AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inspiring: ಪಕ್ಕದ ಮನೆಯ ಕಂಪ್ಯೂಟರ್ ನೋಡಿ ಆಸೆ ಪಟ್ಟವ, ಇವತ್ತು ಭಾರತದಲ್ಲಿ ಡಿಜಿಟಲ್ ಸರ್ವಿಸ್ ಕಿಂಗ್

Jeta Ram Choudhary entrepreneurship: ರಾಜಸ್ಥಾನ ಮೂಲದ ಜೀತಾ ರಾಮ್ ಚೌಧರಿ ಅವರ ಎಎಸ್​ಬಿ ಸಲ್ಯೂಷನ್ಸ್ ಎಂಬ ಡಿಜಿಟಲ್ ಸರ್ವಿಸ್ ಕಂಪನಿ 215 ಕೋಟಿ ರೂ ಮೌಲ್ಯದಾಗಿದೆ. ಕಂಡಕ್ಟರ್ ಮಗನಾದ ಜೀತಾ ರಾಮ್ ಹೆಚ್ಚು ಓದದೇ ಹೋದರೂ ಉದ್ಯಮಶೀಲತೆಯ ಗುಣ ಬಿಟ್ಟುಕೊಡಲಿಲ್ಲ. ಎಎಸ್​ಬಿ ಸಲ್ಯೂಷನ್ಸ್ ಇವತ್ತು 4,000 ಫ್ರಾಂಚೈಸಿಗಳನ್ನು ಹೊಂದಿದೆ. ಈ ಸಂಖ್ಯೆಯನ್ನು 20 ಲಕ್ಷಕ್ಕೆ ಏರಿಸುವುದು ಅವರ ಗುರಿ.

Inspiring: ಪಕ್ಕದ ಮನೆಯ ಕಂಪ್ಯೂಟರ್ ನೋಡಿ ಆಸೆ ಪಟ್ಟವ, ಇವತ್ತು ಭಾರತದಲ್ಲಿ ಡಿಜಿಟಲ್ ಸರ್ವಿಸ್ ಕಿಂಗ್
ಜೀತಾ ರಾಮ್ ಚೌಧರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 23, 2024 | 12:46 PM

Share

ಮನಸ್ಸಿದ್ದರೆ ಮಾರ್ಗ ಎಂದು ಹಿರಿಯರು ಹೇಳುತ್ತಾರೆ. ಯಶಸ್ಸು ಗಳಿಸಲು ಓದಿರಲೇಬೇಕು, ಕುಟುಂಬದ ಬೆಂಬಲ ಚೆನ್ನಾಗಿರಬೇಕು ಇತ್ಯಾದಿ ಬೇಕುಗಳೇ ಬೇಕೆಂದಿಲ್ಲ. ಮನಸು ಸಂಕಲ್ಪ ತೊಟ್ಟರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ರಾಜಸ್ಥಾನದ ಜೀತಾ ರಾಮ್ ಚೌಧರಿ (Jeta Ram Choudhary) ಕಥೆ ಇದಕ್ಕೆ ಉತ್ತಮ ನಿದರ್ಶನ. ಬಸ್ ಕಂಡಕ್ಟರ್​ನ ಮಗನಾದ ಜೀತಾ ರಾಮ್ ಈಗ 215 ಕೋಟಿ ರೂ ಮೌಲ್ಯದ ಎಎಸ್​ಬಿ ಡಿಜಿಟಲ್ ಸಲ್ಯೂಶನ್ಸ್ (ASB digital solutions) ಕಂಪನಿಯ ಒಡೆಯರಾಗಿದ್ದಾರೆ. ಇವರ ಕಂಪನಿಯ 4,000 ಫ್ರಾಂಚೈಸಿಗಳು ದೇಶದ ವಿವಿಧೆಡೆ ಇವೆ. ಎಂಜಿನಿಯರಿಂಗ್ ಕೂಡ ಮಾಡದ ಈ ವ್ಯಕ್ತಿ ತನ್ನ ಕಂಪನಿಯ ಫ್ರಾಂಚೈಸಿ ಸಂಖ್ಯೆಯನ್ನು 20 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದಾರೆ.

ಓದಬೇಕೆಂದರೂ ಆಗಲಿಲ್ಲ…

ರಾಜಸ್ಥಾನದ ಬಾರ್ಮರ್ ನಗರದ ಜೀತಾ ರಾಮ್ ಚೌಧರಿ ಹೆಚ್ಚು ಓದಿದವರಲ್ಲ. ಅವರಲ್ಲಿ ಓದುವ ತುಡಿತ ಇದ್ದರೂ ಮನೆಯಲ್ಲಿ ಓದಿಸುವ ಶಕ್ತಿ ಇರಲಿಲ್ಲ. ಪಕ್ಕದ ಮನೆಯಲ್ಲಿ ಇದ್ದ ಕಂಪ್ಯೂಟರ್ ಅನ್ನು ಬಳಸಿ ಅದರ ಬಗ್ಗೆ ಒಲವು ಹೆಚ್ಚಾಗಿತ್ತು. ಬಹಳ ಚಿಕ್ಕ ವಯಸ್ಸಿನಲ್ಲೇ ತಮ್ಮ ಏರಿಯಾದಲ್ಲೇ ಇದ್ದ ಕಂಪ್ಯೂಟರ್ ಸೆಂಟರ್​ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಕಂಪ್ಯೂಟರ್ ಬಳಕೆ ಚೆನ್ನಾಗಿ ಸಿದ್ಧಿಸಿತು. ಟಿಕೆಟ್ ಬುಕಿಂಗ್ ಇತ್ಯಾದಿ ಸರ್ವಿಸ್​ಗಳನ್ನು ಬಹಳ ಸುಲಭವಾಗಿ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: ಟೆಂಟ್​ನಲ್ಲಿ ವಾಸಿಸುತ್ತಿದ್ದ ಕ್ರಿಕೆಟ್ ಸ್ಟಾರ್ ಯಶಸ್ವಿ ಜೈಸ್ವಾಲ್​ರಿಂದ ಐಷಾರಾಮಿ ಮನೆ ಖರೀದಿ; ಪ್ರತಿಷ್ಠಿತ ಏರಿಯಾದಲ್ಲಿದೆ ಈ ಅಪಾರ್ಟ್ಮೆಂಟ್

2018ರಲ್ಲಿ ಅವರು ಎಎಸ್​ಬಿ ಸಲ್ಯೂಶನ್ಸ್ ಎಂಬ ಕಂಪನಿ ಹುಟ್ಟುಹಾಕಿದರು. ಮನಿ ಟ್ರಾನ್ಸ್​ಫರ್, ಬಿಲ್ ಪಾವತಿ, ಆಧಾರ್ ಕೆವೈಸಿ, ಟಿಕೆಟ್ ಬುಕಿಂಗ್, ಇನ್ಷೂರೆನ್ಸ್ ಇತ್ಯಾದಿ ಡಿಜಿಟಲ್ ಸರ್ವಿಸ್​ಗಳನ್ನು ಇವರು ಒದಗಿಸುತ್ತಾರೆ. ಇದು ಬಹಳ ಜನಪ್ರಿಯವಾಯಿತು. ಒಬ್ಬರೇ ಸ್ಥಾಪಿಸಿದರೂ ನೆಟ್ವರ್ಕ್ ಬೆಳೆಯತೊಡಗಿತು. ರಾಜಸ್ಥಾನದ ಆಚೆಗೆ ಬೆಳೆಯಿತು. ಉತ್ತರಪ್ರದೇಶ, ಛತ್ತೀಸ್​ಗಡ ಮತ್ತು ಬಿಹಾರ ರಾಜ್ಯಗಳಲ್ಲಿ ಇವರ ಕಂಪನಿಯ 4,000 ಫ್ರಾಂಚೈಸಿಗಳಿವೆ.

ಪ್ರತೀ ಹಳ್ಳಿಯಲ್ಲೂ ಫ್ರಾಂಚೈಸಿಗೆ ಗುರಿ

ಜೀತಾ ರಾಮ್ ಚೌಧರಿ ಅವರು ಪ್ರತೀ ಹಳ್ಳಿಯಲ್ಲೂ ಡಿಜಿಟಲ್ ಸರ್ವಿಸ್ ಕೊಡುವ ಹೆಬ್ಬಯಕೆ ಹೊಂದಿದ್ದಾರೆ. ಅಲ್ಲೆಲ್ಲಾ ಡಿಜಿಟಲ್ ಸೆಂಟರ್​ಗಳನ್ನು ತೆರೆದು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಅವರ ಗುರಿ. ಈ ನಿಟ್ಟಿನಲ್ಲಿ ದೇಶಾದ್ಯಂತ ಬರೋಬ್ಬರಿ 20 ಲಕ್ಷ ಫ್ರಾಂಚೈಸಿಗಳನ್ನು ಹುಟ್ಟುಹಾಕುವ ಕನಸು ಕಾಣುತ್ತಿದ್ದಾರೆ. ಭಾರತದಲ್ಲಿ 6-7 ಲಕ್ಷ ಗ್ರಾಮಗಳಿವೆ. ಗ್ರಾಮದಲ್ಲಿ ಕನಿಷ್ಠ ಒಂದಾದರೂ ಡಿಜಿಟಲ್ ಸರ್ವಿಸ್ ಸೆಂಟರ್ ಇರಬೇಕೆಂದರೂ ಪಟ್ಟಣ, ನಗರ ಎಲ್ಲಾ ಸೇರಿ 20 ಲಕ್ಷ ಸೆಂಟರ್​ಗಳಾದರೂ ಬೇಕಾಗುತ್ತದೆ. ಅಂತೆಯೇ ಈ ಯುವಕನ ಕನಸಿದೆ. ಸರಿಯಾದ ಬೆಂಬಲ ಸಿಕ್ಕರೆ ಈ ಗುರಿ ಈಡೇರಿಕೆ ಅಸಾಧ್ಯವೇನಲ್ಲ.

ಇದನ್ನೂ ಓದಿ: ಕೆಲಸಗಾರರಿಗೆ ಮಾಲೀಕತ್ವ ಕೊಟ್ಟು ಮೃತರಾದ ಶ್ರೀಮಂತ; ಕಂಪನಿಯ ಎಲ್ಲಾ 700 ಉದ್ಯೋಗಿಗಳೂ ಈಗ ಮಾಲೀಕರು

ಈಗ ಹೋಬಳಿ ಮಟ್ಟಗಳಲ್ಲಿ, ಕೆಲ ಪ್ರಮುಖ ಹಳ್ಳಿಗಳಲ್ಲಿ ಡಿಜಿಟಲ್ ಸರ್ವಿಸ್ ಸೆಂಟರ್​ಗಳಿರುವುದನ್ನು ಕಾಣಬಹುದು. ಮುಂದಿನ ದಿನಗಳಲ್ಲಿ ಇಂಟರ್ನೆಟ್ ಬೆಳೆದಂತೆ ಮತ್ತು ಬೇಡಿಕೆ ಬೆಳೆದಂತೆ ಜೀತಾ ರಾಮ್ ಚೌಧರಿ ಅವರಂಥವರು ಇಂಥ ಡಿಜಿಟಲ್ ಸೇವೆಗಳನ್ನು ಆರಂಭಿಸುವುದು ಸಹಜ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ