AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್’ ಸಿನಿಮಾ ‘ಉಗ್ರಂ’ ರೀಮೇಕ್ ಎನ್ನುವುದು ನಿಜವೇ? ಎರಡೂ ಕತೆಗಳಿರುವ ಸಾಮ್ಯತೆ ಏನು?

Salaar: ‘ಸಲಾರ್’ ಸಿನಿಮಾ ಕನ್ನಡದ ‘ಉಗ್ರಂ’ ಸಿನಿಮಾದ ರೀಮೇಕ್ ಎಂಬುದು ನಿಜವೇ? ‘ಸಲಾರ್’ ಟ್ರೈಲರ್ ಬಿಡುಗಡೆ ಸಿನಿಮಾದ ಕತೆಯ ಎಳೆಗಳನ್ನು ಬಿಟ್ಟುಕೊಡಲಾಗಿದೆ. ಆ ಮೂಲಕ ಇದು ‘ಉಗ್ರಂ’ ಸಿನಿಮಾದ ರೀಮೇಕ್ ಹೌದೋ? ಅಲ್ಲವೋ? ಎಂಬ ಪ್ರಶ್ನೆಗೆ ಉತ್ತರ ಬಹುತೇಕ ದೊರಕಿದೆ.

‘ಸಲಾರ್’ ಸಿನಿಮಾ ‘ಉಗ್ರಂ’ ರೀಮೇಕ್ ಎನ್ನುವುದು ನಿಜವೇ? ಎರಡೂ ಕತೆಗಳಿರುವ ಸಾಮ್ಯತೆ ಏನು?
ಮಂಜುನಾಥ ಸಿ.
|

Updated on: Dec 01, 2023 | 8:15 PM

Share

ಸಲಾರ್’ (Salaar) ಸಿನಿಮಾದ ಚಿತ್ರೀಕರಣ ಪ್ರಾರಂಭವಾದಾಗಿನಿಂದಲೂ ಇದು ಕನ್ನಡದ ‘ಉಗ್ರಂ’ ಸಿನಿಮಾ ರೀಮೇಕ್ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ‘ಸಲಾರ್’ ಸಿನಿಮಾಕ್ಕೆ ಸಂಗೀತ ನೀಡಿರುವ ರವಿ ಬಸ್ರೂರು ಸಹ ‘ಸಲಾರ್’ ಉಗ್ರಂ ಸಿನಿಮಾದ ರೀಮೇಕ್ ಎಂದಿದ್ದರು. ಆದರೆ ಚಿತ್ರತಂಡ ಇದನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ‘ಸಲಾರ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, 3:46 ನಿಮಿಷದ ದೀರ್ಘ ಅವಧಿಯ ಟ್ರೈಲರ್​ನಲ್ಲಿ ಸಿನಿಮಾದ ಕತೆಯ ಎಳೆಗಳನ್ನು ಬಿಟ್ಟುಕೊಡಲಾಗಿದೆ. ಆ ಮೂಲಕ ಇದು ‘ಉಗ್ರಂ’ ಸಿನಿಮಾದ ರೀಮೇಕ್ ಹೌದೋ? ಅಲ್ಲವೋ? ಎಂಬ ಪ್ರಶ್ನೆಗೆ ಉತ್ತರ ಬಹುತೇಕ ದೊರಕಿದೆ.

‘ಸಲಾರ್’ ಸಿನಿಮಾ ‘ಉಗ್ರಂ’ ಸಿನಿಮಾದ ಯಥಾವತ್ತು ರೀಮೇಕ್ ಅಲ್ಲ ಆದರೆ ‘ಉಗ್ರಂ’ ಸಿನಿಮಾದ ಕತೆಯ ದಟ್ಟ ಛಾಯೆ ‘ಸಲಾರ್’ ಸಿನಿಮಾದ ಮೇಲಿದೆ. ‘ಉಗ್ರಂ’ ಸಿನಿಮಾದ ಕತೆಯ ಮೂಲ ಧಾತುವೇ ‘ಸಲಾರ್’ ಸಿನಿಮಾದ ಕತೆಯಲ್ಲಿಯೂ ಇದೆ. ಕೆಲವು ದೃಶ್ಯಗಳು, ಸನ್ನಿವೇಶಗಳು ‘ಉಗ್ರಂ’ ಸಿನಿಮಾದಿಂದಲೇ ನೇರವಾಗಿ ಎತ್ತಿಕೊಂಡಂತೆಯೂ ಇದೆ.

‘ಉಗ್ರಂ’ ಸಿನಿಮಾನಲ್ಲಿ ನಾಯಕ ಶ್ರೀಮುರಳಿ ಹಾಗೂ ತಿಲಕ್ ಬಾಲ್ಯ ಸ್ನೇಹಿತರು, ತಿಲಕ್ ಕತೆ ನಡೆಯುವ ಮುಘೋರ್ ಪ್ರದೇಶವನ್ನು ಒಂದು ಸಮಯದಲ್ಲಿ ಆಳಿದ್ದ ಕುಟುಂಬದವನು ಆದರೆ ಈಗ ಅಲ್ಲಿ ಬೇರೆಯವರ ಹಿಡಿತವಿದೆ. ಆ ಪ್ರದೇಶವನ್ನು ಮತ್ತೆ ವಶಪಡಿಸಿಕೊಳ್ಳಬೇಕು ಎಂಬುದು ತಿಲಕ್ ಆಸೆ. ಅದಕ್ಕೆ ನಾಯಕ ಶ್ರೀಮುರಳಿಯ ಸಹಾಯವನ್ನು ಕೇಳುತ್ತಾರೆ. ‘ಸಲಾರ್’ ಸಿನಿಮಾದಲ್ಲಿಯೂ ಇದೇ ಕತೆ ಇದೆ. ‘ಉಗ್ರಂ’ ಸಿನಿಮಾದಲ್ಲಿ ಶ್ರೀಮುರಳಿ, ನಿನಗೇನಾದ್ರೂ ಬೇಕಾದ್ರು ಕೇಳು ಎಂದು ತಿಲಕ್​ಗೆ ಬಾಲ್ಯದಲ್ಲಿ ಹೇಳಿರುತ್ತಾನೆ, ‘ಸಲಾರ್’ ಸಿನಿಮಾದಲ್ಲಿಯೂ ಬಾಲಕ ದೇವ (ಪ್ರಭಾಸ್) ವರದರಾಜ್​ (ಪೃಥ್ವಿರಾಜ್​)ಗೆ ಇದೇ ರೀತಿಯ ಭರವಸೆಯೊಂದನ್ನು ನೀಡುತ್ತಾನೆ.

ಇದನ್ನೂ ಓದಿ:‘ಸಲಾರ್’ ಟ್ರೈಲರ್ ಬಿಡುಗಡೆ: ಹೇಗಿದೆ? ಏನಿದೆ ಟ್ರೈಲರ್​ನಲ್ಲಿ?

‘ಉಗ್ರಂ’ ಸಿನಿಮಾದಲ್ಲಿ ತಿಲಕ್, ಮುಘೋರ್ ನನಗೆ ಬೇಕು ಎಂದು ದುರಾಸೆಯಿಂದ ಕೇಳುತ್ತಾನೆ, ಅಂತೆಯೇ ‘ಸಲಾರ್’ನಲ್ಲಿ ಸಹ ವರದರಾಜ್ (ಪೃಥ್ವಿರಾಜ್ ಸುಕುಮಾರ್) ನನ್ನ ಕಣ್ಣಿಗೆ ಕಂಡಿದ್ದೆಲ್ಲ ನನಗೆ ಬೇಕು ಎನ್ನುತ್ತಾನೆ. ‘ಉಗ್ರಂ’ ಸಿನಿಮಾದಲ್ಲಿ ತಿಲಕ್​ಗೆ ಒಬ್ಬ ತಮ್ಮನಿರುತ್ತಾನೆ, ಇಲ್ಲಿಯೂ ಸಹ ಪೃಥ್ವಿರಾಜ್​ಗೆ ಒಬ್ಬ ಸಹೋದರನಿದ್ದಾನೆ. ಹೀಗೆ ಇನ್ನೂ ಹಲವು ಸಾಮ್ಯತೆಗಳು ಈ ಎರಡೂ ಸಿನಿಮಾಗಳಲ್ಲಿ ಇವೆ. ಆದರೆ ‘ಉಗ್ರಂ’ ಸಿನಿಮಾ ಒಂದೇ ಭಾಗದಲ್ಲಿ ಮುಗಿದು ಹೋಗಿತ್ತು, ಆದರೆ ‘ಸಲಾರ್’ ಸಿನಿಮಾವನ್ನು ತುಸು ಎಳೆದು, ತುಸು ಹೆಚ್ಚು ಬಜೆಟ್ ಹಾಕಿ ಕತೆಯ ಕ್ಯಾನ್ವಾಸ್ ದೊಡ್ಡದು ಮಾಡಲಾಗಿದೆ. ಮೊದಲ ಭಾಗದಲ್ಲಿ ಇಬ್ಬರ ಗೆಳೆತನ ಹಾಗೂ ಪ್ರಭಾಸ್ ಹೇಗೆ ಪೃಥ್ವಿರಾಜ್​ಗೆ ಖಾನ್​ಸರ್ ಅನ್ನು ಬಿಡಿಸಿಕೊಡುತ್ತಾನೆ ಎಂಬುದನ್ನು ತೋರಿಸಿ, ಎರಡನೇ ಭಾಗದಲ್ಲಿ ಈ ಇಬ್ಬರು ಹೇಗೆ ವೈರಿಗಳಾಗುತ್ತಾರೆ ಎಂಬುದನ್ನು ತೋರಿಸುತ್ತಾರೆ ಎಂದು ಸುಲಭವಾಗಿ ಊಹಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ