AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈನಸ್ 1.36 ಪ್ರತಿಶತದಲ್ಲಿ ಜುಲೈ ತಿಂಗಳ ಸಗಟು ಹಣದುಬ್ಬರ; ಸತತ 4ನೇ ತಿಂಗಳು ಮೈನಸ್​ನಲ್ಲಿ ಡಬ್ಲ್ಯುಪಿಐ ಇನ್​ಫ್ಲೇಶನ್

WPI Inflation: ಭಾರತದ ಸಗಟು ಮಾರಾಟ ದರ ಆಧಾರಿತ ಹಣದುಬ್ಬರ ಜುಲೈ ತಿಂಗಳಲ್ಲಿ ಮೈನಸ್ ಶೇ. 1.46ಕ್ಕೆ ಇಳಿದಿದೆ. ಜೂನ್ ತಿಂಗಳಲ್ಲಿ ಮೈನಸ್ ಶೇ. 4.12ರಷ್ಟಿತ್ತು. ಏಪ್ರಿಲ್ ತಿಂಗಳಿಂದಲೂ ಡಬ್ಲ್ಯುಪಿಐ ಹಣದುಬ್ಬರ ಸೊನ್ನೆಗಿಂತ ಕಡಿಮೆ ಇದೆ. ಜುಲೈನಲ್ಲಿ ಇದು ಇಳಿಕೆಯಾಗಲು ಕಾರಣವಾಗಿದ್ದು ಖನಿಜ ತೈಲ, ರಾಸಾಯನಿಕ ಮೊದಲಾದ ಉತ್ಪನ್ನಗಳ ಹೋಲ್​ಸೇಲ್ ಬೆಲೆ ಕಡಿಮೆ ಆಗಿರುವುದು.

ಮೈನಸ್ 1.36 ಪ್ರತಿಶತದಲ್ಲಿ ಜುಲೈ ತಿಂಗಳ ಸಗಟು ಹಣದುಬ್ಬರ; ಸತತ 4ನೇ ತಿಂಗಳು ಮೈನಸ್​ನಲ್ಲಿ ಡಬ್ಲ್ಯುಪಿಐ ಇನ್​ಫ್ಲೇಶನ್
ಹಣದುಬ್ಬರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 14, 2023 | 3:06 PM

ನವದೆಹಲಿ, ಆಗಸ್ಟ್ 14: ಸಗಟು ಮಾರಾಟ ಆಧಾರಿತವಾದ ಹಣದುಬ್ಬರ (WPI Inflation) ಸತತ ನಾಲ್ಕನೇ ತಿಂಗಳೂ ಶೂನ್ಯಕ್ಕಿಂತ ಕೆಳಗೆ ಇಳಿದಿದೆ. ಜುಲೈ ತಿಂಗಳ ಡಬ್ಲ್ಯುಪಿಐ ಹಣದುಬ್ಬರ ಮೈನಸ್ ಶೇ 1.46ರಷ್ಟು ಇದೆ. ಅಂದರೆ ಹೋಲ್​ಸೇಲ್ ದರಗಳು ಸತತ ಕುಸಿತ ಕಂಡಿವೆ. ಏಪ್ರಿಲ್ ತಿಂಗಳಿಂದ ಡಬ್ಲ್ಯುಪಿಐ ಹಣದುಬ್ಬರವು ನೆಗಟಿವ್ ಶ್ರೇಣಿಯಲ್ಲಿಯೇ ಇರುವುದು ಗಮನಾರ್ಹ. ಜೂನ್ ತಿಂಗಳಲ್ಲಿ ಈ ಹಣದುಬ್ಬರ ಮೈನಸ್ ಶೇ. 4.12ರಷ್ಟಿತ್ತು. ಆಹಾರವಸ್ತುಗಳು ದುಬಾರಿಯಾದರೂ ಇಂಧನದ ಬೆಲೆಗಳು ಕಡಿಮೆಗೊಂಡ ಕಾರಣ ಜುಲೈ ತಿಂಗಳಲ್ಲಿ ಸಗಟು ದರ ಸೂಚ್ಯಂಕ ಇಳಿಕೆಯಾಗಿರುವುದು ಕಂಡುಬಂದಿದೆ. ಅಲ್ಲದೇ ಖನಿಜ ತೈಲಗಳು, ಮೂಲ ಲೋಹಗಳು, ರಾಸಾಯನಿಕ ಪದಾರ್ಥಗಳು ಮತ್ತು ಜವಳಿ ವಸ್ತುಗಳ ಬೆಲೆ ಇಳಿಕೆಯಾಗಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರು ಮಾಹಿತಿ ನೀಡಿದ್ದಾರೆ.

ಇಂಧನ ಮತ್ತು ವಿದ್ಯುತ್ ವರ್ಗದ ಹಣದುಬ್ಬರ ಮೈನಸ್ ಶೇ. 12.79ಕ್ಕೆ ಇಳಿದಿದೆ. ತಯಾರಿಕಾ ಕ್ಷೇತ್ರದಲ್ಲಿ ಹಣದುಬ್ಬರ ಮೈನಸ್ ಶೇ. 2.51ಕ್ಕೆ ಹೋಗಿದೆ.

ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಏನನ್ನು ಸೂಚಿಸುತ್ತದೆ?

ನಿರ್ದಿಷ್ಟ ಸರಕು ಮತ್ತು ಸೇವೆಗಳ ಹೋಲ್​ಸೇಲ್ ಬೆಲೆಯಲ್ಲಿನ ವ್ಯತ್ಯಾಸವನ್ನು ಡಬ್ಲ್ಯುಪಿಐ ಹಣದುಬ್ಬರದ ಮೂಲಕ ಗುರುತಿಸಲಾಗುತ್ತದೆ. ಹೋಲ್​ಸೇಲ್ ಬೆಲೆ ಎಂದರೆ ಉತ್ಪಾದಕರಿಂದ ಸಗಟು ಮಾರಾಟಗಾರರಿಗೆ ವಹಿವಾಟಾಗುವ ದರ. ರೀಟೇಲ್ ದರಗಳಲ್ಲಿನ ವ್ಯತ್ಯಾಸವು ರೀಟೇಲ್ ಇನ್​ಫ್ಲೇಶನ್ ಆಗಿರುತ್ತದೆ. ಎರಡೂ ಕೂಡ ಆರ್ಥಿಕತೆಯ ಒಟ್ಟಾರೆ ಆರೋಗ್ಯವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಮೈಕ್ರೋನ್, ವೇದಾಂತ, ಫಾಕ್ಸ್​ಕಾನ್ ಎಲ್ಲವನ್ನೂ ರೇಸ್​ನಲ್ಲಿ ಹಿಂದಿಕ್ಕಿದ ಸಹಸ್ರ; ಸೆಪ್ಟಂಬರ್​ನಲ್ಲಿ ಮೊದಲ ಮೇಡ್ ಇನ್ ಇಂಡಿಯಾ ಮೆಮೊರಿ ಚಿಪ್

ಸಗಟು ಮಾರಾಟ ದರದ ಹಣದುಬ್ಬರವು ಏರಿಕೆಯಾದರೆ ಆರ್ಥಿಕತೆ ಬೆಳವಣಿಗೆ ಕಾಣುವ ಹಾದಿಯಲ್ಲಿದೆ ಎಂದು ಭಾವಿಸಲಾಗುತ್ತದೆ. ಅದಕ್ಕೆ ಪೂರಕವಾದ ಆರ್ಥಿಕ ನೀತಿಯನ್ನು ಸರ್ಕಾರ ಅನುಸರಿಸಬಹುದು. ಅದೇ ಈ ಹಣದುಬ್ಬರ ಕಡಿಮೆ ಆದರೆ ಅದು ನಿಧಾನಗತಿಯ ಆರ್ಥಿಕ ಬೆಳವಣಿಗೆಗೆ ಸೂಚಕವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್