AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವೀಟ್​ ಕಂಡರೆ ಅತ್ತ ತಿರುಗಿಯೂ ನೋಡಲ್ಲ ಜಾನ್​ ಅಬ್ರಾಹಂ; ಅವರಿಗೆ ಇರೋ ಸಮಸ್ಯೆ ಏನು?

ಜಾನ್​ಗೆ ಕಾಜು ಕಟ್ಲಿ ಸ್ವೀಟ್ ಎಂದರೆ ಪಂಚಪ್ರಾಣ. ಇದನ್ನು ಅವರು ಕೊನೆಯದಾಗಿ ತಿಂದಿದ್ದು 27 ವರ್ಷಗಳ ಹಿಂದೆ! ಈ ವಿಚಾರವನ್ನು ಅವರು ಈ ಶೋನಲ್ಲಿ ಹೇಳಿಕೊಂಡಿದ್ದಾರೆ.

ಸ್ವೀಟ್​ ಕಂಡರೆ ಅತ್ತ ತಿರುಗಿಯೂ ನೋಡಲ್ಲ ಜಾನ್​ ಅಬ್ರಾಹಂ; ಅವರಿಗೆ ಇರೋ ಸಮಸ್ಯೆ ಏನು?
ಜಾನ್​ ಅಬ್ರಾಹಂ
TV9 Web
| Edited By: |

Updated on: Mar 20, 2022 | 6:32 PM

Share

ಸಿಹಿಯನ್ನು ಕಂಡರೆ ದ್ವೇಷ ಮಾಡುವವರು ತುಂಬಾನೇ ಕಡಿಮೆ. ಹುಡುಕಿದರೆ ಅಲ್ಲೊಬ್ಬರು ಇಲ್ಲೊಬ್ಬರು ಸಿಗಬಹುದು. ಅಚ್ಚರಿ ಎಂದರೆ ಜಾನ್​ ಅಬ್ರಾಹಂ (John Abraham) ಅವರು ಸಿಹಿಯನ್ನು ಸಿಗರೇಟ್​ಗಿಂತಲೂ ಹೆಚ್ಚು ದ್ವೇಷ ಮಾಡುತ್ತಾರೆ. ಕಳೆದ 27 ವರ್ಷಗಳಿಂದ ಅವರು ತಮ್ಮ ನೆಚ್ಚಿನ ಸ್ವೀಟ್​ಅನ್ನು ನಾಲಿಗೆಗೂ ಟಚ್​ ಮಾಡಿಲ್ಲ. ಕೋಲ್ಡ್​ ಡ್ರಿಂಕ್ಸ್​ (Cold Drinks) ಎಂದರೆ ಅವರು ತುಂಬಾನೇ ದ್ವೇಷ ಮಾಡುತ್ತಾರೆ. ಹಾಗಾದರೆ, ಜಾನ್ ಅವರು ಈ ರೀತಿ ನಿರ್ಧಾರ ತೆಗೆದುಕೊಂಡಿದ್ದೇಕೆ? ಸ್ವೀಟ್​ ಕಂಡರೆ ಅವರು ದೂರ ಓಡೋದು ಏಕೆ? ಈ ಪ್ರಶ್ನೆಗೆ ಉತ್ತರವನ್ನು ಜಾನ್​ ಅಬ್ರಾಹಂ ಅವರೇ ಹೇಳಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ‘ಶೇಪ್ ಆಫ್​ ಯು’ ಕಾರ್ಯಕ್ರಮದಲ್ಲಿ ಜಾನ್​ ಅಬ್ರಾಹಂ ಮಾತನಾಡಿದ್ದಾರೆ. ಶಿಲ್ಪಾ ಶೆಟ್ಟಿ ಮೊದಲಿನಿಂದಲೂ ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದ್ದಾರೆ. ಜಾನ್​ ಅಬ್ರಾಹಂ ಕೂಡ ಫಿಟ್​ನೆಸ್​ ಫ್ರೀಕ್​. ಈ ಕಾರಣಕ್ಕೆ ಶಿಲ್ಪಾ ಶೆಟ್ಟಿ ಶೋನಲ್ಲಿ ಜಾನ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಜಾನ್​ ಬಿಚ್ಚಿಟ್ಟ ಮಾಹಿತಿ ಅನೇಕರಿಗೆ ಅಚ್ಚರಿ ತಂದಿದೆ.

ಜಾನ್​ಗೆ ಕಾಜು ಕಟ್ಲಿ ಸ್ವೀಟ್ ಎಂದರೆ ಪಂಚಪ್ರಾಣ. ಇದನ್ನು ಅವರು ಕೊನೆಯದಾಗಿ ತಿಂದಿದ್ದು 27 ವರ್ಷಗಳ ಹಿಂದೆ! ಈ ವಿಚಾರವನ್ನು ಅವರು ಈ ಶೋನಲ್ಲಿ ಹೇಳಿಕೊಂಡಿದ್ದಾರೆ. ‘ನಾನು 27 ವರ್ಷಗಳಿಂದ ನನ್ನ ಫೇವರಿಟ್​ ಕಾಜು ಸ್ವೀಟ್​ ತಿಂದಿದ್ದೆ. ನಾನು ಯಾವುದೇ ಕೋಲ್ಡ್​ ಡ್ರಿಂಕ್ಸ್ ಕುಡಿದಿಲ್ಲ, ಕುಡಿಯುವುದೂ ಇಲ್ಲ. ನೀವು (ಶಿಲ್ಪಾ) ಇದೇ ಡಯಟ್ ಫಾಲೋ ಮಾಡುತ್ತೀರಿ ಎಂದು ನಾನು ಅಂದುಕೊಂಡಿದ್ದೇನೆ. ಸಿಹಿ ಅನ್ನೋದು ವಿಶ್ವದ ಅತಿ ದೊಡ್ಡ ವಿಷ. ಸಿಗರೇಟ್​ಗಿಂತಲೂ ಇದು ಅಪಾಯ’ ಎಂದಿದ್ದಾರೆ ಜಾನ್​.

ಕೆಲಸ ಮಾಡುವವರು ವರ್ಷಕ್ಕೆ ಒಂದಷ್ಟು ದಿನ ಬ್ರೇಕ್ ತೆಗೆದುಕೊಂಡು ಹೊರಗೆ ಸುತ್ತಾಟ ನಡೆಸುತ್ತಾರೆ. ಆದರೆ, ಜಾನ್​ ಅಬ್ರಾಹಂಗೆ ತಾವು ಮಾಡೋ ಕೆಲಸದ ಮೇಲೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಕಳೆದ 17-18 ವರ್ಷಗಳಲ್ಲಿ ಅವರು ಬ್ರೇಕ್​ ಎಂದು ಪಡೆದಿದ್ದು ಕೇವಲ ಮೂರು ದಿನ! ಈ ವಿಚಾರವನ್ನೂ ಅವರು ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್​ ಅಚ್ಚರಿ ಹೊರಹಾಕಿದ್ದಾರೆ.

‘ಏಕ್​ ವಿಲನ್​ ರಿಟರ್ನ್​​’ನಲ್ಲಿ ಜಾನ್​ ಅಬ್ರಾಹಂ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳನ್ನು ಇತ್ತೀಚೆಗೆ ಪೂರ್ಣಗೊಳಿಸಿದ್ದಾರೆ. ಶಾರುಖ್​ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಸಿನಿಮಾದಲ್ಲಿ ಜಾನ್​ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್​ ರಿಲೀಸ್ ಆಗಿತ್ತು. ಇದಲ್ಲದೆ ಇನ್ನೂ ಹಲವು ಪ್ರಾಜೆಕ್ಟ್​ಗಳಲ್ಲಿ ನಟಿಸುತ್ತಿದ್ದಾರೆ ಅವರು.

ಇದನ್ನೂ ಓದಿ: ಒಂದೇ ಸಿನಿಮಾ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​-ಜಾನ್​ ಅಬ್ರಾಹಂ; ಮಲಯಾಳಂ ಚಿತ್ರಕ್ಕೆ ಸ್ಟಾರ್​ ನಟರು ಫಿದಾ

ವಿಡಿಯೋ ಮಾಡಿದ್ದಕ್ಕೆ ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಜಾನ್​ ಅಬ್ರಾಹಂ; ಮುಂದೇನಾಯ್ತು?

Follow Us
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ