AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೃಜನ್ ಲೋಕೇಶ್ ನಿರ್ದೇಶನದ ‘ಜಿಎಸ್​ಟಿ’ ಸಿನಿಮಾ ವಿಮರ್ಶೆ

ಸೃಜನ್ ಲೋಕೇಶ್ ನಿರ್ದೇಶನದ ‘ಜಿಎಸ್​ಟಿ’ ಸಿನಿಮಾ ವಿಮರ್ಶೆ
Gst (1)
ಜಿಎಸ್​ಟಿ
UA
  • Time - 129 Minutes
  • Released - ನವೆಂಬರ್ 28,2025
  • Language - ಕನ್ನಡ
  • Genre - ಕಾಮಿಡಿ ಮತ್ತು ಹಾರರ್
Cast - ಸೃಜನ್ ಲೋಕೇಶ್, ರಜನಿ ಭಾರದ್ವಾಜ್, ಗಿರಿಜಾ ಲೋಕೇಶ್, ಶೋಭರಾಜ್, ಗಿರೀಶ್ ಶಿವಣ್ಣ
Director - ಸೃಜನ್ ಲೋಕೇಶ್
2.5
Critic's Rating
ರಾಜೇಶ್ ದುಗ್ಗುಮನೆ
| Edited By: |

Updated on:Nov 28, 2025 | 7:53 AM

Share

ಕಥಾ ನಾಯಕನ (ಸೃಜನ್ ಲೋಕೇಶ್) ಹೆಸರಷ್ಟೇ ಲಕ್ಕಿ. ಆದರೆ, ಅವನು ಕಾಲಿಟ್ಟರೆ ಅಲ್ಲಿ ಲತ್ತೆಯೇ. ಆತ ಹುಟ್ಟುತ್ತಿದ್ದಂತೆ ಕುಟುಂಬ ಬೀದಿಗೆ ಬರುತ್ತದೆ. ಶಾಲೆಗೆ ಹೋದರೆ ಕಟ್ಟಡ ಕುಸಿಯುತ್ತದೆ. ಅಂಗಡಿ ಆರಂಭಿಸಿದಾಗ ಲಾಕ್​ಡೌನ್. ತಾಯಿ ಸಾವಿಗೂ ಇತನೇ ಕಾರಣನಾಗುತ್ತಾನೆ. ಸಾಕಷ್ಟು ಕಷ್ಟಗಳನ್ನು ನೋಡಿ ಬೆಳೆದ ಲಕ್ಕಿ ಒಂದು ದಿನ ಸಾಯುವ ನಿರ್ಧಾರಕ್ಕೆ ಬರುತ್ತಾನೆ. ಸಾವಿನ ಕದ ಎಷ್ಟೇ ತಟ್ಟಿದರೂ ಅದು ತೆರೆದುಕೊಳ್ಳುವುದೇ ಇಲ್ಲ. ಅದಕ್ಕೆ ಕಾರಣ ಏನು? ಈ ಸಿನಿಮಾದಲ್ಲಿ ದೆವ್ವಗಳು ಹೇಗೆ ಬರುತ್ತವೆ? ಕಥೆಯಲ್ಲಿ ಏನೆಲ್ಲ ಆಗುತ್ತದೆ ಎಂಬುದೇ ಸಿನಿಮಾದ ಕಥೆ. ಸೃಜನ್ ಲೋಕೇಶ್ ಅವರು ತಮ್ಮ ಮೊದಲ ಚಿತ್ರದಲ್ಲೇ ಹಾರರ್ ವಿಷಯ ಎತ್ತಿಕೊಂಡಿದ್ದಾರೆ. ಹಾರರ್ ಸಿನಿಮಾ ಎಂದಾಕ್ಷಣ ನೆನಪಿಗೆ ಬರೋದುಚಿತ್ರ ವಿಚಿತ್ರವಾದ ದೆವ್ವದ ಮುಖಗಳು, ಭೂತ ಬಂಗಲೆ. ಆದರೆ, ಇದರಲ್ಲಿ ಹಾಗಿಲ್ಲ. ಈ ದೆವ್ವಗಳು ತುಂಬಾನೇ ಒಳ್ಳೆಯವು. ಅತೃಪ್ತ ಆತ್ಮವಾಗಿ ಓಡಾಡುವ ಇವರಿಗೆ ತೃಪ್ತಿ ಸಿಗಬೇಕು. ಈ ರೀತಿಯಲ್ಲಿ ತೃಪ್ತಿ ಪಡಿಸೋ ಕಥೆಯೇ ‘ಜಿಎಸ್​ಟಿ’.

ಸೃಜನ್ ನಿರ್ದೇಶನದ ಮೊದಲ ಸಿನಿಮಾ ಇದು. ಅವರು ಮೊದಲ ಸಿನಿಮಾದಲ್ಲೇ  ಸಾಕಷ್ಟು ಶ್ರಮ ಹಾಕಿದ್ದಾರೆ.  ಸೃಜನ್ ಲೋಕೇಶ್ ಅವರು ‘ಮಜಾ ಟಾಕೀಸ್’ ರೀತಿಯ ಶೋಗಳನ್ನು ನಿರೂಪಣೆ ಮಾಡಿದ ಅನುಭವ ಅವರಿಗೆ ಇದೆ. ಆದರೆ, ಸಿನಿಮಾ ನಿರೂಪಣೆಯಲ್ಲಿ ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶ ಅವರಿಗೆ ಇತ್ತು.

ಸಿನಿಮಾ ಉದ್ದಕ್ಕೂ ಸೃಜನ್ ಲೋಕೇಶ್ ಕಾಣಿಸಿಕೊಳ್ಳುತ್ತಾರೆ. ದ್ವಿತೀಯಾರ್ಧದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ಅವರು ನಗಿಸುತ್ತಾರೆ. ಉಳಿದಂತೆ ಶರತ್ ಲೋಹಿತಾಶ್ವ, ವಿನಯಾ ಪ್ರಸಾದ್, ನಿವೇದಿತಾ ಗೌಡ, ತಬಲಾ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮೊದಲಾದವರು ತಮಗೆ ಸಿಕ್ಕ ಪಾತ್ರವನ್ನು ನಿರ್ವಹಿಸಿದ್ದಾರೆ.

ಇಡೀ ಸಿನಿಮಾದಲ್ಲಿ ನಗು ಉಕ್ಕಿಸೋದು ಎಂದರೆ ಗಿರೀಶ್ ಶಿವಣ್ಣ ಹಾಗೂ ಶೋಭರಾಜ್. ಕಳ್ಳನ ಪಾತ್ರದಲ್ಲಿ ಶೋಭರಾಜ್ ಮೆಚ್ಚುಗೆ ಪಡೆಯುತ್ತಾರೆ. ಅವರ ಪಾತ್ರ ನಗು ಉಕ್ಕಿಸುತ್ತದೆ. ಕಥಾ ನಾಯಕನ ಗೆಳೆಯನ ಪಾತ್ರದಲ್ಲಿ ಗಿರಿ ಮಿಂಚುತ್ತಾರೆ.

ಸಿನಿಮಾ ನಿರೂಪಣೆಯಲ್ಲಿ ಹಳೆಯ ವಿಧಾನ ಬಳಕೆ ಮಾಡಿಕೊಳ್ಳಲಾಗಿದ್ದು, ಯಾವುದೇ ಹೊಸತನವಿಲ್ಲ.  ಸ್ಮಶಾನದ ಸೆಟ್​ನ ಇನ್ನಷ್ಟು ಚಂದಗಾಣಿಸುವ ಅವಕಾಶವಿತ್ತು. ಆದರೆ, ಅದನ್ನು ಕೈಚೆಲ್ಲಲಾಗಿದೆ. ಬ್ಯಾಂಕ್ ರಾಬರಿ ದೃಶ್ಯ ಲಾಜಿಕ್ ಕೇಳುತ್ತದೆ. ಮೇಕಿಂಗ್​ನಲ್ಲೂ ಹೊಸತನ ಬೇಕಿತ್ತು ಎನಿಸಿದೆ ಇರದು. ಸಿನಿಮಾದಲ್ಲಿ ಬರುವ ಹಾಡುಗಳು ಕಿವಿಯಲ್ಲಿ ಉಳಿದುಕೊಳ್ಳೋದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Fri, 28 November 25

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು