AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahul Dravid: ರಾಹುಲ್​ ದ್ರಾವಿಡ್​ಗೆ ಚಿತ್ರರಂಗದಿಂದ ಬಂತು ಬೇಡಿಕೆ! ಒಂದೇ ದಿನದಲ್ಲಿ ಇದೆಂಥಾ ಮ್ಯಾಜಿಕ್​

Rahul Dravid Ad Viral Video: ರಾಹುಲ್​ ದ್ರಾವಿಡ್​ ಅವರು ಸಿನಿಮಾದಲ್ಲಿ ನಟಿಸಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ. ಯಾಕೆಂದರೆ, ಕ್ರೆಡ್​ ಕಂಪನಿಯ ಜಾಹೀರಾತಿಯಲ್ಲಿ ದ್ರಾವಿಡ್​ ನಟಿಸಿರುವ ರೀತಿಗೆ ಎಲ್ಲರೂ ಬೋಲ್ಡ್​ ಆಗಿದ್ದಾರೆ.

Rahul Dravid: ರಾಹುಲ್​ ದ್ರಾವಿಡ್​ಗೆ ಚಿತ್ರರಂಗದಿಂದ ಬಂತು ಬೇಡಿಕೆ! ಒಂದೇ ದಿನದಲ್ಲಿ ಇದೆಂಥಾ ಮ್ಯಾಜಿಕ್​
ರಾಹುಲ್​ ದ್ರಾವಿಡ್​ ವೈರಲ್​ ವಿಡಿಯೋ
ಮದನ್​ ಕುಮಾರ್​
| Edited By: |

Updated on: Apr 10, 2021 | 9:44 AM

Share

ಈಗ ಎಲ್ಲೆಲ್ಲೋ ಐಪಿಎಲ್​ನದ್ದೇ ಸದ್ದು. ಆದರೆ ಅದಕ್ಕಿಂತಲೂ ಜೋರಾಗಿ ರಾಹುಲ್​ ದ್ರಾವಿಡ್​ ಸೌಂಡು ಮಾಡುತ್ತಿದ್ದಾರೆ! ಅದು ಕ್ರಿಕೆಟ್​ ಕಾರಣಕ್ಕಾಗಿ ಅಲ್ಲ. ಬದಲಿಗೆ ಒಂದು ಜಾಹೀರಾತಿನಿಂದಾಗಿ ಎಂಬುದು ವಿಶೇಷ. ಕ್ರೆಡಿಟ್​ ಕಾರ್ಡ್​ ಬಿಲ್​ ಪಾವತಿ ಮಾಡುವ ಕ್ರೆಡ್​ ಕಂಪನಿಯ ಜಾಹೀರಾತಿನಲ್ಲಿ ರಾಹುಲ್​ ದ್ರಾವಿಡ್​ ಕಾಣಿಸಿಕೊಂಡಿದ್ದು, ಅದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಷ್ಟೇ ಅಲ್ಲ, ಜನರು ಇದನ್ನು ತುಂಬ ಇಷ್ಟಪಡುತ್ತಿದ್ದಾರೆ. ಸಿಡುಕಿನ ಮನುಷ್ಯನಾಗಿ ದ್ರಾವಿಡ್​ ಹೊಸ ಅವತಾರ ತಾಳಿದ್ದಾರೆ. ಪರಿಣಾಮವಾಗಿ ಅವರಿಗೆ ಸಿನಿಮಾಗಳಲ್ಲಿ ನಟಿಸುವಂತೆ ಆಫರ್​ ಬರುತ್ತಿದೆ!

ಸಿನಿಮಾ ಮತ್ತು ಕ್ರಿಕೆಟ್​ಗೆ ತುಂಬ ಹತ್ತಿರದ ಸಂಬಂಧ ಇದೆ. ಸೆಲೆಬ್ರಿಟಿಗಳು ಕ್ರಿಕೆಟ್​ ಆಡುತ್ತಾರೆ. ಹಾಗೆಯೇ ಕೆಲವು ಕ್ರಿಕೆಟಿಗರು ಸಿನಿಮಾ ಮಾಡಿದ್ದಾರೆ. ಕ್ರೀಡಾ ಜಗತ್ತಿನ ಅನೇಕ ಸಾಧಕರ ಬಯೋಪಿಕ್​ ಸಹ ಆಗಿದೆ. ಆದರೆ ಈಗ ನೇರವಾಗಿ ರಾಹುಲ್​ ದ್ರಾವಿಡ್​ ಅವರು ಸಿನಿಮಾದಲ್ಲಿ ನಟಿಸಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ. ಯಾಕೆಂದರೆ, ಕ್ರೆಡ್​ ಕಂಪನಿಯ ಜಾಹೀರಾತಿಯಲ್ಲಿ ದ್ರಾವಿಡ್​ ನಟಿಸಿರುವ ರೀತಿಗೆ ಎಲ್ಲರೂ ಬೋಲ್ಡ್​ ಆಗಿದ್ದಾರೆ.

‘ರಾಹುಲ್​ ದ್ರಾವಿಡ್​ ಅವರೇ.. ದಯವಿಟ್ಟು ನೀವು ಕನ್ನಡ ಸಿನಿಮಾದಲ್ಲಿ ನಟನೆ ಶುರುಮಾಡಿ. ಯಾಕೆಂದರೆ ನಿಮ್ಮ ಅಭಿನಯ ಕೌಶಲ್ಯ ಮತ್ತು ಲುಕ್​ ಬೇರೆ ಎಷ್ಟೋ ನಟರಿಗಿಂತ ಚೆನ್ನಾಗಿದೆ’ ಎಂದು ರಂಗಭೂಮಿ ಹಿನ್ನೆಲೆ ಹೊಂದಿರುವ ಸಿನಿಮಾ ಬರಹಗಾರ ಅಭಿಶೇಕ್​ ಅಯ್ಯಂಗರ್​ ಅವರು ಟ್ವೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್​ ಸಿನಿಪ್ರಿಯರು ಕೂಡ ದ್ರಾವಿಡ್​ ಅಭಿನಯಕ್ಕೆ ಮನಸೋತು ಹೊಸ ಬೇಡಿಕೆ ಇಟ್ಟಿದ್ದಾರೆ.

ತೆಲುಗಿನ ‘ಅರ್ಜುನ್​ ರೆಡ್ಡಿ’ ಚಿತ್ರದ ಬಾಲಿವುಡ್​ ರಿಮೇಕ್​ ಆದಂತಹ ‘ಕಬೀರ್​ ಸಿಂಗ್​’ ಸಿನಿಮಾದಲ್ಲಿ ಶಾಹಿದ್​ ಕಪೂರ್​ ನಟಿಸಿದ್ದರು. ಆ ಚಿತ್ರದ ಕಥಾನಾಯಕನಿಗೆ ವಿಪರೀತ ಕೋಪ ಇರುತ್ತದೆ. ಈಗ ದ್ರಾವಿಡ್​ ಕೂಡ ಅಂಥ ಕೋಪಿಷ್ಟ ಮನುಷ್ಯನ ಪಾತ್ರವನ್ನು ಈ ಜಾಹೀರಾತಿನಲ್ಲಿ ನಿಭಾಯಿಸಿದ್ದಾರೆ. ಅದು ಜನರಿಗೆ ಸಖತ್​ ಇಷ್ಟ ಆಗಿದೆ. ಹಾಗಾಗಿ ದಯವಿಟ್ಟು ‘ಕಬೀರ್​ ಸಿಂಗ್​’ ಸಿನಿಮಾವನ್ನು ಮತ್ತೆ ಹೊಸದಾಗಿ ಮಾಡಬೇಕು ಹಾಗೂ ಅದರಲ್ಲಿ ದ್ರಾವಿಡ್​ ಹೀರೋ ಆಗಬೇಕು ಎಂದು ನೆಟ್ಟಿಗರು ಡಿಮ್ಯಾಂಡ್​ ಮಾಡುತ್ತಿದ್ದಾರೆ!

ವಿರಾಟ್​ ಕೊಹ್ಲಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಜಾಹೀರಾತು ನೋಡಿ ಫಿದಾ ಆಗಿದ್ದಾರೆ. ಇಷ್ಟು ವರ್ಷಗಳಲ್ಲಿ ದ್ರಾವಿಡ್​ ಅವರನ್ನು ಯಾರೂ ಈ ಅವತಾರದಲ್ಲಿ ನೋಡಿಯೇ ಇರಲಿಲ್ಲ. ಇನ್ನು, ಇದೇ ಜಾಹೀರಾತನ್ನು ಇಟ್ಟುಕೊಂಡು ಹಲವು ಮೀಮ್​ಗಳನ್ನು ಮಾಡಿ ಹರಿಬಿಡಲಾಗುತ್ತಿದೆ.

‘ಈ ಜಾಹೀರಾತಿನಲ್ಲಿ ರಾಹುಲ್​ ದ್ರಾವಿಡ್​ ಮಾಡಿದ ನಟನೆಯು ಅರ್ಜುನ್​ ಕಪೂರ್​ ಅವರ ಇಷ್ಟು ವರ್ಷಗಳ ಕರಿಯರ್​ಗಿಂತ ಉತ್ತಮವಾಗಿದೆ. ಇದನ್ನು ನೀವೆಲ್ಲ ಒಪ್ಪಿಕೊಳ್ಳಿ ಅಥವಾ ಸತ್ತು ಹೋಗಿ’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್​ನಿಂದ ಬೇಸತ್ತ ರಾಹುಲ್​ ದ್ರಾವಿಡ್​; ಬ್ಯಾಟ್​ನಿಂದ ಎದುರು ಬದಿ ಕಾರಿನ ಗಾಜು ಪುಡಿಪುಡಿ; ವಿಡಿಯೋ ವೈರಲ್​

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ