AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುರಾಗ್-ಶುಭ್ರಾ ಮಧ್ಯೆ 23 ವರ್ಷ ವಯಸ್ಸಿನ ಅಂತರ; ಪ್ರೇಮಕಥೆ ಬಿಚ್ಚಿಟ್ರು

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ಶುಭ್ರಾ ಶೆಟ್ಟಿ ತಮ್ಮ 20 ವರ್ಷಗಳ ವಯಸ್ಸಿನ ಅಂತರದ ಪ್ರೇಮಕಥೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ತಾಯಿ ಅನುರಾಗ್ ಅವರನ್ನು 'ಬಕ್ರಾ' ಎಂದು ಕರೆಯುತ್ತಿದ್ದರು ಎಂದು ಶುಭ್ರಾ ತಮಾಷೆಯಾಗಿ ಹೇಳಿದ್ದು, ಬೆಂಗಳೂರು ವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ .

ಅನುರಾಗ್-ಶುಭ್ರಾ ಮಧ್ಯೆ 23 ವರ್ಷ ವಯಸ್ಸಿನ ಅಂತರ; ಪ್ರೇಮಕಥೆ ಬಿಚ್ಚಿಟ್ರು
ಅನುರಾಗ್-ಶುಭ್ರಾ ಶೆಟ್ಟಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:Aug 19, 2026 | 7:55 AM

Share

ಮುಖ್ಯಾಂಶಗಳು

  • ಅನುರಾಗ್‌ಗೆ ಶುಭ್ರಾ ತಾಯಿ ಇಟ್ಟ ಹೆಸರು
  • ಮೊದಲ ಭೇಟಿ ಮತ್ತು ಪ್ರೇಮ ನಿವೇದನೆ
  • ಬೆಂಗಳೂರಿಗೆ ಬಂದು ಖಿನ್ನತೆ ಗೆದ್ದ ನಿರ್ದೇಶಕ

ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ಅವರ ಗರ್ಲ್ ಫ್ರೆಂಡ್ ಶುಭ್ರಾ ಶೆಟ್ಟಿ ತಮ್ಮ ಪ್ರೇಮ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ನಡುವಿನ 20 ವರ್ಷಗಳ ವಯಸ್ಸಿನ ಅಂತರದ ಬಗ್ಗೆ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇಬ್ಬರ ಪ್ರೇಮಕಥೆ ಮತ್ತು ಬೆಂಗಳೂರು ಜೀವನದ ಬಗ್ಗೆ ನೀಡಿರುವ ಸಂದರ್ಶನ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಅಪಾರ ಜನಪ್ರಿಯತೆ ಗಳಿಸುತ್ತಿದೆ.

ತಾಯಿಯ ಕಮೆಂಟ್ ಮತ್ತು ವಯಸ್ಸಿನ ಅಂತರ

ಶುಭ್ರಾ ಶೆಟ್ಟಿ ಅವರಿಗೆ ಈಗ 30 ವರ್ಷ ದಾಟಿದೆ. ಅನುರಾಗ್ ಕಶ್ಯಪ್ ಅವರಿಗೆ 53 ವರ್ಷ ವಯಸ್ಸಾಗಿದೆ. ತಮ್ಮಿಬ್ಬರ ಪ್ರೇಮ ವಿಚಾರ ತಿಳಿದಾಗ ಶುಭ್ರಾ ಅವರ ತಾಯಿ ಅನುರಾಗ್ ಅವರನ್ನು ‘ಬಕ್ರಾ’ ಎಂದು ಕರೆದಿದ್ದರು. ಅನುರಾಗ್ ತುಂಬಾ ಅಮಾಯಕ ಮತ್ತು ಹೆಂಡತಿಯ ಮಾತು ಕೇಳುವ ಗಂಡನಿದ್ದಂತೆ ಎಂದು ಶುಭ್ರಾ ತಾಯಿ ಭಾವಿಸಿದ್ದರು. ಆರಂಭದಲ್ಲಿ ಇಬ್ಬರೂ ತಮ್ಮ ಪ್ರೇಮ ವಿಷಯವನ್ನು ಮಾಧ್ಯಮಗಳಿಂದ ಮುಚ್ಚಿಡಲು ಬಯಸಿದ್ದರು. ಆದರೆ ಪತ್ರಕರ್ತನೊಬ್ಬ ಈ ಸುದ್ದಿಯನ್ನು ಬಹಿರಂಗಪಡಿಸಿದ್ದರು.

ಫ್ಯಾಂಟಮ್ ಫಿಲ್ಮ್ಸ್‌ನಲ್ಲಿ ಶುರುವಾದ ಪ್ರೀತಿ

ಶುಭ್ರಾ ಶೆಟ್ಟಿ ಮೊದಲು ಅನುರಾಗ್ ಅವರ ಫ್ಯಾಂಟಮ್ ಫಿಲ್ಮ್ಸ್ ಸಂಸ್ಥೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ವಿಕ್ರಮಾದಿತ್ಯ ಮೊಟ್ವಾನೆ ಅವರ ಸಿನಿಮಾಗಳೆಂದರೆ ಇಷ್ಟವಿತ್ತು. ಅನುರಾಗ್ ಅವರ ಯಾವ ಸಿನಿಮಾವನ್ನೂ ಅವರು ನೋಡಿರಲಿಲ್ಲ. ಅನುರಾಗ್ ಅವರಿಗೆ ಶುಭ್ರಾ ಮೇಲೆ ಕ್ರಶ್ ಇತ್ತು. ವಯಸ್ಸಿನ ಅಂತರದ ಕಾರಣಕ್ಕೆ ಅವರು ಆತಂಕದಲ್ಲಿದ್ದರು. ಮೊದಲ ಡೇಟಿಂಗ್‌ಗೆ ಶುಭ್ರಾ ಅವರ ಸ್ನೇಹಿತರು ಮತ್ತು ಅನುರಾಗ್ ಮಗಳು ಜೊತೆಯಾಗಿ ಹೋಗಿದ್ದರು.

ಇದನ್ನೂ ಓದಿ: ‘ಅದು ನನ್ನ ಸಿನಿಮಾ ಆಗಿರಲಿಲ್ಲ’; ‘ಬಂದರ್’ ಚಿತ್ರದ ಬಗ್ಗೆ ಅನುರಾಗ್ ಕಶ್ಯಪ್ ಬೇಸರ

ಬೆಂಗಳೂರು ವಾಸ ಮತ್ತು ಖಿನ್ನತೆಯಿಂದ ಮುಕ್ತಿ

ಅನುರಾಗ್ ಕಶ್ಯಪ್ ಪ್ರೀತಿಯನ್ನು ಮೊದಲು ವ್ಯಕ್ತಪಡಿಸಿದ್ದರು. ಮುಂಬೈನ ಜಂಜಾಟದಿಂದ ದೂರವಾಗಲು ಇಬ್ಬರೂ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಬೆಂಗಳೂರಿಗೆ ಬಂದ ನಂತರ ತಮ್ಮ ಸುದೀರ್ಘ ದಿನಗಳ ಖಿನ್ನತೆ ಸಂಪೂರ್ಣವಾಗಿ ಮಾಯವಾಯಿತು ಎಂದು ಅನುರಾಗ್ ಹೇಳಿದ್ದಾರೆ. ಅನುರಾಗ್ ಶುಭ್ರಾ ಅವರ ತವರು ಮನೆಗೆ ಭೇಟಿ ನೀಡಿ ಕುಟುಂಬದವರ ಮನ ಗೆದ್ದಿದ್ದರು. ಪ್ರಸ್ತುತ ಇಬ್ಬರೂ ಬೆಂಗಳೂರಿನಲ್ಲಿ ಸಂತೋಷದ ಜೀವನ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Wed, 19 August 26

Follow Us
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ