AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೆಲ್​ಬಾಟಂ’ ಚಿತ್ರ ಮಸ್ಟ್ ವಾಚ್ ಎಂದ ಟ್ವಿಂಕಲ್; ಹೆಂಡತಿ ಮಾತು ಕೇಳಿ ಪಾರ್ಕಿನಲ್ಲಿ ನಡೆದಷ್ಟೇ ಖುಷಿಯಾಗುತ್ತಿದೆ ಎಂದ ಅಕ್ಕಿ!

Bell Bottom: ಇಂದು ಬಿಡುಗಡೆಯಾದ ‘ಬೆಲ್​ಬಾಟಂ’ ಚಿತ್ರಕ್ಕೆ ವಿಶೇಷ ಸರ್ಟಿಫಿಕೇಟ್ ಕೊಟ್ರು ಟ್ವಿಂಕಲ್; ಅಕ್ಕಿ ರಿಯಾಕ್ಷನ್ ಏನು?: ಕೊರೊನಾ ಎರಡನೇ ಅಲೆಯ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸ್ಟಾರ್ ಚಿತ್ರ ಬೆಲ್​ಬಾಟಂ. ಈ ಕುರಿತು ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಚಿತ್ರ ನೋಡಿ ತಮ್ಮ ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಕೊರೊನಾ ನಿಯಮಾವಳಿಗಳ ನಡುವೆ ಬೆಲ್​ಬಾಟಂ ಬಿಡುಗಡೆಯಾಗಬೇಕಾದ ಪರಿಸ್ಥಿಯನ್ನೂ ಅಕ್ಷಯ್ ವಿವರಿಸಿದ್ದಾರೆ.

‘ಬೆಲ್​ಬಾಟಂ’ ಚಿತ್ರ ಮಸ್ಟ್ ವಾಚ್ ಎಂದ ಟ್ವಿಂಕಲ್; ಹೆಂಡತಿ ಮಾತು ಕೇಳಿ ಪಾರ್ಕಿನಲ್ಲಿ ನಡೆದಷ್ಟೇ ಖುಷಿಯಾಗುತ್ತಿದೆ ಎಂದ ಅಕ್ಕಿ!
ಬೆಲ್​ಬಾಟಂ ಚಿತ್ರ
TV9 Web
| Edited By: |

Updated on:Aug 19, 2021 | 2:35 PM

Share

ಕೊರೊನಾ ಎರಡನೇ ಅಲೆಯ ಪರಿಣಾಮಗಳಿಂದ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಮತ್ತಷ್ಟು ವೇಗ ನೀಡುವಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್(Akshay Kumar) ನಟನೆಯ ಬಹು ನಿರೀಕ್ಷಿತ ಬೆಲ್​ಬಾಟಂ(Bell Bottom) ಚಿತ್ರ ಇಂದು ಬಿಡುಗಡೆಯಾಗಿದೆ. ಬಾಲಿವುಡ್​ನ ಕೇಂದ್ರ ಸ್ಥಾನ ಮಹಾರಾಷ್ಟ್ರದಲ್ಲಿ ಚಿತ್ರಬಿಡುಗಡೆಗೆ ಅವಕಾಶವಿಲ್ಲದೇ ಇದ್ದರೂ ಚಿತ್ರತಂಡ ಬಹುದೊಡ್ಡ ರಿಸ್ಕ್​ಗೆ ಕೈ ಹಾಕಿದೆ. ಪ್ರಸ್ತುತ ನಟ ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ(Twinkle Khanna) ಅವರೊಂದಿಗೆ ಲಂಡನ್​ಗೆ ತೆರಳಿದ್ದು, ಅಲ್ಲಿ ಚಿತ್ರದ ಪ್ರೀಮಿಯರ್​ನಲ್ಲಿ ಭಾಗವಹಿಸಿದ್ದಾರೆ.

‘ಬೆಲ್​ಬಾಟಂ’ನ ಮೊದಲ ರೀವ್ಯೂ ಹಂಚಿಕೊಂಡಿರುವ ಟ್ವಿಂಕಲ್ ಖನ್ನಾ, ಈ ಚಿತ್ರ ಎಲ್ಲರೂ ನೋಡಲೇ ಬೇಕಾದ ಚಿತ್ರ ಎಂದು ಬರೆದುಕೊಂಡಿದ್ದಾರೆ. ನಟಿ, ಬರಹಗಾರ್ತಿ ಟ್ವಿಂಕಲ್ ತಮ್ಮ ಅಭಿಪ್ರಾಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಕ್ಷಯ್ ಹಾಗೂ ಟ್ವಿಂಕಲ್ ಪ್ರೀಮಿಯರ್​ಗೆ ತೆರಳುತ್ತಿರುವ ಚಿತ್ರವನ್ನು ಹಂಚಿಕೊಂಡು, ಅದಕ್ಕೆ ಟ್ವಿಂಕಲ್ ಕ್ಯಾಪ್ಶನ್ ನೀಡಿದ್ದಾರೆ. ‘ನಾವೀಗ ಪಾರ್ಕ್​ನಲ್ಲಿ ನಡೆಯುತ್ತಿದ್ದೇವೆ. ಆದರೆ ನಾವು ತೆರಳುತ್ತಿರುವುದು ಬೆಲ್​ಬಾಟಂ ಪ್ರೀಮಿಯರ್​ಗೆ. ಎಲ್ಲರೂ ನೋಡಲೇ ಬೇಕಾದ ಚಿತ್ರವಿದು’ ಎಂದು ಟ್ವಿಂಕಲ್ ಸರ್ಟಿಫಿಕೇಟ್ ನೀಡಿದ್ದಾರೆ. ಇದಕ್ಕೆ ನಟ ಅಕ್ಷಯ್ ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ‘ಟ್ವಿಂಕಲ್ ಬೆಲ್​ಬಾಟಂ ಚಿತ್ರವನ್ನು ಮಸ್ಟ್ ವಾಚ್ ಅಂದಿದ್ದು ನೋಡಿ ಪಾರ್ಕಿನಲ್ಲಿ ನಡೆದಷ್ಟೇ ಖುಷಿಯಾಗುತ್ತಿದೆ. ಇದನ್ನು ಹೇಳಿದ್ದು ಅವಳೇ. ನಾನು ಹೇಳಿಲ್ಲ’ ಎಂದು ಕಣ್ಣು ಹೊಡೆಯುತ್ತಿರುವ ಎಮೋಜಿ ಹಂಚಿಕೊಂಡಿದ್ದಾರೆ. ಬೆಲ್​ಬಾಟಂ ಚಿತ್ರಕ್ಕೆ ಈಗಾಗಲೇ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.

ಟ್ವಿಂಕಲ್ ಖನ್ನಾ ಹಂಚಿಕೊಂಡಿರುವ ಪೋಸ್ಟ್:

ಕೊರೊನಾ ಎರಡನೇ ಅಲೆಯ ನಂತರ ತೆರೆಕಾಣುತ್ತಿರುವ ಮೊದಲ ಸ್ಟಾರ್ ಚಿತ್ರ ಬೆಲ್​ಬಾಟಂ:

ಕೊರೊನಾ ಎರಡನೇ ಅಲೆಯ ಪರಿಣಾಮಗಳು ಇನ್ನೂ ಕಡಿಮೆಯಾಗಿಲ್ಲ. ಚಿತ್ರರಂಗ ಇನ್ನೂ ಚೇತರಿಕೆಯ ಹಾದಿಯಲ್ಲಿರುವಾಗ ಇದಕ್ಕೆ ಮತ್ತಷ್ಟು ಶಕ್ತಿ ತುಂಬುವಂತೆ ಬೆಲ್​ಬಾಟಂ ಬಿಡುಗಡೆಯಾಗಿದೆ. ಬಾಲಿವುಡ್​ನ ಬೃಹತ್ ಮಾರುಕಟ್ಟೆಗಳಲ್ಲೊಂದಾದ ಮಹಾರಾಷ್ಟ್ರದಲ್ಲಿ ಇನ್ನೂ ಬಿಗಿ ನಿಯಮಾವಳಿಗಳು ಇದ್ದು, ಚಿತ್ರಮಂದಿರಗಳು ತೆರೆದಿಲ್ಲ. ಅದಾಗ್ಯೂ ಬೆಲ್​ಬಾಟಂ ಚಿತ್ರತಂಡ ಬಹುದೊಡ್ಡ ರಿಸ್ಕ್ ತೆಗೆದುಕೊಂಡಿದೆ. ಈ ಕುರಿತು ಅಕ್ಷಯ್ ಮಾತನಾಡಿದ್ದಾರೆ.

ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿರುವ ಪ್ರಕಾರ, ಇತ್ತೀಚೆಗೆ ಮಾತನಾಡಿರುವ ಅಕ್ಷಯ್ ಬೆಲ್​ಬಾಟಂ ಸಂಕಷ್ಟದ ನಡುವೆಯೂ ಎಂತಹ ದೊಡ್ಡ ರಿಸ್ಕ್ ತೆಗೆದುಕೊಂಡಿದೆ ಎಂಬುದನ್ನು ವಿವರಿಸಿದ್ದಾರೆ. ‘‘ಬಾಲಿವುಡ್​ನ ಮಾರುಕಟ್ಟೆಯಲ್ಲಿ 30 ಪ್ರತಿಶತ ಕೊಡುಗೆಯನ್ನು ಮಹಾರಾಷ್ಟ್ರ ನೀಡುತ್ತದೆ. ಪ್ರಸ್ತುತ ಅದು ನಮಗೆ ಲಭ್ಯವಿಲ್ಲ. ಉಳಿದ 70 ಪ್ರತಿಶತ ಮಾರುಕಟ್ಟೆ ಇಡೀ ದೇಶದ್ದು. ಆದರೆ ಅದರಲ್ಲೂ ಚಿತ್ರಮಂದಿರ ಅರ್ಧ ಮಾತ್ರ ಭರ್ತಿಯಾಗಲು ಅವಕಾಶವಿದೆ. ಹಾಗಾಗಿ ಗಳಿಕೆಯ ಸಾಧ್ಯತೆ ಇರುವುದು 70ರ ಅರ್ಧದಷ್ಟು ಮಾತ್ರ. ಅದಾಗ್ಯೂ ಯಾರಾದರೊಬ್ಬರು ಮುಂದೆ ಬಂದು ಸವಾಲನ್ನು ತೆಗೆದುಕೊಳ್ಳಲೇ ಬೇಕು. ನಾವು ತೆಗೆದುಕೊಂಡಿದ್ದೇವೆ’’ ಎಂದಿದ್ದಾರೆ ಅಕ್ಷಯ್.

ಬೆಲ್​ಬಾಟಂಗೆ ಶುಭಹಾರೈಸಿರುವ ಅಜಯ್ ದೇವಗನ್:

ಬೆಲ್​ಬಾಟಂ ಚಿತ್ರವು 1980ರ ಕಾಲಘಟ್ಟದ ಕತೆಯನ್ನು ಒಳಗೊಂಡಿದೆ. ವಾಣಿ ಕಪೂರ್, ಲಾರಾ ದತ್ತ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ರಾ ಏಜೆಂಟ್ ಒಬ್ಬನ ಕತೆಯನ್ನು ಚಿತ್ರವು ಕಟ್ಟಿಕೊಡಲಿದೆ.

ಇದನ್ನೂ ಓದಿ:

Daler Mehndi: ನನ್ನ ರೇಟ್​ ಜಾಸ್ತಿ, ಅದಕ್ಕೆ ನನ್ನನ್ನು ಯಾರೂ ಹಾಡುವುದಕ್ಕೆ ಕರೆಯುವುದಿಲ್ಲ- ಖ್ಯಾತ ಗಾಯಕ ದಲೇರ್ ಮೆಹಂದಿ

‘ಆ ಕಾಲದಲ್ಲೇ ಶಂಕರ್​ ನಾಗ್​ ಲ್ಯಾಪ್​ಟಾಪ್​ ಬಳಸುತ್ತಿದ್ರು’; ಅಚ್ಚರಿ ವಿಚಾರ ಹಂಚಿಕೊಂಡ ಬಿರಾದಾರ್​

(Bell Bottom movie released and Twinkle Khanna shares her first reaction with Akshay Kumar in UK)

Published On - 11:47 am, Thu, 19 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್