AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KCET Result 2025 Declared LIVE: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ವೆಬ್​ಸೈಟ್​​ನಲ್ಲೂ ಲಭ್ಯ

ಗಂಗಾಧರ​ ಬ. ಸಾಬೋಜಿ
| Updated By: ವಿವೇಕ ಬಿರಾದಾರ

Updated on:May 24, 2025 | 5:27 PM

ಕರ್ನಾಟಕ ಸಿಇಟಿ ಫಲಿತಾಂಶ 2025 ಲೈವ್​: ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಇಂದು ಬೆಳಿಗ್ಗೆ 11:30ಕ್ಕೆ ಯುಜಿಸಿಇಟಿ-2025 ಫಲಿತಾಂಶವನ್ನು ಪ್ರಕಟಿಸಿದರು. ಏಪ್ರಿಲ್ 16 ಮತ್ತು 17 ರಂದು ಪರೀಕ್ಷೆ ನಡೆದಿತ್ತು. cetonline.karnataka.gov.in ಅಥವಾ kea.kar.nic.in ನಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಫಲಿತಾಂಶವನ್ನು ನೋಡಬಹುದಾಗಿದೆ.

KCET Result 2025 Declared LIVE: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ವೆಬ್​ಸೈಟ್​​ನಲ್ಲೂ ಲಭ್ಯ
Kcet Result Today

KCET Result 2025 LIVE Updates:

ಬೆಂಗಳೂರು, ಮೇ 24: ಇಂದು ಬೆಳಗ್ಗೆ 11.30ಕ್ಕೆ ಯುಜಿಸಿಇಟಿ-2025 ಫಲಿತಾಂಶ ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್​ ಫಲಿತಾಂಶವನ್ನು ಪ್ರಕಟಿಸಿದರು. ಮಧ್ಯಾಹ್ನ 2 ಗಂಟೆಗೆ ವೆಬ್​ಸೈಟ್​ನಲ್ಲಿ ಸಿಇಟಿ (CET) ಫಲಿತಾಂಶ ಲಭ್ಯವಿರಲಿದೆ. ಏಪ್ರಿಲ್ 16, 17ರಂದು ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ ವಿಜ್ಞಾನ ವಿಭಾಗ, ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಸೇರಿದಂತೆ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಯುಜಿಸಿಇಟಿ-2025 ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಾಗಿ ಲೈವ್ ನೋಡಿ.

LIVE NEWS & UPDATES

The liveblog has ended.
  • 24 May 2025 01:59 PM (IST)

    KCET Result 2025 LIVE: ವೆಬ್​ಸೈಟ್​​ನಲ್ಲೂ ಫಲಿತಾಂಶ ಲಭ್ಯ

    ಯುಜಿಸಿಇಟಿ-2025 ಫಲಿತಾಂಶ ಸದ್ಯ ವೆಬ್​ಸೈಟ್​​ನಲ್ಲೂ ಲಭ್ಯವಿದೆ. ವಿದ್ಯಾರ್ಥಿಗಳು cetonline.karnataka.gov.in ಅಥವಾ kea.kar.nic.in ನಲ್ಲಿ ಫಲಿತಾಂಶವನ್ನು ಚೆಕ್​ ಮಾಡಬಹುದಾಗಿದೆ.

  • 24 May 2025 01:43 PM (IST)

    KCET Result 2025 LIVE: ಒಎಂಆರ್ ಶೀಟ್​ ವೀಕ್ಷಿಸಲು ಅವಕಾಶ

    ರಾಸಾಯನ ಶಾಸ್ತ್ರದಲ್ಲಿ ಎರಡು ಪ್ರಶ್ನೆಗೆ ಎರಡು ಸರಿ ಉತ್ತರ ಹಾಗೂ ಜೀವಶಾಸ್ತ್ರದ ಒಂದು ಪ್ರಶ್ನೆಗೆ ಎರಡು ಸಲ ಉತ್ತರ ಬರೆಯಲು ಅವಕಾಶ ನೀಡಲಾಗಿದೆ. ಮೊದಲ ಬಾರಿಗೆ ಪಬ್ಲಿಕ್ ಡೊಮೇನ್‌ನಲ್ಲಿ ಒಎಂಆರ್ ಶೀಟನ್ನು ವೀಕ್ಷಿಸಲು ಅವಕಾಶ ನೀಡಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.

  • 24 May 2025 01:22 PM (IST)

    KCET Result 2025 LIVE: ಸೀಟ್ ಬ್ಲಾಕಿಂಗ್​​ ಬಗ್ಗೆ ಮತ್ತೊಮ್ಮೆ ತನಿಖೆಗೆ ಸೂಚಿಸುತ್ತೇವೆ

    ಕಳೆದ ವರ್ಷ ಸೀಟ್ ಬ್ಲಾಕಿಂಗ್ ಪ್ರಕರಣ‌ ಬಗ್ಗೆ ತನಿಖೆಯಲ್ಲಿ ಗೊಂದಲ ಇದೆ. ಚಾರ್ಜ್ ಸೀಟ್​ನಲ್ಲಿ ಏನೆಲ್ಲ ಹಾಕಿದ್ದಾರೆ ಅಂತಾ ನೋಡಬೇಕಿದೆ. ಚಾರ್ಜ್ ಸೀಟ್​ನಲ್ಲಿ ಸರಿಯಾಗಿ ಇಲ್ಲದಿದ್ದರೆ ಮತ್ತೊಮ್ಮೆ ತನಿಖೆಗೆ ಸೂಚಿಸುತ್ತೇವೆ. ಸರಿಯಾಗಿ ಕಾಲೇಜುಗಳಿಗೆ ಹೋಗಿ ತನಿಖೆ ಮಾಡಿದ್ದಾರೋ ಇಲ್ವೋ ಅನ್ನೋ ಅನುಮಾನ ಇದೆ. ಪೊಲೀಸ್ ಕಮಿಷನರ್ ಜೊತೆಗೆ ಚರ್ಚೆ ಮಾಡುತ್ತೇವೆ ಎಂದು ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ.

  • 24 May 2025 01:18 PM (IST)

    KCET Result 2025 LIVE: ಸುಚಿವೃತ ಜೊತೆ ನಾನೇ ಮಾತಾಡಿದ್ದೇನೆ ಎಂದ ಸಚಿವ

    ಸಿಇಟಿಯಿಂದ ವಂಚಿತನಾದ ಸುಚಿವೃತ ಜೊತೆ ನಾನೇ ಮಾತಾಡಿದ್ದೇನೆ. ಬೀದರ್ ಮೂಲದ ವಿದ್ಯಾರ್ಥಿ ಸುಚಿವೃತ ಸಿಇಟಿ ಬರೆದಿಲ್ಲ. ಹೀಗಾಗಿ ಯಾವ ರೀತಿ ನ್ಯಾಯ ಒದಗಿಸಬೇಕೆಂದು ಚರ್ಚಿಸಿದ್ದೆವು. ನಮ್ಮ ಬಳಿ ಎರಡು ಆಯ್ಕೆ ಇತ್ತು, ಒಂದು ಪರೀಕ್ಷೆ ನಡೆಸುವುದು, ಮತ್ತೊಂದು 3 ಪರೀಕ್ಷೆಯ ಸರಾಸರಿ ಮೇಲೆ ಅಂಕ ನೀಡುವುದು. ಈ ವಿಚಾರವಾಗಿ ಸುಚಿವೃತ ಪೋಷಕರ ಬಳಿಯೂ ಕೇಳಿದ್ದೆವು. ಸರಾಸರಿ ಅಂಕ ನೀಡಿ ಅಂತಾ ಬರಹದ ಮೂಲಕ ತಿಳಿಸಿದ್ದಾರೆ ಎಂದು ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ.

  • 24 May 2025 01:09 PM (IST)

    KCET Result 2025 LIVE: ಜನಿವಾರ ಗಲಾಟೆಯಿಂದ ಹೊರಗುಳಿದಿದ್ದ ವಿದ್ಯಾರ್ಥಿಗೆ 2 ಲಕ್ಷದ 6 ಸಾವಿರದ ರ‍್ಯಾಂಕ್

    ಜನಿವಾರ ಗಲಾಟೆಯಿಂದ ಸಿಇಟಿಯಿಂದ ವಂಚಿತನಾದ ಬೀದರ್​ನ ಓಲ್ಡ್ ಸಿಟಿ ನಿವಾಸಿ ಸುಚಿವೃತಗೆ ಇಂಜಿನಿಯರಿಂಗ್​ ವಿಭಾಗದಲ್ಲಿ 2 ಲಕ್ಷದ 6 ಸಾವಿರದ ರ‍್ಯಾಂಕ್​ ಪಡೆದುಕೊಂಡಿದ್ದಾರೆ.

  • 24 May 2025 01:07 PM (IST)

    KCET Result 2025 LIVE: ಜನಿವಾರ ತೆಗೆಯಲು ಸೂಚನೆ ನೀಡಿಲ್ಲ

    ಕೆಇಎ ಪರೀಕ್ಷೆಯಲ್ಲಿ ನಾವು ಜನಿವಾರ ತೆಗೆಯಲು ಸೂಚನೆ ನೀಡಿಲ್ಲ. ನಾವು ಜನಿವಾರ ತೆಗಿಬೇಕು ಅಂತ ಪ್ರಕಟನೆ ಮಾಡಿಲ್ಲ. ಇದು ಕೇವಲ ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ನಡೆದಿದೆ ಎಂದು ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ.

  • 24 May 2025 01:04 PM (IST)

    KCET Result 2025 LIVE: ಪಶುವೈದ್ಯಕೀಯ ವಿಭಾಗದಲ್ಲಿ ರ‍್ಯಾಂಕ್​ ಪಡೆದವರು

    ಪಶುವೈದ್ಯಕೀಯ ವಿಭಾಗದಲ್ಲಿ ರ‍್ಯಾಂಕ್​ ಪಡೆದುಕೊಂಡು ವಿದ್ಯಾರ್ಥಿಗಳು.

    • ಪ್ರಥಮ: ರಕ್ಷಿತಾ.ವಿ.ಪಿ
    • ದ್ವಿತೀಯ: ನಂದನ್​
    • ತೃತೀಯ: ಭುವನೇಶ್ವರಿ
  • 24 May 2025 12:57 PM (IST)

    KCET Result 2025 LIVE: ಡಿ ಫಾರ್ಮ್ ವಿಭಾಗದಲ್ಲಿ ರ‍್ಯಾಂಕ್​ ಪಡೆದವರು

    ಡಿ ಫಾರ್ಮ್ ವಿಭಾಗದಲ್ಲಿ ರ‍್ಯಾಂಕ್​ ಪಡೆದವರು.

    • ಪ್ರಥಮ: ಆತ್ರೆಯಾ ವೆಂಕಟಚಲಂ
    • ದ್ವಿತೀಯ: ಭವೇಶ್ ಜಯಂತಿ
    • ತೃತೀಯ: ಹರೀಶ್‌ರಾಜ್
  • 24 May 2025 12:46 PM (IST)

    KCET Result 2025 LIVE: ನರ್ಸಿಂಗ್ ವಿಭಾಗದ ಟಾಪರ್ಸ್​​

    ನರ್ಸಿಂಗ್ ವಿಭಾಗದಲ್ಲಿ ಯಲಹಂಕದ ನಾರಾಯಣ ಇ-ಟೆಕ್ನೋದ ಹರಿಶ್ ರಾಜ್ ಪ್ರಥಮ ಸ್ಥಾನ. ಹೆಚ್​ಎಸ್ ಆರ್ ಲೇಔಟ್​ನ ನ್ಯಾಷನಲ್ ಪಬ್ಲಿಕ್‌ಸ್ಕೂಲ್ ಆತ್ರೇಯ ದ್ವಿತೀಯ ಸ್ಥಾನ ಮತ್ತು ಮಂಗಳೂರಿನ ಶಾಪಲ್ ಶೆಟ್ಟಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

  • 24 May 2025 12:43 PM (IST)

    KCET Result 2025 LIVE: ಕೃಷಿ ವಿಭಾಗದಲ್ಲಿ ಯಾರೆಲ್ಲಾ ಟಾಪರ್ಸ್​​?

    ಕೃಷಿ ವಿಭಾಗದಲ್ಲಿ ಅಕ್ಷಯ್ ಎಂ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಸಾಯಿಶ್ ಶರವಣ ಪಂಡಿತ್ ದ್ವಿತೀಯ ಮತ್ತು ಸುಚಿತ್.ಪಿ. ಪ್ರಸಾದ್​ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

  • 24 May 2025 12:38 PM (IST)

    KCET Result 2025 LIVE: ಸಾತ್ವಿಕ್ ಬಿ. ಬಿರಾದಾರ್ 2ನೇ ರ‍್ಯಾಂಕ್

    ಕನಕಪುರ ರಸ್ತೆ ಉತ್ತರಹಳ್ಳಿಯ ಚೈತನ್ಯ ಟೆಕ್ನೋ ಸ್ಕೂಲ್​ನ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ (99.33%) ಎರಡನೇ ರ‍್ಯಾಂಕ್ ಗಳಿಸಿದ್ದಾರೆ.

  • 24 May 2025 12:31 PM (IST)

    KCET Result 2025 LIVE: ಸಿಇಟಿಯಲ್ಲಿ ಭವೇಶ್​ ಜಯಂತಿಗೆ ಮೊದಲ ಸ್ಥಾನ

    ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್​ ಯುಜಿಸಿಇಟಿ-2025 ಫಲಿತಾಂಶ ಪ್ರಕಟಸಿದ್ದು, ಸಿಇಟಿಯಲ್ಲಿ ಭವೇಶ್​ ಜಯಂತಿಗೆ ಮೊದಲ ಸ್ಥಾನ(99.06%) ಪಡೆದುಕೊಂಡಿದ್ದಾರೆ.

  • 24 May 2025 12:25 PM (IST)

    KCET Result 2025 LIVE: 3,11,000 ವಿದ್ಯಾರ್ಥಿಗಳು ಸಿಇಟಿಗೆ ಹಾಜರು

    ಸಿಇಟಿಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿಗೆ ಹಾಜರಾಗಿದ್ದರು ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ.

  • 24 May 2025 11:52 AM (IST)

    KCET Result 2025 LIVE: ಫಲಿತಾಂಶ ನೋಡಲು ಹೀಗೆ ಮಾಡಿ

    • karresults.nic.in ವೆಬ್​ ಸೈಟ್​ಗೆ ಭೇಟಿ ನೀಡಿ.
    • ಮುಖಪುಟದಲ್ಲಿ ಕಾಣುವ KCET ಅಥವಾ ಕರ್ನಾಟಕ UGCET ಫಲಿತಾಂಶ ಲಿಂಕ್​ ಮೇಲೆ ಕ್ಲಿಕ್​ ಮಾಡಿ.
    • ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ.
    • ಬಳಿಕ ಸಬ್​ಮೀಟ್​ ಮೇಲೆ ಕ್ಲಿಕ್ ಮಾಡಿ ಫಲಿತಾಂಶ ಪರಿಶೀಲಿಸಿ.
  • 24 May 2025 11:41 AM (IST)

    KCET Result 2025 LIVE: ಶೀಘ್ರದಲ್ಲೇ ಫಲಿತಾಂಶ

    ಶೀಘ್ರದಲ್ಲೇ ಕರ್ನಾಟಕ ಯುಜಿಸಿಇಟಿ ಫಲಿತಾಂಶವನ್ನು ಕೆಇಎ ಪ್ರಕಟಿಸಲಿದೆ.

  • 24 May 2025 09:30 AM (IST)

    KCET Result 2025 LIVE: ಇಂದು ಯುಜಿಸಿಇಟಿ-2025 ಫಲಿತಾಂಶ

    ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ ವಿಜ್ಞಾನ ವಿಭಾಗ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ.

Published On - May 24,2025 9:30 AM

Follow us
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ