Dhaakad BO collection: 8ನೇ ದಿನ ಸೇಲ್ ಆಗಿದ್ದು ಕೇವಲ 20 ಟಿಕೆಟ್​, ಗಳಿಸಿದ್ದು 4,420 ರೂ; ಇದು ಕಂಗನಾ ಚಿತ್ರದ ದುಸ್ಥಿತಿ

Kangana Ranaut | Dhaakad Movie: ಕಂಗನಾ ರಣಾವತ್ ನಟನೆಯ ಈ ಚಿತ್ರದ ಬಂಡವಾಳ ಸುಮಾರು 80 ಕೋಟಿ ರೂಗಳಿಂದ 90 ಕೋಟಿ ರೂ. ಪ್ರಚಾರದ ಖರ್ಚೂ ಸೇರಿದರೆ ಚಿತ್ರದ ಒಟ್ಟಾರೆ ಖರ್ಚು 100 ಕೋಟಿ ರೂ ಮುಟ್ಟುತ್ತದೆ. ಆದರೆ ಚಿತ್ರ ಮಾತ್ರ ಹೀನಾಯ ಸೋಲಿನ ರುಚಿ ಕಂಡಿದೆ.

Dhaakad BO collection: 8ನೇ ದಿನ ಸೇಲ್ ಆಗಿದ್ದು ಕೇವಲ 20 ಟಿಕೆಟ್​, ಗಳಿಸಿದ್ದು 4,420 ರೂ; ಇದು ಕಂಗನಾ ಚಿತ್ರದ ದುಸ್ಥಿತಿ
‘ಧಾಕಡ್’ ಚಿತ್ರದಲ್ಲಿ ಕಂಗನಾ ರಣಾವತ್​
Follow us
| Updated By: shivaprasad.hs

Updated on:May 28, 2022 | 12:06 PM

ಕಂಗನಾ ರಣಾವತ್ (Kangana Ranaut)​ ನಟನೆಯ ‘ಧಾಕಡ್’ (Dhaakad) ಚಿತ್ರ ರಿಲೀಸ್​ಗೂ ಮೊದಲು ತೀವ್ರ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಚಿತ್ರದ ಬಿಡುಗಡೆಯ ದಿನದಿಂದಲೇ ಬಹಳ ನೀರಸ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮಹಿಳಾ ಸೂಪರ್ ಹೀರೋ ಮಾದರಿಯ ಈ ಚಿತ್ರದಲ್ಲಿ ಕಂಗನಾ ಏಜೆಂಟ್ ಅಗ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಪ್ರೇಕ್ಷಕರಿಗೆ ಈ ಪ್ರಯತ್ನ ಮೆಚ್ಚುಗೆಯಾಗಿಲ್ಲ. ಜತೆಗೆ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳೂ ಸಿಕ್ಕಿದ್ದು ಮತ್ತಷ್ಟು ಹಿನ್ನಡೆಯಾಯಿತು. ಇದೀಗ ಚಿತ್ರ ತೆರೆಕಂಡು ಒಂದು ವಾರವಾಗಿದ್ದು, ದಿನದಿಂದ ದಿನಕ್ಕೆ ಗಳಿಕೆ ಕುಸಿಯುತ್ತಿದೆ. ಬಾಲಿವುಡ್ ಹಂಗಾಮಾ ಚಿತ್ರದ 8ನೇ ದಿನದ ಗಳಿಕೆಯ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ದೇಶಾದ್ಯಂತ ಶುಕ್ರವಾರ ‘ಧಾಕಡ್’ ಚಿತ್ರದ ಕೇವಲ 20 ಟಿಕೆಟ್​ಗಳು ಮಾರಾಟವಾಗಿವೆ. ಅದರಿಂದ ‘ಧಾಕಡ್’ ಗಳಿಸಿದ್ದು 4,420 ರೂಗಳನ್ನು ಮಾತ್ರ!

8 ದಿನಗಳ ಅವಧಿಯಲ್ಲಿ ಚಿತ್ರದ ಒಟ್ಟಾರೆ ಕಲೆಕ್ಷನ್ 3 ಕೋಟಿ ರೂ ಆಸುಪಾಸಿನಲ್ಲಿದೆ. ಈಗಾಗಲೇ ಚಿತ್ರಕ್ಕೆ ಲಭ್ಯವಾಗಿದ್ದ ಥಿಯೇಟರ್​ಗಳಿಂದ ಸಿನಿಮಾವನ್ನು ತೆಗೆಯಲಾಗುತ್ತಿದೆ. ಪ್ರೇಕ್ಷಕರ ಅಲಭ್ಯತೆಯಿಂದ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಿಂದ ‘ಧಾಕಡ್​’ ಮರೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಪಾರ್ಟಿಯಲ್ಲಿ ಈ ವ್ಯಕ್ತಿಗೆ ಪದೇಪದೇ ಕಿಸ್ ಮಾಡಿದ ಕಂಗನಾ; ಫ್ಯಾನ್ಸ್​ಗೆ ಮೂಡಿತು ಅನುಮಾನ

ಇದನ್ನೂ ಓದಿ
Image
ದುನಿಯಾ ವಿಜಯ್​ ಎದುರು ಕಾದಾಡಲು ‘ಬೇಟೆ ಶುರು..’ ಎಂದು ಮಾಸ್​ ಅವತಾರ ತಾಳಿದ ನಂದಮೂರಿ ಬಾಲಕೃಷ್ಣ
Image
Dhananjay: ಧನಂಜಯ್- ಅದಿತಿ ಅಭಿನಯದ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ರಿಲೀಸ್ ಡೇಟ್ ಅನೌನ್ಸ್
Image
‘RRR ಚಿತ್ರದಲ್ಲಿ ಇರೋದು ಸಲಿಂಗಕಾಮದ ಕಥೆ’: ಈ ರೀತಿ ಆರೋಪ ಮಾಡಿದ್ದು ಯಾರು?
Image
Shruti Haasan: ‘ಮುಂಬೈಯನ್ನೇ ವಿಶ್ವದ ಕೇಂದ್ರ ಸ್ಥಾನ ಎಂದು ಹಲವರು ನಂಬಿದ್ದಾರೆ; ಆದರೆ..’; ಹಿಂದಿ ಚಿತ್ರರಂಗದ ಬಗ್ಗೆ ಶೃತಿ ಹಾಸನ್ ಮಾತು

ಕಂಗನಾ ರಣಾವತ್ ನಟನೆಯ ಈ ಚಿತ್ರದ ಬಂಡವಾಳ ಸುಮಾರು 80 ಕೋಟಿ ರೂಗಳಿಂದ 90 ಕೋಟಿ ರೂ. ಪ್ರಚಾರದ ಖರ್ಚೂ ಸೇರಿದರೆ ಚಿತ್ರದ ಒಟ್ಟಾರೆ ಖರ್ಚು 100 ಕೋಟಿ ರೂ ಮುಟ್ಟುತ್ತದೆ. ಆದರೆ ಚಿತ್ರ ಮಾತ್ರ ಹೀನಾಯ ಸೋಲಿನ ರುಚಿ ಕಂಡಿದೆ. ರಜನೀಶ್ ಘಾಯ್ ನಿರ್ದೇಶಿಸಿದ ‘ಧಾಕಡ್‌’ನಲ್ಲಿ ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಮತ್ತು ಶಾಶ್ವತ ಚಟರ್ಜಿ ಸಹ ನಟಿಸಿದ್ದಾರೆ.

ಈ ವರ್ಷ ಹಿಂದಿ ಚಿತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿಲ್ಲ. 2022ರಲ್ಲಿ ಇದುವರೆಗೆ ಬಾಕ್ಸಾಫೀಸ್​ನಲ್ಲಿ ತುಸು ಕಮಾಯಿ ಮಾಡಿದ ಚಿತ್ರಗಳು ಮೂರೇ ಮೂರು. ‘ದಿ ಕಾಶ್ಮೀರ್ ಫೈಲ್ಸ್’, ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಗಳು ಒಳ್ಳೆಯ ಗಳಿಕೆ ಮಾಡಿವೆ. ‘ಧಾಕಡ್’ ತೆರೆಕಂಡ ದಿನವೇ ರಿಲೀಸ್ ಆಗಿದ್ದ ‘ಭೂಲ್ ಭುಲಯ್ಯ 2’ಗೂ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದು ಅದರ ಗಳಿಕೆ 100 ಕೋಟಿ ರೂ ಸನಿಹ ಬಂದು ನಿಂತಿದೆ.

ಈ ನಡುವೆ ದಕ್ಷಿಣ ಭಾರತದ ಚಿತ್ರಗಳನ್ನು ಹಿಂದಿ ಪ್ರೇಕ್ಷಕರು ಮುಕ್ತವಾಗಿ ಸ್ವಾಗತಿಸಿದ್ದಾರೆ. ಈ ವರ್ಷ ‘ಪುಷ್ಪ: ದಿ ರೈಸ್’, ‘ಆರ್​ಆರ್​ಆರ್​’ ಚಿತ್ರಗಳ ಹಿಂದಿ ಅವತರಣಿಕೆಗಳು ಗೆಲುವಿನ ನಗೆ ಬೀರಿವೆ. ‘ಕೆಜಿಎಫ್ ಚಾಪ್ಟರ್ 2’ನ ಹಿಂದಿ ಅವತರಣಿಕೆ 433 ಕೋಟಿ ರೂ ಬಾಚಿಕೊಂಡಿದೆ. ಸಾರ್ವಕಾಲಿಕವಾಗಿ ಭಾರತದಲ್ಲಿ ಅತ್ಯಂತ ಹೆಚ್ಚು ಗಳಿಸಿದ ಹಿಂದಿ ಚಿತ್ರಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಎರಡನೇ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ‘ಬಾಹುಬಲಿ 2’ ಇದೆ. ಸದ್ಯ ಬಾಲಿವುಡ್​ ಚಿತ್ರಗಳ ಸೋಲಿಗೆ ಕಾರಣಗಳೇನು ಎಂಬುದರ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಸ್ಟಾರ್ ನಟರು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:56 am, Sat, 28 May 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ