AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಚಿತ್ರಕ್ಕೆ ಎಆರ್ ರೆಹಮಾನ್ ಬೇಕು ಎಂದು ನಿರ್ಮಾಪಕನಿಗೆ 70 ಲಕ್ಷ ಕೊಟ್ಟ ಸ್ಟಾರ್ ನಟಿ

ಬೋನಿ ಕಪೂರ್ ಅವರು ನಿರ್ಮಿಸಿದ ‘ಮಾಮ್’ ಚಿತ್ ಮೆಚ್ಚುಗೆ ಪಡೆಯಿತು. ಈ ಸಿನಿಮಾ ಶ್ರೀದೇವಿ ಅವರ ಕೊನೆಯ ಸಿನಿಮಾ. ಶ್ರೀದೇವಿ ಅವರು ತಮ್ಮ ಸಂಭಾವನೆಯಿಂದ 70 ಲಕ್ಷ ರೂಪಾಯಿಗಳನ್ನು ಎ.ಆರ್. ರೆಹಮಾನ್ ಅವರನ್ನು ಸಂಗೀತ ಸಂಯೋಜಕರನ್ನಾಗಿ ನೇಮಿಸಲು ನೀಡಿದ್ದರು. ರೆಹಮಾನ್ ಅವರ ದುಬಾರಿ ಸೇವೆಗಳನ್ನು ಪಡೆಯಲು ಶ್ರೀದೇವಿ ಅವರ ಈ ಸಮರ್ಪಣೆ ಮತ್ತು ಚಿತ್ರದ ಬಜೆಟ್‌ನ ಮಿತಿಗಳನ್ನು ಬೋನಿ ಕಪೂರ್ ಶ್ಲಾಘಿಸಿದ್ದಾರೆ.

ತಮ್ಮ ಚಿತ್ರಕ್ಕೆ ಎಆರ್ ರೆಹಮಾನ್ ಬೇಕು ಎಂದು ನಿರ್ಮಾಪಕನಿಗೆ 70 ಲಕ್ಷ ಕೊಟ್ಟ ಸ್ಟಾರ್ ನಟಿ
ರಹಮಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 10, 2025 | 8:03 AM

Share

ಎಆರ್ ರೆಹಮಾನ್ ಅವರು ಭಾರತದ ಅತ್ಯಂತ ದುಬಾರಿ ಸಂಗೀತ ಸಂಯೋಜಕ. ಅವರು ಸಖತ್ ಬ್ಯುಸಿ ಕೂಡ ಹೌದು. ದೇಶ-ವಿದೇಶದಲ್ಲಿ ಅವರು ಸಾಕಷ್ಟು ಕಾನ್ಸರ್ಟ್​ಗಳನ್ನು ಮಾಡುತ್ತಾ ಇರುತ್ತಾರೆ. ರೆಹಮಾನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದರೆ ಅದು ದೊಡ್ಡ ಚಾಲೆಂಜ್. ಈ ಮೊದಲು ನಟಿಯೊಬ್ಬರು ರೆಹಮಾನ್ ತಂಡಕ್ಕೆ ಬೇಕು ಎಂದು 70 ಲಕ್ಷ ರೂಪಾಯಿ ನೀಡಿದ್ದರಂತೆ.

ಶ್ರೀದೇವಿ ಅವರ ಕೊನೆಯ ಸಿನಿಮಾ ‘ಮಾಮ್’. ಅವರು ಸಾಯುವುದಕ್ಕೂ ಮೊದಲು ಈ ಚಿತ್ರದಲ್ಲಿ ನಟಿಸಿದ್ದರು. ಅವರ ಪತಿ ಬೋನಿ ಕಪೂರ್ ಅವರೇ ಈ ಚಿತ್ರ ನಿರ್ಮಾಣ ಮಾಡಿದ್ದರು. ಈ ಸಿನಿಮಾಗೆ ರೆಹಮಾನ್ ಅವರನ್ನು ಕರೆತರುವ ಬಗ್ಗೆ ಚರ್ಚೆ ಆಯಿತು. ಶ್ರೀದೇವಿ ಅವರು ತಮ್ಮ ಸಂಭಾವನೆಯಲ್ಲಿ 70 ಲಕ್ಷ ಹಣವನ್ನು ಬೋನಿಗೆ ನೀಡಿ, ರೆಹಮಾನ್ ಕರೆತರುವಂತೆ ಸೂಚಿಸಿದ್ದರಂತೆ.

‘ಮಾಮ್ ಸಿನಿಮಾ ಶೂಟ್ ವೇಳೆ ನಾವು ಎ.ಆರ್. ರೆಹಮಾನ್ ಅವರನ್ನು ಕರೆದುಕೊಂಡು ಬರಲು ಬಯಸಿದ್ದೆವು. ಆದರೆ ಅವರು ದುಬಾರಿಯಾಗಿದ್ದರು ಮತ್ತು ನಮಗೆ ಅಷ್ಟು ಬಜೆಟ್ ಇರಲಿಲ್ಲ. ನಾವು ಶ್ರೀದೇವಿ ಸಂಭಾವನೆಯ ಒಂದು ಭಾಗವನ್ನು ರೆಹಮಾನ್​ಗೆ ಸಂಭಾವನೆ ನೀಡಲು ನಿರ್ಧರಿಸಿದೆವು. ಇದನ್ನು ಶ್ರೀದೇವಿ ಅವರೇ ನನಗೆ ಹೇಳಿದ್ದರು’ ಎಂದು ಬೋನಿ ವಿವರಿಸಿದ್ದಾರೆ.

ಇದನ್ನೂ ಓದಿ
Image
ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್​​ಗೆ ಪಾಠ ಮಾಡಿದ ನೆಟ್ಟಿಗರು
Image
‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್
Image
ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದವರಿಗೆ ಉತ್ತರಿಸಿದ ನಟಿ
Image
‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್; 45ನೇ ದಿನವೂ ಅಬ್ಬರದ ಕಲೆಕ್ಷನ್

ಇದನ್ನೂ ಓದಿ: ಶ್ರೀದೇವಿ ಬಗ್ಗೆ ರಾಜಮೌಳಿ ಬಳಿ ಸುಳ್ಳು ಹೇಳಿದ್ದ ಆ ವ್ಯಕ್ತಿ: ಬೋನಿ ಕಪೂರ್ ಆರೋಪ

ಶ್ರೀದೇವಿ ಸಮರ್ಪಣೆಯನ್ನು ಬೋನಿ ಶ್ಲಾಘಿಸಿದರು. ‘ಮಾಮ್ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಶ್ರೀದೇವಿ ಅವರು ನನ್ನೊಂದಿಗೆ ಕೊಠಡಿ ಹಂಚಿಕೊಳ್ಳಲು ನಿರಾಕರಿಸಿದರು. ಚಿತ್ರದ ಬಹುಪಾಲು ಭಾಗವನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ಚಿತ್ರೀಕರಿಸಲಾಯಿತು, ನಂತರ ಜಾರ್ಜಿಯಾಗೂ ಹೋದೆವು. ಆದಾಗ್ಯೂ, ನಾನು ಮತ್ತು ಶ್ರೀದೇವಿ ಎಂದಿಗೂ ಒಂದೇ ಕೊಠಡಿ ಹಂಚಿಕೊಂಡಿಲ್ಲ. ನನಗೆ ವಿಚಲಿತರಾಗಲು ಇಷ್ಟವಿಲ್ಲ ಎಂದು ಹೇಳುತ್ತಿದ್ದರು. ಅವಳು ಆ ಪಾತ್ರದ ಬಗ್ಗೆ ತುಂಬಾ ಗೀಳನ್ನು ಹೊಂದಿದ್ದರು. ನಿಜವಾದ ಹೆಂಡತಿಯಾಗಿ ವಿಚಲಿತರಾಗಲು ಅವಳು ಬಯಸಲಿಲ್ಲ. ಅವಳು ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ಉಳಿಯಲು ಬಯಸಿದ್ದರು’ ಎಂದಿದ್ದಾರೆ ಬೋನಿ

‘ಮಾಮ್’ ಸಿನಿಮಾ ಹಲವು ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಯಿತು. ಈ ಚಿತ್ರ ಎಲ್ಲರಿಂದ ಸಾಕಷ್ಟು ಮೆಚ್ಚುಗೆ ಕೂಡ ಪಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ