AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sensex: ಮೊದಲ ಬಾರಿಗೆ 59000 ಪಾಯಿಂಟ್ಸ್ ದಾಟಿದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್; ಮುಂದಿನ ಹಾದಿ ಏನೆಂಬ ಆತಂಕ​

ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 59 ಸಾವಿರ ಪಾಯಿಂಟ್ಸ್ ಗಡಿ ದಾಟಿದೆ. ಅದಕ್ಕೆ ಕಾರಣ ಆದ ಅಂಶಗಳೇನು ಎಂಬುದರ ವಿವರ ಇಲ್ಲಿದೆ.

Sensex: ಮೊದಲ ಬಾರಿಗೆ 59000 ಪಾಯಿಂಟ್ಸ್ ದಾಟಿದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್; ಮುಂದಿನ ಹಾದಿ ಏನೆಂಬ ಆತಂಕ​
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Sep 16, 2021 | 3:27 PM

Share

ಭಾರತದ ಷೇರು ಮಾರುಕಟ್ಟೆಯ “ಗೂಳಿ ಓಟ” (Bulls Run) ಗುರುವಾರ (ಸೆಪ್ಟೆಂಬರ್ 16, 2021) ಮುಂದುವರಿದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಏರಿಕೆ ಹಾದಿಯಲ್ಲಿ ಮುಂದುವರಿದಿದೆ. ಇದೇ ಮೊದಲ ಬಾರಿಗೆ 30 ಷೇರುಗಳ ಗುಚ್ಛ ಬಿಎಸ್​ಇ ಸೆನ್ಸೆಕ್ಸ್ ಇಂಟ್ರಾಡೇ ವ್ಯವಹಾರದಲ್ಲಿ 59 ಸಾವಿರ ಪಾಯಿಂಟ್ಸ್​ ಗಡಿ ದಾಟಿದೆ. ಮಧ್ಯಾಹ್ನ 2.23ರ ಸುಮಾರಿಗೆ ಬಿಎಸ್​ಇ ಸೆನ್ಸೆಕ್ಸ್ 357.26 ಪಾಯಿಂಟ್ಸ್​ ಮೇಲೇರಿ 59,080.46 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸಿತ್ತು. ಇನ್ನು ನಿಫ್ಟಿ 90.65 ಪಾಯಿಂಟ್ಸ್​ ಮೇಲೇರಿ 17,610.10 ಪಾಯಿಂಟ್ಸ್​ನಲ್ಲಿ ವ್ಯವಹಾರ ನಡೆಸುತ್ತಿತ್ತು. ಸೆನ್ಸೆಕ್ಸ್ ಬುಧವಾರ 58,723.20 ಪಾಯಿಂಟ್ಸ್​ನಲ್ಲಿ ಮುಕ್ತಾಯ ಆಗಿತ್ತು. ಗುರುವಾರದಂದು ಬೆಳಗ್ಗೆ 58,881.04 ಪಾಯಿಂಟ್ಸ್​ನೊಂದಿಗೆ ಆರಂಭವಾಗಿತ್ತು. 30 ಷೇರುಗಳ ಗುಚ್ಛದಲ್ಲಿ 15 ಷೇರುಗಳು ಏರಿಕೆಯನ್ನು ಕಂಡಿದ್ದವು, ಉಳಿದ 15 ಇಳಿಕೆಯಲ್ಲಿತ್ತು.

ಇಂಡಸ್​ಇಂಡ್​ ಬ್ಯಾಂಕ್, ಐಟಿಸಿ, ಎಸ್​ಬಿಐ, ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳು ಈ ಮಾರುಕಟ್ಟೆ ಏರಿಕೆಯಲ್ಲಿ ಅತಿ ಹೆಚ್ಚಿನ ಗಳಿಕೆ ಕಂಡಿವೆ. ಇನ್ನೊಂದು ಕಡೆಗೆ ಬಿಪಿಸಿಎಲ್, ಗ್ರಾಸಿಮ್, ಟಾಟಾ ಸ್ಟೀಲ್, ಟಿಸಿಎಸ್​, ಶ್ರೀ ಸಿಮೆಂಟ್ಸ್​ ಇಳಿಕೆ ಪ್ರಮುಖವಾಗಿ ಇಳಿಕೆ ಕಂಡಿವೆ. ರಿಲಯನ್ಸ್​ ಇಂಡಸ್ಟ್ರೀಸ್, ಐಟಿಸಿ ಹಾಗೂ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾವು ಸೂಚ್ಯಂಕಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡಿದೆ. ಇನ್ನು ಸೂಚ್ಯಂಕದ ತೂಕವನ್ನು ಹಿಂದೆ ಎಳೆದಿರುವ ಕಂಪೆನಿಗಳಾಗಿ ಇನ್ಫೋಸಿಸ್, ಟಿಸಿಎಸ್​ ಮತ್ತು ಬಜಾಜ್ ಫೈನಾನ್ಸ್ ಕಂಡುಬರುತ್ತವೆ.

ಷೇರು ಮಾರುಕಟ್ಟೆ ಹೀಗೆ ದಾಖಲೆ ಮಟ್ಟಕ್ಕೆ ಏರುತ್ತಾ ಸಾಗಲು ಕಾರಣ ಏನು? ಕೊವಿಡ್​ 19 ಕಾರಣಕ್ಕೆ ಕುಸಿದು ಹೋಗಿದ್ದ ಗ್ರಾಹಕರ ಬೇಡಿಕೆಯಲ್ಲಿ ಮತ್ತೆ ಚೇತರಿಕೆ ಕಂಡಿದೆ. ದೇಶದ ನಾನಾ ಭಾಗಗಳಲ್ಲಿನ ಕೊವಿಡ್​ ನಿರ್ಬಂಧವನ್ನು ಹಂತಹಂತವಾಗಿ ಸಡಿಲ ಮಾಡಲಾಗುತ್ತಿದೆ. ಇನ್ನು ಸಾಲದ ಮೇಲಿನ ಬಡ್ಡಿ ದರವು ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿದೆ. ಉತ್ಪಾದನಾ ವಲಯಕ್ಕೆ ಚೈತನ್ಯ ಸಿಕ್ಕಿದ್ದು, ಆ ಮೂಲಕ ಭಾರತೀಯ ಷೇರು ಮಾರುಕಟ್ಟೆ ಏರಿಕೆಗೆ ಇನ್ನಷ್ಟು ಬಲ ಬಂದಿದೆ. ಆದರೆ ಈ ಪರಿಯ ವೇಗದಲ್ಲಿ ಏರಿಕೆ ಕಾಣುತ್ತಿರುವುದರಿಂದ ಆರ್ಥಿಕತೆಗೆ ಅಪಾಯದಂತೆ ಕಂಡುಬಂದಿದೆ.

ಬ್ಲೂಮ್​ಬರ್ಗ್​ ಸಂಶೋಧನೆಯ ಪ್ರಕಾರ, 2020ರ ಮಾರ್ಚ್​ನಲ್ಲಿ ಎನ್​ಎಸ್​ಇ ತಲುಪಿದ್ದ ತಳಮಟ್ಟದಿಂದ ಶೇ 130ರಷ್ಟು ಏರಿಕೆಯನ್ನು ಕಂಡಿದೆ. ಇದಕ್ಕೆ ಕೇಂದ್ರ ಬ್ಯಾಂಕ್​ನ ನಗದು ಪೂರೈಕೆಯ ಬೆಂಬಲವೂ ಸಿಕ್ಕಿದೆ. ಷೇರು ಮಾರುಕಟ್ಟೆಯ ಈ ಏರಿಕೆಯು ಅಕ್ಟೋಬರ್​ನಿಂದ ಡಿಸೆಂಬರ್​ ತ್ರೈಮಾಸಿಕದಿಂದ ಈಚೆಗೆ ಪ್ರತಿ ತ್ರೈಮಾಸಿಕದಲ್ಲೂ ಜಿಡಿಪಿ ಬೆಳವಣಿಗೆಗೆ ಹತ್ತಿರ ಹತ್ತಿರ ಶೇ 1ರಷ್ಟು ಕೊಡುಗೆ ನೀಡುತ್ತಿದೆ. “ಭಾರತದ ಈಕ್ವಿಟಿ ಮಾರ್ಕೆಟ್ ರಚನಾತ್ಮಕವಾಗಿ ಸಕಾರಾತ್ಮಕವಾಗಿದೆ. ಗ್ರಾಹಕ ಬೇಡಿಕೆಯಲ್ಲಿ ಚೇತರಿಕೆ, ನಿಯಂತ್ರಕ ಸಂಶ್ಥೆಗಳಲ್ಲಿನ ಬದಲಾವಣೆ, ಹಣಕಾಸು ಮತ್ತು ಆರ್ಥಿ ನೀತಿಯ ಹಾದಿ ಇವೆಲ್ಲವೂ ಈ ಬೆಳವಣಿಗೆಗೆ ಕಾರಣವಾಗಿವೆ,” ಎನ್ನುತ್ತಾರೆ ವಿಶ್ಲೇಷಕರು.

ಆದರೆ, ಈ ಪರಿ ವೇಗದಲ್ಲಿ ಗಳಿಕೆ ಕಾಣುತ್ತಿರುವುದರಿಂದ ಮಾರುಕಟ್ಟೆ ಹಿನ್ನೆಲೆಗೆ ಆರ್ಥಿಕತೆಯ ದೌರ್ಬಲ್ಯ ಕಾರಣ ಆಗಲಿದೆ. ನಿಫ್ಟಿಯು ಈಗ ಅಂದಾಜು 12 ತಿಂಗಳ ಗಳಿಕೆಯ 22.2 ಪಟ್ಟು ವಹಿವಾಟು ನಡೆಸುತ್ತಿದೆ, 5 ವರ್ಷಗಳ ಸರಾಸರಿಯ 18.5ರ ಮೇಲಿದೆ. ಬೆಳವಣಿಗೆ ಮಾರುಕಟ್ಟೆಗಳ ಸೂಚ್ಯಂಕವು 12.7ರ ಗುಣಕದಲ್ಲಿ ವಹಿವಾಟಾಗುತ್ತಿದೆ. ಎತ್ತರಕ್ಕೆ ಷೇರುಗಳು ಏರಿದಂತೆ ಅವುಗಳು ಕುಸಿತ ಕಂಡಾಗ ಆರ್ಥಿಕತೆಗೆ ಅಪಾಯ ಎನ್ನುತ್ತಾರೆ ವಿಷಯ ತಜ್ಞರು.

ಇದನ್ನೂ ಓದಿ: Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್​ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?

(This Is The First Time Sensex Crossed 59000 Points Mark Here Are The Factors Influence Rally)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ