AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shruti Haasan: ‘ಮುಂಬೈಯನ್ನೇ ವಿಶ್ವದ ಕೇಂದ್ರ ಸ್ಥಾನ ಎಂದು ಹಲವರು ನಂಬಿದ್ದಾರೆ; ಆದರೆ..’; ಹಿಂದಿ ಚಿತ್ರರಂಗದ ಬಗ್ಗೆ ಶೃತಿ ಹಾಸನ್ ಮಾತು

Mumbai | Bollywood: ಹಲವು ಜನರು ಮುಂಬೈಯನ್ನೇ ವಿಶ್ವದ ಕೇಂದ್ರ ಸ್ಥಾನ ಎಂದು ನಂಬಿದ್ದಾರೆ. ಅವರ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ಆದರೆ ಹಲವರಿಗೆ ಮುಂಬೈ ಕೇಂದ್ರಸ್ಥಾನವಾಗಿರುವುದಿಲ್ಲ ಎಂದು ಹೇಳಿದ್ದಾರೆ ಶೃತಿ ಹಾಸನ್.

Shruti Haasan: ‘ಮುಂಬೈಯನ್ನೇ ವಿಶ್ವದ ಕೇಂದ್ರ ಸ್ಥಾನ ಎಂದು ಹಲವರು ನಂಬಿದ್ದಾರೆ; ಆದರೆ..’; ಹಿಂದಿ ಚಿತ್ರರಂಗದ ಬಗ್ಗೆ ಶೃತಿ ಹಾಸನ್ ಮಾತು
Shruti Haasan
TV9 Web
| Edited By: |

Updated on:May 28, 2022 | 9:11 AM

Share

ಬಹುಭಾಷಾ ನಟಿ ಶೃತಿ ಹಾಸನ್ (Shruti Haasan)​ ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು 2009ರಲ್ಲಿ. ಹಿಂದಿಯ ‘ಲಕ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ನಂತರ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಕಮಲ್ ಹಾಸನ್ (Kamal Haasan) ಹಾಗೂ ಸಾರಿಕಾ (Sarika) ದಂಪತಿಯ ಪುತ್ರಿಯಾಗಿರುವ ಶೃತಿ, ಪೋಷಕರು 2004ರಲ್ಲಿ ವಿಚ್ಛೇದನದ ನಿರ್ಧಾರ ತೆಗೆದುಕೊಂಡ ನಂತರ ಮುಂಬೈಗೆ ತೆರಳಿದರು. ಅಲ್ಲಿಯೇ ವಾಸಿಸುತ್ತಿದ್ದ ಕಾರಣದಿಂದ ಅವರಿಗೆ ತಮಿಳಿಗಿಂತ ಬಾಲಿವುಡ್ ಪ್ರವೇಶದ ಅವಕಾಶ ಒಲಿಯಿತು. ಅಷ್ಟು ದೀರ್ಘ ಕಾಲದಿಂದ ಮುಂಬೈನಲ್ಲಿದ್ದು, ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರೂ ಕೂಡ ಅಲ್ಲಿನ ಚಿತ್ರರಂಗ ತಮ್ಮನ್ನು ‘ದಕ್ಷಿಣ ಭಾರತೀಯಳು’ ಎಂದು ಪ್ರತ್ಯೇಕವಾಗಿ ಗುರುತಿಸುವುದರ ಬಗ್ಗೆ ಇತ್ತೀಚೆಗೆ ನಟಿ ಅಸಮಾಧಾನ ಹೊರಹಾಕಿದ್ದಾರೆ.

ಬಾಂಬೆ ಟೈಮ್ಸ್​​ನೊಂದಿಗೆ ಶೃತಿ ಮಾತನಾಡಿದ್ದಾರೆ. ‘‘ಹಲವು ಜನರು ಮುಂಬೈಯನ್ನೇ ವಿಶ್ವದ ಕೇಂದ್ರ ಸ್ಥಾನ ಎಂದು ನಂಬಿದ್ದಾರೆ. ಅವರ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ಆದರೆ ಹಲವರಿಗೆ ಮುಂಬೈ ಕೇಂದ್ರಸ್ಥಾನವಾಗಿರುವುದಿಲ್ಲ. ನಾವು ಎಲ್ಲಿ ಹೆಚ್ಚಿನ ಸಮಯ ಕೆಲಸ ಮಾಡುತ್ತೇವೋ ಅದಕ್ಕೆ ಬೇರೆಯವರಲ್ಲಿ ಕ್ಷಮೆ ಕೇಳಬೇಕಾಗಿಲ್ಲ’’ ಎಂದಿದ್ದಾರೆ ನಟಿ.

ಮುಂದುವರೆದು ಮಾತನಾಡಿರುವ ಅವರು, ‘‘ನಟಿಯಾಗಬೇಕು ಎಂದರೆ ವರ್ಷಕ್ಕೆ ಒಂದು ಹಿಂದಿ ಚಿತ್ರ ಮಾಡಲೇಬೇಕು ಎಂದು ಜನರು ಹೇಳುವ ರೇಸ್​ನಲ್ಲಿ ಮೊದಲು ನಾನೂ ಇದ್ದೆ. ಪೋಷಕರು ಬೇರೆಯಾದ ನಂತರ ತಾಯಿಯೊಂದಿಗೆ ಇಲ್ಲಿಯೇ ಇದ್ದೇನೆ. ಹಿಂದಿಯಲ್ಲೇ ಮಾತನಾಡುತ್ತೇವೆ. ಮುಂಬೈ ನನ್ನ ಊರಾಗಿದೆ. ಆದರೆ ಹಿಂದಿ ಚಿತ್ರರಂಗದ ಕೆಲವರು ‘ನೀವು ದಕ್ಷಿಣ ಭಾರತದವರು’ ಎಂದು ಹೇಗೆ ಹೇಳಲು ಸಾಧ್ಯ?’’ ಎಂದು ಪ್ರಶ್ನಿಸಿದ್ದಾರೆ ಶೃತಿ.

ಇದನ್ನೂ ಓದಿ
Image
ಇಂದು ಫಿಲ್ಮ್​ ಚೇಂಬರ್ ಚುನಾವಣೆ; ಸಾ.ರಾ.ಗೋವಿಂದು, ಬಾ.ಮಾ.ಹರೀಶ್ ಮಧ್ಯೆ ಪ್ರಬಲ ಪೈಪೋಟಿ
Image
‘ಕೆಜಿಎಫ್​ 3’ ಚಿತ್ರದಲ್ಲಿ ಹೃತಿಕ್​ ರೋಷನ್​ ಇರ್ತಾರಾ? ಊರ ತುಂಬ ಹಬ್ಬಿದೆ ಹೊಸ ಗಾಸಿಪ್​
Image
‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ
Image
Hrithik Roshan: ಹೊಸ ಗೆಳತಿ ಸಿಕ್ಕಿದ್ಮೇಲೆ ಗಡ್ಡಕ್ಕೆ ಬೈ ಬೈ ಹೇಳಲು ಪ್ಲಾನ್ ಮಾಡಿದ್ರಾ ಹೃತಿಕ್? ಇಲ್ಲಿದೆ ಅಸಲಿ ಸಮಾಚಾರ

ಶೃತಿ ತಮ್ಮ ಮದುವೆಯ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯಾವುದೇ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದಿರುವ ಅವರು, ಮದುವೆಯ ಬಗ್ಗೆ ತುಸು ನರ್ವಸ್​ ಆಗಿದ್ದೇನೆ ಎಂದಿದ್ದಾರೆ. ಹೀಗಾಗಿಯೇ ತಕ್ಷಣ ವಿವಾಹದ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದಿದ್ದಾರೆ ನಟಿ. ಸದ್ಯ ಶೃತಿ ಕಲಾವಿದ ಶಂತನು ಹಜಾರಿಕಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ.

ಚಿತ್ರಗಳ ವಿಚಾರಕ್ಕೆ ಬಂದರೆ ಶೃತಿ ಹಾಸನ್ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸಲಾರ್’ಗೆ ಅವರು ನಾಯಕಿ. ‘ಎನ್​ಬಿಕೆ 107’, ‘ಮೆಗಾ 154’ ಮೊದಲಾದ ಚಿತ್ರಗಳು ನಟಿಯ ಬತ್ತಳಿಕೆಯಲ್ಲಿವೆ.

ಮತ್ತಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:28 am, Sat, 28 May 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು