AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ratan Raajputh: ‘ನನ್ನ ಜತೆ ಮಲಗಿದ್ರೆ ಮಾತ್ರ ಕೆಲಸ ಕೊಡ್ತೀನಿ, ಮಗಳಾದ್ರೂ ಸರಿ’ ಎಂದಿದ್ದ ನಿರ್ಮಾಪಕ; ಕಹಿ ಸತ್ಯ ಹೇಳಿದ ನಟಿ

Casting Couch | Me Too: ‘ನೀವು ನನ್ನ ತಂದೆಯ ಸಮಾನರು. ನಿಮ್ಮನ್ನು ನಾನು ಗೌರವಿಸುತ್ತೇನೆ’ ಎಂದು ನಟಿ ರತನ್​ ರಾಜಪೂತ್​ ಹೇಳಿದ್ದರು. ಆಗ ಆ ವ್ಯಕ್ತಿಗೆ ಕೋಪ ಬಂದಿತ್ತು.

Ratan Raajputh: ‘ನನ್ನ ಜತೆ ಮಲಗಿದ್ರೆ ಮಾತ್ರ ಕೆಲಸ ಕೊಡ್ತೀನಿ, ಮಗಳಾದ್ರೂ ಸರಿ’ ಎಂದಿದ್ದ ನಿರ್ಮಾಪಕ; ಕಹಿ ಸತ್ಯ ಹೇಳಿದ ನಟಿ
ರತನ್ ರಾಜಪೂತ್
TV9 Web
| Edited By: |

Updated on: Sep 27, 2022 | 2:30 PM

Share

ಎಲ್ಲ ಭಾಷೆಯ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್​ (Casting Couch) ಇರುವ ಬಗ್ಗೆ ಈಗಾಗಲೇ ಅನೇಕ ನಟಿಯರು ಬಾಯಿಬಿಟ್ಟಿದ್ದಾರೆ. ಎಷ್ಟೋ ಮಹಿಳೆಯರು ಈ ಬಗ್ಗೆ ಮಾತನಾಡದೇ ಮೌನವಾಗಿ ಉಳಿದಿದ್ದೂ ಉಂಟು. ಇನ್ನೂ ಕೆಲವರು ತುಂಬ ವರ್ಷಗಳ ಹಿಂದೆ ನಡೆದ ಘಟನೆಯನ್ನು ಈಗ ನೆನಪಿಸಿಕೊಳ್ಳುತ್ತಿದ್ದಾರೆ. ಮೀಟೂ (Me Too) ಆಂದೋಲನ ಶುರುವಾದ ಬಳಿಕ ಕಾಸ್ಟಿಂಗ್ ಕೌಚ್​ನ ಅನೇಕ ಕಹಿ ಸತ್ಯಗಳ ಹೊರಬಿದ್ದಿವೆ. ಸಾಕಷ್ಟು ಜನರ ಮುಖವಾಡ ಕಳಚಿದೆ. ನಟಿ ರತನ್​ ರಾಜಪೂತ್ (Ratan Raajputh)​ ಅವರು ಈಗ ಕೆಲವು ಶಾಕಿಂಗ್​ ವಿಚಾರಗಳನ್ನು ತೆರೆದಿಟ್ಟದ್ದಾರೆ. ಚಿತ್ರರಂಗದಲ್ಲಿ ಕೆಲಸ ಕೇಳಿಕೊಂಡು ಬಂದಾಗ ನಿರ್ಮಾಪಕನೊಬ್ಬ ನಡೆದುಕೊಂಡ ರೀತಿ ನೋಡಿ ರತನ್​ ಅವರಿಗೆ ಆಘಾತ ಉಂಟಾಗಿತ್ತು. ಆ ಘಟನೆಯ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

ಕಿರುತೆರೆಯಲ್ಲಿ ನಟಿ ರತನ್​ ರಾಜಪೂತ್​ ಫೇಮಸ್​. ಹಿಂದಿಯ ಒಂದಷ್ಟು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಹಿಂದಿ ಬಿಗ್​ ಬಾಸ್​ ಸೀಸನ್​ 7ರಲ್ಲಿ ಅವರು ಸ್ಪರ್ಧಿಸಿದ್ದರು. ತಮ್ಮದೇ ಯೂಟ್ಯೂಬ್​ ಚಾನೆಲ್​ ಕೂಡ ಅವರು ಹೊಂದಿದ್ದಾರೆ. ಮೂಲತಃ ಬಿಹಾರದವರಾದ ರತನ್​ ಅವರು ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿಂದ ಒಂದಷ್ಟು ವರ್ಷಗಳ ಹಿಂದೆ ಮುಂಬೈಗೆ ಬಂದಿದ್ದರು. ಆಗ ಅವರಿಗೆ ಕೆಟ್ಟ ಅನುಭವ ಆಗಿತ್ತು.

14 ವರ್ಷಗಳ ಹಿಂದಿನ ಘಟನೆ. ರತನ್​ ಆಗಷ್ಟೇ ಮುಂಬೈಗೆ ಬಂದಿದ್ದರು. 60-65 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಅವರಿಗೆ ಅವಮಾನ ಮಾಡಿದ್ದ. ‘ನಿನ್ನ​ ಕೂದಲು, ಚರ್ಮ ಹಾಗೂ ಬಟ್ಟೆ ಸರಿಯಿಲ್ಲ. ಅದನ್ನೆಲ್ಲ ಸರಿ ಮಾಡಿ ನಿನಗೆ ಬೇರೆ ಲುಕ್​ ನೀಡಲು 2ರಿಂದ ಎರಡೂವರೆ ಲಕ್ಷ ರೂಪಾಯಿ ಖರ್ಚು ಆಗುತ್ತದೆ. ಅಷ್ಟು ಹಣವನ್ನು ನಿನಗಾಗಿ ನಾನು ಏಕೆ ಖರ್ಚು ಮಾಡಲಿ? ಖರ್ಚು ಮಾಡಬೇಕು ಎಂಬುದಾದರೆ ನೀನು ನನ್ನನ್ನು ಗಾಡ್​ ಫಾದರ್​ ಮಾಡಿಕೊಳ್ಳಬೇಕು. ನನ್ನ ಜೊತೆ ಫ್ರೆಂಡ್​ ರೀತಿ ಇರಬೇಕು’ ಅಂತ ಆತ ಹೇಳಿದ್ದ ಎಂಬುದನ್ನು ರತನ್​ ಈಗ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ
Image
Ashitha First Reaction: ಆಶಿತಾ ಮೀಟೂ ವಿವಾದ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ‘ಬಾ ಬಾರೋ ರಸಿಕ’ ಚಿತ್ರದ ನಟಿ
Image
Ashitha: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ
Image
ಕಾಸ್ಟಿಂಗ್​ ಕೌಚ್​ ವಿಚಾರದಲ್ಲಿ ಸ್ಯಾಂಡಲ್​​ವುಡ್​ನ​ ಎಳೆದು ತಂದ ಬಗ್ಗೆ ಸ್ಪಷ್ಟನೆ ನೀಡಿದ ತೆಲುಗು ನಿರ್ದೇಶಕ
Image
ನಟನ ಮಗಳಿಗೂ ತಪ್ಪಿಲ್ಲ ಕಾಸ್ಟಿಂಗ್ ಕೌಚ್​; ಭಯಾನಕ ಸತ್ಯ ಬಿಚ್ಚಿಟ್ಟ ನಟಿ

ತಂದೆಯ ವಯಸ್ಸಿನ ವ್ಯಕ್ತಿಯ ಬಾಯಿಂದ ಈ ರೀತಿ ಮಾತುಗಳನ್ನು ಕೇಳಿಸಿಕೊಂಡಿದ್ದಕ್ಕೆ ರತನ್​ ಅವರಿಗೆ ಶಾಕ್​ ಆಗಿತ್ತು. ‘ನೀವು ನನ್ನ ತಂದೆಯ ಸಮಾನರು. ನಿಮ್ಮನ್ನು ನಾನು ಗೌರವಿಸುತ್ತೇನೆ’ ಎಂದು ರತನ್​ ಹೇಳಿದ್ದರು. ಆಗ ಆ ವ್ಯಕ್ತಿಗೆ ಕೋಪ ಬಂತು. ‘ನನ್ನ ಮಗಳು ನಟಿಯಾದರೂ ಕೂಡ ನಾನು ಆಕೆಯ ಜೊತೆ ಮಲಗುತ್ತೇನೆ’ ಎಂದು ಆ ನೀಚ ನಿರ್ಮಾಪಕ ಹೇಳಿದ್ದ ಎಂಬುದನ್ನು ನಟಿ ರತನ್​ ರಾಜಪೂತ್​ ಈಗ ಬಾಯಿಬಿಟ್ಟಿದ್ದಾರೆ.

‘ಇದನ್ನು ಕೇಳಿ ನನಗೆ ಆಘಾತ ಆಯಿತು. ಕೂಡಲೇ ಅಲ್ಲಿಂದ ನಾನು ಹೊರಟುಬಂದೆ. ಆ ವ್ಯಕ್ತಿ ನನಗೆ ಏನೂ ಮಾಡಲಿಲ್ಲ. ಆದರೆ ಆತನ ಮಾತುಗಳು ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿದವು. ಒಂದು ತಿಂಗಳ ಕಾಲ ನಾನು ಯಾರನ್ನೂ ಭೇಟಿ ಮಾಡಲಿಲ್ಲ’ ಎಂದು ರತನ್​ ರಾಜಪೂತ್​ ಹೇಳಿದ್ದಾರೆ.

ರತನ್​ ರಾಜಪೂತ್​ ಬಹಿರಂಗ ಮಾಡಿರುವ ಈ ವಿಚಾರಗಳನ್ನು ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ
ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ