AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss OTT Finale: ಬಿಗ್​ ಬಾಸ್​ ಓಟಿಟಿ ಫಿನಾಲೆಯ ಟಾಪ್​ 5ರಲ್ಲಿ ಶಮಿತಾ ಶೆಟ್ಟಿ; ಗೆದ್ದರೆ ಸಿಗುವ ಹಣವೆಷ್ಟು?

Shamita Shetty: ಕರಣ್​ ಜೋಹರ್​ ಪಕ್ಷಪಾತ ಮಾಡುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಆದರೆ ಫಿನಾಲೆಯಲ್ಲಿ ಯಾರಿಗೆ ಎಷ್ಟು ವೋಟ್​ ಬಂದಿದೆ ಎಂಬುದನ್ನು ಬಹಿರಂಗಪಡಿಸಿದರೆ ಇಂಥ ಪಕ್ಷಪಾತದ ಕಣ್ಣಾಮುಚ್ಚಾಲೆ ಆಟ ನಡೆಯುವುದಿಲ್ಲ.

Bigg Boss OTT Finale: ಬಿಗ್​ ಬಾಸ್​ ಓಟಿಟಿ ಫಿನಾಲೆಯ ಟಾಪ್​ 5ರಲ್ಲಿ ಶಮಿತಾ ಶೆಟ್ಟಿ; ಗೆದ್ದರೆ ಸಿಗುವ ಹಣವೆಷ್ಟು?
ಬಿಗ್ ಬಾಸ್ ಓಟಿಟಿ ಫಿನಾಲೆ ಸ್ಪರ್ಧಿಗಳು
TV9 Web
| Edited By: |

Updated on: Sep 18, 2021 | 1:59 PM

Share

ಬಿಗ್​ ಬಾಸ್​ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಪ್ರಯೋಗ ಮಾಡಲಾಯಿತು. ‘ಬಿಗ್ ಬಾಸ್​ ಓಟಿಟಿ’ ಎಂಬ ಹೊಸ ಕಾನ್ಸೆಪ್ಟ್​ ಪರಿಚಯಿಸಲಾಯಿತು. ಈಗ ಆ ಶೋ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಹಲವು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ 5 ಮಂದಿ ಫಿನಾಲೆ ತಲುಪಿದ್ದಾರೆ. ಮಾಮೂಲಿ ಬಿಗ್​ ಬಾಸ್​ ರೀತಿಯೇ ಅದ್ದೂರಿ ವೇದಿಕೆ ಮೇಲೆ ಇದರ ಫಿನಾಲೆ ಕಾರ್ಯಕ್ರಮ ಇಂದು (ಸೆ.18) ನಡೆಯಲಿದೆ. ಆದರೆ ಇದು ಪ್ರಸಾರವಾಗುವುದು ವೂಟ್​ ಓಟಿಟಿಯಲ್ಲಿ ಮಾತ್ರ. ಕೊನೆ ಎಪಿಸೋಡ್​ ಅನ್ನು ನಿರೂಪಕ ಕರಣ್​ ಜೋಹರ್​ ಇನ್ನಷ್ಟು ಕಲರ್​​​ಫುಲ್ ಆಗಿ ನಡೆಸಿಕೊಡಲಿದ್ದಾರೆ.

ಫಿನಾಲೆಯಲ್ಲಿ ಶಮಿತಾ ಶೆಟ್ಟಿ ಜೊತೆ 4 ಮಂದಿ

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರು ಈ ಶೋನಲ್ಲಿ ಭಾಗವಹಿಸಿದ್ದು, ಈಗ ಫಿನಾಲೆ ತಲುಪಿದ್ದಾರೆ. ಅವರ ಜೊತೆ ರಾಕೇಶ್​ ಬಾಪಟ್​, ದಿವ್ಯಾ ಅಗರ್​ವಾಲ್​, ನಿಶಾಂತ್​ ಭಟ್​ ಹಾಗೂ ಪ್ರತೀಕ್​ ಸೆಹಜ್​ಪಾಲ್​ ಫಿನಾಲೆಯಲ್ಲಿ ಟಫ್​ ಸ್ಪರ್ಧೆ ನೀಡುತ್ತಿದ್ದಾರೆ. ಅಂತಿಮವಾಗಿ ಯಾರು ವಿನ್ನರ್​ ಆಗುತ್ತಾರೆ ಎಂಬ ಕೌತುಕ ಮನೆ ಮಾಡಿದೆ.

ವಿನ್ನರ್​ಗೆ ಸಿಗಲಿದೆ 55 ಲಕ್ಷ ರೂ.?

ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮ ನಡೆದಿದ್ದು ಕೆಲವೇ ದಿನಗಳಾದರೂ ಕೂಡ ದೊಡ್ಡ ಮೊತ್ತದ ಹಣವನ್ನೇ ಬಹುಮಾನವಾಗಿ ನೀಡಲಾಗುತ್ತಿದೆ. ಬಹುಮಾನ ಮೊತ್ತ ಎಷ್ಟು ಎಂದು ಈವರೆಗೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಮೂಲಗಳ ಪ್ರಕಾರ, ವಿನ್ನರ್​ ಆದವರು ಬರೋಬ್ಬರಿ 55 ಲಕ್ಷ ರೂ.ಗಳನ್ನು ಜೇಬಿಗೆ ಇಳಿಸಿಕೊಳ್ಳಲಿದ್ದಾರೆ. ಅದರ ಜೊತೆ ಆಕರ್ಷಕವಾದ ಟ್ರೋಫಿ ಕೂಡ ಸಿಗಲಿದೆ.

ಎಷ್ಟು ಗಂಟೆಗೆ ಫಿನಾಲೆ ಪ್ರಸಾರ?

ವೂಟ್​ನಲ್ಲಿ ಮಾತ್ರ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಸೆ.18ರ ಶನಿವಾರ ಸಂಜೆ 7 ಗಂಟೆಗೆ ಫಿನಾಲೆ ಎಪಿಸೋಡ್​ ಆರಂಭ ಆಗಲಿದೆ. ‘ಈ ಶೋ ಮಿಸ್​ ಮಾಡಿಕೊಳ್ಳುವುದು ಮಹಾ ಪಾಪ’ ಎಂದು ಪ್ರೋಮೋನಲ್ಲಿ ನಿರೂಪಕ ಕರಣ್​ ಜೋಹರ್​ ಹೇಳಿದ್ದು, ಸಖತ್​ ನಿರೀಕ್ಷೆ ಮೂಡಿಸಿದ್ದಾರೆ.

View this post on Instagram

A post shared by Voot (@voot)

ಕರಣ್​ ಜೋಹರ್​ ಪಕ್ಷಪಾತ ಮಾಡುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಫಿಲ್ಮೀ ಕುಟುಂಬದಿಂದ ಬಂದವರಿಗೆ ಅವರು ಮೊದಲ ಆದ್ಯತೆ ನೀಡುತ್ತಾರೆ ಎನ್ನಲಾಗುತ್ತಿದೆ. ಶಮಿತಾ ಶೆಟ್ಟಿ ಬಗ್ಗೆ ಅವರು ಅನೇಕ ಬಾರಿ ಮೃದು ಧೋರಣೆ ತೋರಿದ ಉದಾಹರಣೆ ಇದೆ. ಫಿನಾಲೆಯಲ್ಲೂ ಅದು ಮುಂದುವರಿದರೆ ಶಮಿತಾ ವಿನ್ನರ್​ ಆಗುವ ಸಾಧ್ಯತೆ ಇದೆ. ಆದರೆ ಯಾರಿಗೆ ಎಷ್ಟು ವೋಟ್​ ಬಂದಿದೆ ಎಂಬುದನ್ನು ಬಹಿರಂಗಪಡಿಸಿದರೆ ಮಾತ್ರ ಪಕ್ಷಪಾತದ ಕಣ್ಣಾಮುಚ್ಚಾಲೆ ಆಟ ನಡೆಯುವುದಿಲ್ಲ.

ಇದನ್ನೂ ಓದಿ:

ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​

‘ಅನುಭವ ಪಡೆಯೋಕೆ ಬಂದಿದೀನಿ’; ಶಮಿತಾ ಶೆಟ್ಟಿ ಎದುರು ಸತ್ಯ ಒಪ್ಪಿಕೊಂಡ ರಾಕೇಶ್​ ಬಾಪಟ್​

Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ