ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಶಾರುಖ್​ ಖಾನ್​ ಮನೆಗೆ ನುಗ್ಗಿದ್ದ ಕಪಿಲ್​ ಶರ್ಮಾ; ಮುಂದೇನಾಯ್ತು?

Kapil Sharma I'm Not Done Yet: ‘ನನ್ನ ಬೆಡ್​ ರೂಮ್​ ಬಾಗಿಲು ಕೂಡ ಓಪನ್​ ಇದೆ ಎನಿಸುತ್ತೆ. ಹಾಗಂತ ಒಳಗೆ ಬಂದು ಬಿಡುತ್ತೀರಾ’ ಎಂದು ಶಾರುಖ್​ ಕೇಳಿದ್ದರು. ಆ ಘಟನೆಯನ್ನು ನೆನಪಿಸಿಕೊಂಡು ಕಪಿಲ್​ ಶರ್ಮಾ ನಕ್ಕು ನಗಿಸಿದ್ದಾರೆ.

ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಶಾರುಖ್​ ಖಾನ್​ ಮನೆಗೆ ನುಗ್ಗಿದ್ದ ಕಪಿಲ್​ ಶರ್ಮಾ; ಮುಂದೇನಾಯ್ತು?
ಶಾರುಖ್​ ಖಾನ್​, ಕಪಿಲ್​ ಶರ್ಮಾ
Follow us
| Updated By: ಮದನ್​ ಕುಮಾರ್​

Updated on: Jan 29, 2022 | 9:20 AM

ನಟ-ನಿರೂಪಕ ಕಪಿಲ್​ ಶರ್ಮಾ (Kapil Sharma) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಕಾರ್ಯಕ್ರಮಗಳು ಭಾರಿ ಜನಪ್ರಿಯತೆ ಗಳಿಸಿವೆ. ಕಪಿಲ್​ ಶರ್ಮಾ ಅವರ ಹಾಸ್ಯಭರಿತ ಮಾತುಗಳನ್ನು ಕೇಳಲು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ನೆಟ್​ಫ್ಲಿಕ್ಸ್​ನಲ್ಲಿ (Netflix) ಅವರ ಹೊಸ ಶೋ ಆರಂಭ ಆಗಿದೆ. ‘ಕಪಿಲ್​ ಶರ್ಮಾ: ಐ ಆ್ಯಮ್​ ನಾಟ್​ ಡನ್​ ಯೆಟ್​’ ಎಂಬುದು ಈ ಕಾರ್ಯಕ್ರಮದ ಶೀರ್ಷಿಕೆ. ಇದರಲ್ಲಿ ಕಪಿಲ್​ ಶರ್ಮಾ ಅವರು ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಬದುಕಿನ ಅನೇಕ ಫನ್ನಿ ಘಟನೆಗಳನ್ನು ಅವರು ನೆನಪು ಮಾಡಿಕೊಂಡಿದ್ದಾರೆ. ಒಮ್ಮೆ ಅವರು ಹೊತ್ತಲ್ಲದ ಹೊತ್ತಿನಲ್ಲಿ ಶಾರುಖ್​ ಖಾನ್ (Shah Rukh Khan)​ ಮನೆಗೆ ಹೋಗಿ ಬಾಗಿಲು ಬಡಿದಿದ್ದರು! ‘ಮನ್ನತ್​’ ನಿವಾಸದಲ್ಲಿ ನಡೆದ ಆ ವಿಲಕ್ಷಣ ಘಟನೆಯ ವಿವರ ಕೇಳಿ ಫ್ಯಾನ್ಸ್​ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ಪ್ರಸಂಗವನ್ನು ಅಷ್ಟೇ ಮಜವಾಗಿ ಕಪಿಲ್​ ಶರ್ಮಾ ಅವರು ವಿವರಿಸಿದ್ದಾರೆ. ಅವರು ಶಾರುಖ್​ ಖಾನ್​ ಮನೆಯ ಬಾಗಿಲು ಬಡಿದಾಗ ಮಧ್ಯರಾತ್ರಿ 3 ಗಂಟೆ ಆಗಿತ್ತು! ಆಗ ಶಾರುಖ್​ ಖಾನ್​ ಡ್ಯಾನ್ಸ್​ ಮಾಡುತ್ತಿದ್ದರು.

ಕಿರುತೆರೆಯ ಕಾರ್ಯಕ್ರಮದಿಂದಾಗಿ ಕಪಿಲ್​ ಶರ್ಮಾಗೆ ಭಾರಿ ಜನಪ್ರಿಯತೆ ಸಿಕ್ಕಿತ್ತು. ಅದರಿಂದಾಗಿ ಅವರಿಗೆ ಕೆಲವು ಕೆಟ್ಟ ಐಡಿಯಾಗಳು ಬರಲು ಆರಂಭಿಸಿದ್ದವು. ಅದರ ಪರಿಣಾಮವಾಗಿಯೇ ಅವರು ಮಧ್ಯರಾತ್ರಿ ಶಾರುಖ್​ ಮನೆಗೆ ನುಗ್ಗಿದ್ದರು. ‘ಅಂದು ನನ್ನ ಕಸಿನ್​ ಬಂದಿದ್ದಳು. ಶಾರುಖ್​ ನಿವಾಸವನ್ನು ನೋಡಬೇಕು ಅಂತ ಆಕೆ ಆಸೆ ವ್ಯಕ್ತಪಡಿಸಿದಳು. ಆಗ ನಾನು ಕುಡಿದಿದ್ದೆ. ಆದರೂ ಆಕೆಯ ಆಸೆ ಪೂರೈಸಲು ಒಪ್ಪಿಕೊಂಡೆ. ಮಧ್ಯರಾತ್ರಿ ಶಾರುಖ್​ ಮನೆ ಬಳಿ ಹೋದೆವು. ಗೇಟ್​ ಓಪನ್​ ಆಗಿತ್ತು. ನಾನು ನನ್ನ ಹೆಸರು ಮತ್ತು ಜನಪ್ರಿಯತೆಯನ್ನು ದುರುಪಯೋಗ ಪಡಿಸಿಕೊಳ್ಳಲು ನಿರ್ಧರಿಸಿದೆ’ ಎಂದು ಕಪಿಲ್​ ಶರ್ಮಾ ಹೇಳಿದ್ದಾರೆ.

‘ಕಾರನ್ನು ಗೇಟ್​ ಬಳಿ ತೆಗೆದುಕೊಂಡು ಹೋಗುವಂತೆ ನನ್ನ ಡ್ರೈವರ್​ಗೆ ತಿಳಿಸಿದೆ. ಸೆಕ್ಯೂರಿಟಿ ಸಿಬ್ಬಂದಿ ನನ್ನ ಮುಖ ನೋಡಿ ಒಳಗೆ ಬಿಟ್ಟರು. ನಮ್ಮನ್ನು ಶಾರುಖ್​ ಕರೆದಿರಬಹುದು ಎಂದು ಅವರು ಅಂದುಕೊಂಡರು. ಗೇಟ್​ ಒಳಗೆ ಹೋದ ಬಳಿಕ ನಾನು ಮಾಡಿದ್ದು ಸರಿ ಅಲ್ಲ ಎನಿಸಿತು. ಇನ್ನೇನು ಅಲ್ಲಿಂದ ಹೊರಡಬೇಕು ಎಂಬಷ್ಟರಲ್ಲಿ ಶಾರುಖ್​ ಅವರು ಮ್ಯಾನೇಜರ್​ ಬಂದು ನಮ್ಮನ್ನು ಒಳಗೆ ಕರೆದರು’ ಎಂದು ಕಪಿಲ್​ ಶರ್ಮಾ ಹೇಳಿದ್ದಾರೆ.

‘ನಾನು ಸರಿಯಾಗಿ ಬಟ್ಟೆ ಹಾಕಿರಲಿಲ್ಲ. ನಿಕ್ಕರ್​ ಧರಿಸಿದ್ದೆ. ಮದ್ಯಪಾನ ಮಾಡಿ, ಪಾನ್​ ಜಗಿಯುತ್ತಿದ್ದೆ. ಬಾಗಿಲು ತೆರೆದಾಗ ಗೌರಿ ಖಾನ್​ ಮತ್ತು ಅವರ ಸ್ನೇಹಿತೆಯರು ಕಾಣಿಸಿದರು. ಶಾರುಖ್​ ಖಾನ್​ ನನ್ನನ್ನು ಕರೆದಿರಬಹುದು ಅಂತ ಅವರು ಅಂದುಕೊಂಡು ಒಳಗೆ ಕರೆದುಕೊಂಡು ಹೋದರು. ಅಲ್ಲಿ ಪಾರ್ಟಿ ನಡೆಯುತ್ತಿತ್ತು. ಶಾರುಖ್​ ಖಾನ್​ ಡ್ಯಾನ್ಸ್​ ಮಾಡುತ್ತಿದ್ದರು. ಅಲ್ಲಿ ನಾನು ತಬ್ಬಿಬ್ಬಾದೆ’ ಎಂದು ಕಪಿಲ್​ ಶರ್ಮಾ ಹೇಳಿದ್ದಾರೆ.

‘ಕ್ಷಮಿಸಿ ಶಾರುಖ್​ ಅವರೇ. ಇವಳು ನನ್ನ ಕಸಿನ್​. ನಿಮ್ಮ ಮನೆ ನೋಡಬೇಕು ಅಂತ ಕೇಳಿಕೊಂಡಳು. ಗೇಟ್​ ಓಪನ್​ ಆಗಿತ್ತು. ಅದಕ್ಕೆ ಬಂದುಬಿಟ್ಟೆ ಅಂತ ಶಾರುಖ್​ ಎದುರು ಒಪ್ಪಿಕೊಂಡೆ. ನನ್ನ ಬೆಡ್​ ರೂಮ್​ ಬಾಗಿಲು ಕೂಡ ಓಪನ್​ ಇದೆ ಎನಿಸುತ್ತೆ. ಹಾಗಂತ ಒಳಗೆ ಬಂದು ಬಿಡುತ್ತೀರಾ ಅಂತ ಶಾರುಖ್​ ಕೇಳಿದರು’ ಎಂದು ಆ ಘಟನೆಯನ್ನು ನೆನಪಿಸಿಕೊಂಡು ಕಪಿಲ್​ ಶರ್ಮಾ ನಕ್ಕು ನಗಿಸಿದ್ದಾರೆ.

ಕಪಿಲ್​ ಶರ್ಮಾ ಈ ರೀತಿ ಮಾಡಿದ್ದಕ್ಕೆ ಶಾರುಖ್​ ಬೇಸರ ಮಾಡಿಕೊಂಡಿರಲಿಲ್ಲ. ಕಪಿಲ್​ ಜೊತೆ ಅವರು ಗಂಟೆಗಟ್ಟಲೆ ಕುಣಿದು, ಪಾರ್ಟಿ ಮಾಡಿದರು. ‘ಅಂದು ಆ ಪಾರ್ಟಿಯಿಂದ ಹೊರಟ ಕೊನೆಯ ವ್ಯಕ್ತಿ ನಾನೇ. ನನ್ನನ್ನು ಕಳಿಸಿಕೊಡಲು ಅವರು ಮೆಟ್ಟಿಲುಗಳವರೆಗೆ ಬಂದಿದ್ದರು’ ಎಂದು ಆ ದಿನವನ್ನು ಕಪಿಲ್​ ಶರ್ಮಾ ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಕಪಿಲ್​ ಶರ್ಮಾ ಕುರಿತು ಬಯೋಪಿಕ್​; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ

ವಿದೇಶದಲ್ಲಿ ಶಾರುಖ್​ ಫ್ಯಾನ್​ ಅಂತ ಹೇಳಿಕೊಂಡ್ರೆ ಸಿಗುತ್ತೆ ವಿಶೇಷ ಗೌರವ; ಸಾಕ್ಷಿ ಸಮೇತ ವಿವರಿಸಿದ ಪ್ರೊಫೆಸರ್​

‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ