AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕೇತರ ಸಂಸ್ಥೆಗಳಿಗೆ ಹಂತ ಹಂತವಾಗಿ RTGS, NEFT ಕೇಂದ್ರೀಯ ಪಾವತಿ ವ್ಯವಸ್ಥೆ ಸಂಪರ್ಕಕ್ಕೆ ಅವಕಾಶ ನೀಡಲಿದೆ ಆರ್​ಬಿಐ

ಪಾವತಿ ವ್ಯವಸ್ಥೆಯನ್ನು (Payment System) ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಬ್ಯಾಂಕ್​ನಿಂದ ಡಿಜಿಟಲ್ ಪಾವತಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಪ್ರೀಪೇಯ್ಡ್ ಪಾವತಿ ವಿತರಕರು, ಕಾರ್ಡ್​ ನೆಟ್​ವರ್ಕ್​ಗಳು ಮತ್ತು ವೈಟ್​ಲೇಬಲ್ ಎಟಿಎಂ ಆಪರೇಟರ್​ಗಳು ಸೇರಿದಂತೆ ಅಂಗೀಕೃತವಾದ ನಾನ್- ಬ್ಯಾಂಕ್​ಗಳ ಪಾವತಿ ವ್ಯವಸ್ಥೆ ಒದಗಿಸುವವರು ಸಹ ಕೇಂದ್ರೀಯ ಪಾವತಿ ವ್ಯವಸ್ಥೆಗಳಾದ RTGS ಮತ್ತು NEFTನಲ್ಲಿ ಮೊದಲ ಹಂತದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ ಎಂದು ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾ ತಿಳಿಸಿದೆ. ಹೆಚ್ಚೆಚ್ಚು ಪಾವತಿ ವ್ಯವಸ್ಥೆಗೆ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವ ಮೂಲಕ ಕೇಂದ್ರ […]

ಬ್ಯಾಂಕೇತರ ಸಂಸ್ಥೆಗಳಿಗೆ ಹಂತ ಹಂತವಾಗಿ RTGS, NEFT ಕೇಂದ್ರೀಯ ಪಾವತಿ ವ್ಯವಸ್ಥೆ ಸಂಪರ್ಕಕ್ಕೆ ಅವಕಾಶ ನೀಡಲಿದೆ ಆರ್​ಬಿಐ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 29, 2021 | 2:07 PM

Share

ಪಾವತಿ ವ್ಯವಸ್ಥೆಯನ್ನು (Payment System) ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಬ್ಯಾಂಕ್​ನಿಂದ ಡಿಜಿಟಲ್ ಪಾವತಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಪ್ರೀಪೇಯ್ಡ್ ಪಾವತಿ ವಿತರಕರು, ಕಾರ್ಡ್​ ನೆಟ್​ವರ್ಕ್​ಗಳು ಮತ್ತು ವೈಟ್​ಲೇಬಲ್ ಎಟಿಎಂ ಆಪರೇಟರ್​ಗಳು ಸೇರಿದಂತೆ ಅಂಗೀಕೃತವಾದ ನಾನ್- ಬ್ಯಾಂಕ್​ಗಳ ಪಾವತಿ ವ್ಯವಸ್ಥೆ ಒದಗಿಸುವವರು ಸಹ ಕೇಂದ್ರೀಯ ಪಾವತಿ ವ್ಯವಸ್ಥೆಗಳಾದ RTGS ಮತ್ತು NEFTನಲ್ಲಿ ಮೊದಲ ಹಂತದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ ಎಂದು ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾ ತಿಳಿಸಿದೆ. ಹೆಚ್ಚೆಚ್ಚು ಪಾವತಿ ವ್ಯವಸ್ಥೆಗೆ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವ ಮೂಲಕ ಕೇಂದ್ರ ಬ್ಯಾಂಕ್​ನಿಂದ ಉತ್ತೇಜನ ನೀಡಲಾಗುತ್ತಿದೆ.

ಆರ್​ಬಿಐ ಅಧಿಸೂಚನೆಯ ಪ್ರಕಾರ, ನಿಯಂತ್ರಕ ಸಂಸ್ಥೆಯ ಅಡಿಯಲ್ಲಿ ಅಂಗೀಕೃತ ಎನ್​ಬಿಎಫ್​ಸಿಗಳು, ಪಿಎಸ್​ಪಿಗಳು (ನಾನ್ ಬ್ಯಾಂಕ್ ಪೇಮೆಂಟ್ ಸಿಸ್ಟಮ್ ಪ್ರೊವೈಡರ್​ಗಳು), ಇತರ ನಿಯಂತ್ರಕಗಳಾದ ಪಿಎಫ್​ಆರ್​ಡಿಎ, ಐಆರ್​ಡಿಎಐ, SEBI ಅಡಿ ರೆಮಿಟ್ ಆಗುವಂಥದ್ದು ಕೇಂದ್ರೀಯ ಪಾವತಿ ವ್ಯವಸ್ಥೆಗೆ ಸಂಪರ್ಕಕ್ಕೆ ಅವಕಾಶ ಮಾಡಿಕೊಡುತ್ತದೆ. ಸದ್ಯಕ್ಕೆ ಬ್ಯಾಂಕ್​ಗಳು ಹೊರತುಪಡಿಸಿ, ಕೆಲವು ನಾನ್ ಬ್ಯಾಂಕ್​ಗಳಿಗೆ ಕೇಂದ್ರೀಯ ಪಾವತಿ ವ್ಯವಸ್ಥೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಬ್ಯಾಂಕ್​ಗಳು ನಾನ್​ ಬ್ಯಾಂಕ್​ಗಳ ಪಾವತಿ ಮತ್ತು ತೀರುವಳಿ ಅಗತ್ಯಗಳಿಗೆ ಸೇವೆಯನ್ನು ಒದಗಿಸುತ್ತವೆ.

ಕೇಂದ್ರೀಯ ಪಾವತಿ ವ್ಯವಸ್ಥೆಗೆ ನೇರವಾಗಿ ಬ್ಯಾಂಕೇತರ ಸಂಸ್ತೆಗಳಿಗೆ ಸಂಪರ್ಕಕ್ಕೆ ಅವಕಾಶ ಒದಗಿಸಿದರೆ ಪಾವತಿ ವ್ಯವಸ್ಥೆಯಲ್ಲಿ ಒಟ್ಟಾರೆ ಅಪಾಯವೇ ಕಡಿಮೆ ಆಗುತ್ತದೆ ಎಂದು ಆರ್​ಬಿಐ ತಿಳಿಸಿದೆ. ಇದರ ಜತೆಗೆ ನಾನ್​ ಬ್ಯಾಂಕ್​ಗಳಿಗೆ ಪಾವತಿ ವೆಚ್ಚವು ಕಡಿಮೆ ಆಗುತ್ತದೆ. ಬ್ಯಾಂಕ್​ಗಳ ಮೇಲೆ ಅವಲಂಬನೆ ಕಡಿಮೆ ಆಗಿ, ಸಮಯ ಉಳಿತಾಯ ಆಗುತ್ತದೆ. ಇನ್ನು ಕೇಂದ್ರ ಬ್ಯಾಂಕ್​ನ ಹಣದಲ್ಲಿ ತೀರುವಳಿ ಆಗುವುದರಿಂದ ಅಂತಿಮ ಪಾವತಿಯ ಅನಿಶ್ಚಿತತೆ ಇರುವುದಿಲ್ಲ.

ಬ್ಯಾಂಕೇತರ ಸಂಸ್ಥೆಗಳಿಗೆ ಕೇಂದ್ರೀಯ ಪಾವತಿ ವ್ಯವಸ್ಥೆಗೆ ಸಂಪರ್ಕ ದೊರಕಿಸಿಕೊಟ್ಟರೆ ಅದಕ್ಕಾಗಿ ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ ಕೋಡ್​ (IFSC) ಪ್ರತ್ಯೇಕವಾಗಿ ನೀಡಲಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಕೋರ್ ಬ್ಯಾಂಕಿಂಗ್ ಸಿಸ್ಟಮ್ (ಇ-ಕುಬೇರ್)ನಲ್ಲಿ ಕರೆಂಟ್ ಅಕೌಂಟ್ ತೆರೆಯಬಹುದು. ಆರ್​ಬಿಐ ಬಳಿ ತೀರುವಳಿ ಖಾತೆ ನಿರ್ವಹಿಸಬಹುದು. ಇಂಡಿಯನ್ ಫೈನಾನ್ಷಿಯಲ್ ನೆಟ್​ವರ್ಕ್ (INFINET) ಸದಸ್ಯತ್ವ ಪಡೆಯಬಹುದು. ಕೇಂದ್ರೀಯ ಪಾವತಿ ವ್ಯವಸ್ಥೆ ಜತೆಗಿನ ಸಂವಹನಕ್ಕೆ ಸ್ಟ್ರಕ್ಚರ್ಡ್ ಫೈನಾನ್ಷಿಯಲ್ ಮೆಸೇಜಿಂಗ್ ಸಿಸ್ಟಮ್ (SFMS) ಬಳಸಬಹುದು.

ಅರ್ಹತಾ ಮಾನದಂಡಗಳು ಬ್ಯಾಂಕೇತರ ಪಿಎಸ್​ಪಿಗಳು ಕೇಂದ್ರೀಯ ಪಾವತಿ ವ್ಯವಸ್ಥೆಗೆ ಸಂಪರ್ಕ ಪಡೆಯಲು ಆರ್​ಬಿಐನಿಂದ ಸಿಂಧುವಾದ ಪ್ರಮಾಣಪತ್ರವನ್ನು ಪಡೆಯಬೇಕು. ಪೇಮೆಂಟ್ ಮತ್ತು ಸೆಟ್ಲ್​ಮೆಂಟ್ ಸಿಸ್ಟಮ್ ಆ್ಯಕ್ಟ್​, 2007 ಅಡಿಯಲ್ಲಿ ನಿವ್ವಳ ಮೌಲ್ಯ ಕನಿಷ್ಠ 25 ಕೋಟಿ ಇದ್ದು, ಭಾರತದಲ್ಲಿ ಇನ್​ಕಾರ್ಪೊರೇಟ್ ಆಗಿರಬೇಕು. ಇದರ ಜತೆಗೆ ಅಗತ್ಯ ತಾಂತ್ರಿಕ ಮತ್ತು ಸಿಸ್ಟಮ್​ ಸಿದ್ಧತೆ ಇರಬೇಕು. ಸ್ಥಳೀಯ ಡೇಟಾ ಸ್ಟೋರೇಜ್ ನಿಯಮಾವಳಿಗೆ ಬದ್ಧವಾಗಿದ್ದು, ಸೈಬರ್ ಭದ್ರತೆ ಒಳಗೊಂಡಿರಬೇಕು.

ಇದನ್ನೂ ಓದಿ: RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಆರ್​ಟಿಜಿಎಸ್, ಎನ್​ಇಎಫ್​ಟಿ ವಿಸ್ತರಣೆ

(RBI Will Allow Non Bank Firms To Access Central Payment System Phase By Phase)

Published On - 2:06 pm, Thu, 29 July 21

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್