AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Navami Holiday: ರಾಮನವಮಿಗೆ ಷೇರುಪೇಟೆ ರಜೆಯಾ? ಬ್ಯಾಂಕುಗಳಿಗೆ ಎಲ್ಲೆಲ್ಲಿದೆ ರಜೆ, ಇಲ್ಲಿದೆ ಡೀಟೇಲ್ಸ್

Bank and Share Market holiday in Ram Navami: ಏಪ್ರಿಲ್ 17, ಬುಧವಾರದಂದು ರಾಮನವಮಿ ಹಬ್ಬದ ಇದೆ. ಇದು ಸಾರ್ವತ್ರಿಕ ರಜೆಗಳಲ್ಲೊಂದು. ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇದೆ. ಕರ್ನಾಟಕದಲ್ಲಿ ರಾಮನವಮಿಗೆ ಬ್ಯಾಂಕ್ ರಜೆ ಇಲ್ಲ. ಏಪ್ರಿಲ್ 17ರಂದು ಷೇರು ಮಾರುಕಟ್ಟೆಗಳು ಬಂದ್ ಆಗಿರುತ್ತವೆ. ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್​ನಲ್ಲಿ (ಎಂಸಿಎಕ್ಸ್) ಟ್ರೇಡಿಂಗ್ ನಡೆಯುವ ಎರಡು ಸೆಷನ್​ನಲ್ಲಿ ಮೊದಲ ಸೆಷನ್ ಬಂದ್ ಆಗಿರುತ್ತದೆ.

Ram Navami Holiday: ರಾಮನವಮಿಗೆ ಷೇರುಪೇಟೆ ರಜೆಯಾ? ಬ್ಯಾಂಕುಗಳಿಗೆ ಎಲ್ಲೆಲ್ಲಿದೆ ರಜೆ, ಇಲ್ಲಿದೆ ಡೀಟೇಲ್ಸ್
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 16, 2024 | 10:37 AM

Share

ನವದೆಹಲಿ, ಏಪ್ರಿಲ್ 16: ರಾಮನವಮಿ ಹಬ್ಬದ ಪ್ರಯುಕ್ತ ಬುಧವಾರ (ಏ. 17) ದೇಶದ ಹಲವೆಡೆ ಬ್ಯಾಂಕುಗಳಿಗೆ ರಜೆ ಇದೆ. ಮತ್ತೂ ಕೆಲವೆಡೆ ರಜೆ ಇರುವುದಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಮರುನಿರ್ಮಾಣವಾದ ಬಳಿಕ ನಡೆಯುತ್ತಿರುವ ಮೊದಲ ರಾಮನವಮಿಯಾದ್ದರಿಂದ (Ram Navami festival) ಸಾಕಷ್ಟು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆರ್​ಬಿಐ ಕ್ಯಾಲಂಡರ್ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಒಟ್ಟು 14 ರಜಾ ದಿನಗಳಿವೆ. ಇದರಲ್ಲಿ ರಾಮನವಮಿಯೂ ಸೇರಿದೆ. ಆದರೆ ಇದು ಸಾರ್ವತ್ರಿಕ ರಜೆ ಅಲ್ಲ. ಕೆಲ ಪ್ರದೇಶಗಳಲ್ಲಿ ರಜೆ ಇರುವುದಿಲ್ಲ. ಕರ್ನಾಟಕದಲ್ಲಿ ಏಪ್ರಿಲ್ 17ರಂದು ರಾಮನವಮಿಗೆ ರಜೆ ಇರುವುದಿಲ್ಲ.

ಏಪ್ರಿಲ್ 17ರಂದು ರಾಮನವಮಿಗೆ ಎಲ್ಲೆಲ್ಲಿ ಬ್ಯಾಂಕುಗಳಿಗೆ ರಜೆ?

ಏಪ್ರಿಲ್ 17, ಬುಧವಾರ: ಅಹ್ಮದಾಬಾದ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಡ್, ಡೆಹ್ರಾಡೂನ್, ಗ್ಯಾಂಗ್​ಟಾಕ್, ಹೈದರಾಬಾದ್, ಜೈಪುರ್, ಕಾನಪುರ್, ಲಕ್ನೋ, ಪಾಟ್ನಾ, ರಾಂಚಿ, ಶಿಮ್ಲಾ, ಮುಂಬೈ ಮತ್ತು ನಾಗಪುರ್ ನಗರಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ.

ಏಪ್ರಿಲ್​ನಲ್ಲಿ ಮುಂದೆ ಯಾವ್ಯಾವ ರಜೆಗಳಿವೆ?

  • ಏಪ್ರಿಲ್ 20, ಶನಿವಾರ: ಅಗಾರ್ತಲಾದಲ್ಲಿ ರಜೆ (ಗರಿಯಾ ಪೂಜೆ)
  • ಏಪ್ರಿಲ್ 21: ಭಾನುವಾರ
  • ಏಪ್ರಿಲ್ 27: ನಾಲ್ಕನೇ ಶನಿವಾರ
  • ಏಪ್ರಿಲ್ 28: ಭಾನುವಾರ

ಇದನ್ನೂ ಓದಿ: ಏಪ್ರಿಲ್ ತಿಂಗಳಲ್ಲಿ ಯುಗಾದಿ, ಈದ್ ಸೇರಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ

ಕರ್ನಾಟಕದಲ್ಲಿ ಏಪ್ರಿಲ್ 21, 27 ಮತ್ತು 28ರಂದು ಶನಿವಾರ ಮತ್ತು ಭಾನುವಾರ ರಜೆಗಳು ಮಾತ್ರವೇ ಇರುವುದು.

ರಾಮನವಮಿಯಂದು ಷೇರು ಮಾರುಕಟ್ಟೆಗೆ ರಜೆಯಾ?

ಏಪ್ರಿಲ್ 17, ಬುಧವಾರದಂದು ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ. ಷೇರು ವಿನಿಮಯ ಕೇಂದ್ರಗಳಾದ ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿ ಅಂದು ಯಾವ ಟ್ರೇಡಿಂಗ್ ನಡೆಯುವುದಿಲ್ಲ.

ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್ ಅಥವಾ ಎಂಸಿಎಕ್ಸ್ ಬುಧವಾರ ಬೆಳಗಿನ ಸೆಷನ್​ನಲ್ಲಿ, ಅಂದರೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮುಚ್ಚಿರುತ್ತದೆ. ಆದರೆ, ಸಂಜೆ 5ರಿಂದ ರಾತ್ರಿ 9ರವರೆಗಿನ ಎರಡನೇ ಸೆಷನ್​ನಲ್ಲಿ ಟ್ರೇಡಿಂಗ್ ನಡೆಯುತ್ತದೆ.

ಆದರೆ, ನ್ಯಾಷನಲ್ ಕಮಾಡಿಟಿ ಮತ್ತು ಡಿರೈವೇಟಿವ್ಸ್ ಎಕ್ಸ್​ಚೇಂಜ್ (ಎನ್​ಸಿಡಿಇಎಕ್ಸ್) ಏಪ್ರಿಲ್ 17ರಂದು ಪೂರ್ಣ ಮುಚ್ಚಿರುತ್ತದೆ.

ಇದನ್ನೂ ಓದಿ: ಸ್ವಂತ ಕಂಪನಿಯಲ್ಲಿ ಕೆಲಸಕ್ಕಾಗಿ 2 ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ಈ ಬಿಲಿಯನೇರ್, ಯಾಕೆ ಗೊತ್ತಾ?

ಮೇ 1ರಂದು ಕೂಡ ಷೇರು ಮಾರುಕಟ್ಟೆಗೆ ರಜೆ

ಮೇ 1, ಬುಧವಾರ ಅಂತಾರಾಷ್ಟ್ರೀಯ ಕಾರ್ಮಿಕರ ದಿನ. ಜೊತೆಗೆ ಮಹಾರಾಷ್ಟ್ರ ಏಕೀಕರಣ ದಿನವೂ ಹೌದು. ಷೇರು ವಿನಿಮಯ ಕೇಂದ್ರಗಳು ಮುಂಬೈನಲ್ಲೇ ಇವೆ. ಮೇ 1ರಂದು ಷೇರು ಮಾರುಕಟ್ಟೆ ಇಡೀ ದಿನ ಬಂದ್ ಆಗಿರುತ್ತದೆ. ಆದರೆ, ಎಂಸಿಎಕ್ಸ್ ವಿನಿಮಯ ಕೇಂದ್ರವು ಸಂಜೆಯ ಸೆಷನ್​ನಲ್ಲಿ ಮಾತ್ರ ತೆರೆದಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ