೋಗಿ ಪರೀಕ್ಷಿಸಬಹುದು. ಸರಿಯಾದ ಉದ್ದೇಶಕ್ಕೆ ಸಾಲ ಪಡೆಯಲಾಗುತ್ತಿರುವುದು ಖಚಿತವಾದ ಬಳಿಕ ನಿಮಗೆ ಲೋನ್ ಸ್ಯಾಂಕ್ಷನ್ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದಾರೆ: ಸೀಮಂತ್ ಸಿಂಗ್
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದಾರೆ: ಸೀಮಂತ್ ಸಿಂಗ್
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ