AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KRK: ಶ್ರದ್ಧಾ ಕಪೂರ್​ಗೆ ಬಾಡಿ ಶೇಮಿಂಗ್​ ಮಾಡಿದ ಕಾಂಟ್ರವರ್ಸಿ ವಿಮರ್ಶಕ ಕಮಾಲ್​ ಆರ್​. ಖಾನ್​

Kamaal R. Khan | Shraddha Kapoor: ಒಮ್ಮೆ ಜೈಲು ಊಟ ತಿಂದು ಬಂದ ಬಳಿಕ ಕಮಾಲ್​ ಆರ್. ಖಾನ್​ ಅವರು ಸೈಲೆಂಟ್​ ಆಗಿದ್ದರು. ಆದರೆ ಈಗ ಮತ್ತೆ ಮನಬಂದಂತೆ ಮಾತನಾಡಲು ಶುರು ಮಾಡಿದ್ದಾರೆ.

KRK: ಶ್ರದ್ಧಾ ಕಪೂರ್​ಗೆ ಬಾಡಿ ಶೇಮಿಂಗ್​ ಮಾಡಿದ ಕಾಂಟ್ರವರ್ಸಿ ವಿಮರ್ಶಕ ಕಮಾಲ್​ ಆರ್​. ಖಾನ್​
ಕಮಾಲ್ ಆರ್. ಖಾನ್, ಶ್ರದ್ಧಾ ಕಪೂರ್
ಮದನ್​ ಕುಮಾರ್​
|

Updated on: Mar 10, 2023 | 8:00 AM

Share

ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್​. ಖಾನ್​ (Kamaal R. Khan) ಅವರು ಮಾಡಿಕೊಂಡಿರುವ ಎಡವಟ್ಟುಗಳು ಒಂದೆರಡಲ್ಲ. ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಅವರು ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಆದರೂ ಕೂಡ ತಮ್ಮ ಹಳೇ ಚಾಳಿಯನ್ನು ಕಮಾಲ್​ ಆರ್​. ಖಾನ್​ ಬಿಟ್ಟಿಲ್ಲ. ನಟಿ ಶ್ರದ್ಧಾ ಕಪೂರ್​ (Shraddha Kapoor) ಮತ್ತು ನಟ ರಣಬೀರ್​ ಕಪೂರ್​ ಬಗ್ಗೆ ಅವರು ನಾಲಿಗೆ ಹರಿಬಿಟ್ಟಿ​ದ್ದಾರೆ. ಇದಕ್ಕೆ ಅನೇಕರು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಲವ್​ ರಂಜನ್​ ನಿರ್ದೇಶನದ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾದ ವಿಮರ್ಶೆ ಮಾಡಿರುವ ಕಮಾಲ್​ ಆರ್​. ಖಾನ್​ ಅವರು ಈ ಚಿತ್ರದ ಹೀರೋ-ಹೀರೋಯಿನ್​ಗೆ ಬಾಡಿ ಶೇಮಿಂಗ್​ (Body Shaming) ಮಾಡಿದ್ದಾರೆ. ಇದಕ್ಕೆ ಚಿತ್ರತಂಡದವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಒಮ್ಮೆ ಜೈಲು ಊಟ ತಿಂದು ಬಂದ ಬಳಿಕ ಕಮಾಲ್​ ಆರ್. ಖಾನ್​ ಅವರು ಸೈಲೆಂಟ್​ ಆಗಿದ್ದರು. ಇನ್ಮುಂದೆ ಯಾವುದೇ ಸಿನಿಮಾದ ವಿಮರ್ಶೆ ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ಈಗ ಉಲ್ಟಾ ಹೊಡೆದಿದ್ದಾರೆ. ಮಾರ್ಚ್​ 8ರಂದು ಬಿಡುಗಡೆ ಆಗಿರುವ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾವನ್ನು ಅವರು ವಿಮರ್ಶೆ ಮಾಡಿದ್ದಾರೆ. ವಿಮರ್ಶೆ ಮಾಡಿದ್ದು ತಪ್ಪಲ್ಲ. ಆದರೆ ಬಾಡಿ ಶೇಮಿಂಗ್​ ಮಾಡಿದ್ದರಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: Ranbir Kapoor: ‘ತು ಜೂಟಿ ಮೈ ಮಕ್ಕಾರ್​’ ಚಿತ್ರಕ್ಕೆ ಮೊದಲ ದಿನ ಆದ ಕಲೆಕ್ಷನ್​ ಎಷ್ಟು? ಇಲ್ಲಿದೆ ರಿಪೋರ್ಟ್​

ಇದನ್ನೂ ಓದಿ
Image
RRR ಕಲೆಕ್ಷನ್​ ರಿಪೋರ್ಟ್​ ಸುಳ್ಳು ಎಂದ ಕಮಾಲ್​ ಆರ್​ ಖಾನ್​; ಸಾಬೀತು ಮಾಡುವುದಾಗಿ ಘೋಷಣೆ
Image
‘ಭಕ್ತರ ಭಕ್ತ ಮಹಾಭಕ್ತ’, ‘ಕಾಶ್ಮೀರದ ಶರ್ಮಾ’: ಖಾನ್​ ಚಿತ್ರಕ್ಕೆ ಹೊಸ ಹೆಸರು ಸೂಚಿಸಿದ ಇನ್ನೊಬ್ಬ ಖಾನ್​
Image
‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​
Image
ಸಲ್ಮಾನ್​ ಖಾನ್​ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ; ಕಮಾಲ್​ ಆರ್​ ಖಾನ್​ಗೆ ಕೋರ್ಟ್​ ಆದೇಶ

‘ನಿರ್ದೇಶಕ ಲವ್​ ರಂಜನ್ ಅವರೇ.. ನೀವು ಪದೇ ಪದೇ ಶ್ರದ್ಧಾ ಕಪೂರ್​ ಅವರನ್ನು ನೀರಿಗೆ ಬೀಳಿಸುತ್ತೀರಿ. ಆದರೆ ರಣಬೀರ್​ ಕಪೂರ್​ ಅವರನ್ನು ದಡದ ಮೇಲೆ ನಿಲ್ಲಿಸುತ್ತೀರಿ. ಯಾಕೆಂದರೆ, ಅವರು ನೀರಿಗೆ ಬಿದ್ದರೆ ವಿಗ್​ ಕಿತ್ತು ಬರುತ್ತದೆ’ ಎಂದು ಕಮಾಲ್​ ಆರ್​. ಖಾನ್​ ಹೇಳಿದ್ದಾರೆ. ಇಷ್ಟೇ ಆಗಿದ್ದರೆ ಹೆಚ್ಚು ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಶ್ರದ್ಧಾ ಕಪೂರ್​ ದೇಹದ ಬಗ್ಗೆ ಅವರು ಚೀಪ್​ ಆಗಿ ಮಾತನಾಡಿದ್ದಾರೆ.

ಇದನ್ನೂ ಓದಿ:  KRK: ಲೈಂಗಿಕ ಕಿರುಕುಳ ಆರೋಪದಲ್ಲಿ ಕಮಾಲ್​ ಆರ್​. ಖಾನ್​ ಅರೆಸ್ಟ್​; ಒಂದೇ ವಾರದಲ್ಲಿ ಡಬಲ್​ ಸಂಕಟ

‘ಶ್ರದ್ಧಾ ಕಪೂರ್​ ಅವರನ್ನು ನೀವು ಪದೇ ಪದೇ ಬಿಕಿನಿಯಲ್ಲಿ ತೋರಿಸಿದ್ದೀರಿ. ಏನನ್ನು ತೋರಿಸಲು ನೀವು ಬಯಸಿದ್ದೀರಿ? ಆಕೆ ದೀಪಿಕಾ ಅಲ್ಲ, ಕತ್ರಿಕಾ ಕೈಫ್​ ಕೂಡ ಅಲ್ಲ, ಕರೀನಾನೂ ಅಲ್ಲ. ಆ ಹುಡುಗಿ ಬಳಿ ಏನೂ ಇಲ್ಲದಿರುವಾಗ ನೀವು ಆಕೆಯನ್ನು ಮತ್ತೆ ಮತ್ತೆ ಹೀಗೆ ತೋರಿಸಿ ಏನು ಸಾಬೀತು ಮಾಡುತ್ತೀರಿ’ ಎಂದು ಕಮಾಲ್​ ಆರ್​. ಖಾನ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: RRR ಕಲೆಕ್ಷನ್​ ರಿಪೋರ್ಟ್​ ಸುಳ್ಳು ಎಂದ ಕಮಾಲ್​ ಆರ್​ ಖಾನ್​; ಸಾಬೀತು ಮಾಡುವುದಾಗಿ ಘೋಷಣೆ

ಈ ರೀತಿ ಬಾಡಿ ಶೇಮಿಂಗ್​ ಮಾಡಿದ್ದಕ್ಕಾಗಿ ಕಮಾಲ್​ ಆರ್​. ಖಾನ್​ ಅವರಿಗೆ ಚಿತ್ರತಂಡದವರು ಲೀಗಲ್​ ನೋಟಿಸ್​ ಕಳಿಸಿದರೂ ಅಚ್ಚರಿ ಏನಿಲ್ಲ. ಈ ಹಿಂದೆ ಸಲ್ಮಾನ್​ ಖಾನ್​ ಅವರು ಕಮಾಲ್​ ಆರ್​. ಖಾನ್​ ವಿರುದ್ಧ ಕಾನೂನು ಸಮರ ಸಾರಿದ್ದರು. ಕರಣ್​ ಜೋಹರ್​ ಕೂಡ ಬುದ್ಧಿ ಕಲಿಸಲು ಮುಂದಾಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?