Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ

Urfi Javed Photo: ಉರ್ಫಿ ಜಾವೇದ್​ ಅವರ ಫೋಟೋ ಅಶ್ಲೀಲ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಆದಾಗ ಅವರನ್ನು ಇಡೀ ಊರಿನವರು ಹಾಗೂ ಕುಟುಂಬದವರು ಅವಮಾನಿಸಿದ್ದರು. ಆ ಘಟನೆ ಕುರಿತು ಉರ್ಫಿ ಮಾತನಾಡಿದ್ದಾರೆ.

ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ
Follow us
TV9 Web
| Updated By: ಮದನ್​ ಕುಮಾರ್​

Updated on:Apr 29, 2022 | 12:36 PM

ನಟಿ ಉರ್ಫಿ ಜಾವೇದ್​ (Urfi Javed) ಅವರು​ ಪ್ರತಿ ದಿನವೂ ಸುದ್ದಿ ಆಗುತ್ತಿದ್ದಾರೆ. ಒಂದಿಲ್ಲೊಂದು ಕಾರಣಕ್ಕೆ ಅವರ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತದೆ. ವಿಚಿತ್ರ ಬಟ್ಟೆ ಧರಿಸಿ ಹೊರಬರುವ ಮೂಲಕ​ ಅವರು ಫೇಮಸ್​ ಆಗಿದ್ದಾರೆ. ಈ ಕಾರಣಕ್ಕಾಗಿ ನೆಟ್ಟಿಗರು ಎಷ್ಟೇ ಟ್ರೋಲ್​ (Urfi Javed Troll) ಮಾಡಿದರೂ ಆ ಬಗ್ಗೆ ಉರ್ಫಿ ಜಾವೇದ್​ ತಲೆ ಕೆಡಿಸಿಕೊಂಡಿಲ್ಲ. ಆದರೆ ಒಂದು ವಿಷಯದಿಂದ ಅವರು ಚಿಂತೆಗೆ ಒಳಗಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಅವರು ಬಂದಿದ್ದರು. ಪ್ರತಿ ದಿನ ಅವರಿಗೆ ರೇಪ್​ (Rape) ಬೆದರಿಕೆ ಬರುತ್ತವೆ. ಆ ಎಲ್ಲ ಘಟನೆಗಳ ಕುರಿತು ಈಗ ಉರ್ಫಿ ಜಾವೇದ್ ಅವರು ಮಾತನಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲಕಿ ಆಗಿದ್ದಾಗಲೇ ಅವರಿಗೆ ಸೈಬರ್​ ಲೋಕದಲ್ಲಿ ಕಿರುಕುಳ ಎದುರಾಗಿತ್ತು. ಅದರಿಂದ ಅವರು ಎದುರಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಅದಕ್ಕೆಲ್ಲ ಕಾರಣ ಆಗಿದ್ದು ಅವರ ಒಂದು ಫೋಟೋ. ಆ ಬಗ್ಗೆ ವಿವರ ಇಲ್ಲಿದೆ.

‘ಆಗ ನನಗೆ ಇನ್ನೂ 15ರ ಪ್ರಾಯ. ನಾವು ಲಖನೌನಲ್ಲಿ ವಾಸವಾಗಿದ್ದೆವು. ಒಂದು ಆಫ್​ ಶೋಲ್ಡರ್​ ಉಡುಗೆಯನ್ನು ನಾನು ಧರಿಸಿದ್ದೆ. ಆ ಸಮಯದಲ್ಲಿ ಲಖನೌ ಸಮೀಪ ಎಲ್ಲಿಯೂ ಆ ರೀತಿಯ ಬಟ್ಟೆ ಕಾಣಲು ಸಿಗುತ್ತಿರಲಿಲ್ಲ. ಹಾಗಾಗಿ ನನ್ನ ಒಂದು ಟಾಪ್​ ಅನ್ನು ಕತ್ತರಿಸಿ ನಾನು ವಿನ್ಯಾಸಗೊಳಿಸಿದ್ದೆ. ಆ ಬಟ್ಟೆ ಧರಿಸಿ ಫೋಟೋ ತೆಗೆದುಕೊಂಡು, ಅದನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ್ದೆ. ಅದೇ ಫೋಟೋವನ್ನು ಯಾರೋ ಅಶ್ಲೀಲ ವೆಬ್​ಸೈಟ್​​ನಲ್ಲಿ ಹಾಕಿದ್ದರು’ ಎಂದು ಆ ಕಹಿ ಘಟನೆಯನ್ನು ಉರ್ಫಿ ಜಾವೇದ್​ ವಿವರಿಸಿದ್ದಾರೆ.

‘ಆ ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬುದೇ ನನಗೆ ತಿಳಿದಿರಲಿಲ್ಲ. ಅಂಥ ಪರಿಸ್ಥಿತಿ ಬರುವರೆಗೆ ನಾವು ಎಷ್ಟು ಸ್ಟ್ರಾಂಗ್​ ಎಂಬುದು ನಮಗೆ ಗೊತ್ತಾಗುವುದಿಲ್ಲ. ಬಂದಿದ್ದನ್ನು ಸ್ವೀಕರಿಸಬೇಕಾ? ಫೈಟ್​ ಮಾಡಬೇಕಾ ಅಥವಾ ಸಾಯಬೇಕಾ? ಸಾಯಲು ನನಗೆ ಧೈರ್ಯ ಇರಲಿಲ್ಲ. ಹಾಗಾಗಿ ನಾನು ಫೈಟ್​ ಮಾಡಲು ನಿರ್ಧರಿಸಿದೆ’ ಎಂದು ಉರ್ಫಿ ಜಾವೇದ್​ ಹೇಳಿದ್ದಾರೆ.

ಉರ್ಫಿ ಜಾವೇದ್​ ಅವರ ಫೋಟೋ ಅಶ್ಲೀಲ ವೆಬ್​ ಸೈಟ್​ನಲ್ಲಿ ಅಪ್​ಲೋಡ್​ ಆದಾಗ ಅವರನ್ನು ಇಡೀ ಊರಿನವರು ಮತ್ತು ಕುಟುಂಬದವರು ಕೂಡ ಅವಮಾನಿಸಿದ್ದರು. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕೂಡ ಅವರು ಆಲೋಚಿಸಿದ್ದರು. ಆದರೆ ಸಾಧ್ಯವಾಗಲಿಲ್ಲ. ಈಗಲೂ ಅವರಿಗೆ ಪ್ರತಿದಿನ ರೇಪ್​ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಅದು ಕೂಡ ನೂರಾರು ಜನರಿಂದ. ಆ ಬಗ್ಗೆ ಕೂಡ ಅವರು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಬಟ್ಟೆ ವಿಚಾರದಲ್ಲಿ ಉರ್ಫಿ ಜಾವೇದ್​ ಅವರಿಗೆ ಈಗಲೂ ಟ್ರೋಲ್​ ಕಾಟ ತಪ್ಪಿಲ್ಲ. ಅವರ ಫೋಟೋಗಳು ವೈರಲ್​ ಆದಾಗ ಕೆಲವು ಕಿರುತೆರೆಯ ಸೆಲೆಬ್ರಿಟಿಗಳು ಕೂಡ ಅಶ್ಲೀಲವಾಗಿ ಕಮೆಂಟ್​ ಮಾಡುತ್ತಾರೆ ಎಂಬ ಕುರಿತು ಉರ್ಫಿ ಅವರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ತಮಗೆ ಪ್ರತಿಭೆ ಇದ್ದರೂ ಕೂಡ ಕಿರುತೆರೆಯಲ್ಲಿ ಸೂಕ್ತ ಮನ್ನಣೆ ಸಿಕ್ಕಿಲ್ಲ ಎಂದು ಗರಂ ಆಗಿದ್ದರು. ಬಿಗ್​ ಬಾಸ್​ ಒಟಿಟಿಯಲ್ಲಿ ಸ್ಪರ್ಧಿಸಿ ಹೊರಬಂದ ಬಳಿಕ ಉರ್ಫಿ ಜಾವೇದ್​ ಅವರ ಖ್ಯಾತಿ ಹೆಚ್ಚಿತು.

ಇದನ್ನೂ ಓದಿ:

ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ

‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​

Published On - 12:31 pm, Fri, 29 April 22

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ