‘ಇಂತಹ ಸಿನಿಮಾ ಮಾಡಲು ಧೈರ್ಯ ಬೇಕು’; ‘ಧುರಂಧರ್ 2’ ಹಾಡಿ ಹೊಗಳಿದ ರಾಜಮೌಳಿ
ಖ್ಯಾತ ನಿರ್ದೇಶಕ ರಾಜಮೌಳಿ 'ಧುರಂಧರ್ 2' ಸಿನಿಮಾ ವೀಕ್ಷಿಸಿ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 4 ಗಂಟೆಗಳ ಈ ಚಿತ್ರವನ್ನು ಮಾಡಲು ಧೈರ್ಯ ಬೇಕು ಎಂದಿದ್ದಾರೆ. ಚಿತ್ರಕಥೆ, ನಿರ್ದೇಶನ, ಸಂಗೀತ, ಭಾವನಾತ್ಮಕ ಅಂಶಗಳು ಅದ್ಭುತ ಎಂದಿರುವ ರಾಜಮೌಳಿ, ರಣವೀರ್ ಸಿಂಗ್ ಅವರ ಅಭಿನಯವನ್ನು ಮಾಸ್ಟರ್ಕ್ಲಾಸ್ ಎಂದು ಹೊಗಳಿದ್ದಾರೆ.

ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ದೊಡ್ಡ ನಿರ್ದೇಶಕರಾದರೂ ಯಾವುದೇ ಸಿನಿಮಾ ರಿಲೀಸ್ ಆದರೂ ಆ ಚಿತ್ರವನ್ನು ನೋಡಿ ವಿಮರ್ಶೆ ತಿಳಿಸುತ್ತಾರೆ. ಈಗ ‘ಧುರಂಧರ್ 2’ ಸಿನಿಮಾವನ್ನು ಅವರು ವೀಕ್ಷಿಸಿದ್ದಾರೆ. ಅವರಿಗೆ ಸಿನಿಮಾದಲ್ಲಿ ಹಲವು ವಿಷಯಗಳು ಇಷ್ಟ ಆಗಿವೆ. ಈ ಬಗ್ಗೆ ಅವರು ಟ್ವಿಟರ್ ಅಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ನಟನೆ ಅವರಿಗೆ ಇಷ್ಟ ಆಗಿದೆ.
ತೆಲುಗಿನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್ ಸೇರಿದಂತೆ ಅನೇಕರು ರಾಜಮೌಳಿ ಸಿನಿಮಾನ ವೀಕ್ಷಣೆ ಮಾಡಿದ್ದಾರೆ. ಎಲ್ಲರೂ ‘ಧುರಂಧರ್ 2’ ಸಿನಿಮಾ ವೀಕ್ಷಣೆ ಮಾಡಿ ವಿಮರ್ಶೆ ತಿಳಿಸಿದ್ದಾರೆ. ಈಗ ರಾಜಮೌಳಿ ಸರದಿ. ಅವರಿಗೂ ಸಿನಿಮಾ ಇಷ್ಟ ಆಗಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಚೆನ್ನಾಗಿದೆ ಎಂದು ಅವರು ಹೇಳಿದ್ದಾರೆ.
I loved Dhurandhar-1, but The Revenge surpassed the original in both scale and soul. The writing, casting, technical execution, music, world design and direction are flawless…. But it’s the emotional stakes that really ground it.
The writing manages to weave plot twists that…
— rajamouli ss (@ssrajamouli) March 21, 2026
‘ಧುರಂಧರ್ 2 ಸಿನಿಮಾದ ಬರಹ, ಪಾತ್ರವರ್ಗ, ತಾಂತ್ರಿಕವಾಗಿ ಸಿನಿಮಾ ತಂದಿದ್ದು, ಸಂಗೀತ, ಡಿಸೈನ್, ನಿರ್ದೇಶನ ಎಲ್ಲವೂ ಅದ್ಭುತ. ಭಾವನಾತ್ಮಕ ಅಂಶಗಳು ಉತ್ತಮವಾಗಿವೆ. ಬರವಣಿಗೆಯು ಟ್ವಿಸ್ಟ್ಗಳನ್ನು ಅದ್ಭುತವಾಗಿ ಮೂಡಿಸಿದೆ. 4 ಗಂಟೆಗಳ ಸಿನಿಮಾ ಮಾಡಿ ಅದನ್ನು ಬಿಡುಗಡೆ ಮಾಡಲು ಧೈರ್ಯ ಬೇಕು. ಕೊನೆಯ ಫ್ರೇಮ್ನವರೆಗೂ ಜನರನ್ನು ಸಿನಿಮಾ ಹಿಡಿದಿಡುತ್ತದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ ‘ರಣವೀರ್ ಸಿಂಗ್ ಅವರೇ ಎಂತಹ ಅದ್ಭುತ ಪರ್ಫಾರ್ಮೆನ್ಸ್. ಶೆಡ್ನಲ್ಲಿ ನಡೆಯುವ ಸನ್ನಿವೇಶ ನಟನೆಯಲ್ಲಿ ಒಂದು ಮಾಸ್ಟರ್ಕ್ಲಾಸ್. ನೀವು ಹಮ್ಜಾ ಮತ್ತು ಜಸ್ಕಿರತ್ ಆಗಿ ನಮ್ಮಿಬ್ಬರನ್ನೂ ಮಂತ್ರಮುಗ್ಧಗೊಳಿಸಿದ್ದೀರಿ. ಮಾಧವನ್ ಕೂಡ ಅದ್ಭಯತ. ಅದ್ಭುತ ಯಶಸ್ಸಿಗೆ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




