AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯಾ ಕೋರಿಕೆ ಮೇರೆಗೆ ‘ವಿಚ್ಛೇದನ’ ಪೋಸ್ಟ್​ನ ಲೈಕ್ ಮಾಡಿದ್ದ ಅಭಿಷೇಕ್

ಇತ್ತೀಚೆಗೆ ಹೀನಾ ಖಂಡೇವಾಲ ಅವರು ವಿಚ್ಛೇದನದ ಬಗ್ಗೆ ಲೇಖನ ಬರೆದಿದ್ದರು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್​ನ ಐಶ್ವರ್ಯಾ ರೈ ಬಚ್ಚನ್ ಅವರು ಲೈಕ್ ಮಾಡಿದ್ದರು. ಇವರು ವಿಚ್ಛೇದನ ಪಡೆಯುತ್ತಿರುವುದರಿಂದಲೇ ಈ ರೀತಿಯಲ್ಲಿ ಲೈಕ್ ಒತ್ತಿದ್ದಾರೆ ಎಂದು ಅನೇಕರು ಮಾತನಾಡಿಕೊಂಡಿದ್ದರು.

ಐಶ್ವರ್ಯಾ ಕೋರಿಕೆ ಮೇರೆಗೆ ‘ವಿಚ್ಛೇದನ’ ಪೋಸ್ಟ್​ನ ಲೈಕ್ ಮಾಡಿದ್ದ ಅಭಿಷೇಕ್
ಐಶ್ವರ್ಯಾ ಕೋರಿಕೆ ಮೇರೆಗೆ ‘ವಿಚ್ಛೇದನ’ ಪೋಸ್ಟ್​ನ ಲೈಕ್ ಮಾಡಿದ್ದ ಅಭಿಷೇಕ್
ರಾಜೇಶ್ ದುಗ್ಗುಮನೆ
|

Updated on: Jul 23, 2024 | 9:34 AM

Share

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆಗೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಬೇರೆ ಬೇರೆ ಆಗಿ ಬಂದಾಗಿನಿಂದಲೂ ಇವರ ವಿಚ್ಛೇದನ ವಿಚಾರ ಚರ್ಚೆಯಲ್ಲಿ ಇದೆ. ಹೀಗಿರುವಾಗಲೇ ಅಭಿಷೇಕ್ ಬಚ್ಚನ್ ಅವರು ‘ವಿಚ್ಛೇದನ ಯಾರಿಗೂ ಸುಲಭವಲ್ಲ’ ಎನ್ನುವ ಪೋಸ್ಟ್​ನ ಲೈಕ್ ಮಾಡಿದ್ದರು. ಇದು ಸಾಕಷ್ಟು ಚರ್ಚೆ ಆಗಿತ್ತು. ವಿಚ್ಛೇದನ ವಿಚಾರ ಚರ್ಚೆಯಲ್ಲಿರುವುದಕ್ಕೂ ಅಭಿಷೇಕ್ ಈ ಫೋಟೋ ಲೈಕ್ ಮಾಡಿರುವದಕ್ಕೂ ನಂಟು ಕಲ್ಪಿಸಲಾಗಿತ್ತು. ಇದಕ್ಕೆ ಕಾರಣ ರಿವೀಲ್ ಆಗಿದೆ.

ಇತ್ತೀಚೆಗೆ ಹೀನಾ ಖಂಡೇವಾಲ ಅವರು ಲೇಖನ ಒಂದನ್ನು ಬರೆದಿದ್ದರು. ಈ ಲೇಖನ ವಿಚ್ಛೇದನದ ಬಗ್ಗೆ ಇತ್ತು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್​ನ ಐಶ್ವರ್ಯಾ ರೈ ಬಚ್ಚನ್ ಅವರು ಲೈಕ್ ಮಾಡಿದ್ದರು. ಇವರು ವಿಚ್ಛೇದನ ಪಡೆಯುತ್ತಿರುವುದರಿಂದಲೇ ಈ ರೀತಿಯಲ್ಲಿ ಲೈಕ್ ಒತ್ತಿದ್ದಾರೆ ಎಂದು ಅನೇಕರು ಮಾತನಾಡಿಕೊಂಡಿದ್ದರು. ಆದರೆ, ಅಸಲಿ ವಿಚಾರ ಬೇರೆಯದೇ ಇದೆ. ಐಶ್ವರ್ಯಾ ಅವರ ಫ್ರೆಂಡ್ ಝೈರತ್ ಮಾರ್ಕರ್ ಅವರು ಈ ಆರ್ಟಿಕಲ್​ಗೆ ಕೊಡುಗೆ ನೀಡಿದ್ದಾರೆ. ಪತ್ನಿಯ ಗೆಳೆಯನಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕೆ ಅವರು ಲೈಕ್ ಒತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ‘ಪತ್ನಿಗೆ ಸಹಾಯ ಆಗಲಿ ಎಂದು ಅಭಿಷೇಕ್ ಬಚ್ಚನ್ ಪೋಸ್ಟ್​ಗೆ ಲೈಕ್ ಒತ್ತಿದ್ದಾರೆ. ಆದರೆ, ಇದನ್ನು ಬೇರೆ ರೀತಿಯೇ ಬಣ್ಣಿಸಲಾಗಿದೆ. ಈಗ ಟ್ವಿಸ್ಟ್ ಹೇಗಿದೆ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ.

ತಮ್ಮ ಪೋಸ್ಟ್ ಈ ರೀತಿಯಲ್ಲಿ ವೈರಲ್ ಆಗಿರುವುದಕ್ಕೆ ಹೀನಾ ಖಂಡೇವಾಲ ಅವರು ಅಸಮಾಧಾನ ಹೊರಹಾಕಿದ್ದಾರೆ. ‘ನನಗೆ ಆ ವ್ಯಕ್ತಿ (ಅಭಿಷೇಕ್ ಬಚ್ಚನ್) ಜೊತೆ ಅಷ್ಟಾಗಿ ಪರಿಚಯ ಇಲ್ಲ. ಆದರೆ, ಒಂದು ಲೈಕ್ ಎಲ್ಲವನ್ನೂ ಬದಲಿಸಿತು. ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ನನ್ನ ಅಗತ್ಯ ಇಲ್ಲ. ಆದರೆ, ನನ್ನ ಪೋಸ್ಟ್ ಈ ರೀತಿಯಲ್ಲಿ ಹೈಲೈಟ್ ಆಯಿತಲ್ಲ ಎನ್ನುವ ಬೇಸರ ನನಗೆ ಇದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಉಚಿತ ಟೀ, ಸಮೋಸಾ ಕೊಡ್ತೀವಿ, ಸಿನಿಮಾ ನೋಡೋಕೆ ಬನ್ನಿ’: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಹೀನಾಯ ಸ್ಥಿತಿ

‘ಈ ಫೋಟೋಗೆ ಸಾಲಕಷ್ಟು ಲೈಕ್ಸ್​ಗಳು ಸಿಕ್ಕಿವೆ. ಈ ಫೋಟೋನ ಲೈಕ್ ಮಾಡದೆ ಇದ್ದವರು ಕೂಡ ನನ್ನ ಬಳಿ ಬಂದು ಲೇಖನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ’ ಎಂದು ಹೀನಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ