AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಣಿ ಮುಖರ್ಜಿ-ಟೈಗರ್​ ಶ್ರಾಫ್​ ಈಗ ನೆರೆಹೊರೆಯವರು; ಇದಕ್ಕೆ ನಟಿ ಖರ್ಚು ಮಾಡಿದ್ದು 7 ಕೋಟಿ 

ಖಾರ್​ ಪ್ರದೇಶದಲ್ಲಿ ರಾಣಿ ಮುಖರ್ಜಿ ಫ್ಲಾಟ್​ ಖರೀದಿ ಮಾಡಿದ್ದಾರೆ. 22ನೇ ಅಂತಸ್ತಿನಲ್ಲಿ ಈ ಫ್ಲಾಟ್​ ಇದೆ. 4+3 ಬಿಎಚ್​ಕೆ ಮನೆ ಇದಾಗಿದ್ದು, ಈ ಫ್ಲಾಟ್​ನಿಂದ ಅರಬ್ಬೀ ಸಮುದ್ರ ಕಾಣುತ್ತದೆ.

ರಾಣಿ ಮುಖರ್ಜಿ-ಟೈಗರ್​ ಶ್ರಾಫ್​ ಈಗ ನೆರೆಹೊರೆಯವರು; ಇದಕ್ಕೆ ನಟಿ ಖರ್ಚು ಮಾಡಿದ್ದು 7 ಕೋಟಿ 
ರಾಣಿ ಮುಖರ್ಜಿ-ಟೈಗರ್​ ಶ್ರಾಫ್​ ಈಗ ನೆರೆಹೊರೆಯವರು; ಇದಕ್ಕೆ ನಟಿ ಖರ್ಚು ಮಾಡಿದ್ದು 7 ಕೋಟಿ 
TV9 Web
| Edited By: |

Updated on: Aug 12, 2021 | 7:29 AM

Share

ಬಾಲಿವುಡ್​​ನಲ್ಲಿ ಗುರುತಿಸಿಕೊಂಡ ನಂತರದಲ್ಲಿ ಸಾಕಷ್ಟು ನಟ-ನಟಿಯರು ಮನೆ ಕೊಂಡುಕೊಳ್ಳೋಕೆ ಆಸಕ್ತಿ ತೋರುತ್ತಾರೆ. ಅದೇ ರೀತಿ ಅನೇಕ ಸ್ಟಾರ್​ಗಳು ಮುಂಬೈನ ದುಬಾರಿ ಏರಿಯಾದಲ್ಲಿ ಮನೆ ಖರೀದಿ ಮಾಡಿದ್ದಾರೆ. ಈಗ ನಟಿ ರಾಣಿ ಮುಖರ್ಜಿ ಸರದಿ. ಅವರು ಮುಂಬೈನಲ್ಲಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ.

ರಾಣಿ ಮುಖರ್ಜಿ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 90ರ ದಶಕದಲ್ಲಿ ಸಿನಿಪ್ರಿಯರ ಹೃದಯ ಕದ್ದವರು ರಾಣಿ ಮುಖರ್ಜಿ. ಈಗಲೂ ಅವರಿಗೆ ಬಾಲಿವುಡ್​ನಲ್ಲಿ ಬೇಡಿಕೆ ಇದೆ. ನೋ ಒನ್​ ಕಿಲ್ಲಡ್​ ಜಸ್ಸಿಕಾ ಚಿತ್ರದಲ್ಲಿ ಜರ್ನಲಿಸ್ಟ್​ ಪಾತ್ರದಲ್ಲಿ ಅವರು ಮಿಂಚಿದ್ದರು. ಈಗ ರಾಣಿ ಮುಖರ್ಜಿ ಹಾಗೂ ಟೈಗರ್​ ಶ್ರಾಫ್​ ನೆರೆ ಹೊರೆಯವರಾಗಿದ್ದಾರೆ.

ಖಾರ್​ ಪ್ರದೇಶದಲ್ಲಿ ರಾಣಿ ಮುಖರ್ಜಿ ಫ್ಲಾಟ್​ ಖರೀದಿ ಮಾಡಿದ್ದಾರೆ. 22ನೇ ಅಂತಸ್ತಿನಲ್ಲಿ ಈ ಫ್ಲಾಟ್​ ಇದೆ. 4+3 ಬಿಎಚ್​​ಕೆ ಮನೆ ಇದಾಗಿದ್ದು, ಈ ಫ್ಲಾಟ್​ನಿಂದ ಅರಬ್ಬೀ ಸಮುದ್ರ ಕಾಣುತ್ತದೆ. ಇದಕ್ಕೆ ಅವರು ಬರೋಬ್ಬರಿ 7.12 ಕೋಟಿ ರೂಪಾಯಿ ನೀಡಿದ್ದಾರೆ. ಇದೇ ಅಪಾರ್ಟ್​ಮೆಂಟ್​ನಲ್ಲಿ ಟೈಗರ್​ ಶ್ರಾಫ್​ ಫ್ಲ್ಯಾಟ್​ ಕೂಡ ಇದೆ ಎಂದು ತಿಳಿದು ಬಂದಿದೆ.

‘ಮರ್ದಾನಿ 2’ ಸಿನಿಮಾದಲ್ಲಿ ರಾಣಿ ಮುಖರ್ಜಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 2019ರ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬಂದಿತ್ತು. ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಸದ್ಯ ಅವರು ‘ಬಂಟಿ ಔರ್​​ ಬಬ್ಲಿ 2’ ಹಾಗೂ Mrs.ಚಟರ್ಜಿ vs ನಾರ್ವೆ ಫಿಲ್ಮ್ಸ್​​​ ಚಿತ್ರದಲ್ಲಿ ರಾಣಿ ಮುಖರ್ಜಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಅಮಿತಾಭ್​ ಬಚ್ಚನ್​, ಅರ್ಜುನ್​ ಕಪೂರ್​ ಹಾಗೂ ಅಜಯ್​ ದೇವಗನ್​-ಕಾಜೊಲ್​ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿ ಸುದ್ದಿಯಾಗಿದ್ದರು. ಈಗ ರಾಣಿ ಮುಖರ್ಜಿ ಕೂಡ ಈ ಸಾಲಿಗೆ ಸೇರ್ಪಡೆ ಆಗಿದ್ದಾರೆ.

ಇದನ್ನೂ ಓದಿ:

 ಟೋಕಿಯೋ ಒಲಂಪಿಕ್ಸ್​ನಲ್ಲಿ ಮೊಳಗಿತು ಬಾಲಿವುಡ್​ ಹಾಡು; ಅಚ್ಚರಿಗೊಂಡ ಭಾರತೀಯರು

ಸೆಟ್​ನಲ್ಲೇ ತಲೆತಿರುಗಿ ಬಿದ್ದ ಬಾಲಿವುಡ್​ ನಟಿ; ಸಮಸ್ಯೆಗೆ ಕಾರಣ ಬಿಚ್ಚಿಟ್ಟ ವೈದ್ಯರು

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು