ಮೈನಸ್ 1.36 ಪ್ರತಿಶತದಲ್ಲಿ ಜುಲೈ ತಿಂಗಳ ಸಗಟು ಹಣದುಬ್ಬರ; ಸತತ 4ನೇ ತಿಂಗಳು ಮೈನಸ್​ನಲ್ಲಿ ಡಬ್ಲ್ಯುಪಿಐ ಇನ್​ಫ್ಲೇಶನ್

WPI Inflation: ಭಾರತದ ಸಗಟು ಮಾರಾಟ ದರ ಆಧಾರಿತ ಹಣದುಬ್ಬರ ಜುಲೈ ತಿಂಗಳಲ್ಲಿ ಮೈನಸ್ ಶೇ. 1.46ಕ್ಕೆ ಇಳಿದಿದೆ. ಜೂನ್ ತಿಂಗಳಲ್ಲಿ ಮೈನಸ್ ಶೇ. 4.12ರಷ್ಟಿತ್ತು. ಏಪ್ರಿಲ್ ತಿಂಗಳಿಂದಲೂ ಡಬ್ಲ್ಯುಪಿಐ ಹಣದುಬ್ಬರ ಸೊನ್ನೆಗಿಂತ ಕಡಿಮೆ ಇದೆ. ಜುಲೈನಲ್ಲಿ ಇದು ಇಳಿಕೆಯಾಗಲು ಕಾರಣವಾಗಿದ್ದು ಖನಿಜ ತೈಲ, ರಾಸಾಯನಿಕ ಮೊದಲಾದ ಉತ್ಪನ್ನಗಳ ಹೋಲ್​ಸೇಲ್ ಬೆಲೆ ಕಡಿಮೆ ಆಗಿರುವುದು.

ಮೈನಸ್ 1.36 ಪ್ರತಿಶತದಲ್ಲಿ ಜುಲೈ ತಿಂಗಳ ಸಗಟು ಹಣದುಬ್ಬರ; ಸತತ 4ನೇ ತಿಂಗಳು ಮೈನಸ್​ನಲ್ಲಿ ಡಬ್ಲ್ಯುಪಿಐ ಇನ್​ಫ್ಲೇಶನ್
ಹಣದುಬ್ಬರ
Follow us
|

Updated on: Aug 14, 2023 | 3:06 PM

ನವದೆಹಲಿ, ಆಗಸ್ಟ್ 14: ಸಗಟು ಮಾರಾಟ ಆಧಾರಿತವಾದ ಹಣದುಬ್ಬರ (WPI Inflation) ಸತತ ನಾಲ್ಕನೇ ತಿಂಗಳೂ ಶೂನ್ಯಕ್ಕಿಂತ ಕೆಳಗೆ ಇಳಿದಿದೆ. ಜುಲೈ ತಿಂಗಳ ಡಬ್ಲ್ಯುಪಿಐ ಹಣದುಬ್ಬರ ಮೈನಸ್ ಶೇ 1.46ರಷ್ಟು ಇದೆ. ಅಂದರೆ ಹೋಲ್​ಸೇಲ್ ದರಗಳು ಸತತ ಕುಸಿತ ಕಂಡಿವೆ. ಏಪ್ರಿಲ್ ತಿಂಗಳಿಂದ ಡಬ್ಲ್ಯುಪಿಐ ಹಣದುಬ್ಬರವು ನೆಗಟಿವ್ ಶ್ರೇಣಿಯಲ್ಲಿಯೇ ಇರುವುದು ಗಮನಾರ್ಹ. ಜೂನ್ ತಿಂಗಳಲ್ಲಿ ಈ ಹಣದುಬ್ಬರ ಮೈನಸ್ ಶೇ. 4.12ರಷ್ಟಿತ್ತು. ಆಹಾರವಸ್ತುಗಳು ದುಬಾರಿಯಾದರೂ ಇಂಧನದ ಬೆಲೆಗಳು ಕಡಿಮೆಗೊಂಡ ಕಾರಣ ಜುಲೈ ತಿಂಗಳಲ್ಲಿ ಸಗಟು ದರ ಸೂಚ್ಯಂಕ ಇಳಿಕೆಯಾಗಿರುವುದು ಕಂಡುಬಂದಿದೆ. ಅಲ್ಲದೇ ಖನಿಜ ತೈಲಗಳು, ಮೂಲ ಲೋಹಗಳು, ರಾಸಾಯನಿಕ ಪದಾರ್ಥಗಳು ಮತ್ತು ಜವಳಿ ವಸ್ತುಗಳ ಬೆಲೆ ಇಳಿಕೆಯಾಗಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರು ಮಾಹಿತಿ ನೀಡಿದ್ದಾರೆ.

ಇಂಧನ ಮತ್ತು ವಿದ್ಯುತ್ ವರ್ಗದ ಹಣದುಬ್ಬರ ಮೈನಸ್ ಶೇ. 12.79ಕ್ಕೆ ಇಳಿದಿದೆ. ತಯಾರಿಕಾ ಕ್ಷೇತ್ರದಲ್ಲಿ ಹಣದುಬ್ಬರ ಮೈನಸ್ ಶೇ. 2.51ಕ್ಕೆ ಹೋಗಿದೆ.

ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಏನನ್ನು ಸೂಚಿಸುತ್ತದೆ?

ನಿರ್ದಿಷ್ಟ ಸರಕು ಮತ್ತು ಸೇವೆಗಳ ಹೋಲ್​ಸೇಲ್ ಬೆಲೆಯಲ್ಲಿನ ವ್ಯತ್ಯಾಸವನ್ನು ಡಬ್ಲ್ಯುಪಿಐ ಹಣದುಬ್ಬರದ ಮೂಲಕ ಗುರುತಿಸಲಾಗುತ್ತದೆ. ಹೋಲ್​ಸೇಲ್ ಬೆಲೆ ಎಂದರೆ ಉತ್ಪಾದಕರಿಂದ ಸಗಟು ಮಾರಾಟಗಾರರಿಗೆ ವಹಿವಾಟಾಗುವ ದರ. ರೀಟೇಲ್ ದರಗಳಲ್ಲಿನ ವ್ಯತ್ಯಾಸವು ರೀಟೇಲ್ ಇನ್​ಫ್ಲೇಶನ್ ಆಗಿರುತ್ತದೆ. ಎರಡೂ ಕೂಡ ಆರ್ಥಿಕತೆಯ ಒಟ್ಟಾರೆ ಆರೋಗ್ಯವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಮೈಕ್ರೋನ್, ವೇದಾಂತ, ಫಾಕ್ಸ್​ಕಾನ್ ಎಲ್ಲವನ್ನೂ ರೇಸ್​ನಲ್ಲಿ ಹಿಂದಿಕ್ಕಿದ ಸಹಸ್ರ; ಸೆಪ್ಟಂಬರ್​ನಲ್ಲಿ ಮೊದಲ ಮೇಡ್ ಇನ್ ಇಂಡಿಯಾ ಮೆಮೊರಿ ಚಿಪ್

ಸಗಟು ಮಾರಾಟ ದರದ ಹಣದುಬ್ಬರವು ಏರಿಕೆಯಾದರೆ ಆರ್ಥಿಕತೆ ಬೆಳವಣಿಗೆ ಕಾಣುವ ಹಾದಿಯಲ್ಲಿದೆ ಎಂದು ಭಾವಿಸಲಾಗುತ್ತದೆ. ಅದಕ್ಕೆ ಪೂರಕವಾದ ಆರ್ಥಿಕ ನೀತಿಯನ್ನು ಸರ್ಕಾರ ಅನುಸರಿಸಬಹುದು. ಅದೇ ಈ ಹಣದುಬ್ಬರ ಕಡಿಮೆ ಆದರೆ ಅದು ನಿಧಾನಗತಿಯ ಆರ್ಥಿಕ ಬೆಳವಣಿಗೆಗೆ ಸೂಚಕವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ