AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲುಸಾಲು ಸಿನಿಮಾ ಫ್ಲಾಪ್​ ಆದರೂ ಗುಟ್ಕಾ ಜಾಹೀರಾತಿಗೆ 50 ಕೋಟಿ ರೂ. ಸಂಭಾವನೆ? ಕೇಳಿಬಂತು ಹೊಸ ಆರೋಪ

‘ರಾಜ್​ನೀತಿ’ ಸಿನಿಮಾ, ‘ಆಶ್ರಮ್’ ವೆಬ್​ ಸೀರಿಸ್​ ಸೇರಿ ಹಲವು ಪ್ರಾಜೆಕ್ಟ್​ಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಪ್ರಕಾಶ್ ಝಾಗೆ ಇದೆ. ಅವರು ಮಾತನಾಡುತ್ತಾ ಬಾಲಿವುಡ್​ನ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

ಸಾಲುಸಾಲು ಸಿನಿಮಾ ಫ್ಲಾಪ್​ ಆದರೂ ಗುಟ್ಕಾ ಜಾಹೀರಾತಿಗೆ 50 ಕೋಟಿ ರೂ. ಸಂಭಾವನೆ? ಕೇಳಿಬಂತು ಹೊಸ ಆರೋಪ
ಅಜಯ್-ಶಾರುಖ್- ಅಕ್ಷಯ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Sep 18, 2022 | 11:26 AM

Share

ಬಾಲಿವುಡ್ ಹೀರೋಗಳಾದ ಅಕ್ಷಯ್ ಕುಮಾರ್ (Akshay Kumar), ಅಜಯ್ ದೇವಗನ್, ಶಾರುಖ್ ಖಾನ್ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ಅವರು ಈ ಜಾಹೀರಾತಿನಿಂದ ಹೊರ ಬಂದಿದ್ದಾರೆ. ಉಳಿದ ಇಬ್ಬರು ಸ್ಟಾರ್ಸ್​ಗಳು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇವರ ನಡೆಗೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಿದೆ. ಈಗ ಬಾಲಿವುಡ್ ನಿರ್ದೇಶಕ ಪ್ರಕಾಶ್ ಝಾ (Prakash Jha) ಅವರು ಈ ನಟರನ್ನು ಟೀಕಿಸಿದ್ದಾರೆ. ಸಿನಿಮಾ ಫ್ಲಾಪ್ ಆದರೂ ಜಾಹೀರಾತಿನಿಂದ ಒಳ್ಳೆಯ ಕಮಾಯಿ ಮಾಡುತ್ತಿದ್ದಾರೆ ಎಂಬ ಮಾತನ್ನು ಅವರು ಹೇಳಿದ್ದಾರೆ.

‘ರಾಜ್​ನೀತಿ’ ಸಿನಿಮಾ, ‘ಆಶ್ರಮ್’ ವೆಬ್​ ಸೀರಿಸ್​ ಸೇರಿ ಹಲವು ಪ್ರಾಜೆಕ್ಟ್​ಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಪ್ರಕಾಶ್ ಝಾಗೆ ಇದೆ. ಅವರು ಇಟೈಮ್ಸ್ ಜತೆ ಮಾತನಾಡುತ್ತಾ ಬಾಲಿವುಡ್​ನ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್​ನಲ್ಲಿ ಅಲ್ಲೊಂದು-ಇಲ್ಲೊಂದು ಸಿನಿಮಾ ಮಾತ್ರ ಗೆಲ್ಲುತ್ತಿದೆ. ಈ ಪರಿಸ್ಥಿತಿಗೆ ಕಾರಣ ಏನಿರಬಹುದು ಎಂಬುದನ್ನು ಅವರು ವಿವರಿಸಿದ್ದಾರೆ. ಸ್ಟಾರ್ ನಟರ ಬಗ್ಗೆ ಅವರು ಟೀಕೆ ಮಾಡಿದ್ದಾರೆ.

‘ಬಾಲಿವುಡ್​ನಲ್ಲಿ 5-6 ನಟರಿದ್ದಾರೆ. ಈ ನಟರ ಸ್ಥಿತಿ ನೋಡಿ. ಗುಟ್ಕಾ ಜಾಹೀರಾತಿನಲ್ಲಿ 50 ಕೋಟಿ ರೂಪಾಯಿ ಸಿಗುವಾಗ ನನ್ನ ಚಿತ್ರಗಳಲ್ಲಿ ಅವರು ಏಕೆ ಕೆಲಸ ಮಾಡುತ್ತಾರೆ? ಈ ನಟರು ಗುಟ್ಕಾ ಮಾರುತ್ತಿದ್ದಾರೆ. ಇದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಈ ಲೆಜೆಂಡರಿ ನಟರು ನಿಜಕ್ಕೂ ಏನು ಮಾಡುತ್ತಿದ್ದಾರೆ’ ಎಂದು ಪ್ರಕಾಶ್ ಪ್ರಶ್ನೆ ಮಾಡಿದ್ದಾರೆ.

‘ನಟರಿಗೆ ಸಮಯವಿಲ್ಲ. ಐದು ಫ್ಲಾಪ್‌ ಸಿನಿಮಾ ಕೊಟ್ಟ ನಟ, 12 ಜಾಹೀರಾತುಗಳನ್ನು ಒಪ್ಪಿಕೊಂಡಿರುತ್ತಾನೆ. ಪ್ರತೀ ಜಾಹೀರಾತಿಗಾಗಿ 10 ಕೋಟಿ ರೂ. ಪಡೆಯುತ್ತಾನೆ. ಕೆಲ ಕಾರ್ಪೊರೇಟ್‌ಗಳು ಈ ಸ್ಟಾರ್​​ಗಳನ್ನು ಖರೀದಿಸಲು ಸಿದ್ಧರಾಗಿದ್ದಾರೆ. ಈ ಕಾರಣಕ್ಕೆ ಅವರು ಸಂತೋಷವಾಗಿದ್ದಾರೆ. ಇಂಡಸ್ಟ್ರಿಯಲ್ಲಿ ಜವಾಬ್ದಾರಿ ಹೊಂದಿರುವ ವ್ಯಕ್ತಿಗಳು ಒಟ್ಟಿಗೆ ಕುಳಿತು ಈ ಬಗ್ಗೆ ಯೋಚಿಸಬೇಕು’ ಎಂದು ಕೋರಿದ್ದಾರೆ ಅವರು.

‘ಈ ಮೊದಲು ಕೆಲವರು ಸಿನಿಮಾ ಮಾಡುತ್ತಿದ್ದರು. ಅದು ಕೆಟ್ಟ ಚಿತ್ರವೋ ಅಥವಾ ಒಳ್ಳೆಯ ಚಿತ್ರವೋ ಅದು ಎರಡನೆಯ ಮಾತು. ಆದರೆ ಅದನ್ನು ಪ್ಯಾಷನ್​ನಿಂದ ಮಾಡುತ್ತಿದ್ದರು. ತಮ್ಮ ಸಿನಿಮಾಗಳಿಗಾಗಿ ಹೋರಾಡುತ್ತಿದ್ದರು. ಅದೆಲ್ಲವೂ ಈಗ ಮಾಯವಾಗಿದೆ. ಈಗ ಎಲ್ಲ ಸ್ಟಾರ್​​ಗಳು ಸಿನಿಮಾ ಮಾಡಲು ಮಾಡಲು ಬಯಸುತ್ತಾರೆ ಅಷ್ಟೇ. ತಮಗೆ ಸಿಗಬೇಕಿರುವ ಕಾರ್ಪೊರೇಟ್ ಹಣ ಬಳಕೆ ಮಾಡಿಕೊಂಡು ಹಾಯಾಗಿದ್ದಾರೆ. ರಿಮೇಕ್ ಸಿನಿಮಾಗಳು ಹೆಚ್ಚುತ್ತಿವೆ’ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್​ ಕುಮಾರ್, ಶಾರುಖ್ ಸಿನಿಮಾಗಳು ನಿರಂತರವಾಗಿ ಸೋಲು ಕಾಣುತ್ತಿವೆ. ಪ್ರಕಾಶ್ ಹೇಳಿದ ಮಾತು ಈ ನಟರಿಗೆ ಎನ್ನಲಾಗುತ್ತಿದೆ.

Published On - 9:42 am, Sun, 18 September 22

ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ್ರಾ? ಅಂತೆ ಕಂತೆಗಳಿಗೆ ಡಿಕೆ ಶಿವಕುಮಾರ್ ಗರಂ
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ್ರಾ? ಅಂತೆ ಕಂತೆಗಳಿಗೆ ಡಿಕೆ ಶಿವಕುಮಾರ್ ಗರಂ
ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ನವೆಂಬರ್ ನಲ್ಲಿ ಸಂಪುಟ ಪುನಾರಚನೆ: ದಿಲ್ಲಿಯಿಂದ ಬಂತು ಸ್ಫೋಟಕ ಸುದ್ದಿ
ನವೆಂಬರ್ ನಲ್ಲಿ ಸಂಪುಟ ಪುನಾರಚನೆ: ದಿಲ್ಲಿಯಿಂದ ಬಂತು ಸ್ಫೋಟಕ ಸುದ್ದಿ
ಇಂದು ಉದ್ಘಾಟನೆಯಾಗಲಿರುವ ಮಾತಾ ತ್ರಿಪುರ ಸುಂದರಿ ದೇವಾಲಯ ಹೇಗಿದೆ ನೋಡಿ
ಇಂದು ಉದ್ಘಾಟನೆಯಾಗಲಿರುವ ಮಾತಾ ತ್ರಿಪುರ ಸುಂದರಿ ದೇವಾಲಯ ಹೇಗಿದೆ ನೋಡಿ