Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್’ ಸಿನಿಮಾ ‘ಉಗ್ರಂ’ ರೀಮೇಕ್ ಎನ್ನುವುದು ನಿಜವೇ? ಎರಡೂ ಕತೆಗಳಿರುವ ಸಾಮ್ಯತೆ ಏನು?

Salaar: ‘ಸಲಾರ್’ ಸಿನಿಮಾ ಕನ್ನಡದ ‘ಉಗ್ರಂ’ ಸಿನಿಮಾದ ರೀಮೇಕ್ ಎಂಬುದು ನಿಜವೇ? ‘ಸಲಾರ್’ ಟ್ರೈಲರ್ ಬಿಡುಗಡೆ ಸಿನಿಮಾದ ಕತೆಯ ಎಳೆಗಳನ್ನು ಬಿಟ್ಟುಕೊಡಲಾಗಿದೆ. ಆ ಮೂಲಕ ಇದು ‘ಉಗ್ರಂ’ ಸಿನಿಮಾದ ರೀಮೇಕ್ ಹೌದೋ? ಅಲ್ಲವೋ? ಎಂಬ ಪ್ರಶ್ನೆಗೆ ಉತ್ತರ ಬಹುತೇಕ ದೊರಕಿದೆ.

‘ಸಲಾರ್’ ಸಿನಿಮಾ ‘ಉಗ್ರಂ’ ರೀಮೇಕ್ ಎನ್ನುವುದು ನಿಜವೇ? ಎರಡೂ ಕತೆಗಳಿರುವ ಸಾಮ್ಯತೆ ಏನು?
Follow us
ಮಂಜುನಾಥ ಸಿ.
|

Updated on: Dec 01, 2023 | 8:15 PM

ಸಲಾರ್’ (Salaar) ಸಿನಿಮಾದ ಚಿತ್ರೀಕರಣ ಪ್ರಾರಂಭವಾದಾಗಿನಿಂದಲೂ ಇದು ಕನ್ನಡದ ‘ಉಗ್ರಂ’ ಸಿನಿಮಾ ರೀಮೇಕ್ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ‘ಸಲಾರ್’ ಸಿನಿಮಾಕ್ಕೆ ಸಂಗೀತ ನೀಡಿರುವ ರವಿ ಬಸ್ರೂರು ಸಹ ‘ಸಲಾರ್’ ಉಗ್ರಂ ಸಿನಿಮಾದ ರೀಮೇಕ್ ಎಂದಿದ್ದರು. ಆದರೆ ಚಿತ್ರತಂಡ ಇದನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ‘ಸಲಾರ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, 3:46 ನಿಮಿಷದ ದೀರ್ಘ ಅವಧಿಯ ಟ್ರೈಲರ್​ನಲ್ಲಿ ಸಿನಿಮಾದ ಕತೆಯ ಎಳೆಗಳನ್ನು ಬಿಟ್ಟುಕೊಡಲಾಗಿದೆ. ಆ ಮೂಲಕ ಇದು ‘ಉಗ್ರಂ’ ಸಿನಿಮಾದ ರೀಮೇಕ್ ಹೌದೋ? ಅಲ್ಲವೋ? ಎಂಬ ಪ್ರಶ್ನೆಗೆ ಉತ್ತರ ಬಹುತೇಕ ದೊರಕಿದೆ.

‘ಸಲಾರ್’ ಸಿನಿಮಾ ‘ಉಗ್ರಂ’ ಸಿನಿಮಾದ ಯಥಾವತ್ತು ರೀಮೇಕ್ ಅಲ್ಲ ಆದರೆ ‘ಉಗ್ರಂ’ ಸಿನಿಮಾದ ಕತೆಯ ದಟ್ಟ ಛಾಯೆ ‘ಸಲಾರ್’ ಸಿನಿಮಾದ ಮೇಲಿದೆ. ‘ಉಗ್ರಂ’ ಸಿನಿಮಾದ ಕತೆಯ ಮೂಲ ಧಾತುವೇ ‘ಸಲಾರ್’ ಸಿನಿಮಾದ ಕತೆಯಲ್ಲಿಯೂ ಇದೆ. ಕೆಲವು ದೃಶ್ಯಗಳು, ಸನ್ನಿವೇಶಗಳು ‘ಉಗ್ರಂ’ ಸಿನಿಮಾದಿಂದಲೇ ನೇರವಾಗಿ ಎತ್ತಿಕೊಂಡಂತೆಯೂ ಇದೆ.

‘ಉಗ್ರಂ’ ಸಿನಿಮಾನಲ್ಲಿ ನಾಯಕ ಶ್ರೀಮುರಳಿ ಹಾಗೂ ತಿಲಕ್ ಬಾಲ್ಯ ಸ್ನೇಹಿತರು, ತಿಲಕ್ ಕತೆ ನಡೆಯುವ ಮುಘೋರ್ ಪ್ರದೇಶವನ್ನು ಒಂದು ಸಮಯದಲ್ಲಿ ಆಳಿದ್ದ ಕುಟುಂಬದವನು ಆದರೆ ಈಗ ಅಲ್ಲಿ ಬೇರೆಯವರ ಹಿಡಿತವಿದೆ. ಆ ಪ್ರದೇಶವನ್ನು ಮತ್ತೆ ವಶಪಡಿಸಿಕೊಳ್ಳಬೇಕು ಎಂಬುದು ತಿಲಕ್ ಆಸೆ. ಅದಕ್ಕೆ ನಾಯಕ ಶ್ರೀಮುರಳಿಯ ಸಹಾಯವನ್ನು ಕೇಳುತ್ತಾರೆ. ‘ಸಲಾರ್’ ಸಿನಿಮಾದಲ್ಲಿಯೂ ಇದೇ ಕತೆ ಇದೆ. ‘ಉಗ್ರಂ’ ಸಿನಿಮಾದಲ್ಲಿ ಶ್ರೀಮುರಳಿ, ನಿನಗೇನಾದ್ರೂ ಬೇಕಾದ್ರು ಕೇಳು ಎಂದು ತಿಲಕ್​ಗೆ ಬಾಲ್ಯದಲ್ಲಿ ಹೇಳಿರುತ್ತಾನೆ, ‘ಸಲಾರ್’ ಸಿನಿಮಾದಲ್ಲಿಯೂ ಬಾಲಕ ದೇವ (ಪ್ರಭಾಸ್) ವರದರಾಜ್​ (ಪೃಥ್ವಿರಾಜ್​)ಗೆ ಇದೇ ರೀತಿಯ ಭರವಸೆಯೊಂದನ್ನು ನೀಡುತ್ತಾನೆ.

ಇದನ್ನೂ ಓದಿ:‘ಸಲಾರ್’ ಟ್ರೈಲರ್ ಬಿಡುಗಡೆ: ಹೇಗಿದೆ? ಏನಿದೆ ಟ್ರೈಲರ್​ನಲ್ಲಿ?

‘ಉಗ್ರಂ’ ಸಿನಿಮಾದಲ್ಲಿ ತಿಲಕ್, ಮುಘೋರ್ ನನಗೆ ಬೇಕು ಎಂದು ದುರಾಸೆಯಿಂದ ಕೇಳುತ್ತಾನೆ, ಅಂತೆಯೇ ‘ಸಲಾರ್’ನಲ್ಲಿ ಸಹ ವರದರಾಜ್ (ಪೃಥ್ವಿರಾಜ್ ಸುಕುಮಾರ್) ನನ್ನ ಕಣ್ಣಿಗೆ ಕಂಡಿದ್ದೆಲ್ಲ ನನಗೆ ಬೇಕು ಎನ್ನುತ್ತಾನೆ. ‘ಉಗ್ರಂ’ ಸಿನಿಮಾದಲ್ಲಿ ತಿಲಕ್​ಗೆ ಒಬ್ಬ ತಮ್ಮನಿರುತ್ತಾನೆ, ಇಲ್ಲಿಯೂ ಸಹ ಪೃಥ್ವಿರಾಜ್​ಗೆ ಒಬ್ಬ ಸಹೋದರನಿದ್ದಾನೆ. ಹೀಗೆ ಇನ್ನೂ ಹಲವು ಸಾಮ್ಯತೆಗಳು ಈ ಎರಡೂ ಸಿನಿಮಾಗಳಲ್ಲಿ ಇವೆ. ಆದರೆ ‘ಉಗ್ರಂ’ ಸಿನಿಮಾ ಒಂದೇ ಭಾಗದಲ್ಲಿ ಮುಗಿದು ಹೋಗಿತ್ತು, ಆದರೆ ‘ಸಲಾರ್’ ಸಿನಿಮಾವನ್ನು ತುಸು ಎಳೆದು, ತುಸು ಹೆಚ್ಚು ಬಜೆಟ್ ಹಾಕಿ ಕತೆಯ ಕ್ಯಾನ್ವಾಸ್ ದೊಡ್ಡದು ಮಾಡಲಾಗಿದೆ. ಮೊದಲ ಭಾಗದಲ್ಲಿ ಇಬ್ಬರ ಗೆಳೆತನ ಹಾಗೂ ಪ್ರಭಾಸ್ ಹೇಗೆ ಪೃಥ್ವಿರಾಜ್​ಗೆ ಖಾನ್​ಸರ್ ಅನ್ನು ಬಿಡಿಸಿಕೊಡುತ್ತಾನೆ ಎಂಬುದನ್ನು ತೋರಿಸಿ, ಎರಡನೇ ಭಾಗದಲ್ಲಿ ಈ ಇಬ್ಬರು ಹೇಗೆ ವೈರಿಗಳಾಗುತ್ತಾರೆ ಎಂಬುದನ್ನು ತೋರಿಸುತ್ತಾರೆ ಎಂದು ಸುಲಭವಾಗಿ ಊಹಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್​ಕುಮಾರ್
’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್​ಕುಮಾರ್
ಆರೋಪಿಗಳನ್ನು ವಿಜಯಪುರದ ದರ್ಗಾ ಜೈಲಿಗೆ ಕರೆದೊಯ್ದ ಪೊಲೀಸರು
ಆರೋಪಿಗಳನ್ನು ವಿಜಯಪುರದ ದರ್ಗಾ ಜೈಲಿಗೆ ಕರೆದೊಯ್ದ ಪೊಲೀಸರು