Gas Prices: ಕೇಂದ್ರದ ಹೊಸ ಮಾರ್ಗಸೂಚಿ; ದೇಶಾದ್ಯಂತ ಗ್ಯಾಸ್ ಬೆಲೆ ಇಳಿಕೆ; ಬೆಂಗಳೂರು ಮೊದಲಾದೆಡೆ ಎಷ್ಟಿದೆ ದರ?

CNG and PNG Rates: ನೈಸರ್ಗಿಕ ಅನಿಲ ಬೆಲೆ ವಿಚಾರದಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸಿದ್ದು, ಅದರ ಪರಿಣಾಮವಾಗಿ ದೇಶಾದ್ಯಂತ ಸಿಎನ್​ಜಿ ಮತ್ತು ಪಿಎನ್​ಜಿ ಗ್ಯಾಸ್ ಬೆಲೆಗಳು ಕಡಿಮೆ ಆಗಿವೆ. ಬೆಂಗಳೂರಿನಲ್ಲಿ ಸಿಎನ್​ಜಿ ಬೆಲೆ 89.50 ರೂನಿಂದ 83 ರುಪಾಯಿಗೆ ಇಳಿಯಲಿದೆ. ಪಿಎನ್​ಜಿ ಅನಿಲದ ಬೆಲೆ 58.50 ರೂನಿಂದ 52 ರುಪಾಯಿಗೆ ಇಳಿಯುವ ನಿರೀಕ್ಷೆ ಇದೆ.

Gas Prices: ಕೇಂದ್ರದ ಹೊಸ ಮಾರ್ಗಸೂಚಿ; ದೇಶಾದ್ಯಂತ ಗ್ಯಾಸ್ ಬೆಲೆ ಇಳಿಕೆ; ಬೆಂಗಳೂರು ಮೊದಲಾದೆಡೆ ಎಷ್ಟಿದೆ ದರ?
ಪಿಎನ್​ಜಿ ಅಡುಗೆ ಅನಿಲImage Credit source: GAIL
Follow us
|

Updated on:Apr 08, 2023 | 1:06 PM

ಬೆಂಗಳೂರು: ನೈಸರ್ಗಿಕ ಅನಿಲ ಉತ್ಪನ್ನಗಳಾದ ಸಿಎನ್​ಜಿ ಮತ್ತು ಪಿಎನ್​ಜಿ ಗ್ಯಾಸ್​ಗಳ ಬೆಲೆ (CNG and PNG Gas Prices) ದೇಶಾದ್ಯಂತ ಕಡಿಮೆ ಆಗಿದೆ. ನ್ಯಾಚುರಲ್ ಗ್ಯಾಸ್​ನ (Natural Gas) ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸಿದೆ. ನಿನ್ನೆ ಏಪ್ರಿಲ್ 7ರಂದು ಕೇಂದ್ರ ಸಂಪುಟ ಈ ಮಾರ್ಗಸೂಚಿಗೆ ಅನುಮೋದನೆಯನ್ನೂ ಕೊಟ್ಟಿದೆ. ಇಂದು ಶನಿವಾರದಿಂದ ದೇಶದ ವಿವಿಧೆಡೆ ವಿವಿಧ ಪ್ರಮಾಣದಲ್ಲಿ ಸಿಎನ್​ಜಿ ಮತ್ತು ಪಿಎನ್​ಜಿ ಗ್ಯಾಸ್ ಬೆಲೆಗಳು ಇಳಿಕೆ ಕಂಡಿವೆ. ಸಿಎನ್​ಜಿ ಗ್ಯಾಸ್​ನ ಬೆಲೆ ಶೇ. 6ರಿಂದ 9ರಷ್ಟು ಕಡಿಮೆ ಆದರೆ, ಕೊಳವೆ ಅನಿಲದ (ಪಿಎನ್​ಜಿ) ಬೆಲೆ ಶೇ. 10ರಷ್ಟು ಕಡಿಮೆ ಆಗಿದೆ. ಇದರೊಂದಿಗೆ ಬೆಲೆ ಏರಿಕೆಯ ಬಿಸಿಯಲ್ಲಿರುವ ಜನಸಾಮಾನ್ಯರು ಸ್ವಲ್ಪಮಟ್ಟಿದಾದರೂ ನಿಟ್ಟುಸಿರು ಬಿಡುವಂತಾಗಿದೆ. ಹಾಗೆಯೇ ಬಹಳ ವ್ಯಾಪಕವಾಗಿ ಬಳಕೆಯಲ್ಲಿರುವ ಎಲ್​ಪಿಜಿ ಗ್ಯಾಸ್​ಗಳ ಬೆಲೆಯೂ ಮುಂದಿನ ದಿನಗಳಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಿಎನ್​ಜಿ ಮತ್ತು ಪಿಎನ್​ಜಿ ದರ ಕಡಿಮೆ ಮಾಡಲು ಸರ್ಕಾರ ಕೈಗೊಂಡ ಕ್ರಮ ಏನು?

ನೈಸರ್ಗಿಕ ಅನಿಲವನ್ನು ಭಾರತದ ತೈಲ ನಿಕ್ಷೇಪಗಳಿಂದ ಉತ್ಪಾದನೆ ಮಾಡಲಾಗುತ್ತದೆ. ಈ ಮುಂಚೆ ಇವುಗಳ ಬೆಲೆಯನ್ನು ಅಮೆರಿಕ, ಕೆನಡಾ, ರಷ್ಯಾ ಇತ್ಯಾದಿ ಮಾರುಕಟ್ಟೆಗಳ ಗ್ಯಾಸ್ ಹಬ್​ಗಳಲ್ಲಿನ ಬೆಲೆಗೆ ಜೋಡಿಸಲಾಗಿತ್ತು. ಈಗ ಇವುಗಳ ಬದಲು ಕಚ್ಛಾ ತೈಲ ಬೆಲೆಗೆ ದೇಶೀಯ ನೈಸರ್ಗಿಕ ಅನಿಲದ ಬೆಲೆಯನ್ನು ಲಿಂಕ್ ಮಾಡಲಾಗಿದೆ.

ಭಾರತದ ಪೆಟ್ರೋಲಿಯಂ ರಿಫೈನಿಂಗ್ ಕಂಪನಿಗಳು ಒಂದು ತಿಂಗಳಲ್ಲಿ ಆಮದು ಮಾಡಿಕೊಳ್ಳಲಾದ ವಿವಿಧ ಕಚ್ಛಾ ತೈಲಗಳ ಸರಾಸರಿ ಬೆಲೆಯಲ್ಲಿ ಶೇ. 10ರಷ್ಟು ದರವನ್ನು ನೈಸರ್ಗಿಕ ಅನಿಲಕ್ಕೆ ನಿಗದಿ ಮಾಡಲಾಗಿದೆ. ಈಗಿರುವ ದರಕ್ಕಿಂತ ಶೇ. 24ರಷ್ಟು ಕಡಿಮೆ ದರವನ್ನು ಗರಿಷ್ಠ ದರ ಎಂದೂ ನಿಗದಿ ಮಾಡಲಾಗಿದೆ. ಈ ಸೂತ್ರಕ್ಕೆ ಕೇಂದ್ರ ಸಂಪುಟ ಅನುಮೋದನೆ ಕೊಟ್ಟಿದ್ದು, ಏಪ್ರಿಲ್ 8ರಿಂದ ಜಾರಿಯಾಗಿದೆ.

ಇದನ್ನೂ ಓದಿPMMY: ಪಿಎಂ ಮುದ್ರಾ ಯೋಜನೆ ಅಡಿ ವಿತರಣೆಯಾದ ಸಾಲ ಪಾಕಿಸ್ತಾನ ಜಿಡಿಪಿಗೆ ಸಮ? 41 ಕೋಟಿ ಜನರ ಸ್ವಂತ ಉದ್ಯಮದ ಕನಸು ನನಸಾಗಿಸಿದ ಮುದ್ರಾ ಸ್ಕೀಮ್

ಹಾಗೆಯೇ, ಆರು ತಿಂಗಳಿಗೊಮ್ಮೆ ಬೆಲೆ ಪರಿಷ್ಕರಣೆ ಬದಲು ಮೇಲಿನ ಸೂತ್ರದ ಪ್ರಕಾರ ಪ್ರತೀ ತಿಂಗಳೂ ಅನಿಲ ಬೆಲೆ ಪರಿಷ್ಕರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಮುಂಚೆ ಜಾಗತಿಕ ಗ್ಯಾಸ್ ಹಬ್​ಗಳಲ್ಲಿರುವ ಅನಿಲ ಬೆಲೆಯ ಆಧಾರದ ಮೇಲೆ ಪ್ರತೀ ವರ್ಷ ಏಪ್ರಿಲ್ 1 ಮತ್ತು ಅಕ್ಟೋಬರ್ 1ರಂದು ಬೆಲೆಗಳ ಪರಿಷ್ಕರಣೆ ಆಗುತ್ತಿತ್ತು.

ಏನಿದು ಸಿಎನ್​ಜಿ ಮತ್ತು ಪಿಎನ್​ಜಿ?

ಎರಡೂ ಕೂಡ ನೈಸರ್ಗಿಕ ಅನಿಲದ ಉತ್ಪನ್ನಗಳೇ. ಸಿಎನ್​ಜಿ ಎಂದರೆ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್. ಇದನ್ನು ವಾಹನಗಳಿಗೆ ಬಳಸಲಾಗುತ್ತದೆ. ಪಿಎನ್​ಜಿ ಎಂದರೆ ಪೈಪ್ಡ್ ನ್ಯಾಚುರಲ್ ಗ್ಯಾಸ್. ಇದು ಅಡುಗೆ ಅನಿಲವಾಗಿ ಬಳಕೆ ಆಗುತ್ತದೆ. ಎಲ್​ಪಿಜಿ ಮತ್ತು ಪಿಎನ್​ಜಿ ಎರಡೂ ಕೂಡ ಅಡುಗೆ ಅನಿಲಗಳೇ ಆದರೂ ವ್ಯತ್ಯಾಸ ಇದೆ. ಪಿಎನ್​ಜಿಯು ದ್ರವ ರೂಪದಲ್ಲಿದ್ದು ಕೊಳವೆ ಮೂಲಕ ಕಟ್ಟಡಗಳಿಗೆ ಸರಬರಾಜಾಗುತ್ತದೆ. ಎಲ್​ಪಿಜಿಗಿಂತ ಪಿಎನ್​ಜಿ ಬೆಲೆ ಬಹಳ ಕಡಿಮೆ ಇದೆ.

ಭಾರತದ ವಿವಿಧ ನಗರಗಳಲ್ಲಿ ಸಿಎನ್​ಜಿ ದರ

  • ಬೆಂಗಳೂರು: 89.50 ರೂ
  • ದೆಹಲಿ: 79.56 ರೂ
  • ಮುಂಬೈ: 87 ರೂ
  • ಹೈದರಾಬಾದ್: 99.99 ರೂ
  • ಕೇರಳ: 85 ರೂ
  • ತಮಿಳುನಾಡು: 84 ರೂ
  • ಮಧ್ಯಪ್ರದೇಶ: 98 ರೂ

ಇಲ್ಲಿ ದೆಹಲಿಯಲ್ಲಿ ಸಿಎನ್​ಜಿ ಗ್ಯಾಸ್ ಬೆಲೆ 79.56 ರೂನಿಂದ 73.59 ರುಪಾಯಿಗೆ ಇಳಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇದರ ಬೆಲೆ 83 ರುಪಾಯಿಗೆ ಇಳಿಯಬಹುದು. ಇನ್ನು, ಮುಂಬೈನಲ್ಲಿ 87 ರೂ ಇರುವ ಸಿಎನ್​ಜಿ ಬೆಲೆ 79 ರುಪಾಯಿಗೆ ತಗ್ಗುವ ನಿರೀಕ್ಷೆ ಇದೆ.

ಇದನ್ನೂ ಓದಿIPL- ಐಪಿಎಲ್​ಗೆ ಡಿಜಿಟಲ್ ಧಮಾಕ, ಟಿವಿ ವೀಕ್ಷಕರ ಸಂಖ್ಯೆ ಇಳಿಮುಖ; ಜಿಯೋ ವಿಶ್ವದಾಖಲೆ

ಭಾರತದ ವಿವಿಧೆಡೆ ಈಗಿರುವ ಪಿಎನ್​ಜಿ ದರಗಳು

  • ಬೆಂಗಳೂರು: 58.50 ರೂ
  • ದೆಹಲಿ: 55 ರೂ
  • ಮುಂಬೈ: 54 ರೂ

ಇದೀಗ ಹೊಸ ಸೂತ್ರದ ಪ್ರಕಾರ ಬೆಂಗಳೂರಿನಲ್ಲಿ ಪೈಪ್ಡ್ ಗ್ಯಾಸ್ ಬೆಲೆ 52 ರುಪಾಯಿಗೆ ಇಳಿಯುವ ನಿರೀಕ್ಷೆ ಇದೆ. ಇನ್ನು, ದೆಹಲಿ ಮತ್ತು ಮುಂಬೈನಲ್ಲಿ ಈ ಪಿಎನ್​ಜಿ ಗ್ಯಾಸ್ ಬೆಲೆ 50 ರೂ ಮತ್ತು 49 ರುಪಾಯಿಗೆ ಇಳಿಕೆ ಆಗುವ ಸಾಧ್ಯತೆ ಇದೆ.

ಭಾರತದ ಒಟ್ಟಾರೆ ತೈಲ ಅಗತ್ಯತೆಯಲ್ಲಿ ಶೇ. 50ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದ ಒಟ್ಟಾರೆ ಇಂಧನ ಅಗತ್ಯಗಳಲ್ಲಿ ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದ ಪಾಲು ಸದ್ಯ ಕೇವಲ ಶೇ. 6 ಮಾತ್ರ ಇದೆ. ಇದನ್ನು ಶೇ. 15ಕ್ಕೆ ಹೆಚ್ಚಿಸುವುದು ಸರ್ಕಾರದ ಗುರಿ. ನೈಸರ್ಗಿಕ ಅನಿಲದ ಜೊತೆಗೆ ಭಾರತದಲ್ಲಿ ಒಂದಿಷ್ಟು ಕಚ್ಛಾ ತೈಲ ನಿಕ್ಷೇಪಗಳೂ ಇವೆ. ಇವೆಲ್ಲವನ್ನೂ ಬಳಸಿಕೊಂಡು ಪೆಟ್ರೋಲಿಯಂ ವಲಯದಲ್ಲಿ ಹೆಚ್ಚು ಸ್ವಾವಲಂಬನೆ ಸಾಧಿಸುವ ಗುರಿಯಲ್ಲಿ ಭಾರತ ಇದೆ. ಇದರಿಂದ ಆಮದು ಕಡಿಮೆ ಆಗಿ ಅದರ ಪರಿಣಾಮವಾಗಿ ಆರ್ಥಿಕತೆಗೆ ಬಹಳ ಪ್ರಯೋಜನ ಆಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Sat, 8 April 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ