AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವ್ಯಕ್ತಿ ಬಟ್ಟೆ ಬಿಚ್ಚಿ ನಿಮ್ಮ ಎದುರು ನಿಲ್ಲುತ್ತಾನೆ ಎಂದರೆ ಅದು ನಂಬಿಕೆ’; ಚೈತ್ರಾ ಹೀಗೆ ಹೇಳಿದ್ದೇಕೆ?

ಬಿಗ್ ಬಾಸ್ ಕೊಟ್ಟ ಹಣವನ್ನು ಪ್ರತಿ ತಂಡದವರು ತಮ್ಮ ಸ್ಪರ್ಧಿಗಳಿಗೆ ಹಂಚಿದ್ದಾರೆ. ಈ ರೀತಿಯಲ್ಲಿ ಹಂಚಲ್ಪಟ್ಟ ಹಣವನ್ನು ತುಂಬಾನೇ ಜೋಪಾನವಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ. ಬೇರೆಯವರು ಇದನ್ನು ಕದಿಯುವ ಸಾಧ್ಯತೆ ಇರುತ್ತದೆ. ಈಗಲೂ ಹಾಗೆಯೇ ಆಗಿದೆ. ಇದಕ್ಕೆ ಚೈತ್ರಾ ಸಿಟ್ಟಾಗಿದ್ದಾರೆ.

‘ವ್ಯಕ್ತಿ ಬಟ್ಟೆ ಬಿಚ್ಚಿ ನಿಮ್ಮ ಎದುರು ನಿಲ್ಲುತ್ತಾನೆ ಎಂದರೆ ಅದು ನಂಬಿಕೆ’; ಚೈತ್ರಾ ಹೀಗೆ ಹೇಳಿದ್ದೇಕೆ?
ಚೈತ್ರಾ
ರಾಜೇಶ್ ದುಗ್ಗುಮನೆ
|

Updated on: Nov 22, 2024 | 6:47 AM

Share

ಬಿಗ್ ಬಾಸ್ ಮನೆಯಲ್ಲಿ ಈಗ ದುಡ್ಡು ಹರಿದಾಡಿದೆ. ಅಂದರೆ, ಅಸಲಿ ಹಣ ಅಲ್ಲ. ಬಿಗ್ ಬಾಸ್ ಕಡೆಯಿಂದ ಎಲ್ಲಾ ಸ್ಪರ್ಧಿಗಳಿಗೆ ಹಣ ನೀಡಲಾಗುತ್ತದೆ. ಈ ಹಣ ತುಂಬಾನೇ ಮುಖ್ಯ. ಅಂತಿಮವಾಗಿ ಯಾರ ಬಳಿ ಹೆಚ್ಚು ಹಣ ಇರುತ್ತದೆಯೋ ಅವರು ಗೆದ್ದಂತೆ. ಈ ಆಟ ಮನೆಯ ರೋಚಕತೆ ಹೆಚ್ಚಿಸಿದೆ. ಹಣವನ್ನು ಕದಿಯುವ ಬಗ್ಗೆ ಸ್ಪರ್ಧಿಗಳ ಮಧ್ಯೆಯ ಮಾತುಕತೆ ಆಗುತ್ತಿದೆ. ಇದು ಆಟಕ್ಕೆ ಹೊಸ ತಿರುವು ನೀಡಿದೆ. ಇದು ಚೈತ್ರಾ ಹಾಗೂ ಗೌತಮಿ ಮಧ್ಯೆ ಜಗಳಕ್ಕೆ ಕಾರಣ ಆಗಿದೆ.

ಬಿಗ್ ಬಾಸ್ ಕೊಟ್ಟ ಹಣವನ್ನು ಪ್ರತಿ ತಂಡದವರು ತಮ್ಮ ಸ್ಪರ್ಧಿಗಳಿಗೆ ಹಂಚಿದ್ದಾರೆ. ಈ ರೀತಿಯಲ್ಲಿ ಹಂಚಲ್ಪಟ್ಟ ಹಣವನ್ನು ತುಂಬಾನೇ ಜೋಪಾನವಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ. ಬೇರೆಯವರು ಇದನ್ನು ಕದಿಯುವ ಸಾಧ್ಯತೆ ಇರುತ್ತದೆ. ಈಗಲೂ ಹಾಗೆಯೇ ಆಗಿದೆ. ಚೈತ್ರಾ ಅವರು ಹಣ ಇಟ್ಟುಕೊಂಡು ಓಡಾಡುವಾಗ ಅದನ್ನು ಕದಿಯುವ ಆಲೋಚನೆ ಮಂಜುಗೆ ಬಂದಿದೆ. ಇದಕ್ಕೆ ಅವರು ಗೌತಮಿ ಹಾಗೂ ಐಶ್ವರ್ಯಾ ಅವರನ್ನು ಮುಂದಿಟ್ಟಿದ್ದಾರೆ.

ಚೈತ್ರಾಗೆ ಗೌತಮಿ ಹಾಗೂ ಐಶ್ವರ್ಯಾ ಪಂಚೆ ಹಾಕುವ ಐಡಿಯಾ ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಚೈತ್ರಾ ವಾಶ್​ರೂಂಗೆ ಹೋದರು. ಅಲ್ಲಿ ಹಣ ಕದಿಯುವ ಪ್ರಯತ್ನ ನಡೆದಿದೆ. ಇದಕ್ಕೆ ಚೈತ್ರಾ ಅವರು ಸಿಟ್ಟಾಗಿದ್ದಾರೆ. ಅವರು ಐಶ್ವರ್ಯಾ ಹಾಗೂ ಗೌತಮಿ ಮೇಲೆ ಸಿಟ್ಟಾಗಿದ್ದಾರೆ. ಅವರು ಸಾಕಷ್ಟು ಕೂಗಾಟ ನಡೆಸಿದ್ದಾರೆ. ಅವರು ಕೂಗುತ್ತಲೇ ವಶಾ್​ರೂಂನಿಂದ ಹೊರ ಬಂದಿದ್ದಾರೆ.

ಇದನ್ನೂ ಓದಿ: ಓವರ್​ ಕಾನ್ಫಿಡೆನ್ಸ್​ನಿಂದ ಬಿಗ್​ ಬಾಸ್​ನಲ್ಲಿ ಎಡವುತ್ತಿದ್ದಾರಾ ಶೋಭಾ ಶೆಟ್ಟಿ?

‘ನನಗೆ ತುಂಬಾ ಖುಷಿ ಇದೆ. ನೀವು ನಂಬಿಸಿ ಮೋಸ ಮಾಡಿದ್ದೀರಿ. ನೀವು ಡ್ರಾಮಾ ಕ್ವೀನ್. ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದೀರಿ. ನೀವು ದಡ್ಡರು ಎಂದು ಸಾಬೀತು ಮಾಡಿಕೊಂಡಿರಿ. ಗುಂಪುಗಾರಿಕೆ ಮಾಡಿದ್ರೂ ಪ್ಲ್ಯಾನ್ ವರ್ಕೌಟ್ ಆಗಿಲ್ಲ. ಓರ್ವ ವ್ಯಕ್ತಿ ಬಟ್ಟೆ ಬಿಚ್ಚಿ ನಿಮ್ಮ ಎದುರು ನಿಲ್ಲುತ್ತಾನೆ ಎಂದರೆ ಅದು ನಂಬಿಕೆ. ಆ ನಂಬಿಕೆಯನ್ನೇ ಉಳಿಸಿಕೊಂಡಿಲ್ಲ’ ಎಂದು ಚೈತ್ರಾ ಕೂಗಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್