AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಫ್​ಡಿ ಮೇಲೆ ರೆಪೊ ದರ ಹೆಚ್ಚಳದ ಪ್ರಭಾವ ಹೇಗಿರಲಿದೆ? ಠೇವಣಿದಾರರಿಗೆ ಇಲ್ಲಿದೆ ತಜ್ಞರ ಸಲಹೆ

ರೆಪೊ ದರ ಹೆಚ್ಚಳ ಠೇವಣಿಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? ಈಗಲೇ ಎಫ್​ಡಿ ಆರಂಭಿಸುವುದು ಒಳ್ಳೆಯದೇ ಅಥವಾ ಇನ್ನೂ ಕೆಲವು ಕಾಲ ಕಾಯುವುದು ಒಳ್ಳೆಯದೇ? ತಜ್ಞರು ನೀಡಿದ ಸಲಹೆ ಇಲ್ಲಿದೆ.

ಎಫ್​ಡಿ ಮೇಲೆ ರೆಪೊ ದರ ಹೆಚ್ಚಳದ ಪ್ರಭಾವ ಹೇಗಿರಲಿದೆ? ಠೇವಣಿದಾರರಿಗೆ ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Dec 08, 2022 | 4:23 PM

ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು (Repo Rate) 35 ಮೂಲಾಂಶದಷ್ಟು ಹೆಚ್ಚಿಸಿದ್ದು ಶೇಕಡಾ 6.25ಕ್ಕೆ ನಿಗದಿಪಡಿಸಿದೆ. ಇದು ಸಾಲಗಳ ಬಡ್ಡಿ ದರದ ಮೇಲೆ ಹೇಗೆ ಪರಿಣಾಮ ಬೀರಲಿದೆಯೋ ಅದೇ ರೀತಿ ಸ್ಥಿರ ಠೇವಣಿ (FD) ಸೇರಿದಂತೆ ಠೇವಣಿಗಳ ಮೇಲೂ ಪರಿಣಾಮ ಬೀರಲಿದೆ. ಮುಂಬರುವ ದಿನಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನೂ ಬ್ಯಾಂಕ್​ಗಳು ಹೆಚ್ಚಿಸುವ ಸಾಧ್ಯತೆ ಇದೆ. ಇದು ಠೇವಣಿದಾರರಿಗೆ ಉತ್ತಮ ರಿಟರ್ನ್ಸ್ ತಂದುಕೊಡಬಲ್ಲದು ಎಂದು ಬ್ಯಾಂಕಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಫ್​ಡಿ ಖಾತೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಈಗಲೇ ಠೇವಣಿ ಆರಂಭಿಸಬೇಕೇ ಅಥವಾ ಇನ್ನೂ ಕೆಲವು ಕಾಲ ಕಾಯುವುದು ಒಳ್ಳೆಯದೇ ಎಂಬ ಪ್ರಶ್ನೆ ಈಗ ಮೂಡಬಹುದು. ಈಗಾಗಲೇ ಎಫ್​ಡಿ ಆರಂಭಿಸಿರುವವರಲ್ಲಿಯೂ ಪ್ರಶ್ನೆಗಳು ಉದ್ಭವಿಸಬಹುದು. ಪ್ರಸ್ತುತ ದೇಶದಲ್ಲಿ ಸಾಲದ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಸರಿದೂಗಿಸುವುದಕ್ಕಾಗಿ ಬ್ಯಾಂಕ್​ಗಳಿಗೆ ಹೆಚ್ಚು ಠೇವಣಿಯ ಅಗತ್ಯವಿದೆ. ಹೀಗಾಗಿ ಬ್ಯಾಂಕ್​ಗಳು ಠೇವಣಿಗಳ ಬಡ್ಡಿ ದರ ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಆರ್​ಬಿಐ ರೆಪೊ ದರ ಹೆಚ್ಚಿಸಿದ ಬಳಿಕ ಬ್ಯಾಂಕ್​ಗಳು ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಕೆಲವು ಸಮಯ ತೆಗೆದುಕೊಳ್ಳುತ್ತವೆ. ಈ ಬಾರಿ ಆರ್​ಬಿಐ ದರ ಹೆಚ್ಚಳದ ವೇಗವನ್ನು ಕಡಿಮೆ ಮಾಡಿದೆ. ಹೀಗಾಗಿ ಬ್ಯಾಂಕ್​ಗಳು ಎಫ್​​ಡಿ ಬಡ್ಡಿ ದರವನ್ನು ಹೆಚ್ಚಿಸಬಹುದು ಎಂದು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದೂ ಕಷ್ಟ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Fixed Deposit: ತೆರಿಗೆ ಉಳಿಸುವ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರ ನೀಡುವ ಬ್ಯಾಂಕ್​ಗಳು

ಎಫ್​ಡಿ ಖಾತೆದಾರರು ಹೀಗೆ ಮಾಡಿ…

ಈಗಾಗಲೇ ಅಸ್ತಿತ್ವದಲ್ಲಿರುವ ಎಫ್​ಡಿಯನ್ನು ಅವಧಿ ಮುಕ್ತಾಯಗೊಳ್ಳುವವರೆಗೆ ಮುಂದುವರಿಸುವುದೇ ಉತ್ತಮ. ಈಗ ಪಡೆಯುತ್ತಿರುವ ಬಡ್ಡಿಗಿಂತಲೂ ಗಣನೀಯ ಪ್ರಮಾಣದ ಹೆಚ್ಚಳ (ಅವಧಿಪೂರ್ವ ಹಿಂಪಡೆಯುವಿಕೆಗೆ ನೀಡಬೇಕಾದ ಪೆನಾಲ್ಟಿಯನ್ನೂ ಸರಿದೂಗಿಸುವ ಮಟ್ಟದಲ್ಲಿ) ಮುಂದೆ ದೊರೆಯಬಹುದು ಎಂಬುದು ಖಾತರಿಯಾದರೆ ಮಾತ್ರವೇ ಅವಧಿಪೂರ್ವ ವಾಪಸ್ ಪಡೆದು ಮತ್ತೆ ಹೂಡಿಕೆ ಮಾಡುವುದು ಒಳ್ಳೆಯದು ಎಂದು ಪೈಸಾಬಜಾರ್​ನ ಸಿಇಒ ನವೀನ್ ಕುಕ್ರೆಜಾ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಆಟೊ ರಿನೀವಲ್ ಆಯ್ಕೆ ಮಾಡಬೇಡಿ

ಒಂದು ಅಥವಾ ಎರಡು ವರ್ಷಗಳ ಅವಧಿಗೆ ಎಫ್​ಡಿ ಠೇವಣಿ ಇಡುವುದು ಉತ್ತಮ. ಆಟೊ ರಿನೀವಲ್ ಆಯ್ಕೆ ಮಾಡಬೇಡಿ. ಈ ಕ್ರಮ ಅನುಸರಿಸದೇ ದೀರ್ಘವಧಿ ಎಫ್​ಡಿ ಇಟ್ಟರೆ ಬದಲಾದ ಬಡ್ಡಿ ದರದ ಪ್ರಯೋಜನ ಪಡೆಯುವುದು ಸಾಧ್ಯವಾಗದು ಎಂದು ನವೀನ್ ಸಲಹೆ ನೀಡಿದ್ದಾರೆ. ಯಾಕೆಂದರೆ ಎಫ್​ಡಿ ಬಡ್ಡಿ ಪರಿಷ್ಕರಣೆಗೊಂಡರೂ ಹಾಲಿ ಠೇವಣಿದಾರರಿಗೆ ಹಿಂದಿನ ಬಡ್ಡಿ ದರವೇ ಅನ್ವಯವಾಗುತ್ತದೆ.

ಇದನ್ನೂ ಓದಿ: Yes Bank FD Rates: ಯೆಸ್ ಬ್ಯಾಂಕ್ ಎಫ್​ಡಿ ದರ ಪರಿಷ್ಕರಣೆ; ಹಿರಿಯ ನಾಗರಿಕರಿಗೆ ಶೇ 7.50ರ ವರೆಗೆ ಸಿಗಲಿದೆ ಬಡ್ಡಿ

ಹೊಸದಾಗಿ ಠೇವಣಿ ಇಡುವುದಾದರೆ ಏನು ಮಾಡಬಹುದು?

ಹೊಸದಾಗಿ ಎಫ್​ಡಿ ಠೇವಣಿ ಇಡಲು ಬಯಸುವವರು ಕೆಲವು ದಿನಗಳ ಕಾಲ ಕಾಯುವುದು ಉತ್ತಮ ಎಂದಿದ್ದಾರೆ ತಜ್ಞರು. ಬ್ಯಾಂಕ್​ಗಳು ಎಫ್​ಡಿ ದರ ಹೆಚ್ಚಿಸುವ ನಿರೀಕ್ಷೆ ಇರುವುದರಿಂದ ಈ ಸಲಹೆ ನೀಡಿದ್ದಾತೆ. ಬಡ್ಡಿ ದರ ಪರಿಷ್ಕರಣೆಯಾದ ಬಳಿಕ ಎಫ್​ಡಿ ಠೇವಣಿ ಇಡುವ ಮೂಲಕ ಹೆಚ್ಚಿನ ರಿಟರ್ನ್ಸ್ ಗಳಿಸಬಹುದು ಎಂಬುದು ಅವರ ಸಲಹೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲು ಶಿವಕುಮಾರ್ ಕಾರಣ: ವಿಜಯೇಂದ್ರ
ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲು ಶಿವಕುಮಾರ್ ಕಾರಣ: ವಿಜಯೇಂದ್ರ
11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್​ಗೆ ವಿವಾಹ ವಾರ್ಷಿಕೋತ್ಸವ
11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್​ಗೆ ವಿವಾಹ ವಾರ್ಷಿಕೋತ್ಸವ
ಕಾಲ್ತುಳಿತ ಪ್ರಕರಣಕ್ಕೆ ಕಾರಣ ವರದಿಯ ಬಂದ ನಂತರ ಗೊತ್ತಾಗುತ್ತೆ: ಜಾರಕಿಹೊಳಿ
ಕಾಲ್ತುಳಿತ ಪ್ರಕರಣಕ್ಕೆ ಕಾರಣ ವರದಿಯ ಬಂದ ನಂತರ ಗೊತ್ತಾಗುತ್ತೆ: ಜಾರಕಿಹೊಳಿ
ಬಸ್​ನಲ್ಲಿ ಕಂಡಕ್ಟರ್ ಮೊಬೈಲ್​​ನ್ನೇ ಕದ್ದ ಚಾಲಾಕಿ ಕಳ್ಳ
ಬಸ್​ನಲ್ಲಿ ಕಂಡಕ್ಟರ್ ಮೊಬೈಲ್​​ನ್ನೇ ಕದ್ದ ಚಾಲಾಕಿ ಕಳ್ಳ
ದಕ್ಷತೆಯಿಂದ ಗುಮಾಸ್ತ ಕೆಲಸ ಮಾಡುತ್ತಿದ್ದ: ಪ್ರಾದೇಶಿಕ ಸಾರಿಗೆ ಅಧಿಕಾರಿ
ದಕ್ಷತೆಯಿಂದ ಗುಮಾಸ್ತ ಕೆಲಸ ಮಾಡುತ್ತಿದ್ದ: ಪ್ರಾದೇಶಿಕ ಸಾರಿಗೆ ಅಧಿಕಾರಿ
ಪ್ರಲ್ಹಾದ್ ಜೋಶಿ ಸುದ್ದಿಗೋಷ್ಠಿ ಲೈವ್
ಪ್ರಲ್ಹಾದ್ ಜೋಶಿ ಸುದ್ದಿಗೋಷ್ಠಿ ಲೈವ್
‘ಜನರಿಗೆ ಮನು ಬುದ್ಧಿ ತೋರಿಸಲು ಆ ಆಡಿಯೋ ಬಿಟ್ಟೆ’; ಸಂತ್ರಸ್ತೆಯ ನೇರ ಮಾತು
‘ಜನರಿಗೆ ಮನು ಬುದ್ಧಿ ತೋರಿಸಲು ಆ ಆಡಿಯೋ ಬಿಟ್ಟೆ’; ಸಂತ್ರಸ್ತೆಯ ನೇರ ಮಾತು
ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟ ಸಿದ್ದರಾಮಯ್ಯ ಮತ್ತು ಶಿವಕುಮಾರ್