AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನ ಮೇಲಿದ್ದ ಗೌರವ ಡಬಲ್​ ಆಗೋಯ್ತು; ವೈಷ್ಣವಿ ಹೊಗಳೋಕೆ ಮಂಜುಗೆ ಪದಗಳು ಸಿಗ್ತಾ ಇಲ್ಲ

ವೈಷ್ಣವಿ ತಾಳ್ಮೆ ನೋಡಿ ಮಂಜು ತುಂಬಾನೇ ಖುಷಿಯಾಗಿದ್ದಾರೆ. ನಿಮ್ಮ ಬಳಿ ಇದು ಸಾಧ್ಯವಾಗುವುದಿಲ್ಲ ಎಂದುಕೊಂಡಿದ್ದೆ. ಆದರೆ, ನೀವು ಆಡಿದ್ದು ನೋಡಿ ತುಂಬಾನೇ ಖುಷಿ ಆಯಿತು ಎಂದು ಹೊಗಳಿದ್ದಾರೆ.

ನಿನ್ನ ಮೇಲಿದ್ದ ಗೌರವ ಡಬಲ್​ ಆಗೋಯ್ತು; ವೈಷ್ಣವಿ ಹೊಗಳೋಕೆ ಮಂಜುಗೆ ಪದಗಳು ಸಿಗ್ತಾ ಇಲ್ಲ
ವೈಷ್ಣವಿ ಗೌಡ
ರಾಜೇಶ್ ದುಗ್ಗುಮನೆ
|

Updated on: Apr 01, 2021 | 11:06 PM

Share

ಬಿಗ್​ ಬಾಸ್​ ಮನೆ ಸೇರಿರುವ ವೈಷ್ಣವಿ ಮೇಲೆ ಮನೆಯವರು ತುಂಬಾನೇ ಗೌರವ ಇಟ್ಟುಕೊಂಡಿದ್ದಾರೆ. ಅವರು ಸೈಲೆಂಟ್​ ಆಗಿರೋದು, ಅವರ ತಾಳ್ಮೆ ಎಲ್ಲರಿಗೂ ಇಷ್ಟವಾಗುತ್ತಿದೆ. ಹೀಗಿರುವಾಗಲೇ ಮಂಜು ಪಾವಗಡಗೆ ವೈಷ್ಣವಿ ಮೇಲೆ ಇರುವ ಗೌರವ ದುಪಟ್ಟು ಆಗಿದೆ. ಇದನ್ನು ಹೇಳೋಕೆ ಅವರಿಗೆ ಹೇಳೋಕೆ ಶಬ್ದವೇ ಸಾಗುತ್ತಿಲ್ಲ. ಇದೆಲ್ಲಾ ಆಗೋಕೆ ಮನೆಯಲ್ಲಿ ನಡೆದ ಒಂದು ಘಟನೆಯೇ ಸಾಕ್ಷಿ. ಮಾರ್ಚ್​ 31ರ ಸಂಚಿಕೆಯಲ್ಲಿ ಬಿಗ್ ಬಾಸ್​ ಟಾಸ್ಕ್​ ಒಂದನ್ನು ನೀಡಿದ್ದರು. ಈ ಟಾಸ್ಕ್​ನ ಅನುಸಾರ ಸ್ವಿಮಿಂಗ್​ ಫೂಲ್​ ಮಧ್ಯೆ ಇರುವ ಕಟ್ಟೆಗಳ ಮೇಲೆ ಎರಡೂ ತಂಡದ ತಲಾ ಒಬ್ಬ ಸದಸ್ಯರು ಕೂರಬೇಕು. ಅಂತೆಯೇ ವೈಷ್ಣವಿ ಹಾಗೂ ದಿವ್ಯಾ ಸುರೇಶ್​ ಇಬ್ಬರೂ ಅಲ್ಲಿ ಕುಳಿತಿದ್ದರು.

ಹಲವು ಗಂಟೆಗಳ ಕಾಲ ವೈಷ್ಣವಿ-ದಿವ್ಯಾ ಸ್ವಿಮಿಂಗ್​ ಫೂಲ್​ ಮಧ್ಯೆ ಇರುವ ಎರಡು ಕಟ್ಟೆಗಳ ಮೇಲೆ ಕುಳಿತಿದ್ದರು. ಎರಡೂ ತಂಡದವರು ಪರಸ್ಪರ ಇವರನ್ನು ಬೀಳಿಸಲು ಪ್ರಯತ್ನ ಮಾಡುತ್ತಲೇಇದ್ದರು. ಕೊನೆಗೂ ಅಶ್ವತ್ಥ್​ ಅವರು ವೈಷ್ಣವಿ ಅವರನ್ನು ದೂಡಿ ಬಿಟ್ಟರು. ನಿಯಮದ ಪ್ರಕಾರ ಹೀಗೆ ಮಾಡುವ ಹಾಗೇ ಇರಲಿಲ್ಲ. ಇದು ಫಾಲ್​ ಎಂದು ಘೋಷಣೆ ಆದ ನಂತರ ವೈಷ್ಣವಿ ವಿನ್​ ಎಂದು ಘೋಷಣೆ ಮಾಡಲಾಯಿತು.

ವೈಷ್ಣವಿ ತಾಳ್ಮೆ ನೋಡಿ ಮಂಜು ತುಂಬಾನೇ ಖುಷಿಯಾಗಿದ್ದಾರೆ. ನಿಮ್ಮ ಬಳಿ ಇದು ಸಾಧ್ಯವಾಗುವುದಿಲ್ಲ ಎಂದುಕೊಂಡಿದ್ದೆ. ಆದರೆ, ನೀವು ಆಡಿದ್ದು ನೋಡಿ ತುಂಬಾನೇ ಖುಷಿ ಆಯಿತು. ನಿನ್ನ ಮೇಲಿದ್ದ ಗೌರವ ಡಬಲ್​ ಆಯ್ತು ಎಂದು ಹೊಗಳಿದ್ದಾರೆ. ನಂತರ ಮಂಜು ಅವರಿಗೆ ಏನು ಹೇಳಬೇಕು ಎನ್ನುವುದು ಗೊತ್ತಾಗಿಲ್ಲ. ಹೀಗಾಗಿ, ವೈಷ್ಣವಿ ಅವರನ್ನು ತಬ್ಬಿಕೊಂಡು ಮಂಜು ಅವರ ಬೆನ್ನು ತಟ್ಟಿದ್ದಾರೆ.

ಇದನ್ನೂ ಓದಿ: ಎಷ್ಟೇ ಹೇಳಿದರೂ ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ ದಿವ್ಯಾ ಉರುಡುಗಗೆ ಯಾವ ಶಿಕ್ಷೆ?

ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ