AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಊಂಚಾಯಿ’ ಸಿನಿಮಾದ 3 ನೇ ದಿನದ ಬಾಕ್ಸ್​ ಆಫೀಸ್ ಕಲೆಕ್ಷನ್ ಎಷ್ಟು?

ಅಮಿತಾಬ್​ ಬಚ್ಚನ್​ ಅವರ ‘ಊಂಚಾಯಿ' ಸಿನಿಮಾವು ಉತ್ತಮ ಪ್ರದರ್ಶನ ಕಾಣುತ್ತಿದ್ದು, ವರದಿಯ ಪ್ರಕಾರ ಮೂರನೇ ದಿನ 4.90 ರಿಂದ5.20 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ಹೇಳಲಾಗಿದೆ.

‘ಊಂಚಾಯಿ' ಸಿನಿಮಾದ 3 ನೇ ದಿನದ ಬಾಕ್ಸ್​ ಆಫೀಸ್ ಕಲೆಕ್ಷನ್ ಎಷ್ಟು?
ಅಮಿತಾಭ್​ ಬಚ್ಚನ್​
TV9 Web
| Edited By: ಕಿರಣ್ ಹನುಮಂತ್​ ಮಾದಾರ್|

Updated on: Nov 14, 2022 | 3:31 PM

Share

ಅಮಿತಾಭ್ ಬಚ್ಚನ್​, ಅನುಪಮ್​ ಖೇರ್​, ನೀನಾ ಗುಪ್ತಾ ಮತ್ತು ಬೋಮನ್​ ಇರಾನಿ ನಟಿಸಿರುವ ಸೂರಜ್​ ಬರ್ಜಾತ್ಯಾ ಅವರ ‘ಊಂಚಾಯಿ‘(unchai) ಸಿನಿಮಾವು ಶುಕ್ರವಾರ(ನವೆಂಬರ್​ 11) ರಿಲೀಸ್ ಆಗಿತ್ತು. ಮೊದಲ ದಿನವೇ 1.81ಕೋಟಿ ರೂಪಾಯಿ ಗಳಿಸುವುದರೊಂದಿಗೆ ಉತ್ತಮ ಓಪನಿಂಗ್​ ಮಾಡಿತು. ಎರಡನೇ ದಿನ 3.65ಕೋಟಿ ರೂಪಾಯಿ ಗಳಿಸಿಕೊಂಡಿದ್ದ ‘ಊಂಚಾಯಿ’ ಚಿತ್ರ, ಮೂರನೇ ದಿನ 35ರಿಂದ40 ಶೇಕಡ ಜಿಗಿತವನ್ನು ಕಾಣುವುದರೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ 4.90-5.20 ಕೋಟಿ ರೂ. ಕಮಾಯಿ ಮಾಡಿದೆ. ಇದರೊಂದಿಗೆ ‘ಊಂಚಾಯಿ’ ಚಿತ್ರವು ಒಟ್ಟೂ 10.50 ಕೋಟಿ ರೂಪಾಯಿ ಗಳಿಸಿಕೊಂಡಿದೆ.

‘ಊಂಚಾಯಿ’ ಸಿನಿಮಾವು ದೇಶಾದ್ಯಂತ ಸೀಮಿತ ಬಿಡುಗಡೆಯನ್ನು ಹೊಂದಿದೆ. ಕೊರೊನಾ ಬಳಿಕ ಅಮಿತಾಭ್​ ನಟನೆಯ ಈ ಸಿನಿಮಾವು ವಾರಾಂತ್ಯದ ಅತ್ಯಧಿಕ ದಾಖಲೆಯಾಗಿದೆ. ಇನ್ನು ಇವತ್ತು(ನವೆಂಬರ್ 14) ಕೂಡ ಎಂದಿನಂತೆ ಚೆನ್ನಾಗಿ ಕಮಾಯಿ ಮಾಡಿದರೆ ತಿಂಗಳ ಪೂರ್ತಿ ಬಾಕ್ಸ್​ಆಫೀಸ್​ನಲ್ಲಿ ತನ್ನ ಓಟವನ್ನು ಮುಂದುವರೆಸುವ ಸಾಧ್ಯತೆ ಇದೆ. ಬಾಲಿವುಡ್​ನಲ್ಲಿ ‘ಲಾಲ್​ ಸಿಂಗ್​ ಚಡ್ಡಾ’ದಂತಹ ದೊಡ್ಡ ಬಜೆಟ್​ ಸಿನಿಮಾಗಳು ಮತ್ತು ಅಕ್ಷಯ್​ ಕುಮಾರ್​ ಅವರ ನಾಲ್ಕು ಚಿತ್ರಗಳು ಈ ವರ್ಷದಲ್ಲಿ ವಿಫಲವಾದವು, ಪ್ರಾದೇಶಿಕ ಸಿನಿಮಾಗಳ ಮುಂದೆ ಸತತ ಸೋಲನ್ನು ಅನುಭವಿಸುತ್ತಿರುವ ಬಾಲಿವುಡ್ ಸಿನಿಮಾಗಳು ‘ಊಂಚಾಯಿ’ ಚಿತ್ರದಿಂದ ಟೇಕ್​ ಆಫ್​ ಮಾಡುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ:Amitabh Bachchan: ಪುನೀತ್​​ ಬಗ್ಗೆ ಅಮಿತಾಭ್​ ಬಚ್ಚನ್​ ಮಾತು; ದಿಗ್ಗಜ ನಟನಿಗೂ ಕಾಡುತ್ತಿದೆ ಅಪ್ಪು ನಗು

ಕತ್ರಿನಾ ಕೈಫ್​ ಅವರ ಇತ್ತೀಚಿನ ಹಾರರ್​-ಕಾಮಿಡಿ ‘ಫೋನ್​ಭೂತ್’​ ಸಿನಿಮಾ ಕೂಡ ಬಾಕ್ಸ್​ಆಫೀಸ್​ನಲ್ಲಿ ಹೇಳಿಕೊಳ್ಳುವಷ್ಟು ಗಳಿಕೆ ಮಾಡಿಲ್ಲ. ಇದರೊಟ್ಟಿಗೆ ಜಾನ್ವಿ ಕಪೂರ್​ ಅವರ ಥ್ರಿಲ್ಲರ್​ ಸಿನಿಮಾ ‘ಮಿಲಿ’ ಕೂಡ ಫ್ಲಾಪ್​ ಆಯಿತು. ಇನ್ನು ಈ ಚಿತ್ರದಲ್ಲಿ ನಟಿಸಿದ ಅನುಪಮ್​ ಖೇರ್ ‘ಊಂಚಾಯಿ’ ಸಿನಿಮಾ ಟಿಕೆಟ್​ ಪಡೆಯಲು ಪ್ರಯತ್ನಿಸುತ್ತಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಊಂಚಾಯಿ’ ಸಿನಿಮಾವನ್ನು ಸೂರಜ್​ ಬರ್ಜಾತ್ಯಾ ನಿರ್ದೇಶಿಸಿದ್ದು, ರಾಜಶ್ರೀ ಪ್ರೊಡಕ್ಷನ್ಸ್​ ಅಡಿ ನಿರ್ಮಾಣ ಮಾಡಲಾಗಿದೆ. ‘ಊಂಚಾಯಿ’ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈ ಸಿನಿಮಾವು ಬಾಕ್ಸ್​​ ಆಫೀಸ್​ನಲ್ಲಿ ಎಷ್ಟರ ಮಟ್ಟಿಗೆ ಗಳಿಕೆ ಮಾಡಬಹುದು ಎಂದು ಕಾದು ನೋಡಬೇಕಾಗಿದೆ.

ಇನ್ನಷ್ಟು ಹೆಚ್ಚಿನ ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!