Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹದ ಬಳಿಕ ನಯನಾತಾರ ಜೊತೆ ಅಫೇರ್; ಪ್ರಭುದೇವ ಜೀವನವನ್ನೇ ಹಾಳು ಮಾಡಿತು ಆ ನಿರ್ಧಾರ  

ಪ್ರಭುದೇವ ಅವರ ಜೀವನದಲ್ಲಿ ನಡೆದ ಒಂದು ಘಟನೆ ಅವರ ಜೀವನವನ್ನೇ ಬದಲಾಯಿಸಿತು. 1995ರಲ್ಲಿ ರಮಾಲತಾ ಅವರನ್ನು ವಿವಾಹವಾದ ಪ್ರಭುದೇವ, ನಯನತಾರಾ ಜೊತೆಗಿನ ಸಂಬಂಧದಿಂದಾಗಿ ವಿಚ್ಛೇದನ ಪಡೆದರು. ಈ ವಿವಾದವು ನ್ಯಾಯಾಲಯದವರೆಗೂ ಹೋಯಿತು. ಈ ಘಟನೆಯು ಪ್ರಭುದೇವರ ವೈಯಕ್ತಿಕ ಜೀವನದ ಮೇಲೆ ಆಳವಾದ ಪರಿಣಾಮ ಬೀರಿತು.

ವಿವಾಹದ ಬಳಿಕ ನಯನಾತಾರ ಜೊತೆ ಅಫೇರ್; ಪ್ರಭುದೇವ ಜೀವನವನ್ನೇ ಹಾಳು ಮಾಡಿತು ಆ ನಿರ್ಧಾರ  
ನಯನತಾರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 03, 2025 | 7:51 AM

ಪ್ರಭುದೇವ (Prabhudeva) ಅವರು ಭಾರತ ಕಂಡ ಶ್ರೇಷ್ಠ ಡ್ಯಾನ್ಸರ್. ಅವರು ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿದರು ಎಂದರೆ ಆ ಸ್ಟೆಪ್​ಗಳು ಹಿಟ್ ಆಗೋದು ಪಕ್ಕಾ. ಅವರು ಸಿನಿಮಾ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಇಂದು (ಏಪ್ರಿಲ್ 3) ಪ್ರಭುದೇವ ಅವರ ಜನ್ಮದಿನ. ಈ ವೇಳೆ ಅವರ ಜೀವನದಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಳ್ಳಲೇಬೇಕು. ಅವರ ಜೀವನವೇ ಹಾಳು ಮಾಡಿತ್ತು ಆ ಘಟನೆ. ಅಷ್ಟಕ್ಕೂ ಏನು ಆ ಘಟನೆ? ಆ ಘಟನೆಯಿಂದ ಆಗಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ಪ್ರಭುದೇವ ಹಾಗೂ ರಮಾಲತಾ ಅವರನ್ನು ವಿವಾಹ ಆದರು. 1995ರಲ್ಲಿ ಈ ಮದುವೆ ನಡೆಯಿತು. 16 ವರ್ಷಗಳ ಕಾಲ ಇವರು ಸಂಬಂಧದಲ್ಲಿ ಇದ್ದರು. 2011ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ನಯನಾತಾರಾ ಹಾಗೂ ಪ್ರಭುದೇವ ಲವ್​ ಸ್ಟೋರಿಯೇ ಇದಕ್ಕೆ ಕಾರಣ. ಶಾಕಿಂಗ್ ವಿಚಾರ ಎಂದರೆ ಪ್ರಭುದೇವ ಅವರಿಗೆ  ರಮಾಲತಾ ಹಾಗೂ ನಯನತಾರಾ ಇಬ್ಬರೂ ಸಿಗಲಿಲ್ಲ.

ಪ್ರಭುದೇವ ಹಾಗೂ ನಯನತಾರಾ ಮಧ್ಯೆ ಸಂಬಂಧ ಇದೆ ಎನ್ನುವ ಗುಲ್ಲು ಹುಟ್ಟಿಕೊಂಡಿತು. ‘ವಿಲ್ಲು’ ಚಿತ್ರದ ಸಂದರ್ಭದಲ್ಲಿ ಈ ವಿಚಾರ ಹುಟ್ಟಿತು. 2010ರಲ್ಲಿ ಪ್ರಭುದೇವ ಈ ವಿಚಾರವನ್ನು ಅವರು ಒಪ್ಪಿಕೊಂಡರು. ನಯನಾತಾರಾ ಅವರನ್ನು ವಿವಾಹ ಆಗುವ ಬಯಕೆಯನ್ನು ಅವರು ವ್ಯಕ್ತಪಡಿಸಿದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತು.

ಇದನ್ನೂ ಓದಿ
Image
‘ನನಗೆ ಬಾಲಿವುಡ್​ ಬೆಂಬಲ ಬೇಕಿದೆ’; ಸಿಕಂದರ್ ಸೋತ ಬಳಿಕ ಸಲ್ಲು ಮಾತು
Image
ಹೊಸ ಚಿತ್ರದ ಅಪ್​ಡೇಟ್ ಕೊಟ್ಟ ಸುದೀಪ್; ಕಿಚ್ಚನ ಕಟ್ಟು ಮಸ್ತಾದ ಬಾಡಿ ನೋಡಿ
Image
ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್
Image
ನಟನೆ ಮಾತ್ರವಲ್ಲ ಈ ವಿಶೇಷ ವಿದ್ಯೆ ಕಲಿತಿದ್ದಾರೆ ಅಜಯ್ ರಾವ್

ಆದರೆ, ಇದಕ್ಕೆ ರಮಾಲತಾ ಅವಕಾಶ ಕೊಡಲಿಲ್ಲ. ಕೋರ್ಟ್ ಮೆಟ್ಟಿಲೇರಿ ತಾವು ಪತಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ಮೂಲಕ ನಯನತಾರಾ ಹಾಗೂ ಪ್ರಭುದೇವ ಬೇರೆ ಆಗುವಂತೆ ಮಾಡಿದರು. ಆ ಬಳಿಕ 2011ರಲ್ಲಿ ರಮಾಲತಾ ಪ್ರಭುದೇವ ಅವರಿಂದ ಬೇರೆ ಆದರು.

ಪ್ರಭುದೇವ ಹೆಸರಲ್ಲಿ ನಯನಾತಾರಾ ಅವರು ಟ್ಯಾಟೂ ಹಾಕಿಸಿಕೊಂಡಿದ್ದರು. ಪ್ರಭುದೇವಗೋಸ್ಕರ ನಟನೆಯಿಂದ ದೂರ ಹೋಗಲು ಕೂಡ ನಿರ್ಧರಿಸಿದ್ದರು. ಆದರೆ, ಅದ್ಯಾವುದೂ ಆಗಿಲ್ಲ. ಈಗ ವಿಘ್ನೇಶ್ ಶಿವನ್ ಜೊತೆ ವಿವಾಹ ಆಗಿ ನಯನತಾರಾ ಹಾಯಾಗಿದ್ದಾರೆ. ಇವರಿಗೆ ಅವಳಿ ಮಕ್ಕಳಿದ್ದಾರೆ. ಇದನ್ನು ಬಾಡಿಗೆ ತಾಯ್ತನದ ಮೂಲಕ ಪಡೆಯಲಾಗಿದೆ.

ಇದನ್ನೂ ಓದಿ: ‘ಪ್ರಭುದೇವ ಜೊತೆಗಿನ ಪ್ರೀತಿಗಾಗಿ ಏನು ಮಾಡಲೂ ರೆಡಿ ಇದ್ದೆ’; ಮೌನ ಮುರಿದ ನಯನತಾರಾ

ಇನ್ನು ಪ್ರಭುದೇವ ಕೂಡ ಎರಡನೇ ವಿವಾಹ ಆಗಿದ್ದಾರೆ. 2020ರಲ್ಲಿ ಹಿಮಾನಿ ಸಿಂಗ್ ಅವರನ್ನು ವಿವಾಹ ಆದರು. ಇವರು ಲಿವ್​-ಇನ್ ರಿಲೇಶನ್​ಶಿಪ್​ನಲ್ಲಿದ್ದರು. 2023ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್
ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ