ತಾವು ಓದಿದ ಸರ್ಕಾರಿ ಶಾಲೆಗೆ 18 ಲಕ್ಷ ರೂ. ದೇಣಿಗೆ ನೀಡಿದ ‘ಪುಷ್ಪ’ ನಿರ್ದೇಶಕ ಸುಕುಮಾರ್​

ತಾವು ಓದಿದ ಸರ್ಕಾರಿ ಶಾಲೆಯ ಬಗ್ಗೆ ‘ಪುಷ್ಪ’ ನಿರ್ದೇಶಕ ಸುಕುಮಾರ್ ಅವರು ಇಂದಿಗೂ ಗೌರವ ಭಾವನೆ ಹೊಂದಿದ್ದಾರೆ. ಈಗ ಅವರು ನೀಡಿರುವ 18 ಲಕ್ಷ ರೂ. ದೇಣಿಗೆ ಹಣದಿಂದ ಶಾಲೆಯಲ್ಲಿ ಎರಡು ಹೊಸ ಕ್ಲಾಸ್​ ರೂಮ್​ಗಳನ್ನು ಕಟ್ಟಲಾಗಿದೆ.

ತಾವು ಓದಿದ ಸರ್ಕಾರಿ ಶಾಲೆಗೆ 18 ಲಕ್ಷ ರೂ. ದೇಣಿಗೆ ನೀಡಿದ ‘ಪುಷ್ಪ’ ನಿರ್ದೇಶಕ ಸುಕುಮಾರ್​
ನಿರ್ದೇಶಕ ಸುಕುಮಾರ್​
Follow us
| Updated By: ಮದನ್​ ಕುಮಾರ್​

Updated on: Aug 04, 2021 | 1:18 PM

ಟಾಲಿವುಡ್​ನ ಸ್ಟಾರ್​ ನಿರ್ದೇಶಕ ಸುಕುಮಾರ್​ (Sukumar) ಅವರು ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಸಿನಿಮಾಗಳಲ್ಲಿ ಬಡವರ ಪರವಾಗಿ ಧ್ವನಿ ಎತ್ತಿರುವ ಅವರು ರಿಯಲ್​ ಲೈಫ್​ನಲ್ಲಿಯೂ ವಿಶಾಲ ಹೃದಯ ಹೊಂದಿದ್ದಾರೆ. ಅದಕ್ಕೆ ಈಗೊಂದು ಲೇಟೆಸ್ಟ್​ ಉದಾಹರಣೆ ಸಿಕ್ಕಿದೆ. ದಶಕಗಳ ಹಿಂದೆ ತಾವು ಓದಿದ್ದ ಸರ್ಕಾರಿ ಶಾಲೆಗೆ (Government School) ಬರೋಬ್ಬರಿ 18 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಸುಕುಮಾರ್​​ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ಅಲ್ಲು ಅರ್ಜುನ್​ (Allu Arjun) ನಟನೆಯ ‘ಪುಷ್ಪ’ (Pushpa The Rise) ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವ ಅವರು ಈ ಸಮಾಜಸೇವೆಯ ಕಾರಣದಿಂದ ಸುದ್ದಿ ಆಗಿದ್ದಾರೆ.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮತ್ತಪರು ಗ್ರಾಮದಲ್ಲಿ ಸುಕುಮಾರ್​ ಅವರು ಶಿಕ್ಷಣ ಪಡೆದಿದ್ದರು. ತಾವು ಓದಿದ ಆ ಸರ್ಕಾರಿ ಶಾಲೆಯ ಬಗ್ಗೆ ಅವರು ಇಂದಿಗೂ ಗೌರವ ಭಾವನೆ ಹೊಂದಿದ್ದಾರೆ. ಈಗ ಅವರು ನೀಡಿರುವ 18 ಲಕ್ಷ ರೂ. ದೇಣಿಗೆ ಹಣದಿಂದ ಶಾಲೆಯಲ್ಲಿ ಎರಡು ಹೊಸ ಕ್ಲಾಸ್​ ರೂಮ್​ಗಳನ್ನು ಕಟ್ಟಲಾಗಿದೆ. ಅದರಲ್ಲಿ ಒಂದು ಡಿಜಿಟಲ್​ ಕ್ಲಾಸ್​ ರೂಮ್​ ಒಳಗೊಂಡಿದೆ. ಇತ್ತೀಚೆಗೆ ಇವುಗಳನ್ನು ಉದ್ಘಾಟಿಸಲಾಯಿತು. ಆ ಕಾರ್ಯಕ್ರಮದಲ್ಲಿ ಸುಕುಮಾರ್​, ಜನಸೇನಾ ಶಾಸಕ ರಾಪಕ ವರಪ್ರಸಾದ್​ ಮುಂತಾದ ಗಣ್ಯರು ಭಾಗವಹಿಸಿದ್ದರು.

ಸುಕುಮಾರ್​ ಅವರ ಕಾರ್ಯಕ್ಕೆ ಶಾಸಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ‘ಜೀವನದಲ್ಲಿ ಹಣ ಗಳಿಸಿದ ಜನರು ತಾವು ಬೆಳೆದು ಬಂದ ಊರನ್ನು ಮರೆತುಬಿಡುತ್ತಾರೆ. ​ಕುಟುಂಬದವರನ್ನೂ ಮರೆತು ಹೈದರಾಬಾದ್​ ಮುಂತಾದ ಸಿಟಿಯಲ್ಲಿ ನೆಲೆಸುತ್ತಾರೆ. ಬಡತನದ ಕುಟುಂಬದಲ್ಲಿ ಬೆಳೆದ ಸುಕುಮಾರ್​ ಈಗ ಅವರ ಸಹೋದರ-ಸಹೋದರಿಯರಿಗೆ ನೆರವಾಗಿದ್ದಾರೆ. ಇತ್ತೀಚೆಗೆ ಅವರು ಕೊರೊನಾ ಎರಡನೇ ಅಲೆ ಜೋರಾದಾಗ 45 ಲಕ್ಷ ರೂ. ಖರ್ಚು ಮಾಡಿ ಆಕ್ಸಿಜನ್​ ಪ್ಲಾಂಟ್​ ಸ್ಥಾಪಿಸಿದ್ದರು’ ಎಂದು ಸುಕುಮಾರ್​ ಅವರ ಸಮಾಜಸೇವೆಯನ್ನು ಶಾಸಕ ವರಪ್ರಸಾದ್​ ಶ್ಲಾಘಿಸಿದ್ದಾರೆ.

ಸಕುಮಾರ್​ ನಿರ್ದೇಶನದ ‘ಪುಷ್ಪ’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಈ ಸಿನಿಮಾ 2021ರ ಕ್ರಿಸ್​ಮಸ್​ಗೆ ಬಿಡುಗಡೆ ಆಗಲಿದೆ. ಎರಡು ಪಾರ್ಟ್​ಗಳಲ್ಲಿ ಸಿನಿಮಾ ಮೂಡಿಬರಲಿದ್ದು, ಮೊದಲ ಭಾಗಕ್ಕೆ ‘Pushpa- The Rise’ ಎಂದು ಶೀರ್ಷಿಕೆ ಇಡಲಾಗಿದೆ.

ಇದನ್ನೂ ಓದಿ:

Pushpa: ‘ಪುಷ್ಪ’ ರಿಲೀಸ್​ ಡೇಟ್​ ಜೊತೆಗೆ ಮತ್ತೊಂದು ಮುಖ್ಯ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅಲ್ಲು ಅರ್ಜುನ್​

ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್​ ಚಾರಿಟೇಬಲ್​ ಟ್ರಸ್ಟ್​

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ