AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಶಾರುಖ್​ ಖಾನ್​ ಮನೆಗೆ ನುಗ್ಗಿದ್ದ ಕಪಿಲ್​ ಶರ್ಮಾ; ಮುಂದೇನಾಯ್ತು?

Kapil Sharma I'm Not Done Yet: ‘ನನ್ನ ಬೆಡ್​ ರೂಮ್​ ಬಾಗಿಲು ಕೂಡ ಓಪನ್​ ಇದೆ ಎನಿಸುತ್ತೆ. ಹಾಗಂತ ಒಳಗೆ ಬಂದು ಬಿಡುತ್ತೀರಾ’ ಎಂದು ಶಾರುಖ್​ ಕೇಳಿದ್ದರು. ಆ ಘಟನೆಯನ್ನು ನೆನಪಿಸಿಕೊಂಡು ಕಪಿಲ್​ ಶರ್ಮಾ ನಕ್ಕು ನಗಿಸಿದ್ದಾರೆ.

ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಶಾರುಖ್​ ಖಾನ್​ ಮನೆಗೆ ನುಗ್ಗಿದ್ದ ಕಪಿಲ್​ ಶರ್ಮಾ; ಮುಂದೇನಾಯ್ತು?
ಶಾರುಖ್​ ಖಾನ್​, ಕಪಿಲ್​ ಶರ್ಮಾ
TV9 Web
| Edited By: |

Updated on: Jan 29, 2022 | 9:20 AM

Share

ನಟ-ನಿರೂಪಕ ಕಪಿಲ್​ ಶರ್ಮಾ (Kapil Sharma) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಕಾರ್ಯಕ್ರಮಗಳು ಭಾರಿ ಜನಪ್ರಿಯತೆ ಗಳಿಸಿವೆ. ಕಪಿಲ್​ ಶರ್ಮಾ ಅವರ ಹಾಸ್ಯಭರಿತ ಮಾತುಗಳನ್ನು ಕೇಳಲು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ನೆಟ್​ಫ್ಲಿಕ್ಸ್​ನಲ್ಲಿ (Netflix) ಅವರ ಹೊಸ ಶೋ ಆರಂಭ ಆಗಿದೆ. ‘ಕಪಿಲ್​ ಶರ್ಮಾ: ಐ ಆ್ಯಮ್​ ನಾಟ್​ ಡನ್​ ಯೆಟ್​’ ಎಂಬುದು ಈ ಕಾರ್ಯಕ್ರಮದ ಶೀರ್ಷಿಕೆ. ಇದರಲ್ಲಿ ಕಪಿಲ್​ ಶರ್ಮಾ ಅವರು ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಬದುಕಿನ ಅನೇಕ ಫನ್ನಿ ಘಟನೆಗಳನ್ನು ಅವರು ನೆನಪು ಮಾಡಿಕೊಂಡಿದ್ದಾರೆ. ಒಮ್ಮೆ ಅವರು ಹೊತ್ತಲ್ಲದ ಹೊತ್ತಿನಲ್ಲಿ ಶಾರುಖ್​ ಖಾನ್ (Shah Rukh Khan)​ ಮನೆಗೆ ಹೋಗಿ ಬಾಗಿಲು ಬಡಿದಿದ್ದರು! ‘ಮನ್ನತ್​’ ನಿವಾಸದಲ್ಲಿ ನಡೆದ ಆ ವಿಲಕ್ಷಣ ಘಟನೆಯ ವಿವರ ಕೇಳಿ ಫ್ಯಾನ್ಸ್​ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ಪ್ರಸಂಗವನ್ನು ಅಷ್ಟೇ ಮಜವಾಗಿ ಕಪಿಲ್​ ಶರ್ಮಾ ಅವರು ವಿವರಿಸಿದ್ದಾರೆ. ಅವರು ಶಾರುಖ್​ ಖಾನ್​ ಮನೆಯ ಬಾಗಿಲು ಬಡಿದಾಗ ಮಧ್ಯರಾತ್ರಿ 3 ಗಂಟೆ ಆಗಿತ್ತು! ಆಗ ಶಾರುಖ್​ ಖಾನ್​ ಡ್ಯಾನ್ಸ್​ ಮಾಡುತ್ತಿದ್ದರು.

ಕಿರುತೆರೆಯ ಕಾರ್ಯಕ್ರಮದಿಂದಾಗಿ ಕಪಿಲ್​ ಶರ್ಮಾಗೆ ಭಾರಿ ಜನಪ್ರಿಯತೆ ಸಿಕ್ಕಿತ್ತು. ಅದರಿಂದಾಗಿ ಅವರಿಗೆ ಕೆಲವು ಕೆಟ್ಟ ಐಡಿಯಾಗಳು ಬರಲು ಆರಂಭಿಸಿದ್ದವು. ಅದರ ಪರಿಣಾಮವಾಗಿಯೇ ಅವರು ಮಧ್ಯರಾತ್ರಿ ಶಾರುಖ್​ ಮನೆಗೆ ನುಗ್ಗಿದ್ದರು. ‘ಅಂದು ನನ್ನ ಕಸಿನ್​ ಬಂದಿದ್ದಳು. ಶಾರುಖ್​ ನಿವಾಸವನ್ನು ನೋಡಬೇಕು ಅಂತ ಆಕೆ ಆಸೆ ವ್ಯಕ್ತಪಡಿಸಿದಳು. ಆಗ ನಾನು ಕುಡಿದಿದ್ದೆ. ಆದರೂ ಆಕೆಯ ಆಸೆ ಪೂರೈಸಲು ಒಪ್ಪಿಕೊಂಡೆ. ಮಧ್ಯರಾತ್ರಿ ಶಾರುಖ್​ ಮನೆ ಬಳಿ ಹೋದೆವು. ಗೇಟ್​ ಓಪನ್​ ಆಗಿತ್ತು. ನಾನು ನನ್ನ ಹೆಸರು ಮತ್ತು ಜನಪ್ರಿಯತೆಯನ್ನು ದುರುಪಯೋಗ ಪಡಿಸಿಕೊಳ್ಳಲು ನಿರ್ಧರಿಸಿದೆ’ ಎಂದು ಕಪಿಲ್​ ಶರ್ಮಾ ಹೇಳಿದ್ದಾರೆ.

‘ಕಾರನ್ನು ಗೇಟ್​ ಬಳಿ ತೆಗೆದುಕೊಂಡು ಹೋಗುವಂತೆ ನನ್ನ ಡ್ರೈವರ್​ಗೆ ತಿಳಿಸಿದೆ. ಸೆಕ್ಯೂರಿಟಿ ಸಿಬ್ಬಂದಿ ನನ್ನ ಮುಖ ನೋಡಿ ಒಳಗೆ ಬಿಟ್ಟರು. ನಮ್ಮನ್ನು ಶಾರುಖ್​ ಕರೆದಿರಬಹುದು ಎಂದು ಅವರು ಅಂದುಕೊಂಡರು. ಗೇಟ್​ ಒಳಗೆ ಹೋದ ಬಳಿಕ ನಾನು ಮಾಡಿದ್ದು ಸರಿ ಅಲ್ಲ ಎನಿಸಿತು. ಇನ್ನೇನು ಅಲ್ಲಿಂದ ಹೊರಡಬೇಕು ಎಂಬಷ್ಟರಲ್ಲಿ ಶಾರುಖ್​ ಅವರು ಮ್ಯಾನೇಜರ್​ ಬಂದು ನಮ್ಮನ್ನು ಒಳಗೆ ಕರೆದರು’ ಎಂದು ಕಪಿಲ್​ ಶರ್ಮಾ ಹೇಳಿದ್ದಾರೆ.

‘ನಾನು ಸರಿಯಾಗಿ ಬಟ್ಟೆ ಹಾಕಿರಲಿಲ್ಲ. ನಿಕ್ಕರ್​ ಧರಿಸಿದ್ದೆ. ಮದ್ಯಪಾನ ಮಾಡಿ, ಪಾನ್​ ಜಗಿಯುತ್ತಿದ್ದೆ. ಬಾಗಿಲು ತೆರೆದಾಗ ಗೌರಿ ಖಾನ್​ ಮತ್ತು ಅವರ ಸ್ನೇಹಿತೆಯರು ಕಾಣಿಸಿದರು. ಶಾರುಖ್​ ಖಾನ್​ ನನ್ನನ್ನು ಕರೆದಿರಬಹುದು ಅಂತ ಅವರು ಅಂದುಕೊಂಡು ಒಳಗೆ ಕರೆದುಕೊಂಡು ಹೋದರು. ಅಲ್ಲಿ ಪಾರ್ಟಿ ನಡೆಯುತ್ತಿತ್ತು. ಶಾರುಖ್​ ಖಾನ್​ ಡ್ಯಾನ್ಸ್​ ಮಾಡುತ್ತಿದ್ದರು. ಅಲ್ಲಿ ನಾನು ತಬ್ಬಿಬ್ಬಾದೆ’ ಎಂದು ಕಪಿಲ್​ ಶರ್ಮಾ ಹೇಳಿದ್ದಾರೆ.

‘ಕ್ಷಮಿಸಿ ಶಾರುಖ್​ ಅವರೇ. ಇವಳು ನನ್ನ ಕಸಿನ್​. ನಿಮ್ಮ ಮನೆ ನೋಡಬೇಕು ಅಂತ ಕೇಳಿಕೊಂಡಳು. ಗೇಟ್​ ಓಪನ್​ ಆಗಿತ್ತು. ಅದಕ್ಕೆ ಬಂದುಬಿಟ್ಟೆ ಅಂತ ಶಾರುಖ್​ ಎದುರು ಒಪ್ಪಿಕೊಂಡೆ. ನನ್ನ ಬೆಡ್​ ರೂಮ್​ ಬಾಗಿಲು ಕೂಡ ಓಪನ್​ ಇದೆ ಎನಿಸುತ್ತೆ. ಹಾಗಂತ ಒಳಗೆ ಬಂದು ಬಿಡುತ್ತೀರಾ ಅಂತ ಶಾರುಖ್​ ಕೇಳಿದರು’ ಎಂದು ಆ ಘಟನೆಯನ್ನು ನೆನಪಿಸಿಕೊಂಡು ಕಪಿಲ್​ ಶರ್ಮಾ ನಕ್ಕು ನಗಿಸಿದ್ದಾರೆ.

ಕಪಿಲ್​ ಶರ್ಮಾ ಈ ರೀತಿ ಮಾಡಿದ್ದಕ್ಕೆ ಶಾರುಖ್​ ಬೇಸರ ಮಾಡಿಕೊಂಡಿರಲಿಲ್ಲ. ಕಪಿಲ್​ ಜೊತೆ ಅವರು ಗಂಟೆಗಟ್ಟಲೆ ಕುಣಿದು, ಪಾರ್ಟಿ ಮಾಡಿದರು. ‘ಅಂದು ಆ ಪಾರ್ಟಿಯಿಂದ ಹೊರಟ ಕೊನೆಯ ವ್ಯಕ್ತಿ ನಾನೇ. ನನ್ನನ್ನು ಕಳಿಸಿಕೊಡಲು ಅವರು ಮೆಟ್ಟಿಲುಗಳವರೆಗೆ ಬಂದಿದ್ದರು’ ಎಂದು ಆ ದಿನವನ್ನು ಕಪಿಲ್​ ಶರ್ಮಾ ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಕಪಿಲ್​ ಶರ್ಮಾ ಕುರಿತು ಬಯೋಪಿಕ್​; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ

ವಿದೇಶದಲ್ಲಿ ಶಾರುಖ್​ ಫ್ಯಾನ್​ ಅಂತ ಹೇಳಿಕೊಂಡ್ರೆ ಸಿಗುತ್ತೆ ವಿಶೇಷ ಗೌರವ; ಸಾಕ್ಷಿ ಸಮೇತ ವಿವರಿಸಿದ ಪ್ರೊಫೆಸರ್​

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?