AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ratan Raajputh: ‘ನನ್ನ ಜತೆ ಮಲಗಿದ್ರೆ ಮಾತ್ರ ಕೆಲಸ ಕೊಡ್ತೀನಿ, ಮಗಳಾದ್ರೂ ಸರಿ’ ಎಂದಿದ್ದ ನಿರ್ಮಾಪಕ; ಕಹಿ ಸತ್ಯ ಹೇಳಿದ ನಟಿ

Casting Couch | Me Too: ‘ನೀವು ನನ್ನ ತಂದೆಯ ಸಮಾನರು. ನಿಮ್ಮನ್ನು ನಾನು ಗೌರವಿಸುತ್ತೇನೆ’ ಎಂದು ನಟಿ ರತನ್​ ರಾಜಪೂತ್​ ಹೇಳಿದ್ದರು. ಆಗ ಆ ವ್ಯಕ್ತಿಗೆ ಕೋಪ ಬಂದಿತ್ತು.

Ratan Raajputh: ‘ನನ್ನ ಜತೆ ಮಲಗಿದ್ರೆ ಮಾತ್ರ ಕೆಲಸ ಕೊಡ್ತೀನಿ, ಮಗಳಾದ್ರೂ ಸರಿ’ ಎಂದಿದ್ದ ನಿರ್ಮಾಪಕ; ಕಹಿ ಸತ್ಯ ಹೇಳಿದ ನಟಿ
ರತನ್ ರಾಜಪೂತ್
TV9 Web
| Updated By: ಮದನ್​ ಕುಮಾರ್​|

Updated on: Sep 27, 2022 | 2:30 PM

Share

ಎಲ್ಲ ಭಾಷೆಯ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್​ (Casting Couch) ಇರುವ ಬಗ್ಗೆ ಈಗಾಗಲೇ ಅನೇಕ ನಟಿಯರು ಬಾಯಿಬಿಟ್ಟಿದ್ದಾರೆ. ಎಷ್ಟೋ ಮಹಿಳೆಯರು ಈ ಬಗ್ಗೆ ಮಾತನಾಡದೇ ಮೌನವಾಗಿ ಉಳಿದಿದ್ದೂ ಉಂಟು. ಇನ್ನೂ ಕೆಲವರು ತುಂಬ ವರ್ಷಗಳ ಹಿಂದೆ ನಡೆದ ಘಟನೆಯನ್ನು ಈಗ ನೆನಪಿಸಿಕೊಳ್ಳುತ್ತಿದ್ದಾರೆ. ಮೀಟೂ (Me Too) ಆಂದೋಲನ ಶುರುವಾದ ಬಳಿಕ ಕಾಸ್ಟಿಂಗ್ ಕೌಚ್​ನ ಅನೇಕ ಕಹಿ ಸತ್ಯಗಳ ಹೊರಬಿದ್ದಿವೆ. ಸಾಕಷ್ಟು ಜನರ ಮುಖವಾಡ ಕಳಚಿದೆ. ನಟಿ ರತನ್​ ರಾಜಪೂತ್ (Ratan Raajputh)​ ಅವರು ಈಗ ಕೆಲವು ಶಾಕಿಂಗ್​ ವಿಚಾರಗಳನ್ನು ತೆರೆದಿಟ್ಟದ್ದಾರೆ. ಚಿತ್ರರಂಗದಲ್ಲಿ ಕೆಲಸ ಕೇಳಿಕೊಂಡು ಬಂದಾಗ ನಿರ್ಮಾಪಕನೊಬ್ಬ ನಡೆದುಕೊಂಡ ರೀತಿ ನೋಡಿ ರತನ್​ ಅವರಿಗೆ ಆಘಾತ ಉಂಟಾಗಿತ್ತು. ಆ ಘಟನೆಯ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

ಕಿರುತೆರೆಯಲ್ಲಿ ನಟಿ ರತನ್​ ರಾಜಪೂತ್​ ಫೇಮಸ್​. ಹಿಂದಿಯ ಒಂದಷ್ಟು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಹಿಂದಿ ಬಿಗ್​ ಬಾಸ್​ ಸೀಸನ್​ 7ರಲ್ಲಿ ಅವರು ಸ್ಪರ್ಧಿಸಿದ್ದರು. ತಮ್ಮದೇ ಯೂಟ್ಯೂಬ್​ ಚಾನೆಲ್​ ಕೂಡ ಅವರು ಹೊಂದಿದ್ದಾರೆ. ಮೂಲತಃ ಬಿಹಾರದವರಾದ ರತನ್​ ಅವರು ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿಂದ ಒಂದಷ್ಟು ವರ್ಷಗಳ ಹಿಂದೆ ಮುಂಬೈಗೆ ಬಂದಿದ್ದರು. ಆಗ ಅವರಿಗೆ ಕೆಟ್ಟ ಅನುಭವ ಆಗಿತ್ತು.

14 ವರ್ಷಗಳ ಹಿಂದಿನ ಘಟನೆ. ರತನ್​ ಆಗಷ್ಟೇ ಮುಂಬೈಗೆ ಬಂದಿದ್ದರು. 60-65 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಅವರಿಗೆ ಅವಮಾನ ಮಾಡಿದ್ದ. ‘ನಿನ್ನ​ ಕೂದಲು, ಚರ್ಮ ಹಾಗೂ ಬಟ್ಟೆ ಸರಿಯಿಲ್ಲ. ಅದನ್ನೆಲ್ಲ ಸರಿ ಮಾಡಿ ನಿನಗೆ ಬೇರೆ ಲುಕ್​ ನೀಡಲು 2ರಿಂದ ಎರಡೂವರೆ ಲಕ್ಷ ರೂಪಾಯಿ ಖರ್ಚು ಆಗುತ್ತದೆ. ಅಷ್ಟು ಹಣವನ್ನು ನಿನಗಾಗಿ ನಾನು ಏಕೆ ಖರ್ಚು ಮಾಡಲಿ? ಖರ್ಚು ಮಾಡಬೇಕು ಎಂಬುದಾದರೆ ನೀನು ನನ್ನನ್ನು ಗಾಡ್​ ಫಾದರ್​ ಮಾಡಿಕೊಳ್ಳಬೇಕು. ನನ್ನ ಜೊತೆ ಫ್ರೆಂಡ್​ ರೀತಿ ಇರಬೇಕು’ ಅಂತ ಆತ ಹೇಳಿದ್ದ ಎಂಬುದನ್ನು ರತನ್​ ಈಗ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ
Image
Ashitha First Reaction: ಆಶಿತಾ ಮೀಟೂ ವಿವಾದ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ‘ಬಾ ಬಾರೋ ರಸಿಕ’ ಚಿತ್ರದ ನಟಿ
Image
Ashitha: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ
Image
ಕಾಸ್ಟಿಂಗ್​ ಕೌಚ್​ ವಿಚಾರದಲ್ಲಿ ಸ್ಯಾಂಡಲ್​​ವುಡ್​ನ​ ಎಳೆದು ತಂದ ಬಗ್ಗೆ ಸ್ಪಷ್ಟನೆ ನೀಡಿದ ತೆಲುಗು ನಿರ್ದೇಶಕ
Image
ನಟನ ಮಗಳಿಗೂ ತಪ್ಪಿಲ್ಲ ಕಾಸ್ಟಿಂಗ್ ಕೌಚ್​; ಭಯಾನಕ ಸತ್ಯ ಬಿಚ್ಚಿಟ್ಟ ನಟಿ

ತಂದೆಯ ವಯಸ್ಸಿನ ವ್ಯಕ್ತಿಯ ಬಾಯಿಂದ ಈ ರೀತಿ ಮಾತುಗಳನ್ನು ಕೇಳಿಸಿಕೊಂಡಿದ್ದಕ್ಕೆ ರತನ್​ ಅವರಿಗೆ ಶಾಕ್​ ಆಗಿತ್ತು. ‘ನೀವು ನನ್ನ ತಂದೆಯ ಸಮಾನರು. ನಿಮ್ಮನ್ನು ನಾನು ಗೌರವಿಸುತ್ತೇನೆ’ ಎಂದು ರತನ್​ ಹೇಳಿದ್ದರು. ಆಗ ಆ ವ್ಯಕ್ತಿಗೆ ಕೋಪ ಬಂತು. ‘ನನ್ನ ಮಗಳು ನಟಿಯಾದರೂ ಕೂಡ ನಾನು ಆಕೆಯ ಜೊತೆ ಮಲಗುತ್ತೇನೆ’ ಎಂದು ಆ ನೀಚ ನಿರ್ಮಾಪಕ ಹೇಳಿದ್ದ ಎಂಬುದನ್ನು ನಟಿ ರತನ್​ ರಾಜಪೂತ್​ ಈಗ ಬಾಯಿಬಿಟ್ಟಿದ್ದಾರೆ.

‘ಇದನ್ನು ಕೇಳಿ ನನಗೆ ಆಘಾತ ಆಯಿತು. ಕೂಡಲೇ ಅಲ್ಲಿಂದ ನಾನು ಹೊರಟುಬಂದೆ. ಆ ವ್ಯಕ್ತಿ ನನಗೆ ಏನೂ ಮಾಡಲಿಲ್ಲ. ಆದರೆ ಆತನ ಮಾತುಗಳು ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿದವು. ಒಂದು ತಿಂಗಳ ಕಾಲ ನಾನು ಯಾರನ್ನೂ ಭೇಟಿ ಮಾಡಲಿಲ್ಲ’ ಎಂದು ರತನ್​ ರಾಜಪೂತ್​ ಹೇಳಿದ್ದಾರೆ.

ರತನ್​ ರಾಜಪೂತ್​ ಬಹಿರಂಗ ಮಾಡಿರುವ ಈ ವಿಚಾರಗಳನ್ನು ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ