AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣದುಬ್ಬರ ಕೇರಳದಲ್ಲಿ ಅತಿಹೆಚ್ಚು; ತೆಲಂಗಾಣದಲ್ಲಿ ಅತಿಕಡಿಮೆ; ಕರ್ನಾಟಕದಲ್ಲಿ ಸರಾಸರಿಗಿಂತ ಹೆಚ್ಚು

State-wise inflation rates in June 2025: ಜೂನ್ ತಿಂಗಳಲ್ಲಿ ಭಾರತದ ಹಣದುಬ್ಬರ ಶೇ. 2.10 ಎಂದು ದಾಖಲಾಗಿದೆ. ಈ ವೇಳೆ ರಾಜ್ಯವಾರು ಹಣದುಬ್ಬರ ದರದ ಅಂಕಿ ಅಂಶ ಪ್ರಕಟವಾಗಿದೆ. ಎರಡು ಅತಿರೇಕಗಳು ದಕ್ಷಿಣ ರಾಜ್ಯಗಳಿಂದಲೇ ಆಗಿವೆ. ಕೇರಳದಲ್ಲಿ ಅತಿಹೆಚ್ಚು ಹಣದುಬ್ಬರವಾದರೆ, ತೆಲಂಗಾಣದ್ದು ಅತಿಕಡಿಮೆ. ಕರ್ನಾಟಕದಲ್ಲಿ ಸರಾಸರಿಗಿಂತ ಹೆಚ್ಚಿನ ಹಣದುಬ್ಬರ ಇದೆ. ರಾಜ್ಯವಾರು ಹಣದುಬ್ಬರ ಪಟ್ಟಿ ಈ ಸುದ್ದಿಯ ಕೆಳಗಿದೆ.

ಹಣದುಬ್ಬರ ಕೇರಳದಲ್ಲಿ ಅತಿಹೆಚ್ಚು; ತೆಲಂಗಾಣದಲ್ಲಿ ಅತಿಕಡಿಮೆ; ಕರ್ನಾಟಕದಲ್ಲಿ ಸರಾಸರಿಗಿಂತ ಹೆಚ್ಚು
ಹಣದುಬ್ಬರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 16, 2025 | 6:25 PM

Share

ನವದೆಹಲಿ, ಜುಲೈ 16: ಜೂನ್ ತಿಂಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಣದುಬ್ಬರ (Inflation) ಶೇ. 2.10 ಇದೆ. ಇದು 2019ರ ಜನವರಿಯಿಂದೀಚೆ ವ್ಯಕ್ತವಾದ ಅತಿ ಕಡಿಮೆ ಹಣದುಬ್ಬರ ದರ ಎನಿಸಿದೆ. ಇದೇ ವೇಳೆ, ರಾಜ್ಯವಾರು ಹಣದುಬ್ಬರ ದರದ ಪಟ್ಟಿ ಬಿಡುಗಡೆ ಆಗಿದೆ. ಈ ಪಟ್ಟಿ ಪ್ರಕಾರ ಉತ್ತರ, ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಣದುಬ್ಬರ ಸರಾಸರಿಗಿಂತ ಹೆಚ್ಚಿದೆ. ಕೇರಳದಲ್ಲಿ ಅತಿಹೆಚ್ಚು ಹಣದುಬ್ಬರ ದಾಖಲಾದರೆ, ತೆಲಂಗಾಣದಲ್ಲಿ ಮೈನಸ್ ಹಣದುಬ್ಬರ ದಾಖಲಾಗಿದೆ. ಅಂದರೆ, ಅಲ್ಲಿ ಇನ್ಫ್ಲೇಶನ್ ಬದಲು ಡೀಫ್ಲೇಶನ್ ಸ್ಥಿತಿ ಉದ್ಭವಿಸಿದೆ.

ಕರ್ನಾಟಕದಲ್ಲಿ ಎಷ್ಟಿದೆ ಹಣದುಬ್ಬರ?

ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತ ತುಸು ಹೆಚ್ಚಿನ ಹಣದುಬ್ಬರ ಇದೆ. ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ದಾಖಲಾದ ಹಣದುಬ್ಬರ ದರ ಶೇ. 2.75 ಎಂಬುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ಇದನ್ನೂ ಓದಿ: ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10; ಆರು ತಿಂಗಳಲ್ಲೇ ಕನಿಷ್ಠ ಬೆಲೆ ಏರಿಕೆ ದರ

ಇದನ್ನೂ ಓದಿ
Image
ಜೂನ್​ನಲ್ಲಿ ಟ್ರೇಡ್ ಡೆಫಿಸಿಟ್ 3.51 ಬಿಲಿಯನ್ ಡಾಲರ್​ಗೆ ಇಳಿಕೆ
Image
ಭಾರತದ ಹಾಲಿನ ಉದ್ಯಮಕ್ಕೆ ಅಮೆರಿಕದಿಂದ ಎಷ್ಟು ಅಪಾಯ?
Image
ರೀಟೇಲ್ ಹಣದುಬ್ಬರ ಜೂನ್​​ನಲ್ಲಿ ಶೇ. 2.10
Image
ಡಬ್ಲ್ಯುಪಿಐ ಹಣದುಬ್ಬರ ಮೈನಸ್ ಶೇ 0.13ಕ್ಕೆ ಇಳಿಕೆ

ಎರಡು ತೆಲುಗು ರಾಜ್ಯಗಳು ದೇಶದಲ್ಲೇ ಅತ್ಯಂತ ಕಡಿಮೆ ಹಣದುಬ್ಬರ ಪಡೆದಿವೆ. ಆಂಧ್ರದಲ್ಲಿ ಸೊನ್ನೆ ಇದ್ದರೆ ತೆಲಂಗಾಣದಲ್ಲಿ ಮೈನಸ್ ಇದೆ.

ದಕ್ಷಿಣ ಭಾಗದಲ್ಲಿ ಇವೆರಡು ರಾಜ್ಯಗಳನ್ನು ಬಿಟ್ಟರೆ ಉಳಿದ ಕಡೆ ಸರಾಸರಿಗಿಂತ ಹೆಚ್ಚಿನ ಬೆಲೆ ಏರಿಕೆ ಸ್ಥಿತಿ ಇದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ, ಕೇರಳ, ತಮಿಳುನಾಡು ಮತ್ತು ಪಾಂಡಿಚೆರಿ ರಾಜ್ಯಗಳಲ್ಲಿ ಹೆಚ್ಚಿನ ಹಣದುಬ್ಬರ ಇದೆ.

ಪಂಜಾಬ್ ಮತ್ತು ಜಮ್ಮು ಕಾಶ್ಮೀರದಲ್ಲೂ ಕೇರಳ, ಗೋವಾ ರೀತಿ ಅಧಿಕ ಹಣದುಬ್ಬರವು ಜೂನ್​​ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಹೋಲ್​ಸೇಲ್ ಬೆಲೆ ಉಬ್ಬರ ಮತ್ತಷ್ಟು ಇಳಿಕೆ; ಜೂನ್​ನಲ್ಲಿ ರೀಟೇಲ್ ಹಣದುಬ್ಬರವೂ ಇಳಿಯುವ ಸಾಧ್ಯತೆ

2025ರ ಜೂನ್​​ನಲ್ಲಿ ಅತಿಹೆಚ್ಚು ಹಣದುಬ್ಬರ ಇರುವ ರಾಜ್ಯಗಳ ಪಟ್ಟಿ

  1. ಕೇರಳ: ಶೇ. 6.71
  2. ಗೋವಾ: ಶೇ. 5.16
  3. ಪಂಜಾಬ್: ಶೇ. 4.67
  4. ಜಮ್ಮು ಕಾಶ್ಮೀರ: ಶೇ. 4.38
  5. ತ್ರಿಪುರಾ: ಶೇ. 3.43
  6. ಉತ್ತರಾಖಂಡ್: ಶೇ. 3.4
  7. ಅರುಣಾಚಲಪ್ರದೇಶ: ಶೇ. 3.24
  8. ಹರ್ಯಾಣ: ಶೇ. 3.1
  9. ಮಿಝೋರಾಂ: ಶೇ. 3.09
  10. ಹಿಮಾಚಲಪ್ರದೇಶ: ಶೇ. 3.04
  11. ಪಾಂಡಿಚೆರಿ: ಶೇ. 2.9
  12. ನಾಗಾಲ್ಯಾಂಡ್: ಶೇ. 2.89
  13. ಮೇಘಾಲಯ: ಶೇ. 2.79
  14. ಕರ್ನಾಟಕ: ಶೇ. 2.75
  15. ಸಿಕ್ಕಿಂ: ಶೇ. 2.57
  16. ಮಹಾರಾಷ್ಟ್ರ: ಶೇ. 2.51
  17. ಛತ್ತೀಸ್​ಗಡ: ಶೇ. 2.32
  18. ಗುಜರಾತ್: ಶೇ. 1.97
  19. ದೆಹಲಿ: ಶೇ. 1.9
  20. ಮಣಿಪುರ್: ಶೇ. 1.86
  21. ಮಧ್ಯಪ್ರದೇಶ: ಶೇ. 1.8
  22. ಅಸ್ಸಾಮ್: ಶೇ. 1.77
  23. ರಾಜಸ್ಥಾನ್: ಶೇ. 1.6
  24. ಉತ್ತರಪ್ರದೇಶ: ಶೇ. 1.53
  25. ಪಶ್ಚಿಮ ಬಂಗಾಳ: ಶೇ. 1.45
  26. ಜಾರ್ಖಂಡ್: ಶೇ. 1.02
  27. ಬಿಹಾರ್: ಶೇ. 0.75
  28. ಒಡಿಶಾ: ಶೇ. 0.52
  29. ಆಂಧ್ರಪ್ರದೇಶ: 0
  30. ತೆಲಂಗಾಣ: ಮೈನಸ್ ಶೇ 0.93

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ