AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್​ ದತ್​ಗೆ ಇತ್ತು ಎನ್​ಕೌಂಟರ್ ಭಯ; ಸಿನಿಮೀಯ ಶೈಲಿಯಲ್ಲೇ ಕೊಲ್ಲುತ್ತಾರೆ ಎಂದುಕೊಂಡಿದ್ರು..

ಸಂಜಯ್​ ದತ್​ಗೆ ಮನೆಯ ಊಟ ಸಿಗುತ್ತಿತ್ತು ಎನ್ನುವ ಆರೋಪವನ್ನು ಕೆಲವರು ಮಾಡಿದ್ದರು. ಈ ಬಗ್ಗೆ ಮೀರನ್ ಮಾತನಾಡಿದ್ದಾರೆ. ‘ಇದು ವಿವಾದವಲ್ಲ, ಸತ್ಯ. ಸಂಜಯ್ ದತ್ ಆರ್ಥರ್ ರೋಡ್ ಜೈಲಿನಲ್ಲಿದ್ದಾಗ ಮನೆಯ ಆಹಾರ ನೀಡುವುದನ್ನು ಅನುಮತಿಸಲಾಯಿತು. ಯರವಾಡ ಜೈಲಿಗೆ ಸ್ಥಳಾಂತರಿಸಿದ ಬಳಿಕ ಜೈಲಿನ ಊಟವನ್ನೇ ನೀಡಲಾಯಿತು’ ಎಂದು ಅವರು ಹೇಳಿದ್ದಾರೆ.

ಸಂಜಯ್​ ದತ್​ಗೆ ಇತ್ತು ಎನ್​ಕೌಂಟರ್ ಭಯ; ಸಿನಿಮೀಯ ಶೈಲಿಯಲ್ಲೇ ಕೊಲ್ಲುತ್ತಾರೆ ಎಂದುಕೊಂಡಿದ್ರು..
ಸಂಜಯ್​ ದತ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 24, 2023 | 4:58 PM

Share

ಕ್ರೂರ ಅಪರಾಧ ಮಾಡಿದವರನ್ನು ಎನ್​ಕೌಂಟರ್ (Encounter) ಮಾಡಿ ಹತ್ಯೆ ಮಾಡಿದ ಅನೇಕ ಘಟನೆಗಳು ನಡೆದಿವೆ. ಸಿನಿಮಾಗಳಲ್ಲಿಯೂ ಇದನ್ನು ತೋರಿಸಲಾಗಿದೆ. ನಟ ಸಂಜಯ್ ದತ್ (Sanjay Dutt) ಅವರಿಗೂ ಇದೇ ರೀತಿಯ ಭಯ ಇತ್ತಂತೆ. 1993ರಲ್ಲಿ ನಡೆದ ಮುಂಬೈ ಬ್ಲಾಸ್ಟ್ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಸಂಜಯ್ ದತ್ ಜೈಲು ಸೇರಿದ್ದರು. ಈ ವೇಳೆ ಅವರ ಮನಸ್ಸು ಸಾಕಷ್ಟು ತುಮುಲಗಳನ್ನು ಹೊಂದಿತ್ತು. ಈ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಒಬ್ಬರು ಮಾತನಾಡಿದ್ದಾರೆ. ಸಂಜಯ್ ದತ್ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಮೀರನ್ ಚಡ್ಡಾ ಬೋರ್ವಂಕರ್ ಅವರು ಜೈಲಿನ (Arthur Road Jail) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಆಗಿದ್ದರು. ಅವರು ಸಂಜಯ್ ದತ್​ ಅವರನ್ನು ಜೈಲಿನಲ್ಲಿ ಹಲವು ಬಾರಿ ಭೇಟಿ ಮಾಡಿದ್ದರು. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ನಾನು ಪಂಜಾಬ್‌ನಿಂದ ಬಂದವಳು ಎಂದು ಕಂಡುಹಿಡಿಯಲು ಸಂಜಯ್ ದತ್ ತಮ್ಮ ಮೂಲಗಳನ್ನು ಬಳಸಿದ್ದರು. ನಾವು ಅವರಿಗೆ ಜೈಲಿನಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದೇವೆ ಎಂದು ಮಾಧ್ಯಮಗಳು ಆರೋಪಿಸಿದ್ದವು. ಆದರೆ ನಾವು ಹಾಗೆ ಮಾಡಿರಲಿಲ್ಲ. ಅವರ ನಡುವಳಿಕೆ ಜೈಲಿನಲ್ಲಿ ಉತ್ತಮವಾಗಿತ್ತು. ಅವರು ಹಾಗೆ ಇಲ್ಲದೇ ಇದ್ದಿದ್ದರೆ ನಾವು ಅವರಿಗೆ ಪರೋಲ್​ ನೀಡುತ್ತಿರಲಿಲ್ಲ’ ಎಂದಿದ್ದಾರೆ ಮೀರನ್.

ಇದನ್ನೂ ಓದಿ: ಸಂಜಯ್​ ದತ್​ ಹೊಸ ಸಿನಿಮಾ ‘ಮಾಸ್ಟರ್​ ಬ್ಲಾಸರ್​’; ಸಾಥ್​ ನೀಡಿದ ಟೈಗರ್​ ಶ್ರಾಫ್​

ಸಂಜಯ್​ ದತ್​ಗೆ ಮನೆಯ ಊಟ ಸಿಗುತ್ತಿತ್ತು ಎನ್ನುವ ಆರೋಪವನ್ನು ಕೆಲವರು ಮಾಡಿದ್ದರು. ಈ ಬಗ್ಗೆ ಮೀರನ್ ಅವರು ಮಾತನಾಡಿದ್ದಾರೆ. ‘ಇದು ವಿವಾದವಲ್ಲ, ಸತ್ಯ. ದೊಡ್ಡ ರಾಜಕಾರಣಿಗಳು, ಬಾಲಿವುಡ್ ಹೀರೋಗಳು ಮತ್ತು ಹೀರೋಯಿನ್‌ಗಳು ಜೈಲು ಸೇರಿದಾಗ ಅವರನ್ನು ವಿಐಪಿಗಳು ಎಂದು ಭಾವಿಸಲಾಗುತ್ತದೆ. ಕಾನೂನಿನ ಬಗ್ಗೆ ಅವರಿಗೆ ಜ್ಞಾನ ಇರುವುದಿಲ್ಲ. ಸಂಜಯ್ ದತ್ ಆರ್ಥರ್ ರೋಡ್ ಜೈಲಿನಲ್ಲಿದ್ದಾಗ ಮನೆಯ ಆಹಾರವನ್ನು ನೀಡುವುದನ್ನು ಅನುಮತಿಸಲಾಯಿತು. ಅವರು ಅಪರಾಧಿ ಎಂದು ಆದೇಶ ಬಂದ ಬಳಿಕ ಯರವಾಡ ಜೈಲಿಗೆ ಸ್ಥಳಾಂತರಿಸಿದೆವು. ಆ ಬಳಿಕ ಅವರಿಗೆ ಜೈಲಿನ ಊಟವನ್ನೇ ನೀಡಲಾಯಿತು’ ಎಂದು ಮೀರನ್ ಹೇಳಿದ್ದಾರೆ.

ಇದನ್ನೂ ಓದಿ: ವಿದೇಶಕ್ಕೆ ತೆರಳಿದ್ದ ಸಂಜಯ್ ದತ್​ಗೆ ಗಾಯ? ಅಭಿಮಾನಿಗಳಲ್ಲಿ ಮೂಡಿದೆ ಆತಂಕ

ಸಂಜಯ್ ದತ್ ಅವರನ್ನು ಆರ್ಥರ್ ಜೈಲಿನಿಂದ ಯೆರವಾಡ ಜೈಲ್​ಗೆ ಸ್ಥಳಾಂತರಿಸಬೇಕಿತ್ತು. ಈ ವೇಳೆ ತಮ್ಮನ್ನು ಎನ್​ಕೌಂಟರ್ ಮಾಡುವ ಭಯ ಅವರಿಗೆ ಕಾಡುತ್ತಿತ್ತು. ‘ಕರೆದುಕೊಂಡು ಹೋಗುವ ದಾರಿಯಲ್ಲಿ ಎನ್‌ಕೌಂಟರ್‌ ಮಾಡಿ ತಮ್ಮನ್ನು ಸಾಯಿಸಬಹುದು ಎಂದು ಸಂಜಯ್ ದತ್ ಹೆದರಿದ್ದರು. ಅವರ ಭಯ ಎಷ್ಟು ನಿಜವಾಗಿತ್ತು ಎಂದರೆ ಅವರು ಬೆವರಲು ಪ್ರಾರಂಭಿಸಿದರು. ಜ್ವರ ಬಂತು ಎಂದು ದೂರಿದರು. ಸಂಜಯ್ ದತ್ ಆರ್ಥರ್ ರೋಡ್ ಜೈಲಿನಿಂದ ಸ್ಥಳಾಂತರಗೊಳ್ಳುವ ಸುದ್ದಿ ಸೋರಿಕೆಯಾಯಿತು. ಜೈಲಿನ ಹೊರಗೆ ಜನ ನೆರೆದರು. ನಾವು ವರ್ಗಾವಣೆಯನ್ನು ಮುಂದೂಡಲು ನಿರ್ಧರಿಸಿದ್ದೆವು. ಅವರಿಗೆ ಎನ್​ ಕೌಂಟರ್ ಬಗ್ಗೆ ಇದ್ದ ತಪ್ಪು ಕಲ್ಪನೆಯನ್ನು ದೂರ ಮಾಡಿದೆವು. ನಂತರವೇ ನಾವು ಅವರನ್ನು ಸದ್ದಿಲ್ಲದೆ ಮತ್ತು ಯಶಸ್ವಿಯಾಗಿ ಸ್ಥಳಾಂತರಿಸಲು ಸಾಧ್ಯವಾಯಿತು’ ಎಂದಿದ್ದಾರೆ ಮೀರನ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ