AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇಶದ್ರೋಹಿ’ ಸಿನಿಮಾ ಮಾಡಿದ ನಟನಿಗೆ ಖಡಕ್​ ಉತ್ತರ ಕೊಟ್ಟ ಅಭಿಷೇಕ್​ ಬಚ್ಚನ್​; ಭೇಷ್​ ಎಂದ ನೆಟ್ಟಿಗರು

ಮಲಯಾಳಂ ಸಿನಿಮಾ ಬಗ್ಗೆ ಅಭಿಷೇಕ್​ ಬಚ್ಚನ್​ ಆಡಿದ ಮೆಚ್ಚುಗೆ ಮಾತುಗಳಿಗೆ ಕಮಾಲ್​ ಆರ್​. ಖಾನ್ ಅವರು​ ಕೊಂಕು ನುಡಿದಿದ್ದಾರೆ. ಅದಕ್ಕೆ ಉತ್ತರಿಸಿರುವ ಅಭಿಷೇಕ್​ ಅವರು ವ್ಯಂಗ್ಯವಾಗಿಯೇ ತಿರುಗೇಟು ನೀಡಿದ್ದಾರೆ.

‘ದೇಶದ್ರೋಹಿ’ ಸಿನಿಮಾ ಮಾಡಿದ ನಟನಿಗೆ ಖಡಕ್​ ಉತ್ತರ ಕೊಟ್ಟ ಅಭಿಷೇಕ್​ ಬಚ್ಚನ್​; ಭೇಷ್​ ಎಂದ ನೆಟ್ಟಿಗರು
ಅಭಿಷೇಕ್ ಬಚ್ಚನ್, ಕಮಾಲ್ ಆರ್. ಖಾನ್
TV9 Web
| Edited By: |

Updated on: Feb 20, 2022 | 12:26 PM

Share

ನಟ ಅಭಿಷೇಕ್​ ಬಚ್ಚನ್​ (Abhishek Bachchan) ಅವರಿಗೆ ಟ್ರೋಲ್​ ಕಾಟ ಎಂದಿಗೂ ತಪ್ಪಿಲ್ಲ. ಜನ ಸಾಮಾನ್ಯರು ಮಾತ್ರವಲ್ಲದೇ ಕಮಾಲ್​ ಆರ್.​ ಖಾನ್ ಅವರಂತಹ ಸೆಲೆಬ್ರಿಟಿಗಳು ಕೂಡ ಅಭಿಷೇಕ್​ ಬಚ್ಚನ್​ ಅವರನ್ನು ಟ್ರೋಲ್ (Troll)​ ಮಾಡಿದ್ದುಂಟು. ಕಮಾಲ್​ ಆರ್​. ಖಾನ್ ಬಗ್ಗೆ ಹೊಸದಾಗಿ ಹೇಳುವಂತದ್ದು ಏನೂ ಇಲ್ಲ. ನಟನಾಗಿ, ನಿರ್ದೇಶಕನಾಗಿ ಬಾಲಿವುಡ್​ನಲ್ಲಿ ಅವರು ಸೋಲು ಕಂಡಿದ್ದಾರೆ. ಬಳಿಕ ಸ್ವಯಂ ಘೋಷಿತ ವಿಮರ್ಶಕನಾಗಿ ಪ್ರಚಾರ ಪಡೆಯುವ ಸಲುವಾಗಿ ಎಲ್ಲಿಲ್ಲದ ಪ್ರಯತ್ನ ಮಾಡಲು ಆರಂಭಿಸಿದರು. ಇದರಿಂದ ಅವರು ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳನ್ನು ಎದುರು ಹಾಕಿಕೊಂಡಿದ್ದಾರೆ. ಕಿರಿಕ್​ ಮಾಡಿಕೊಳ್ಳುವಲ್ಲಿ ಅವರು ಮುಲಾಜು ನೋಡುವುದಿಲ್ಲ. ಅದು ಸಲ್ಮಾನ್ ಖಾನ್​ ಆಗಿರಲಿ ಅಥವಾ ಕಂಗನಾ ರಣಾವತ್​ ಆಗಿರಲಿ… ಎಲ್ಲರ ಜೊತೆಗೂ ಕಮಾಲ್​ ಆರ್. ಖಾನ್ (Kamaal R Khan)​ ವಿವಾದ ಮಾಡಿಕೊಂಡಿದ್ದಾರೆ. ಈಗ ಅವರು ಅಭಿಷೇಕ್​ ಬಚ್ಚನ್​ ತಂಟೆಗೆ ಹೋಗಿದ್ದಾರೆ. ಅದಕ್ಕೆ ಅಭಿಷೇಕ್​ ಬಚ್ಚನ್​ ಖಡಕ್​ ತಿರುಗೇಟು ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇಬ್ಬರ ನಡುವೆ ಜಟಾಪಟಿ ಏರ್ಪಟ್ಟಿದೆ.

ಅಭಿಷೇಕ್​ ಬಚ್ಚನ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಹಾಗೆಯೇ ಅವರು ಎಲ್ಲ ಭಾಷೆಯ ಸಿನಿಮಾಗಳನ್ನು ನೋಡಿ ಮೆಚ್ಚುಗೆ ಸೂಚಿಸುತ್ತಾರೆ. ಈಗ ಮಲಯಾಳಂನ ‘ವಾಶಿ’ ಸಿನಿಮಾ ಬಗ್ಗೆ ಅಭಿಷೇಕ್​ ಬಚ್ಚನ್​ ಟ್ವೀಟ್​ ಮಾಡಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ಕಲಾವಿದರಾದ ಕೀರ್ತಿ ಸುರೇಶ್​ ಮತ್ತು ಟೊವಿನೋ ಥಾಮಸ್​ ಅಭಿನಯಿಸುತ್ತಿದ್ದಾರೆ. ‘ಮಲಯಾಳಂ ಚಿತ್ರರಂಗದಿಂದ ಬರುತ್ತಿರುವ ಮತ್ತೊಂದು ಅತ್ಯುತ್ತಮ ಸಿನಿಮಾ ಇದು. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಅಭಿಷೇಕ್​ ಬಚ್ಚನ್​ ಬರೆದುಕೊಂಡಿದ್ದಾರೆ.

ಅಭಿಷೇಕ್​ ಬಚ್ಚನ್​ ಮಾಡಿರುವ ಟ್ವೀಟ್​ ನೋಡಿ ಕಮಾಲ್​ ಆರ್​. ಖಾನ್​ ಕೊಂಕು ನುಡಿದಿದ್ದಾರೆ. ‘ಅಣ್ಣಾ.. ನೀವು ಬಾಲಿವುಡ್​ನವರು ಯಾವಾಗಲಾದರೂ ಅತ್ಯುತ್ತಮ ಸಿನಿಮಾ ಮಾಡಿ’ ಎಂದು ಕಮಾಲ್​ ಆರ್​. ಖಾನ್ ಟ್ವೀಟ್​ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ಅಭಿಷೇಕ್​ ಅವರು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ‘ಪ್ರಯತ್ನ ಮಾಡುತ್ತೇವೆ. ನೀವೂ ಮಾಡಿದ್ರಲ್ಲ ‘ದೇಶದ್ರೋಹಿ’ ಸಿನಿಮಾ’ ಎಂದು ಅಭಿಷೇಕ್​ ಬಚ್ಚನ್​ ಕುಟುಕಿದ್ದಾರೆ.

ಕಮಾಲ್​ ಆರ್​. ಖಾನ್​ ನಟಿಸಿ, ನಿರ್ಮಾಣ ಮಾಡಿದ್ದ ‘ದೇಶದ್ರೋಹಿ’ ಸಿನಿಮಾ 2008ರಲ್ಲಿ ತೆರೆಕಂಡಿತ್ತು. ಅದನ್ನು ನೋಡಿದ ವಿಮರ್ಶಕರು ‘ಹಿಂದಿ ಚಿತ್ರರಂಗದ ಅತಿ ಕೆಟ್ಟ ಸಿನಿಮಾ’ ಎಂದು ವಿಮರ್ಶೆ ಮಾಡಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಕೇವಲ 80 ಲಕ್ಷ ರೂಪಾಯಿ ಕಲೆಕ್ಷನ್​ ಮಾಡಿ ಆ ಸಿನಿಮಾ ನೆಲಕಚ್ಚಿತ್ತು. ಹೀನಾಯವಾಗಿ ಸೋಲುವಂತಹ ಇಂಥ ಸಿನಿಮಾ ಮಾಡಿದ್ದ ಕಮಾಲ್​ ಆರ್​. ಖಾನ್ ಅವರು ಈಗ ಬಾಲಿವುಡ್​ನ ಇತರೆ ಸ್ಟಾರ್​ ನಟ-ನಟಿಯರಿಗೆ ಬುದ್ಧಿ ಹೇಳಲು ಬಂದಿದ್ದಾರೆ. ಅದಕ್ಕಾಗಿ ಅಭಿಷೇಕ್​ ಬಚ್ಚನ್​ ಅವರು ಈ ರೀತಿ ತಿರುಗೇಟು ನೀಡಿದ್ದಾರೆ. ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಕ್ಕಾಗಿ ಅಭಿಷೇನ್​ ಬಚ್ಚನ್​ ಅವರಿಗೆ ನೆಟ್ಟಿಗರು ಭೇಷ್​ ಎನ್ನುತ್ತಿದ್ದಾರೆ.

ಇದನ್ನೂ ಓದಿ:

ಸಲ್ಮಾನ್​ ಖಾನ್​ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ; ಕಮಾಲ್​ ಆರ್​ ಖಾನ್​ಗೆ ಕೋರ್ಟ್​ ಆದೇಶ

Akshay Kumar: ಪಾಕಿಸ್ತಾನದ ಬಗ್ಗೆ ಅಕ್ಷಯ್​ ಕುಮಾರ್​ ಪ್ರೀತಿಯ ಮಾತು; ವಿಡಿಯೋ ವೈರಲ್​ ಮಾಡಿದ ಕಮಾಲ್​ ಖಾನ್​

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್