ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ 2022 ಫಲಿತಾಂಶ ಪ್ರಮುಖ ವ್ಯಕ್ತಿಗಳು ( Suresh Bhardwaj )
Suresh Bhardwaj
ಸುರೇಶ್ ಭಾರದ್ವಾಜ್ರವರು ಹಿಮಾಚಲ ಪ್ರದೇಶದ ರಾಜಕೀಯ ರಂಗದಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಅವರು ಬಿಜೆಪಿ ಪಕ್ಷದ ಟಿಕೆಟ್ ಪಡೆದು ಶಿಮ್ಲಾ ಮತಕ್ಷೇತ್ರದಿಂದ ಸ್ಪರ್ಧಿಸಿ ಜಯಶಾಲಿಯಾದ ನಂತರ ವಿಧಾನಸಭೆಯ ಸದಸ್ಯರಾಗಿರುವುದರ ಜೊತೆಗೆ ಜೈರಾಮ್ ಠಾಕೂರ್ರವರ ಮಂತ್ರಿಮಂಡಲದಲ್ಲಿ ಕಾನೂನು ಮತ್ತು ಶಿಕ್ಷಣ ಖಾತೆಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಶಿಮ್ಲಾದಲ್ಲಿ ಮಾರ್ಚ್ 15, 1952ರಂದು ಶಾರಧಾನಂದರ ಮಗನಾಗಿ ಜನಿಸಿದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಶಿಮ್ಲಾದಲ್ಲೇ ಪಡೆದರು. ಕಾಲೇಜು ಶಿಕ್ಷಣದ ಅವಧಿಯಲ್ಲಿ ಅವರು ವಿದ್ಯಾರ್ಥಿ ಆಂದೋಲನದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. ತಮ್ಮ ಸಂಘಟನೆಯಲ್ಲಿ ವಿವಿಧ ಹೊಣೆಗಾರಿಕೆಗಳನ್ನು ನಿರ್ವಹಿಸಿದ ನಂತರ ಅವರು 2003ರಿಂದ 2006ರವರೆಗೆ ಹಿಮಾಚಲ ಪ್ರದೇಶದ ಬಿಜೆಪಿಯ ಅಧ್ಯಕ್ಷರಾಗಿದ್ದರು. ಇದಕ್ಕೂ ಮುನ್ನ ಅವರು ರಾಜ್ಯಸಭೆಯ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.
Suresh Bhardwaj
Mukesh Agnihotri
Jairam Thakur
- Implementation of the Old Pension Scheme
- Ten lakh jobs in government and semi-government departments
- Free medical treatment of up to Rs 10 lakh
- LPG cylinder at Rs 500 and 300 units of free electricity every month
- Unemployment allowance of Rs 3,000 per month
- Rs 2,000 pension to divyangs, widows, senior citizens and needy women