AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲುಸಾಲು ಸಿನಿಮಾ ಫ್ಲಾಪ್​ ಆದರೂ ಗುಟ್ಕಾ ಜಾಹೀರಾತಿಗೆ 50 ಕೋಟಿ ರೂ. ಸಂಭಾವನೆ? ಕೇಳಿಬಂತು ಹೊಸ ಆರೋಪ

‘ರಾಜ್​ನೀತಿ’ ಸಿನಿಮಾ, ‘ಆಶ್ರಮ್’ ವೆಬ್​ ಸೀರಿಸ್​ ಸೇರಿ ಹಲವು ಪ್ರಾಜೆಕ್ಟ್​ಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಪ್ರಕಾಶ್ ಝಾಗೆ ಇದೆ. ಅವರು ಮಾತನಾಡುತ್ತಾ ಬಾಲಿವುಡ್​ನ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

ಸಾಲುಸಾಲು ಸಿನಿಮಾ ಫ್ಲಾಪ್​ ಆದರೂ ಗುಟ್ಕಾ ಜಾಹೀರಾತಿಗೆ 50 ಕೋಟಿ ರೂ. ಸಂಭಾವನೆ? ಕೇಳಿಬಂತು ಹೊಸ ಆರೋಪ
ಅಜಯ್-ಶಾರುಖ್- ಅಕ್ಷಯ್
TV9 Web
| Edited By: |

Updated on:Sep 18, 2022 | 11:26 AM

Share

ಬಾಲಿವುಡ್ ಹೀರೋಗಳಾದ ಅಕ್ಷಯ್ ಕುಮಾರ್ (Akshay Kumar), ಅಜಯ್ ದೇವಗನ್, ಶಾರುಖ್ ಖಾನ್ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ಅವರು ಈ ಜಾಹೀರಾತಿನಿಂದ ಹೊರ ಬಂದಿದ್ದಾರೆ. ಉಳಿದ ಇಬ್ಬರು ಸ್ಟಾರ್ಸ್​ಗಳು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇವರ ನಡೆಗೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಿದೆ. ಈಗ ಬಾಲಿವುಡ್ ನಿರ್ದೇಶಕ ಪ್ರಕಾಶ್ ಝಾ (Prakash Jha) ಅವರು ಈ ನಟರನ್ನು ಟೀಕಿಸಿದ್ದಾರೆ. ಸಿನಿಮಾ ಫ್ಲಾಪ್ ಆದರೂ ಜಾಹೀರಾತಿನಿಂದ ಒಳ್ಳೆಯ ಕಮಾಯಿ ಮಾಡುತ್ತಿದ್ದಾರೆ ಎಂಬ ಮಾತನ್ನು ಅವರು ಹೇಳಿದ್ದಾರೆ.

‘ರಾಜ್​ನೀತಿ’ ಸಿನಿಮಾ, ‘ಆಶ್ರಮ್’ ವೆಬ್​ ಸೀರಿಸ್​ ಸೇರಿ ಹಲವು ಪ್ರಾಜೆಕ್ಟ್​ಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಪ್ರಕಾಶ್ ಝಾಗೆ ಇದೆ. ಅವರು ಇಟೈಮ್ಸ್ ಜತೆ ಮಾತನಾಡುತ್ತಾ ಬಾಲಿವುಡ್​ನ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್​ನಲ್ಲಿ ಅಲ್ಲೊಂದು-ಇಲ್ಲೊಂದು ಸಿನಿಮಾ ಮಾತ್ರ ಗೆಲ್ಲುತ್ತಿದೆ. ಈ ಪರಿಸ್ಥಿತಿಗೆ ಕಾರಣ ಏನಿರಬಹುದು ಎಂಬುದನ್ನು ಅವರು ವಿವರಿಸಿದ್ದಾರೆ. ಸ್ಟಾರ್ ನಟರ ಬಗ್ಗೆ ಅವರು ಟೀಕೆ ಮಾಡಿದ್ದಾರೆ.

‘ಬಾಲಿವುಡ್​ನಲ್ಲಿ 5-6 ನಟರಿದ್ದಾರೆ. ಈ ನಟರ ಸ್ಥಿತಿ ನೋಡಿ. ಗುಟ್ಕಾ ಜಾಹೀರಾತಿನಲ್ಲಿ 50 ಕೋಟಿ ರೂಪಾಯಿ ಸಿಗುವಾಗ ನನ್ನ ಚಿತ್ರಗಳಲ್ಲಿ ಅವರು ಏಕೆ ಕೆಲಸ ಮಾಡುತ್ತಾರೆ? ಈ ನಟರು ಗುಟ್ಕಾ ಮಾರುತ್ತಿದ್ದಾರೆ. ಇದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಈ ಲೆಜೆಂಡರಿ ನಟರು ನಿಜಕ್ಕೂ ಏನು ಮಾಡುತ್ತಿದ್ದಾರೆ’ ಎಂದು ಪ್ರಕಾಶ್ ಪ್ರಶ್ನೆ ಮಾಡಿದ್ದಾರೆ.

‘ನಟರಿಗೆ ಸಮಯವಿಲ್ಲ. ಐದು ಫ್ಲಾಪ್‌ ಸಿನಿಮಾ ಕೊಟ್ಟ ನಟ, 12 ಜಾಹೀರಾತುಗಳನ್ನು ಒಪ್ಪಿಕೊಂಡಿರುತ್ತಾನೆ. ಪ್ರತೀ ಜಾಹೀರಾತಿಗಾಗಿ 10 ಕೋಟಿ ರೂ. ಪಡೆಯುತ್ತಾನೆ. ಕೆಲ ಕಾರ್ಪೊರೇಟ್‌ಗಳು ಈ ಸ್ಟಾರ್​​ಗಳನ್ನು ಖರೀದಿಸಲು ಸಿದ್ಧರಾಗಿದ್ದಾರೆ. ಈ ಕಾರಣಕ್ಕೆ ಅವರು ಸಂತೋಷವಾಗಿದ್ದಾರೆ. ಇಂಡಸ್ಟ್ರಿಯಲ್ಲಿ ಜವಾಬ್ದಾರಿ ಹೊಂದಿರುವ ವ್ಯಕ್ತಿಗಳು ಒಟ್ಟಿಗೆ ಕುಳಿತು ಈ ಬಗ್ಗೆ ಯೋಚಿಸಬೇಕು’ ಎಂದು ಕೋರಿದ್ದಾರೆ ಅವರು.

‘ಈ ಮೊದಲು ಕೆಲವರು ಸಿನಿಮಾ ಮಾಡುತ್ತಿದ್ದರು. ಅದು ಕೆಟ್ಟ ಚಿತ್ರವೋ ಅಥವಾ ಒಳ್ಳೆಯ ಚಿತ್ರವೋ ಅದು ಎರಡನೆಯ ಮಾತು. ಆದರೆ ಅದನ್ನು ಪ್ಯಾಷನ್​ನಿಂದ ಮಾಡುತ್ತಿದ್ದರು. ತಮ್ಮ ಸಿನಿಮಾಗಳಿಗಾಗಿ ಹೋರಾಡುತ್ತಿದ್ದರು. ಅದೆಲ್ಲವೂ ಈಗ ಮಾಯವಾಗಿದೆ. ಈಗ ಎಲ್ಲ ಸ್ಟಾರ್​​ಗಳು ಸಿನಿಮಾ ಮಾಡಲು ಮಾಡಲು ಬಯಸುತ್ತಾರೆ ಅಷ್ಟೇ. ತಮಗೆ ಸಿಗಬೇಕಿರುವ ಕಾರ್ಪೊರೇಟ್ ಹಣ ಬಳಕೆ ಮಾಡಿಕೊಂಡು ಹಾಯಾಗಿದ್ದಾರೆ. ರಿಮೇಕ್ ಸಿನಿಮಾಗಳು ಹೆಚ್ಚುತ್ತಿವೆ’ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್​ ಕುಮಾರ್, ಶಾರುಖ್ ಸಿನಿಮಾಗಳು ನಿರಂತರವಾಗಿ ಸೋಲು ಕಾಣುತ್ತಿವೆ. ಪ್ರಕಾಶ್ ಹೇಳಿದ ಮಾತು ಈ ನಟರಿಗೆ ಎನ್ನಲಾಗುತ್ತಿದೆ.

Published On - 9:42 am, Sun, 18 September 22

ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ