AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​’ ಗಾಯಕಿ ನೇಹಾ ಕಕ್ಕರ್​ ಗಂಡನ ಡೈಮಂಡ್​ ರಿಂಗ್​, ಐಫೋನ್​, ಹಣ ದರೋಡೆ ಮಾಡಿದ ಕಳ್ಳರು

Neha Kakkar: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಐಷಾರಾಮಿ ಹೋಟೆಲ್​ನಲ್ಲಿ ನೇಹಾ ಕಕ್ಕರ್​ ಪತಿ ರೋಹನ್​ಪ್ರೀತ್​ ಸಿಂಗ್​ ಅವರು ಉಳಿದುಕೊಂಡಿದ್ದರು. ಶನಿವಾರ (ಮೇ 14) ರಾತ್ರಿ ಈ ಕಳ್ಳತನ ನಡೆದಿದೆ.

‘ಕೆಜಿಎಫ್​’ ಗಾಯಕಿ ನೇಹಾ ಕಕ್ಕರ್​ ಗಂಡನ ಡೈಮಂಡ್​ ರಿಂಗ್​, ಐಫೋನ್​, ಹಣ ದರೋಡೆ ಮಾಡಿದ ಕಳ್ಳರು
ರೋಹತ್​ಪ್ರೀತ್​ ಸಿಂಗ್​, ನೇಹಾ ಕಕ್ಕರ್​
TV9 Web
| Edited By: |

Updated on: May 15, 2022 | 1:19 PM

Share

ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಹಿಂದಿ ವರ್ಷನ್​ನಲ್ಲಿ ‘ಗಲಿ ಗಲಿ..’ ಹಾಡಿಗೆ ನೇಹಾ ಕಕ್ಕರ್​ (Neha Kakkar) ಧ್ವನಿ ಆಗಿದ್ದರು. ಆ ಹಾಡು ಸಖತ್​ ಫೇಮಸ್​ ಆಯಿತು. ಗಾಯಕಿ ನೇಹಾ ಕಕ್ಕರ್​ ಅವರ ಪತಿ ರೋಹನ್​ಪ್ರೀತ್​ ಸಿಂಗ್​ ಕೂಡ ಫೇಮಸ್​ ಗಾಯಕ. ಅವರು ಪಂಜಾಬಿ ಇಂಡಸ್ಟ್ರಿಯಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಈಗ ಅವರ ಕುರಿತು ಒಂದು ಬ್ಯಾಡ್​ ನ್ಯೂಸ್​ ಕೇಳಿಬಂದಿದೆ. ರೋಹನ್​ಪ್ರೀತ್​ ಸಿಂಗ್ (Rohanpreet Singh)​ ಉಳಿದುಕೊಂಡಿದ್ದ ಖಾಸಗಿ ಹೋಟೆಲ್​ನಲ್ಲಿ ಕಳ್ಳತನ ಆಗಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಕಳ್ಳತನ (Robbery) ಆಗಿವೆ. ಡೈಮಂಡ್​ ರಿಂಗ್​, ಐ-ಫೋನ್​, ಆ್ಯಪಲ್​ ವಾಚ್​ ಮತ್ತು ಹಣವನ್ನು ಕದ್ದು ಕಳ್ಳರು ಪರಾರಿ ಆಗಿದ್ದಾರೆ. ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಐಷಾರಾಮಿ ಹೋಟೆಲ್​ನಲ್ಲಿ ರೋಹನ್​ಪ್ರೀತ್​ ಸಿಂಗ್​ ಅವರು ಉಳಿದುಕೊಂಡಿದ್ದರು. ಶನಿವಾರ (ಮೇ 14) ರಾತ್ರಿ ಈ ಕಳ್ಳತನ ನಡೆದಿದೆ. ಈ ಘಟನೆ ಕುರಿತಂತೆ ನೇಹಾ ಕಕ್ಕರ್​ ಅವರಾಗಲಿ, ರೋಹನ್​ಪ್ರೀತ್​ ಸಿಂಗ್​ ಅವರಾಗಲಿ ಇನ್ನೂ ಹೇಳಿಕೆ ನೀಡಿಲ್ಲ. ಈ ಘಟನೆ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಸಂಗೀತ ಲೋಕದಲ್ಲಿ ನೇಹಾ ಕಕ್ಕರ್​-ರೋಹನ್​ಪ್ರೀತ್​ ಸಿಂಗ್​ ಬ್ಯುಸಿ:

ಇದನ್ನೂ ಓದಿ
Image
ಫಿಲ್ಮಿ ಶೈಲಿಯಲ್ಲಿ ಮಂಡ್ಯದಲ್ಲಿ ದರೋಡೆ; ಅಡ್ಡಗಟ್ಟಿ 20 ಲಕ್ಷ ನಗದು, ಕಾರಿನ ಜೊತೆ ಎಸ್ಕೇಪ್
Image
ಸಂಗೀತದ ಜ್ಞಾನವಿಲ್ಲದವನನ್ನೂ ತಡೆದು ನಿಲ್ಲಿಸುವ ಸ್ವರ ಮಾಧುರ್ಯದ ಒಡತಿ ನೇಹಾ ಕಕ್ಕರ್​​ಗೆ ಸಾಂಪ್ರದಾಯಿಕ ಉಡುಗೆ ಬಹಳ ಇಷ್ಟ!
Image
Neha Kakkar: ಮದುವೆ ಆಗಿ 7 ತಿಂಗಳು ಕಳೆಯುವ ಮುನ್ನವೇ ಗಂಡನ ಜೊತೆ ಕೆಜಿಎಫ್​ ಗಾಯಕಿ ಫೈಟ್​; ವಿಡಿಯೋ ವೈರಲ್​
Image
ಮದುವೆಯಾದ ಎರಡೇ ತಿಂಗಳಿಗೆ ನೇಹಾ ಕಕ್ಕರ್​ನಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ..

2020ರ ಅಕ್ಟೋಬರ್​ ತಿಂಗಳಲ್ಲಿ ನೇಹಾ ಕಕ್ಕರ್​ ಮತ್ತು ರೋಹನ್​ಪ್ರೀತ್​ ಸಿಂಗ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಕೂಡ ಸಂಗೀತ ಕ್ಷೇತ್ರಕ್ಕೆ ಸೇರಿದವರು. ಇಬ್ಬರು ಜೊತೆಯಾಗಿ ಕೆಲವು ಮ್ಯೂಸಿಕ್​ ವಿಡಿಯೋಗಳನ್ನು ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಈ ದಂಪತಿ ಆಗಾಗ ತಮ್ಮ ವೃತ್ತಿಜೀವನ ಮತ್ತು ಖಾಸಗಿ ಬದುಕಿನ ಬಗ್ಗೆ ಅಪ್​ಡೇಟ್​ ನೀಡುತ್ತಾ ಇರುತ್ತಾರೆ.

ಮದುವೆಯಾಗಿ ಎರಡೇ ತಿಂಗಳಿಗೆ ಪ್ರೆಗ್ನೆಂಟ್​ ಎಂದಿದ್ದ ನೇಹಾ!

ನೇಹಾ ಕಕ್ಕರ್​ ಮತ್ತು ರೋಹನ್​ಪ್ರೀತ್​ ಸಿಂಗ್​ ಅವರು ಮದುವೆ ಆಗಿ ಎರಡೇ ತಿಂಗಳಿಗೆ ಒಂದು ನ್ಯೂಸ್​ ನೀಡಿದ್ದರು. ನೇಹಾ ಕಕ್ಕರ್ ಅವರು ತಾವು ಗರ್ಭಿಣಿ ಎಂದು ಬಿಂಬಿಸುವ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿ, ಆ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಳಿಕ ಅದೊಂದು ಪ್ರ್ಯಾಂಕ್​ ಎಂಬುದು ಗೊತ್ತಾಯಿತು. ತಮ್ಮ ಹೊಸ ಮ್ಯೂಸಿಕ್​ ವಿಡಿಯೋದ ಪ್ರಮೋಷನ್​ಗಾಗಿ ಅವರು ಆ ರೀತಿ ಮಾಡಿದ್ದರು. ಮದುವೆ ಆಗಿ 7 ತಿಂಗಳು ಕಳೆಯುವುದರೊಳಗೆ ಮತ್ತೆ ಅಂಥದ್ದೇ ಒಂದು ಗಿಮಿಕ್​ ಮಾಡಿದ್ದರು. ಇಬ್ಬರೂ ಪರಸ್ಪರ ಬಡಿದಾಡಿಕೊಳ್ಳುತ್ತಿರುವ ವಿಡಿಯೋವನ್ನು ಅವರು ಪೋಸ್ಟ್​ ಮಾಡಿದ್ದರು. ಇಬ್ಬರೂ ಕೈ ಕೈ ಮಿಲಾಯಿಸುತ್ತಿರುವ ದೃಶ್ಯ ಅದರಲ್ಲಿ ಇತ್ತು. ಒಂದು ಕ್ಷಣ ನೋಡಿದರೆ ಇಬ್ಬರ ಸಂಸಾರದಲ್ಲಿ ಏನೋ ಕಿರಿಕ್​ ಆಗಿದೆ ಎಂಬಂತಿರುವ ಈ ವಿಡಿಯೋದ ಅಸಲಿಯತ್ತು ಬೇರೆಯೇ ಆಗಿತ್ತು. ಇಬ್ಬರೂ ಜೊತೆಯಾಗಿ ಒಂದು ಹೊಸ ಮ್ಯೂಸಿಕ್​ ವಿಡಿಯೋ ಮಾಡಿದ್ದು, ಅದರ ಪ್ರಚಾರವನ್ನು ಈ ರೀತಿ ಡಿಫರೆಂಟ್​ ಆಗಿ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ