AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ: ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಯ ಒಂದು ದಶಕದ ಸಾಧನೆ

UPI, Transforming India's Payment Landscape: ಭಾರತದ್ದೇ ಸ್ವಂತವಾಗಿ ಅಭಿವೃದ್ಧಿಪಡಿಸಲಾದ ಡಿಜಿಟಲ್ ಪೇಮೆಂಟ್ ಸಿಸ್ಟಂ ಆದ ಯುಪಿಐಗೆ ಈಗ 10 ವರ್ಷದ ಸಂಭ್ರಮ. 2016ರಲ್ಲಿ ಆರಂಭವಾದ ಯುಪಿಐ ಪೇಮೆಂಟ್ ಸಿಸ್ಟಂ ಹಲವಾರು ದಾಖಲೆ, ಮೈಲಿಗಲ್ಲು ಮತ್ತು ಉಪಯುಕ್ತತೆಯನ್ನು ನೀಡಿದೆ. ಅದರ ಹಂತ ಹಂತದ ಬೆಳವಣಿಗೆ, ಅದರ ಮೈಲಿಗಲ್ಲುಗಳ ಕುರಿತು ಮಾಹಿತಿ ಇಲ್ಲಿದೆ.

ಯುಪಿಐ: ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಯ ಒಂದು ದಶಕದ ಸಾಧನೆ
ಯುಪಿಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 25, 2026 | 6:33 PM

Share

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ ಯುಪಿಐ (UPI – Unified Payments Interface) ವ್ಯವಸ್ಥೆಯು ಭಾರತದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದು, ಪ್ರಸ್ತುತ ವಿಶ್ವದಲ್ಲೇ ಅಗ್ರಗಣ್ಯ ರಿಯಲ್-ಟೈಮ್ ಪಾವತಿ ವೇದಿಕೆಯಾಗಿ ಹೊರಹೊಮ್ಮಿದೆ. ಭಾರತದಲ್ಲಿ ಜನಜೀವನ, ಹಣದ ಹರಿವಿನಲ್ಲಿ ಗುರುತರ ಬದಲಾವಣೆ ತಂದಿರುವ ಯುಪಿಐ ಆರಂಭವಾಗಿ ಹತ್ತು ವರ್ಷ ಗತಿಸಿವೆ. ಈ ಸಂದರ್ಭದಲ್ಲಿ ಈ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಎಷ್ಟು ಮಹತ್ವದ್ದಾಗಿ ಬೆಳೆದಿದೆ ಎಂದು ಅವಲೋಕಿಸುವ ಸಮಯ.

ಯುಪಿಐ ಬೆಳವಣಿಗೆಯ ಪ್ರಮುಖ ಹಂತಗಳು (2016 – 2026)

  • 2016 (ಆರಂಭ): ಏಪ್ರಿಲ್ 2016 ರಲ್ಲಿ 21 ಬ್ಯಾಂಕ್‌ಗಳೊಂದಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. ಆಗಸ್ಟ್‌ನಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಯಿತು ಮತ್ತು ಡಿಸೆಂಬರ್‌ನಲ್ಲಿ ಭೀಮ್ (BHIM) ಆಪ್ ಬಿಡುಗಡೆಯಾಯಿತು.
  • 2017 – 2018 (ಯುಪಿಐ 2.0): ವ್ಯಾಪಾರಿಗಳಿಗೆ ಡೈನಾಮಿಕ್ QR ಕೋಡ್‌ ಸೌಲಭ್ಯ, ಇನ್‌ವಾಯ್ಸ್ ಪರಿಶೀಲನೆ, ಆವರ್ತಕ ಪಾವತಿಗಳಿಗೆ (Recurring Payments) ಯುಪಿಐ ಮ್ಯಾಂಡೇಟ್ ಮತ್ತು ಓವರ್‌ಡ್ರಾಫ್ಟ್ ಖಾತೆ ಜೋಡಣೆ ಜಾರಿಗೆ ತರಲಾಯಿತು.
  • 2019 – 2022 (ವಿಸ್ತರಣೆ): ಐಪಿಒ (IPO) ಹೂಡಿಕೆಗೆ ಯುಪಿಐ ಬಳಕೆಗೆ ಸೆಬಿ ಅನುಮತಿ ನೀಡಿತು. ಸಬ್‌ಸ್ಕ್ರಿಪ್ಷನ್‌ಗಳಿಗೆ ‘UPI AutoPay’, ಸಾಮಾನ್ಯ ಫೋನ್‌ ಬಳಕೆದಾರರಿಗಾಗಿ ‘UPI 123PAY’ ಮತ್ತು ಸಣ್ಣ ಮೌಲ್ಯದ ಪಾವತಿಗಳಿಗೆ ‘UPI Lite’ ಪರಿಚಯಿಸಲಾಯಿತು. 2021-22 ರಲ್ಲಿ ವಾರ್ಷಿಕ ವಹಿವಾಟು 1 ಟ್ರಿಲಿಯನ್ ಡಾಲರ್ ದಾಟಿತು.
  • 2023 – 2024 (ಸುಧಾರಿತ ವೈಶಿಷ್ಟ್ಯಗಳು): ಬ್ಯಾಂಕ್ ಕ್ರೆಡಿಟ್ ಲೈನ್ ಜೋಡಣೆ ಹಾಗೂ ಪ್ರಾಥಮಿಕ ಬಳಕೆದಾರರು ಕುಟುಂಬದ ಇತರರಿಗೆ ಮಿತಿ ನಿಗದಿಪಡಿಸಿ ಬಳಸಲು ಅನುಕೂಲವಾಗುವ ‘UPI Circle’ ಪರಿಚಯಿಸಲಾಯಿತು. ತೆರಿಗೆ ಪಾವತಿಯ ಗರಿಷ್ಠ ಮಿತಿಯನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಲಾಯಿತು.
  • 2025 – 2026 (ಆಧುನಿಕ ತಂತ್ರಜ್ಞಾನ): ಫಿಂಗರ್‌ಪ್ರಿಂಟ್/ಫೇಸ್ ಅನ್‌ಲಾಕ್ ಮೂಲಕ ಪಾವತಿಸುವ ತಂತ್ರಜ್ಞಾನ ಮತ್ತು ಆಧಾರ್ ಆಧರಿತ ಫೇಸ್ ಆಥಂಟಿಕೇಶನ್ ವ್ಯವಸ್ಥೆ ಜಾರಿಗೆ ಬಂದಿದೆ.

ಇದನ್ನೂ ಓದಿ: ಡಿಆರ್​ಡಿಒ ಮಿಸೈಲ್ ಸಿಸ್ಟಂಗಳ ತಂತ್ರಜ್ಞಾನ ರಕ್ಷಣಾ ಉದ್ಯಮಕ್ಕೆ ಹಸ್ತಾಂತರ; ದೇಶೀಯವಾಗಿ ಕ್ಷಿಪಣಿ ತಯಾರಿಕೆಗೆ ಭರ್ಜರಿ ಪುಷ್ಟಿ

ಪ್ರಸ್ತುತ ಯುಪಿಐ ಸಾಧನೆ ಮತ್ತು ಮೈಲಿಗಲ್ಲುಗಳು

  • ಬೃಹತ್ ಬೆಳವಣಿಗೆ: 2016-17 ರಲ್ಲಿ 2 ಕೋಟಿಯಷ್ಟಿದ್ದ ವಾರ್ಷಿಕ ವಹಿವಾಟುಗಳ ಸಂಖ್ಯೆ 2025-26 ರ ವೇಳೆಗೆ 24,162 ಕೋಟಿಗೂ ಹೆಚ್ಚು (ಸುಮಾರು 12,000 ಪಟ್ಟು ಹೆಚ್ಚಳ) ತಲುಪಿದೆ.
  • ವಹಿವಾಟು ಮೌಲ್ಯ: ವಾರ್ಷಿಕ ವಹಿವಾಟು ಮೌಲ್ಯವು ₹0.07 ಲಕ್ಷ ಕೋಟಿಯಿಂದ ₹314 ಲಕ್ಷ ಕೋಟಿಗೆ ಏರಿಕೆಯಾಗಿದೆ.
  • ಪ್ರಸ್ತುತ ಸ್ಥಿತಿ (ಜುಲೈ 2026): ದೇಶದಲ್ಲಿ 741 ಬ್ಯಾಂಕ್‌ಗಳು ಯುಪಿಐ ವ್ಯವಸ್ಥೆಯಲ್ಲಿ ಸಕ್ರಿಯವಾಗಿವೆ. ಜುಲೈ 2026 ರ ಒಂದೇ ತಿಂಗಳಲ್ಲಿ ₹29.87 ಲಕ್ಷ ಕೋಟಿ ಮೌಲ್ಯದ 2,365.8 ಕೋಟಿ ವಹಿವಾಟುಗಳು ನಡೆದಿವೆ.

ಇದನ್ನೂ ಓದಿ: ಸುಂಕರಹಿತವಾಗಿ 10 ಲಕ್ಷ ಟನ್ ಕಚ್ಚಾ ಸಕ್ಕರೆ ಆಮದಿಗೆ ಅವಕಾಶ; ಸಕ್ಕರೆ ಬೆಲೆ ಏರಿಕೆ ತಡೆಯಲು ಸರ್ಕಾರದ ಕ್ರಮ

ಜಾಗತಿಕ ಮಟ್ಟದಲ್ಲಿ ಯುಪಿಐ ಧಮಾಕ

  • ವಿಶ್ವದ ಶೇ. 49 ರಷ್ಟು ವಹಿವಾಟು: 2024 ರ ಹೊತ್ತಿಗೆ ಜಾಗತಿಕ ರಿಯಲ್-ಟೈಮ್ ಡಿಜಿಟಲ್ ಪಾವತಿಗಳಲ್ಲಿ ಶೇ. 49 ರಷ್ಟು ಪಾಲು ಹೊಂದುವ ಮೂಲಕ ಯುಪಿಐ ವಿಶ್ವದಾಖಲೆ ಬರೆದಿದೆ (IMF ಜೂನ್ 2025 ರ ವರದಿ).
  • 11 ವಿದೇಶಗಳಲ್ಲಿ ಯುಪಿಐ: ಪ್ರಸ್ತುತ ಭೂತಾನ್, ನೇಪಾಳ, ಸಿಂಗಾಪುರ, ಯುಎಇ, ಫ್ರಾನ್ಸ್, ಶ್ರೀಲಂಕಾ, ಮಾರಿಷಸ್, ಕತಾರ್ ಸೇರಿದಂತೆ 11 ವಿದೇಶಗಳಲ್ಲಿ ಯುಪಿಐ ಪಾವತಿ/ಗಡಿಯಾಚೆಗಿನ ಹಣ ವರ್ಗಾವಣೆ (Cross Border Remittance) ಸೌಲಭ್ಯ ಲಭ್ಯವಿದೆ.
  • ಇತ್ತೀಚಿನ ಸೇರ್ಪಡೆ: 2026ರ ಜೂನ್​ನಲ್ಲಿ ಕಾಂಬೋಡಿಯಾ ಮತ್ತು ಗ್ರೀಸ್‌ನಲ್ಲೂ ಯುಪಿಐ ಸೇವೆ ಜಾರಿಯಾಗಿದ್ದು, ಜುಲೈ 30 ರಂದು ಮಾಲ್ಡೀವ್ಸ್‌ನ ‘ಫವಾರಾ’ (Favara) ವ್ಯವಸ್ಥೆಯೊಂದಿಗೆ ಯುಪಿಐ ಯಶಸ್ವಿಯಾಗಿ ಜೋಡಣೆಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್