AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss: ಈ ವಾರ ಬಿಗ್​ ಬಾಸ್​ನಲ್ಲಿ ದೊಡ್ಡ ಫೈಟ್​! ಯಾರೂ ಊಹಿಸಿರದ ಘಟನೆ ನಡೆದೇ ಬಿಡ್ತು

BBK8: ಈ ವಾರದ ಟಾಸ್ಕ್​ನಲ್ಲಿ ಎಲ್ಲರೂ ಮಾಡು ಇಲ್ಲವೆ ಮಡಿ ಎಂಬಂತೆ ಕಾದಾಡುವ ಸನ್ನಿವೇಶ ನಿರ್ಮಾಣ ಆಗಲಿದೆ. ಮನರಂಜನೆ ನೀಡುವಲ್ಲಿ ಹಿಂದೆ ಬಿದ್ದರೂ ಅಂಥ ಸ್ಪರ್ಧಿಗೆ ತೀವ್ರ ಹಿನ್ನಡೆ ಆಗಲಿದೆ.

Bigg Boss: ಈ ವಾರ ಬಿಗ್​ ಬಾಸ್​ನಲ್ಲಿ ದೊಡ್ಡ ಫೈಟ್​! ಯಾರೂ ಊಹಿಸಿರದ ಘಟನೆ ನಡೆದೇ ಬಿಡ್ತು
ಬಿಗ್​ ಬಾಸ್​ ಕನ್ನಡ ಸೀಸನ್​ 8
ಮದನ್​ ಕುಮಾರ್​
|

Updated on: Mar 23, 2021 | 1:26 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ದಿನದಿಂದ ದಿನಕ್ಕೆ ಬಣ್ಣ ಬದಲಾಯಿಸುತ್ತಿದೆ. ಸ್ಪರ್ಧಿಗಳು ಮತ್ತು ಪ್ರೇಕ್ಷಕರು ನಿರೀಕ್ಷೆಯನ್ನೇ ಮಾಡಿರದ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ದೊಡ್ಮನೆಯಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೂಡ ಬಿಗಿಯಾಗುತ್ತಿದೆ. ಅಚ್ಚರಿ ಎಂದರೆ ಈ ವಾರ ಬಿಗ್​ ಬಾಸ್​ನಲ್ಲಿ ಯಾರೂ ಊಹಿಸಿರದ ಘಟನೆ ನಡೆದಿದೆ. ಇದರಿಂದಾಗಿ ದೊಡ್ಡ ಫೈಟ್​ ನಡೆಯುವುದು ಗ್ಯಾರಂಟಿ.

ಇಷ್ಟು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಯಾರು ಬೆಸ್ಟ್​ ಎಂದರೆ ಮಂಜು, ಪ್ರಶಾಂತ್​ ಸಂಬರಗಿ, ರಾಜೀವ್​, ಅರವಿಂದ್​ ಕೆಪಿ ಮುಂತಾದವರ ಹೆಸರು ಹೇಳಿಬರುತ್ತಿತ್ತು. ನಾಮಿನೇಷನ್​ ವಿಚಾರ ಬಂದಾಗ ಕೆಲವೇ ಸ್ಪರ್ಧಿಗಳು ಗುರಿಯಾಗುತ್ತಿದ್ದರು. ಆದರೆ ನಾಲ್ಕನೇ ವಾರದ ಆರಂಭದಲ್ಲೇ ಬಿಗ್​ ಬಾಸ್ ಒಂದು ಶಾಕ್​ ನೀಡಿದ್ದಾರೆ. ಈವರೆಗೂ ತಾವೇ ಮೇಲು ಎಂದು ಮೆರೆಯುತ್ತಿದ್ದವರಿಗೆ ಸ್ವಲ್ಪ ನಡುಕ ಹುಟ್ಟಿಸುವಂತಹ ರೀತಿಯಲ್ಲಿ ನಾಮಿನೇಷನ್​ ಆಗಿದೆ.

ಯಾರು ನಾಮಿನೇಟ್​ ಆಗುತ್ತಾರೆ ಎಂಬುದನ್ನು ಪ್ರತಿ ಸ್ಪರ್ಧಿಗಳ ಹೇಳಿಕೆ ಆಧಾರದ ಮೇಲೆ ಇಷ್ಟು ವಾರ ನಿರ್ಧರಿಸಲಾಗುತ್ತಿತ್ತು. ಆದರೆ ಈ ವಾರ ಬಿಗ್​ ಬಾಸ್​ ಅದಕ್ಕೆಲ್ಲ ಅವಕಾಶ ನೀಡಿಲ್ಲ. ಸದ್ಯ ಕ್ಯಾಪ್ಟನ್​ ಆಗಿರುವ ಅರವಿಂದ್​ ಕೆಪಿ ಅವರನ್ನು ಹೊರತುಪಡಿಸಿ ಮನೆಯಲ್ಲಿ ಇರುವ ಎಲ್ಲ 13 ಸರ್ಧಿಗಳನ್ನು ಬಿಗ್​ ಬಾಸ್​ ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಅದರಂತೆ ದಿವ್ಯಾ ಉರುಡುಗ, ಮಂಜು, ದಿವ್ಯಾ ಸುರೇಶ್​, ವಿಶ್ವನಾಥ್​, ಚಂದ್ರಕಲಾ, ರಘು, ಶಮಂತ್​, ಪ್ರಶಾಂತ್​ ಸಂಬರಗಿ, ಶಂಕರ್​ ಅಶ್ವತ್ಥ್​, ರಾಜೀವ್​, ವೈಷ್ಣವಿ, ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ನಾಮಿನೇಟ್​ ಆಗಿದ್ದಾರೆ.

ಎಲ್ಲರೂ ನಾಮಿನೇಟ್​ ಆಗಿರುವುದರಿಂದ ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಹಾಗಾಗಿ ಈ ವಾರದ ಟಾಸ್ಕ್​ನಲ್ಲಿ ಎಲ್ಲರೂ ಮಾಡು ಇಲ್ಲವೆ ಮಡಿ ಎಂಬಂತೆ ಕಾದಾಡುವ ಸನ್ನಿವೇಶ ನಿರ್ಮಾಣ ಆಗಲಿದೆ. ಮನರಂಜನೆ ನೀಡುವಲ್ಲಿ ಹಿಂದೆ ಬಿದ್ದರೂ ಅಂಥ ಸ್ಪರ್ಧಿಗೆ ತೀವ್ರ ಹಿನ್ನಡೆ ಆಗಲಿದೆ. ಇನ್ನೂ ಆಟವನ್ನೇ ಶುರು ಮಾಡಿರದ ವೈಷ್ಣವಿ, ಶಮಂತ್​ ಮುಂತಾದವರಿಗೆ ಈ ವಾರ ಹೆಚ್ಚು ಚಾಲೆಂಜಿಂಗ್​ ಆಗಿದೆ.

ಹೀಗೆ 13 ಮಂದಿ ಒಟ್ಟಿಗೆ ನಾಮಿನೇಟ್​ ಆಗುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ಅಲ್ಲದೆ, ವೀಕ್ಷಕರಿಗೂ ಕೂಡ ಇದು ಅಚ್ಚರಿ ಎನಿಸಿದೆ. ಮೊದಲ ವಾರ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಹಾಗೂ ಮೂರನೇ ವಾರ ಗೀತಾ ಭಾರತಿ ಭಟ್​ ಎಲಿಮಿನೇಟ್​ ಆದರು. ನಾಲ್ಕನೇ ವಾರ ಯಾರ ಅದೃಷ್ಟ ಕೈ ಕೊಡಲಿದೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.

ಇದನ್ನೂ ಓದಿ: ಈ ಸಲ ಕಪ್​ ನಮ್ಮದೇ ಎಂದ ಬಿಗ್​ ಬಾಸ್​ ಸ್ಪರ್ಧಿಗೆ ಕಾದಿತ್ತು ಶಿಕ್ಷೆ!

ಮುಂದಿನ ಸೀಸನ್​ಗೆ ಬಿಗ್​ ಬಾಸ್​ ನಿರೂಪಕ ಚೇಂಜ್​; ಹೊಸ ನಟನ ಹುಡುಕಾಟದಲ್ಲಿ ವಾಹಿನಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು