AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facebook ಬಳಸುವ ಮುನ್ನ ಎಚ್ಚರ; ಫೇಸ್​ಬುಕ್​ ಗೆಳೆಯನನ್ನು ನಂಬಿ 12 ಲಕ್ಷ ರೂ. ಕಳೆದುಕೊಂಡ ಸೈಬರ್ ತಜ್ಞ

ಮುಂಬೈನ ಸೈಬರ್ ಎಕ್ಸ್​ಪರ್ಟ್​ ಒಬ್ಬರು ತಮ್ಮ ಫೇಸ್​ಬುಕ್ ಫ್ರೆಂಡ್​ನನ್ನು ನಂಬಿ ಬರೋಬ್ಬರಿ 12 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹೀಗಾಗಿ, ಫೇಸ್​ಬುಕ್​ ಸ್ನೇಹಿತರ ಬಳಿ ಹಣದ ವ್ಯವಹಾರ ಮಾಡುವ ಮುನ್ನ ಎಚ್ಚರ!

Facebook ಬಳಸುವ ಮುನ್ನ ಎಚ್ಚರ; ಫೇಸ್​ಬುಕ್​ ಗೆಳೆಯನನ್ನು ನಂಬಿ 12 ಲಕ್ಷ ರೂ. ಕಳೆದುಕೊಂಡ ಸೈಬರ್ ತಜ್ಞ
ಸೈಬರ್ ಕ್ರೈಂ
TV9 Web
| Edited By: |

Updated on: Jul 28, 2021 | 7:26 PM

Share

ಈಗಿನ ಟೆಕ್ನಾಲಜಿ ಯುಗದಲ್ಲಿ ಫೇಸ್​ಬುಕ್(Facebook), ಟ್ವಿಟ್ಟರ್ (Twitter), ವಾಟ್ಸಾಪ್(Whatsapp), ಇನ್​ಸ್ಟಾಗ್ರಾಂ (Instagram) ಬಳಸದಿರುವವರೇ ಕಡಿಮೆ ಎನ್ನಬಹುದು. ಸೋಷಿಯಲ್ ಮೀಡಿಯಾಗಳ (Social Media) ಮಾಯೆಯೇ ಅಂಥದು. ಎಲ್ಲೋ ಇರುವವರು ಇನ್ನೆಲ್ಲೋ ಇರುವವರ ಸಂಪೂರ್ಣ ಮಾಹಿತಿಯನ್ನು ಈ ಸಾಮಾಜಿಕ ಜಾಲತಾಣಗಳ ಆ್ಯಪ್​ಗಳ ಮೂಲಕ ಪಡೆದುಕೊಳ್ಳಬೇಕು. ಕೊಂಚ ಖತರ್ನಾಕ್​ಗಳಾಗಿದ್ದರೆ ಬೇರೊಬ್ಬರ ವೈಯಕ್ತಿಕ ಮಾಹಿತಿ, ಬ್ಯಾಂಕ್ ಮಾಹಿತಿಯನ್ನು ಕೂಡ ಸೋಷಿಯಲ್ ಮೀಡಿಯಾ ಮೂಲಕ ಸುಲಭವಾಗಿ ಹ್ಯಾಕ್ ಮಾಡಬಹುದು. ಹೀಗಾಗಿ, ಫೇಸ್​ಬುಕ್, ಇನ್​ಸ್ಟಾಗ್ರಾಂ ಮತ್ತಿತರ ಸೋಷಿಯಲ್ ಮೀಡಿಯಾ ಆ್ಯಪ್​ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಹಾಕುವ ಮುನ್ನ ಎಚ್ಚರ. ಏಕೆಂದರೆ ಖುದ್ದು ಸೈಬರ್ ಎಕ್ಸ್​ಪರ್ಟ್​ (Cyber Expert) ಒಬ್ಬರು ತಮ್ಮ ಫೇಸ್​ಬುಕ್ ಫ್ರೆಂಡ್​ನಿಂದಾಗಿ ಬರೋಬ್ಬರಿ 12 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಫೇಸ್​ಬುಕ್​ನಲ್ಲಿ ಇತ್ತೀಚೆಗೆ ನಕಲಿ ಅಕೌಂಟ್​ಗಳ ಹಾವಳಿ ಹೆಚ್ಚಾಗಿದೆ. ಯಾರದ್ದೋ ಒಬ್ಬರ ಫೋಟೋ, ಮಾಹಿತಿಗಳನ್ನು ಹಾಕಿಕೊಂಡು ನಕಲಿ ಫೇಸ್​ಬುಕ್ ಖಾತೆ ಕ್ರಿಯೇಟ್ ಮಾಡಿ, ಅಸಲಿ ವ್ಯಕ್ತಿಯ ಸ್ನೇಹಿತರ ಬಳಿ ಹಣ ಕೇಳುವುದು ಒಂದು ದಂಧೆಯಾಗಿಬಿಟ್ಟಿದೆ. ಹೇಗೂ ನನಗೆ ಪರಿಚಯದವರೇ ಅಲ್ಲವಾ ಎಂದು ಯಾಮಾರಿ ಹಣ ಕೊಟ್ಟರೆ ಅದರ ಆಸೆ ಬಿಟ್ಟಂತೆಯೇ. ಯಾಕೆಂದರೆ ಆ ಫೇಸ್​ಬುಕ್ ಅಕೌಂಟ್​ ಯಾರದ್ದು ಎಂಬುದು ಕೂಡ ನಿಮಗೆ ಗೊತ್ತಾಗುವುದಿಲ್ಲ. ಕೆಲವು ದಿನಗಳ ಬಳಿಕ ಆ ಅಕೌಂಟ್ ಡಿಲೀಟ್ ಆಗಿಬಿಡುತ್ತದೆ.

ಮಹಾರಾಷ್ಟ್ರದ ಮುಂಬೈನ 35 ವರ್ಷದ ಸೈಬರ್ ತಜ್ಞರೊಬ್ಬರು ತಮ್ಮ ಫೇಸ್​ಬುಕ್ ಸ್ನೇಹಿತನನ್ನು ನಂಬಿ 12 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸೈಬರ್ ಸೆಕ್ಯುರಿಟಿ ಬಗ್ಗೆ ಕೆಲಸ ಮಾಡುತ್ತಿರುವ ಈ ವ್ಯಕ್ತಿ 2018ರಿಂದಲೂ ಫೇಸ್​ಬುಕ್​ನಲ್ಲಿ ಸ್ನೇಹಿತರೊಬ್ಬರೊಂದಿಗೆ ಚಾಟ್ ಮಾಡುತ್ತಿದ್ದರು. ತಾನು ದುಬೈನ ಬ್ಯಾಂಕ್​ನಲ್ಲಿ ಮ್ಯಾನೇಜರ್ ಆಗಿರುವುದಾಗಿ ಆ ವ್ಯಕ್ತಿ ಹೇಳಿಕೊಂಡಿದ್ದ. ಹೀಗಾಗಿ, ಮುಂಬೈನ ವ್ಯಕ್ತಿ ಕೂಡ ತನಗೆ ದುಬೈನಲ್ಲಿ ಒಂದು ಒಳ್ಳೆಯ ಕೆಲಸವಿದ್ದರೆ ಹೇಳುವಂತೆ ಮನವಿ ಮಾಡಿದ್ದರು.

ಅದಕ್ಕೆ ಒಪ್ಪಿದ್ದ ಆತ ಬಹಳ ಬೇಗ ಜಾಸ್ತಿ ಹಣ ಸಂಪಾದಿಸಲು ನನ್ನ ಬಳಿ ಒಂದೆರಡು ಪ್ಲಾನ್​ಗಳಿವೆ ಎಂದು ಹೇಳಿದ್ದ. ಸಾಫ್ಟ್​ವೇರ್ ಕಂಪನಿಯಲ್ಲಿದ್ದರೂ ಇನ್ನೂ ಹೆಚ್ಚು ಹಣ ಸಂಪಾದಿಸಬೇಕೆಂಬ ಆಸೆಯಿಂದ ಮುಂಬೈನ ಸೈಬರ್ ಎಕ್ಸ್​ಪರ್ಟ್​ ತನ್ನ ಫೇಸ್​ಬುಕ್ ಫ್ರೆಂಡ್​ನ ಪ್ಲಾನ್ ಬಗ್ಗೆ ಕೇಳಿದ್ದರು. ಅದಕ್ಕೆ ಹೊಸ ಕತೆ ಕಟ್ಟಿದ್ದ ಆತ, ‘ದುಬೈನಲ್ಲಿರುವ ನಮ್ಮ ಬ್ಯಾಂಕ್​ನ ಗ್ರಾಹಕರೊಬ್ಬರ ಬಳಿ ಸುಮಾರು 200 ಕೋಟಿ ರೂ.ಗೂ ಹೆಚ್ಚು ಆಸ್ತಿಯಿದೆ. ಅವರಿಗೆ ಯಾರೂ ಮಕ್ಕಳಿಲ್ಲ. ಅವರು ಇತ್ತೀಚೆಗಷ್ಟೇ ಸಾವನ್ನಪ್ಪಿದರು. ಹೀಗಾಗಿ, ಆ ಹಣಕ್ಕೆ ಯಾರೂ ವಾರಸ್ದಾರರಿಲ್ಲ. ನಮ್ಮ ಬ್ಯಾಂಕ್​ನ ಖಾತೆಯಲ್ಲಿರುವ ಆ ಹಣವನ್ನು ನನ್ನ ಖಾತೆಗೆ ಹಾಕಿಕೊಂಡರೆ ಅಪರಾಧವಾಗುತ್ತದೆ. ಅದನ್ನು ಕಾನೂನುಬದ್ಧವಾಗಿ ನಿನ್ನ ಖಾತೆಗೆ ವರ್ಗಾಯಿಸುತ್ತೇನೆ. ನಂತರ ಆ ಹಣವನ್ನು ನಾವಿಬ್ಬರೂ ಹಂಚಿಕೊಳ್ಳೋಣ’ ಎಂಬ ಐಡಿಯಾ ಕೊಟ್ಟಿದ್ದ.

ತನಗೆ ಅಯಾಚಿತವಾಗಿ 100 ಕೋಟಿ ರೂ. ಸಿಗುತ್ತದೆ ಎಂಬುದನ್ನು ಕಲ್ಪನೆ ಮಾಡಿಕೊಂಡೇ ಆಕಾಶದಲ್ಲಿ ತೇಲಾಡುತ್ತಿದ್ದ ಸೈಬರ್ ಎಕ್ಸ್​ಪರ್ಟ್​ ಈ ಪ್ಲಾನ್​ಗೆ ಓಕೆ ಎಂದಿದ್ದರು. ಆ ಹಣವನ್ನು ತನಗೆ ವರ್ಗಾಯಿಸಲು ಮುಂಗಡವಾಗಿ ಸೈಬರ್ ಎಕ್ಸ್​ಪರ್ಟ್​ ತನ್ನ ಫೇಸ್​ಬುಕ್ ಗೆಳೆಯನಿಗೆ 2 ಲಕ್ಷ ರೂ. ಹಣವನ್ನು ನೀಡಿದ್ದ. ನಂತರ ದುಬೈನಲ್ಲಿದ್ದ ಸ್ನೇಹಿತ ಮೇಲ್ ಮೂಲಕ ಹಲವು ದಾಖಲೆಗಳನ್ನು ಕಳುಹಿಸಿ, ಸಹಿ ಮಾಡಿ ವಾಪಾಸ್ ಕಳುಹಿಸಲು ಹೇಳಿದ್ದ. ಆದರೂ ಅನುಮಾನಗೊಂಡ ಸೈಬರ್ ಎಕ್ಸ್​ಪರ್ಟ್ ಆ ದಾಖಲೆಗಳನ್ನು ತನಗೆ ಪರಿಚಯವಿರುವ ವಕೀಲರೊಬ್ಬರಿಗೆ ತೋರಿಸಿದ್ದರು. ಆ ವಕೀಲ ಕೂಡ ಆ ದಾಖಲೆಗಳೆಲ್ಲವೂ ಒರಿಜಿನಲ್ ಎಂದು ಹೇಳಿದ್ದರಿಂದ ಆತನಿಗೆ ಯಾವುದೇ ಅನುಮಾನವಿರಲಿಲ್ಲ. ಆ ಪೇಪರ್​ಗಳನ್ನು ರೆಡಿ ಮಾಡಿಸಿ, 200 ಕೋಟಿ ರೂ.ಗಳನ್ನು ತನ್ನ ಹೆಸರಿಗೆ ವರ್ಗಾಯಿಸಲು ತಗುಲುವ ವೆಚ್ಚಕ್ಕಾಗಿ ಆತ 2019ರ ವೇಳೆಗೆ ದುಬೈನ ಗೆಳೆಯನಿಗೆ 12 ಲಕ್ಷ ರೂ. ವರ್ಗಾಯಿಸಿದ್ದರು.

ಅದಾದ ಬಳಿಕ ಹಲವು ದಿನಗಳಾದರೂ ದುಬೈನ ಫೇಸ್​ಬುಕ್ ಗೆಳೆಯನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮುಂಬೈನ ವ್ಯಕ್ತಿ ಚಾರ್ಟರ್ಟ್​ ಅಕೌಂಟೆಂಟ್ ಬಳಿ ನಡೆದ ವಿಷಯವನ್ನೆಲ್ಲ ಹೇಳಿದ್ದರು. ಆದರೆ, ಆ ದಾಖಲೆಗಳಲ್ಲಿ ಯಾವುದೇ ತಪ್ಪುಗಳಿಲ್ಲ, ಎಲ್ಲವೂ ಕಾನೂನುಬದ್ಧವಾಗಿದೆ ಎಂದು ಸಿಎ ಹೇಳಿದ್ದರಿಂದ ಮುಂಬೈನ ವ್ಯಕ್ತಿ ಕೊಂಚ ನಿರಾಳವಾಗಿದ್ದರು. ಸೈಬರ್ ಎಕ್ಸ್​ಪರ್ಟ್​ ಆಗಿದ್ದ ಆತ ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಆ ಫೇಸ್​ಬುಕ್ ಫ್ರೆಂಡ್ ಬಗ್ಗೆ ಮಾಹಿತಿ ಹೊರಗೆ ತೆಗೆಯಲು ಪ್ರಯತ್ನಿಸಿದ್ದರು. ಆ ಫೇಸ್​ಬುಕ್ ಖಾತೆಯನ್ನು ದುಬೈ ಮತ್ತು ಟರ್ಕಿಯಿಂದ ಆಪರೇಟ್ ಮಾಡಲಾಗುತ್ತಿದೆ ಎಂಬುದು ಆತನಿಗೆ ಗೊತ್ತಾಗಿತ್ತು. ಇಲ್ಲೇನೋ ಗೋಲ್​ಮಾಲ್ ನಡೆಯುತ್ತಿದೆ ಎಂದು ಅನುಮಾನಗೊಂಡ ಆತ ಬಿಕೆಸಿ ಸೈಬರ್ ಪೊಲೀಸ್​ಗೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Crime News: ನಾಲ್ಕು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ; ಬೆಂಗಳೂರಿನಲ್ಲಿ ಘಟನೆ

Crime News: ಬಾಯ್​ಫ್ರೆಂಡ್ ಜೊತೆ ಸೇರಿ ಗಂಡನನ್ನೇ ಕೊಂದು, ಸುಟ್ಟುಹಾಕಿದ ಹೆಂಡತಿ; 10 ವರ್ಷಗಳ ಬಳಿಕ ಸೆರೆ ಸಿಕ್ಕ ಹಂತಕಿ

(Crime News: Mumbai Cyber expert falls for Facebook friends plot loses Rs 12 lakh in Cyber Fraud)

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ