AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cinema Lovers Day: 99 ರೂಪಾಯಿಗೆ ಪಿವಿಆರ್, ಐನಾಕ್ಸ್​ ಸಿನಿಮಾ ಟಿಕೆಟ್​; ಒಂದು ದಿನದ ಆಫರ್​ ಮಾತ್ರ

‘ಸಿನಿಮಾ ಲವರ್ಸ್​ ಡೇ’ ಪ್ರಯುಕ್ತ ಇಂದು (ಫೆಬ್ರವರಿ 23) ಪಿವಿಆರ್​ ಮತ್ತು ಐನಾಕ್ಸ್​ನಲ್ಲಿ ಸಿನಿಮಾಗಳ ಟಿಕೆಟ್​ ಬೆಲೆ ತಗ್ಗಿಸಲಾಗಿದೆ. ಕೇವಲ 99 ರೂಪಾಯಿಗೆ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ನೋಡುವ ಆಫರ್​ ನೀಡಲಾಗಿದೆ. ಲಕ್ಷಾಂತರ ಪ್ರೇಕ್ಷಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗೋಲ್ಡ್​ ಕ್ಲಾಸ್​ ರೀತಿಯ ಐಷಾರಾಮಿ ಸೀಟ್​ಗಳ ದರದಲ್ಲೂ ರಿಯಾಯಿತಿ ನೀಡಲಾಗಿದೆ.

Cinema Lovers Day: 99 ರೂಪಾಯಿಗೆ ಪಿವಿಆರ್, ಐನಾಕ್ಸ್​ ಸಿನಿಮಾ ಟಿಕೆಟ್​; ಒಂದು ದಿನದ ಆಫರ್​ ಮಾತ್ರ
ಫೈಟರ್​, ಹನುಮಾನ್​, ಒಂದು ಸರಳ ಪ್ರೇಮಕಥೆ
ಮದನ್​ ಕುಮಾರ್​
|

Updated on:Feb 23, 2024 | 10:58 AM

Share

ಮಲ್ಟಿಪ್ಲೆಕ್ಸ್​ನಲ್ಲಿ ಹಾಯಾಗಿ ಸಿನಿಮಾ ನೋಡಬೇಕು ಎಂಬುದು ಪ್ರೇಕ್ಷಕರ ಆಸೆ. ಆದರೆ ದುಬಾರಿಯಾದ ಸಿನಿಮಾಗಳ ಟಿಕೆಟ್​ ದರ ನೋಡಿ ಎಷ್ಟೋ ಜನರು ಮಲ್ಟಿಪ್ಲೆಕ್ಸ್​ (Multiplex) ಕಡೆಗೆ ತಲೆ ಹಾಕುವುದಿಲ್ಲ. ಕುಟುಂಬ ಸಮೇತರಾಗಿ ಸಿನಿಮಾ ನೋಡಲು ಹೋದರೆ ಜೇಬಿಗೆ ಹೊರೆಯಾಗುತ್ತದೆ ಎಂದು ಚಿಂತಿಸುವ ವರ್ಗ ಕೂಡ ದೊಡ್ಡದಿದೆ. ಅಂಥವರಿಗೆಲ್ಲ ಒಂದು ಗುಡ್​ ನ್ಯೂಸ್​ ಸಿಕ್ಕಿದೆ. ಇಂದು (ಫೆಬ್ರವರಿ 23) ಪಿವಿಆರ್​ (PVR) ಮತ್ತು ಐನಾಕ್ಸ್​ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡುವವರಿಗೆ ಕಡಿಮೆ ಬೆಲೆಯಲ್ಲಿ ಟಿಕೆಟ್​ಗಳು ಸಿಗಲಿವೆ. ದೇಶಾದ್ಯಂತ ಕೇವಲ 99 ರೂಪಾಯಿಗೆ ಸಿನಿಮಾ ತೋರಿಸಲಾಗುತ್ತಿದೆ. ಅಂದಹಾಗೆ, ಈ ಆಫರ್​ (Cinema Lovers Day) ಇರುವುದು ಇಂದು (ಫೆ.23) ಮಾತ್ರ!

ಪಿವಿಆರ್​ ಮತ್ತು ಐನಾಕ್ಸ್​ ಕಡೆಯಿಂದ ಫೆಬ್ರವರಿ 23ರಂದು ‘ಸಿನಿಮಾ ಲವರ್ಸ್​ ಡೇ’ ಆಚರಿಸಲಾಗುತ್ತಿದೆ. ಈ ಪ್ರಯಕ್ತ ಪಿವಿಆರ್​, ಐನಾಕ್ಸ್​ನಲ್ಲಿ ಸಿನಿಮಾದ ಟಿಕೆಟ್​ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಹಾಲಿವುಡ್​ನಿಂದ ಸ್ಯಾಂಡವುಡ್​ ತನಕ ಎಲ್ಲ ಸಿನಿಮಾಗಳ ಟಿಕೆಟ್​ಗಳು ಕೇವಲ 99 ರೂಪಾಯಿಗೆ ಸಿಗುತ್ತಿವೆ. ಸಾಮಾನ್ಯ ದರ್ಜೆಯ ಸೀಟುಗಳಿಗೆ 99 ರೂಪಾಯಿ ಇದೆ. ಐಷಾರಾಮಿಯಾದ ವಿಶೇಷ ಸೀಟ್​ಗಳ ಬೆಲೆಯನ್ನೂ ತಗ್ಗಿಸಲಾಗಿದೆ.

ಗೋಲ್ಡ್​ ಕ್ಲಾಸ್​ ರೀತಿಯ ಐಷಾರಾಮಿ ಸಿನಿಮಾ ಸೀಟ್​ಗಳಿಗೆ ಮಾಮೂಲಿ ದಿನದಲ್ಲಿ ಸಾವಿರಾರು ರೂಪಾಯಿ ಟಿಕೆಟ್​ ಬೆಲೆ ಇರುತ್ತದೆ. ಆದರೆ ‘ಸಿನಿಮಾ ಲವರ್ಸ್​ ಡೇ’ ಪ್ರಯುಕ್ತ 199 ರೂಪಾಯಿಂದ ಆರಂಭವಾಗಿ ರಿಯಾಯಿತಿ ದರದಲ್ಲಿ ಈ ಸೀಟ್​ಗಳ ಟಿಕೆಟ್​ ಮಾರಲಾಗುತ್ತಿದೆ. ಲಕ್ಷಾಂತರ ಪ್ರೇಕ್ಷಕರು ಆ ಆಫರ್​ನ ಮಜಾ ಸವಿಯುತ್ತಿದ್ದಾರೆ. ಇಂದು ಶುಕ್ರವಾರ ಆಗಿರುವುದರಿಂದ ಹೊಸದಾಗಿ ಬಿಡುಗಡೆಯಾದ ಸಿನಿಮಾಗಳ ಟಿಕೆಟ್​ಗಳು ಕೂಡ ಪಿವಿಆರ್​ ಹಾಗೂ ಐನಾಕ್ಸ್​ನಲ್ಲಿ ಕೇವಲ 99 ರೂಪಾಯಿಗೆ ಸಿಗುತ್ತಿವೆ.

ಇದನ್ನೂ ಓದಿ: ಪಿವಿಆರ್ ಹಣ ಗಳಿಸುವುದು ಹೇಗೆ? ಟಿಕೆಟ್​ನಿಂದ ಸಿಗುವುದೆಷ್ಟು? ನಿರ್ಮಾಪಕರಿಗೆ ತಲುಪುವುದೆಷ್ಟು? ವ್ಯವಹಾರ ಹೇಗೆ?

ಈಗ ಪಿವಿಆರ್​ ಮತ್ತು ಐನಾಕ್ಸ್​ನಲ್ಲಿ ಹಲವು ಸಿನಿಮಾಗಳು ಪ್ರದರ್ಶನ ಕಾಣುತ್ತಿದೆ. ಹೃತಿಕ್​ ರೋಷನ್​ ನಟನೆಯ ‘ಫೈಟರ್​’, ಶಾಹಿದ್​ ಕಪೂರ್​ ಅಭಿನಯದ ‘ತೇರಿ ಬಾತೋ ಮೈ ಐಸಾ ಉಲ್ಜಾ ಜಿಯಾ’, ಪ್ರಿಯಾಮಣಿ ನಟಿಸಿರುವ ‘ಆರ್ಟಿಕಲ್​ 370’, ವಿದ್ಯುತ್​ ಜಾಮ್ವಾಲ್​ ಅವರ ‘ಕ್ರ್ಯಾಕ್​’, ತೇಜ ಸಜ್ಜಾ ನಟನೆಯ ‘ಹನುಮಾನ್​’, ರಜನಿಕಾಂತ್​ ಅಭಿನಯಿಸಿರುವ ‘ಲಾಲ್​ ಸಲಾಂ’ ಮುಂತಾದ ಸಿನಿಮಾಗಳು ಪ್ರದರ್ಶನವಾಗುತ್ತಿವೆ. ಕನ್ನಡದ ‘ಒಂದು ಸರಳ ಪ್ರೇಮಕಥೆ’, ‘ಮಿಸ್ಟರ್​ ನಟ್ವರ್​ಲಾಲ್​’, ‘ಫಾರ್​ ರಿಜಿಸ್ಟ್ರೇಷನ್​’ ಮುಂತಾದ ಸಿನಿಮಾಗಳನ್ನು ಕೂಡ ಇಂದು ಕೇವಲ 99 ರೂಪಾಯಿಗೆ ಪ್ರೇಕ್ಷಕರು ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:58 am, Fri, 23 February 24

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!