ಭಾರತದ ಅತಿ ಹೆಚ್ಚು ಸಂಭಾವನೆ ಪಡೆವ ನಟ ನಾನೆಂದ ಪವನ್ ಕಲ್ಯಾಣ್: ಪವರ್​ಸ್ಟಾರ್ ಸಂಭಾವನೆ ಎಷ್ಟು?

Pawan Kalyan: ಆಂಧ್ರ ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿರುವ ಪವನ್ ಕಲ್ಯಾಣ್, ವಾರಾಹಿ ಯಾತ್ರೆ ಆರಂಭಿಸಿದ್ದು ರಾಜಕೀಯ ಸಭೆಯಲ್ಲಿ ತಮ್ಮ ಸಿನಿಮಾ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.

ಭಾರತದ ಅತಿ ಹೆಚ್ಚು ಸಂಭಾವನೆ ಪಡೆವ ನಟ ನಾನೆಂದ ಪವನ್ ಕಲ್ಯಾಣ್: ಪವರ್​ಸ್ಟಾರ್ ಸಂಭಾವನೆ ಎಷ್ಟು?
ಪವನ್ ಕಲ್ಯಾಣ್
Follow us
|

Updated on:Jun 15, 2023 | 7:55 PM

ಪವನ್ ಕಲ್ಯಾಣ್ (Pawan Kalyan) ಸಿನಿಮಾದಿಂದ ಬಿಡುವು ಪಡೆದು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿರುವ ಪವನ್ ಕಲ್ಯಾಣ್, ತಮ್ಮ ಜನಸೇನಾ (Janasena) ಪಕ್ಷದಿಂದ ವಾರಾಹಿ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಯಾತ್ರೆಗೆಂದು ವಿಶೇಷ ವಾಹನವನ್ನು ಸಿದ್ಧಪಡಿಸಿಕೊಂಡಿರುವ ಪವನ್ ಕಲ್ಯಾಣ್, ಅಣ್ಣಾವರಂನಿಂದ ಯಾತ್ರೆ ಆರಂಭಿಸಿದ್ದು ಯಾತ್ರೆಯನ್ನು ಭೀಮವರಂನಲ್ಲಿ ಕೊನೆಗಾಣಿಸಲಿದ್ದಾರೆ. ಯಾತ್ರೆಯ ಉದ್ಘಾಟನೆ ಬಳಿಕ ವಾರಾಹಿ ವಿಶೇಷ ವಾಹನದ ಮೇಲೆ ನಿಂತು ಮೊದಲ ಭಾಷಣ ಮಾಡಿದ ಪವನ್ ಕಲ್ಯಾಣ್, ತಾವು ಸಿನಿಮಾಕ್ಕೆ ಪಡೆವ ಸಂಭಾವನೆ (Remuneration) ಬಗ್ಗೆ ಸಹ ಮಾತನಾಡಿದರು.

”ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗನ್ ಮೊಹನ್ ರೆಡ್ಡಿ ಗೆದ್ದ ಬಳಿಕ ನನಗೆ ಕರೆ ಮಾಡಿ ಪದಗ್ರಹಣ ಸ್ವೀಕಾರಕ್ಕೆ ಆಹ್ವಾನಿಸಿದರು. ಅಂದು ಅವರಿಗೆ ಹೇಳಿದ್ದೆ, ನಿಮ್ಮನ್ನು ವೈಯಕ್ತಿಕ ಟೀಕೆ ಮಾಡುವುದಿಲ್ಲ, ನಿಮ್ಮ ನೀತಿಗಳ ಬಗ್ಗೆ ಮಾತ್ರವೇ ಟೀಕಿಸುತ್ತೇನೆ. ಟೀಕಿಸುವ ಅವಕಾಶವನ್ನು ಸಹ ನನಗೆ ಕೊಡಬೇಡಿ ಹಾಗೆ ಆಡಳಿತ ಮಾಡಿ ಎಂದು ಹೇಳಿದ್ದೆ. ಆದರೆ ಜಗನ್ ಗೆದ್ದ ಬಳಿಕ ಮಾಡಿದ್ದು ನನ್ನ ಬಗ್ಗೆ ವೈಯಕ್ತಿಕ ಟೀಕೆ. ಅವರ ಎಲ್ಲ ಶಾಸಕರು ಸತತವಾಗಿ ನನ್ನ ವಿರುದ್ಧ ಸರಣಿ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ” ಎಂದಿದ್ದಾರೆ ಪವನ್ ಕಲ್ಯಾಣ್.

”ಅವರ ಬೈಗುಳಗಳನ್ನು ಕೇಳುವ ಅವಶ್ಯಕತೆ ನನಗಿಲ್ಲ. ನಾನು ಸಿನಿಮಾಗಳಲ್ಲಿ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ನಾನೂ ಸಹ ಒಬ್ಬ. ನನಗೆ ರಾಜಕೀಯಕ್ಕೆ ಬಂದು ಅವರಿಂದ ಬೈಸಿಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ಆದರೂ ಅವರ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನಿರಲು ಕಾರಣ ಜನರು. ಜನರಿಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಅವರ ವೈಯಕ್ತಿಕ ನಿಂದನೆಗಳಿಗೆ ಹೆದರಿ ಓಡುವುದಿಲ್ಲ” ಎಂದ ಪವನ್ ಕಲ್ಯಾಣ್. ಈ ಬಾರಿ ತಮ್ಮ ಜನಸೇನಾ ಪಕ್ಷ ವಿಧಾನಸಭೆ ಚುನಾವಣೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ: ತಮ್ಮ ಸಂಭಾವನೆ ಮೊತ್ತವನ್ನು ತಾವೇ ಬಹಿರಂಗಪಡಿಸಿದ ನಟ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ಬಹಿರಂಗವಾಗಿ ತಮ್ಮ ಸಂಭಾವನೆ ಬಗ್ಗೆ ಮಾತನಾಡಿರುವುದು ಇದು ಮೊದಲಲ್ಲ. ಈ ಹಿಂದೆ ಪಕ್ಷದ ಸಭೆಯೊಂದರಲ್ಲಿ ತಾವೆಷ್ಟು ಸಂಭಾವನೆ ಪಡೆಯುತ್ತಿರುವುದಾಗಿ ಬಹಿರಂಗವಾಗಿಯೇ ಹೇಳಿದ್ದರು. ”ನಾನು ಒಂದು ದಿನಕ್ಕೆ ಎರಡು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತೇನೆ. ಹಣ ಎಂಬುದು ನನಗೆ ಪ್ರಮುಖ ವಿಷಯವೇ ಅಲ್ಲ. ನಾನು ಈಗಾಗಲೇ ದೊಡ್ಡ ಮೊತ್ತದ ಹಣ ಸಂಪಾದನೆ ಮಾಡುತ್ತಿದ್ದೇನೆ. ಇತ್ತೀಚೆಗೆ ನಾನು ಸಿನಿಮಾ ಒಂದರಲ್ಲಿ ನಟಿಸಿದೆ. ಆ ಸಿನಿಮಾಕ್ಕಾಗಿ 22 ದಿನಗಳ ಕಾಲ ನಾನು ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ. ಒಂದು ದಿನಕ್ಕೆ ನಾನು ಎರಡು ಕೋಟಿ ಸಂಭಾವನೆ ಪಡೆಯುತ್ತೇನೆ. 22 ದಿನಕ್ಕೆ 44 ಕೋಟಿ ಸಂಪಾದನೆ ಮಾಡಿದೆ. ಸಿನಿಮಾಗಳಿಂದಲೇ ನನಗೆ ಅಗತ್ಯಕ್ಕಿಂತಲೂ ಹೆಚ್ಚು ಹಣ ಬರುತ್ತದೆ, ಬೇರೆ ಹಣಕ್ಕೆ ಆಸೆಪಡುವ ಅಗತ್ಯವೇ ಇಲ್ಲ” ಎಂದಿದ್ದರು ಪವನ್ ಕಲ್ಯಾಣ್.

ನಟ ಪವನ್ ಕಲ್ಯಾಣ್ ಪ್ರಸ್ತುತ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹರಿ ಹರ ವೀರ ಮಲ್ಲು ಹೆಸರಿನ ಐತಿಹಾಸಿಕ ಸಿನಿಮಾದಲ್ಲಿ ಪವನ್ ನಟಿಸಿದ್ದಾರೆ. ಅದರ ಬಳಿಕ ಸಮುದ್ರಕಿಣಿ ನಿರ್ದೇಶಿಸುತ್ತಿರುವ ಬ್ರೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಉಸ್ತಾದ್ ಭಗತ್ ಸಿಂಗ್ ಹೆಸರಿನ ಸಿನಿಮಾದಲ್ಲಿ ಮತ್ತೆ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಇವುಗಳ ಬಳಿಕ ಓಜಿ ಹೆಸರಿನ ಸಿನಿಮಾದಲ್ಲಿಯೂ ಪವನ್ ಕಲ್ಯಾಣ್ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Thu, 15 June 23

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್