AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇನ್ನೊಂದು ಮದುವೆ ಆಗ್ತೀರಾ?’: ಕರಿಷ್ಮಾ ಕಪೂರ್​ಗೆ ನೇರವಾಗಿ ಪ್ರಶ್ನೆ ಎಸೆದ ಭೂಪ; ನಟಿಯ ಉತ್ತರ ಏನು?

2016ರಲ್ಲಿ ಡಿವೋರ್ಸ್​ ಪಡೆದ ಕರಿಷ್ಮಾ ಕಪೂರ್​ ಅವರು ಇನ್ನೊಂದು ಮದುವೆ ಆಗುತ್ತಾರಾ ಎಂಬ ಪ್ರಶ್ನೆ ಫ್ಯಾನ್ಸ್​ ಮನದಲ್ಲಿ ಮೂಡಿದೆ. ಅದಕ್ಕೆ ಕರಿಷ್ಮಾ ಉತ್ತರ ನೀಡಿದ್ದಾರೆ.

‘ಇನ್ನೊಂದು ಮದುವೆ ಆಗ್ತೀರಾ?’: ಕರಿಷ್ಮಾ ಕಪೂರ್​ಗೆ ನೇರವಾಗಿ ಪ್ರಶ್ನೆ ಎಸೆದ ಭೂಪ; ನಟಿಯ ಉತ್ತರ ಏನು?
ಕರಿಷ್ಮಾ ಕಪೂರ್
TV9 Web
| Edited By: |

Updated on: Apr 29, 2022 | 3:56 PM

Share

​ನಟಿ ಕರಿಷ್ಮಾ ಕಪೂರ್​ (Karisma Kapoor) ಅವರು ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ಆದರೂ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕರಿಷ್ಮಾ ಕಪೂರ್​ ಆ್ಯಕ್ಟೀವ್​ ಆಗಿದ್ದಾರೆ. ಅವರದ್ದು ಫಿಲ್ಮಿ ಕುಟುಂಬ ಆದ್ದರಿಂದ ಸಿನಿಮಾ ವಲಯದಿಂದ ಅವರು ಸಂಪೂರ್ಣವಾಗಿ ಹೊರಹೋಗಲು ಸಾಧ್ಯವಿಲ್ಲ. ಅಭಿಮಾನಿಗಳ ಜೊತೆ ಅವರು ಆಗಾಗ ಪ್ರಶ್ನೋತ್ತರ ನಡೆಸುತ್ತಾರೆ. ಇತ್ತೀಚೆಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ (Karisma Kapoor Instagram) ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದರು. ನಟಿಯ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ನೆಟ್ಟಿಗರು ಹತ್ತಾರು ಬಗೆಯ ಪ್ರಶ್ನೆ ಕೇಳಿದರು. ಕೆಲವರಂತೂ ಅತಿ ಪರ್ಸನಲ್​ ಆದಂತಹ ವಿಚಾರಗಳ ಬಗ್ಗೆಯೂ ಪ್ರಶ್ನೆ ಎತ್ತಿದರು. ಈ ವೇಳೆ ಕರಿಷ್ಮಾ ಕಪೂರ್ ಅವರ ಮರು ಮದುವೆ ಬಗ್ಗೆ ಕೂಡ ಪ್ರಸ್ತಾಪ ಆಯಿತು. ಆ ಪ್ರಶ್ನೆಯನ್ನು ಅವರು ಸ್ಕಿಪ್​ ಮಾಡಬಹುದಿತ್ತು. ಆದರೆ ನಾಜೂಕಾಗಿ ಉತ್ತರ ನೀಡಿ ಅವರು ಜಾರಿಕೊಂಡರು. 2016ರಲ್ಲಿ ಸಂಜಯ್​ ಕಪೂರ್​ ಜೊತೆಗಿನ ದಾಂಪತ್ಯ ಜೀವನಕ್ಕೆ ಕರಿಷ್ಮಾ ಅಂತ್ಯ ಹಾಡಿದ್ದರು. ಡಿವೋರ್ಸ್​ (Karisma Kapoor Divorce) ಬಳಿಕ ಅವರು ಸಿಂಗಲ್​ ಆಗಿದ್ದಾರೆ. ಈಗ ಮರು ಮದುವೆ ಬಗ್ಗೆ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನ ಎಂಬುದು ತುಂಬ ಕಾಮನ್​ ಎಂಬಂತಾಗಿದೆ. ಇತ್ತೀಚೆಗೆ ಅನೇಕ ತಾರೆಯರು ಡಿವೋರ್ಸ್​ ಪಡೆದು ಸುದ್ದಿ ಆಗಿದ್ದಾರೆ. ಇನ್ನು, ಮರು ಮದುವೆಗಳಿಗೂ ಬರವಿಲ್ಲ. ಹಾಗಾಗಿ ಕರಿಷ್ಮಾ ಕಪೂರ್​ ಕೂಡ ಇನ್ನೊಂದು ಮದುವೆ ಆಗುತ್ತಾರಾ ಎಂಬ ಬಗ್ಗೆ ಜನರಿಗೆ ಕೌತುಕ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಪ್ರಶ್ನೋತ್ತರಕ್ಕೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಅಭಿಮಾನಿಯೊಬ್ಬರು ಈ ರೀತಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ಗೊಂದಲಮಯ ಮುಖ ಮಾಡಿಕೊಂಡಿರುವ ಫೋಟೋವೊಂದನ್ನು ಕರಿಷ್ಮಾ ಕಪೂರ್ ಪೋಸ್ಟ್​ ಮಾಡಿದ್ದಾರೆ. ‘ಡಿಪೆಂಡ್ಸ್​’ ಎಂದು ಅದಕ್ಕೆ ಅವರು ಕ್ಯಾಪ್ಷನ್​ ನೀಡಿದ್ದಾರೆ. ಅಂದರೆ ಸಂದರ್ಭ ಅಥವಾ ವ್ಯಕ್ತಿಯ ಆಧಾರದ ಮೇಲೆ ತಮ್ಮ ಮರು ಮದುವೆಯ ವಿಷಯ ನಿರ್ಧಾರ ಆಗುತ್ತದೆ ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ.

ಬಾಲಿವುಡ್​ನಲ್ಲಿ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಕರಿಷ್ಮಾ ಕಪೂರ್​ ಅವರಿಗೆ ಸಲ್ಲುತ್ತದೆ. 1998ರಲ್ಲಿ ‘ದಿಲ್​ ತೋ ಪಾಗಲ್​ ಹೈ’ ಚಿತ್ರದ ನಟನೆಗಾಗಿ ಅವರು ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ನಾಲ್ಕು ಬಾರಿ ಫಿಲ್ಮ್​ ಫೇರ್ ಪ್ರಶಸ್ತಿ ಸ್ವೀಕರಿಸಿದ ಹಿರಿಮೆ ಅವರದ್ದು. 2003ರಲ್ಲಿ ಉದ್ಯಮಿ ಸಂಜಯ್​ ಕಪೂರ್​ ಜೊತೆ ಅವರ ಮದುವೆ ನಡೆದಿತ್ತು. ಈ ಜೋಡಿಗೆ ಇಬ್ಬರು ಮಕ್ಕಳು. ಆದರೆ ನಂತರದ ವರ್ಷಗಳಲ್ಲಿ ಕರಿಷ್ಮಾ ಮತ್ತು ಸಂಜಯ್​ ನಡುವೆ ವೈಮನಸ್ಸು ಮೂಡಿತು. 2014ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಅವರು 2016ರಲ್ಲಿ ಅಧಿಕೃತವಾಗಿ ಬೇರಾದರು. ಹಾಗಾಗಿ ಕರಿಷ್ಮಾ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾರೋ ಇಲ್ಲವೋ ಎಂಬುದು ಅಭಿಮಾನಿಗಳ ಕೌತುಕ.

ವೆಬ್​ ಸರಣಿ ಲೋಕಕ್ಕೂ ಕರಿಷ್ಮಾ ಕಾಲಿಟ್ಟಿದ್ದಾರೆ. 2020ರಲ್ಲಿ ಬಂದ ‘ಮೆಂಟಲ್​ಹುಡ್​’ ವೆಬ್​ ಸಿರೀಸ್​ನಲ್ಲಿ ಅವರು ನಟಿಸಿದರು. ಕಿರುತೆರೆಯ ಅನೇಕ ಕಾರ್ಯಕ್ರಮಗಳಿಗೆ ಜಡ್ಜ್​ ಆಗಿಯೂ ಅವರು ಕೆಲಸ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 70 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​

ನಾಗಚೈತನ್ಯ 2ನೇ ಮದುವೆ ಗಾಸಿಪ್​: ಸಮಂತಾ ರೀತಿ ಹೆಣ್ಣು ಬೇಡವೇ ಬೇಡ ಅಂತಿದೆಯಾ ಅಕ್ಕಿನೇನಿ ಕುಟುಂಬ?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್